Skip to main content

ನೆನಪ ಬಿಸಿ ಹನಿಗಳು

ಚಿತ್ರ: ಶ್ರೀನಿಧಿ

ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ  ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ.

ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ.  ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ.

ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ.
ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದರೆ ಅರ್ಧಗೆದ್ದಂತೆ. ಅದು ಇದು ಕತೆ ಹೇಳಿ ಇಲ್ಲವೋ ಇನ್ಯಾರದ್ದೋ ಗೋಸಿಪ್ ಕತೆಗಳನ್ನು ಹೇಳುತ್ತಾ ತಿಂದರೆ ಅದರ ರುಚಿ ಹುಡುಗಿಯರ ಬಾಯಲ್ಲಿ ಇನ್ನು ಹೆಚ್ಚುತ್ತದೆ. ಅಷ್ಟಾದಮೇಲೆ ಬಸ್ ಬರುವ ಹೊತ್ತಿಗಾಗಲೇ ಅರ್ದಕಾಲಿಯಾದ ತೆನೆಯನ್ನು ಬಿಸಾಡಲು ಆಗದೆ, ಪೂರ್ತಿ ತಿನ್ನಲು ಆಗದೆ ಸಮಸ್ಯೆಯಲ್ಲಿ ಮಳೆಯಲ್ಲಿ ತೊಯ್ದು ಕೊಡೆ ಹಿಡಿದೇ ಬಸ್ಸ ಹತ್ತಿದರು ಆ ನೂಕು ನುಗ್ಗಲಿಗೆ ಜೋಳದ ತೆನೆಯ ಉಪ್ಪು ಕಾರಗಳು ಸ್ವಲ್ಲ ಕಡಿಮೆಯಾಗಿಬಿಟ್ಟಿರುತ್ತಿದ್ದವು.

ಆದರೂ ಬಿಡದೆ ಒಂದು ಸೀಟ್ ಹಿಡಿದು ಕುಳಿತು ಕಂಡಕ್ಟರ್ ಬಂದ ತಕ್ಷಣ ಎಡಗೈಯಿಂದ ಬಸ್ ಪಾಸ್ ತೋರಿಸಿ. ಕಿಟಕಿ ಅಂಚಿನಿಂದೆಲ್ಲಾ ಮಳೆ ನೀರುನುಗ್ಗಿ ಒದ್ದೆಯಾದ ಸೀಟ್ ಮೇಲೆ‌ ಅದಕ್ಕೆಂದೆ ಮೀಸಲಿಟ್ಟ ಪೇಪರ್ ತುಂಡುಗಳು, ಇನ್ಯಾರದೊ ಕರವಸ್ತ್ರಗಳನ್ನು ಬಳಸಿ ಅಲ್ಲಿನ ತೇವ ಹೀರಿಸಿ ನಾವು ಕುಳಿತುಕೊಳ್ಳುತ್ತಿದ್ದೆವು.

ಈಗಲೂ ಮಳೆ ಸುರಿಯುತ್ತಿದೆ. ಇಂದು ಜೋಳ ಸಿಗಲಿಲ್ಲ ಅದಕ್ಜೇ ಇದನ್ನು ಬರೆದದ್ದು. ಆಸೆ ತೀರಿತು.

ಸುಮಾ.ಕಂಚೀಪಾಲ್
sumagaonkar22@gmail.com

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...