ನಾನು ಹಲವಾರು ಪೋಟೋಗಳನ್ನು ಈಗಾಗಲೇ ಪೋಸ್ಟ್ ಮಾಡಿದ್ದೇನೆ. ಭಾಸ್ಕರ ಪರ್ವ ಕಾರ್ಯಕ್ರಮದ ಬಗ್ಗೆ ನಿಮಗೆ ಈಗಾಗಲೇ ಎಲ್ಲ ತಿಳಿದಿದೆ. ಪೋಸ್ಟ್ ಮಾಡಿ ಮುಗಿಸಲಾಗದಷ್ಟು ಪಟ ಮತ್ತು ನೆನಪುಗಳು ನನ್ನೊಳಗಡೆ ತುಂಬಿಕೊಂಡಿದೆ. ನಾನು ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿಯುವಾಗ ಧೀಮಹಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿಗೆ ಮತ್ತೆ ಹೋಗಿ ಉಳಿಯುತ್ತೇನೆ ಎಂಬ ಅಂದಾಜು ಸಹ ನಾನು ಮಾಡಿರಲಿಲ್ಲ. ಆದರೆ ಮತ್ತದೆ ಹಳೆ ನೆನಪು ಮರುಕಳಿಸಿತು, ಅಷ್ಟೇ ಅಲ್ಲ ಎಲ್ಲ ಗೆಳತಿಯರು ಜೂನಿಯರ್ಗಳು ಸಹ ಅಲ್ಲೇ ಸಿಕ್ಕರು. ಕಾಲೇಜು ಕ್ಯಾಂಟಿನ್ನಲ್ಲಿ ತಿಂಡಿ ಸವಿದಾಯಿತು. ವಿಶೇಷ ಎಂದರೆ ನನ್ನ ಗುರು (ಪತಿ) ಕೂಡ ಇದೇ ಕಾಲೇಜಿನಲ್ಲಿ ಕಲಿತದ್ದು, ಆದರೆ ನಾವು ಒಟ್ಟಿಗೆ ಕಲಿತವರಲ್ಲ. ನಾನು ಸೇರಿದ ವರ್ಷ ಅವನಿಗೆ ಬೀಳ್ಕೊಡುಗೆ ಆಗಿತ್ತು. ಇದು ನಮ್ಮ ಸರ್ ಬೀಳ್ಕೊಡುಗೆ ಆದ ಕಾರಣ ನಾವಿಬ್ಬರು ಹಳೆ ವಿದ್ಯಾರ್ಥಿಗಳಾಗಿ ಹೋಗಿದ್ದೆವು. ಜೊತೆಗೆ ಅವನ ದೋಸ್ತರು ಕೂಡ ಜೊತೆಯಾದರು. ಎಷ್ಟೋ ದಿನದಿಂದ ಕೂಡಿಟ್ಟ ಮಾತೆಲ್ಲ ಒಟಗುಟ್ಟಿ ಆಯಿತು. ಆದರೆ ಎಷ್ಟು ಮಾತಾಡಿದರು ಮುಗಿಯದ ಒಂದಷ್ಟು ಮಾತುಗಳು ಇನ್ನೂ ಉಳಿದಿದೆ. ನಾವು ಅಂತಷ್ಟೆ ಅಲ್ಲ ಎಲ್ಲರಿಗೂ ಹೀಗೆ ಆಗಿದೆ. ಹಳೆ ಸ್ನೇಹಿತರ ಹೊಸ ಬದುಕಿನ ತಿರುವುಗಳನ್ನೆಲ್ಲ ನೋಡಿ, ಕೇಳಿದ್ದಾಯಿತು. ಎಷ್ಟು ಜನ ಸೇರಿದ್ದರು ನೋಡಿ, ಆ ಖುಷಿಯೇ ಬೇರೆ ಇತ್ತು. ಸಾಕಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡು...