Skip to main content

ನೆನಪ ಬಿಸಿ ಹನಿಗಳು

ಚಿತ್ರ: ಶ್ರೀನಿಧಿ

ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ  ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ.

ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ.  ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ.

ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ.
ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದರೆ ಅರ್ಧಗೆದ್ದಂತೆ. ಅದು ಇದು ಕತೆ ಹೇಳಿ ಇಲ್ಲವೋ ಇನ್ಯಾರದ್ದೋ ಗೋಸಿಪ್ ಕತೆಗಳನ್ನು ಹೇಳುತ್ತಾ ತಿಂದರೆ ಅದರ ರುಚಿ ಹುಡುಗಿಯರ ಬಾಯಲ್ಲಿ ಇನ್ನು ಹೆಚ್ಚುತ್ತದೆ. ಅಷ್ಟಾದಮೇಲೆ ಬಸ್ ಬರುವ ಹೊತ್ತಿಗಾಗಲೇ ಅರ್ದಕಾಲಿಯಾದ ತೆನೆಯನ್ನು ಬಿಸಾಡಲು ಆಗದೆ, ಪೂರ್ತಿ ತಿನ್ನಲು ಆಗದೆ ಸಮಸ್ಯೆಯಲ್ಲಿ ಮಳೆಯಲ್ಲಿ ತೊಯ್ದು ಕೊಡೆ ಹಿಡಿದೇ ಬಸ್ಸ ಹತ್ತಿದರು ಆ ನೂಕು ನುಗ್ಗಲಿಗೆ ಜೋಳದ ತೆನೆಯ ಉಪ್ಪು ಕಾರಗಳು ಸ್ವಲ್ಲ ಕಡಿಮೆಯಾಗಿಬಿಟ್ಟಿರುತ್ತಿದ್ದವು.

ಆದರೂ ಬಿಡದೆ ಒಂದು ಸೀಟ್ ಹಿಡಿದು ಕುಳಿತು ಕಂಡಕ್ಟರ್ ಬಂದ ತಕ್ಷಣ ಎಡಗೈಯಿಂದ ಬಸ್ ಪಾಸ್ ತೋರಿಸಿ. ಕಿಟಕಿ ಅಂಚಿನಿಂದೆಲ್ಲಾ ಮಳೆ ನೀರುನುಗ್ಗಿ ಒದ್ದೆಯಾದ ಸೀಟ್ ಮೇಲೆ‌ ಅದಕ್ಕೆಂದೆ ಮೀಸಲಿಟ್ಟ ಪೇಪರ್ ತುಂಡುಗಳು, ಇನ್ಯಾರದೊ ಕರವಸ್ತ್ರಗಳನ್ನು ಬಳಸಿ ಅಲ್ಲಿನ ತೇವ ಹೀರಿಸಿ ನಾವು ಕುಳಿತುಕೊಳ್ಳುತ್ತಿದ್ದೆವು.

ಈಗಲೂ ಮಳೆ ಸುರಿಯುತ್ತಿದೆ. ಇಂದು ಜೋಳ ಸಿಗಲಿಲ್ಲ ಅದಕ್ಜೇ ಇದನ್ನು ಬರೆದದ್ದು. ಆಸೆ ತೀರಿತು.

ಸುಮಾ.ಕಂಚೀಪಾಲ್
sumagaonkar22@gmail.com

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...