Skip to main content

Posts

ಭಾಸ್ಕರ ಪರ್ವ

Recent posts

2025 to 2026

ರಾತ್ರೊ ರಾತ್ರಿ ಬ್ಲಾಗ್ ಬರೆಯುವ ಮನಸಾಯಿತು ಕಾರಣ ಎಲ್ಲರ ಸ್ಟೇಟಸ್. ಎಷ್ಟೊಂದು ಜನ ತಮ್ಮ ಆಸೆ, ಕನಸುಗಳನ್ನು ಬರೆದುಕೊಂಡಿದ್ರು ತಮ್ಮ ನೋವನ್ನು ತೋಡಿಕೊಂಡಿದ್ರು. ಎಂದಿಗೂ ಒಂದು ದಿನವೂ ಸ್ಟೇಟಸ್ ಹಾಕದವರೂ ಸಹ ತಕ್ಷಣ ಒಂದು ಪೋಸ್ಟ್ ಮಾಡಿದ್ರು. ಇನ್ನು ಹೊಸ ಜೋಡಿಗಳಂತು‌ ತಮ್ಮ ಪೋಟೋ ಮೊಗೆ ಮೊಗೆದು ಹಂಚಿಕೊಂಡಿದ್ರು.  ಇನ್ನೊಂದಷ್ಟು ಜನರದ್ದು ಬರೀ Sad ಸ್ಟೇಟಸ್. ಈ ವರ್ಷ ನಾನು ಇವರ ಸಾಲಿನಲ್ಲೇ ನಿಲ್ತೀನಿ ಬಹುಶಃ. ಲೈಪು ಎಲ್ಲ ನಾನಂದುಕೊಂಡ ಹಾಕೆ ಒಂದು ಹಂಪ್ ಕೂಡ ಬರ್ದಾಗೆ ಸಾಗ್ತಾ ಇತ್ತು. 2024ರ ವರೆಗೂ ಎಲ್ಲ ಅರಾಮಾಗೇ ಇತ್ತು. ಅಂದುಕೊಂಡಿದ್ದೆಲ್ಲ ಆಗ್ತಾ ಇತ್ತು ಅಂದ್ರೂ ತಪ್ಪೇನು ಇಲ್ಲ. ನಾನು ಆಸೆ ಪಟ್ಟಂತೆ ಮಾಸ್ಟರ್ ಡಿಗ್ರಿ, ಆಮೇಲೆ ನನ್ನಿಷ್ಟದ ಕೆಲಸ. ನಾನು ಇಷ್ಟ ಪಟ್ಟ ಹುಡುಗ, ಮದುವೆ, ಟ್ರಿಪ್, ಪ್ರಮೋಷನ್, ಹೈಕ್ ಹೀಗೆ ಸಾಕಷ್ಟು.  ಆದರೆ 2025 ಬರೋಬ್ಬರಿ ಪೆಟ್ಟು ಕೊಟ್ಟಿದೆ. ಇಷ್ಟು ದಿನ ಕಷ್ಟ ಬಂದ್ರೆ ಹೇಗಿರುತ್ತೆ ಅಂತ ಗೊತ್ತಿಲ್ಲದ ನನಗೆ ಸಾಲು ಸಾಲಾಗಿ ಕಷ್ಟಗಳೇ ಬಂತು ಹಾಗಂತ ತಲೆ ಹೋಗುವಂತ ಕಷ್ಟನೂ ಅಲ್ಲ. ತಲೆ ಹಾಳು ಮಾಡಿದ ಕಷ್ಟ. ಪ್ರಪ್ರಥಮ ಬಾರಿಗೆ ಲೈಫ್‌ನಲ್ಲಿ ಬ್ರೇಕ್ ಬಿತ್ತು. ನಾನು ಕೆಲಸ ಕಳ್ಕೊಂಡೆ.  ಕಾಲೇಜ್‌ನಲ್ಲಿ ಎಕ್ಸಾಂ ಬರಿಯೋಕು ಮುಂಚೆನೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ನನಗೆ ಕೆಲಸ ಹುಡುಕೋದು, ಕೆಲಸ ಇಲ್ಲದೆ ಕಳಿಯೋದು ಎಷ್ಟು ಡಿಫಿಕಲ್ಟ್ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಫ್ರೆಂಡ್ಸ್ ಹ...

ಮದುವೆಯ ಹಿಂದಣ ದಿನ

ಮದುಮಗನ‌ ಕಡೆಯವರಾಗಿ ಮದುವೆ ಮನೆಯಲ್ಲಿ ಕೆಲಸ ಕಮ್ಮಿಯಾದರೂ ಹಿಂದಿನ‌ ತಯಾರಿಯೇ ಬಲು ಜೋರು. ಇಂದು ಅರಶಿನೆಣ್ಣೆ ಮಾಡಿಯಾಯಿತು. ಹೋಮ, ಹವನ ಕಾಶಿಗೋಪವನ ಕೊಡೆ ತಡೆಯುವುದು ಇಷ್ಟೆಲ್ಲ ಕೆಲಸ ಇತ್ತು. ನೋಡಲು ಬಲು ಮಜವಿತ್ತು. ನಡುವೆ ಗೆಳೆಯ ಹರೀಶನ ಮದುವೆಗೆ ಹೋಗಿ ಬಂದದ್ದೂ ಆಯ್ತು. ಅದೇನೆ ಆಗಲಿ ಇದು ಗಂಡನ ಜೊತೆಗೆ ಹೋದ ಮೊದಲ ಮದುವೆ ಎಂದರೂ ತಪ್ಪಿಲ್ಲ. ಒಟ್ಟೊಟ್ಟಿಗೆ ಸ್ಕೂಟಿಯಲ್ಲಿ ಸೀರೆಯುಟ್ಟು ಒಂದೇ ಬದಿ ಕಾಲು ಹಾಕಿ ಭುಜ ಹಿಡಿದು ಸಾಗುವ ಹೆಂಗಸರ ದಿಸೆಯನ್ನೂ ಇಂದು ಮಾಡಿಯಾಯಿತು.  ಮತ್ತೆ ಅಲ್ಲಿ ಉಂಡು ಸ್ನೇಹಿತರನ್ನೆಲ್ಲ ಭೇಟಿಯಾಗಿ ಬಂದದ್ದೂ ಆಯ್ತು. ರಾತ್ರಿ ತಯಾರಿ ಇನ್ನಷ್ಟು ಜೋರಿತ್ತು. ಮದುಮಗನಿಗೆ ಬೇಕಾಗುವ ಎಲ್ಲ ಅರಿವೆ - ವಸ್ತ್ರಗಳನ್ನು ಜೋಡಿಸಿಯಾಯಿತು. ಇತ್ತ ಊಟಕ್ಕೆ ರೆಡಿ ಮಾಡಿವುದು. ಸಿದ್ದೆಗೆ ಬಣ್ಣ ಹಚ್ಚುವುದು ಹೀಗೆ ಹತ್ತಾರು ಕೆಲಸ.  ಅದೆಲ್ಲ ಆದ ಮೇಲೆ ಸಿಂಗಾರದ ಮಾಲೆಯ ಸಡಗರ. ಅದಂತು ಒಂದೇ ನೂಲಿನಲ್ಲಿ ನವಿರಾಗಿ ಮುಟ್ಟಷ್ಟೂ ಗಂಟು ಹಾಕಿಕೊಳ್ಳುತ್ತಿತ್ತು ಅದನ್ನು ಗಿಳಿಗುಟ್ಟಕ್ಕೆ ಸೇರಿಸಿಯಾಯಿತು.  ಇನ್ನೊಂದೆರಡನ್ನು ಹೀಗೆ ಬಾಳೆಗೆ ಸುತ್ತಿಟ್ಟೆವು. ಅಷ್ಟರಲ್ಲಿ ಮಧ್ಯಾಹ್ನದ ಸಾರು, ಪಾಯಸ ಬಿಸಿ ಮಾಡಿ ಮತ್ತೆ ಬಡಿಸಲು ಸಿದ್ಧತೆ ನಡೆಸಿದೆವು. ನಾನು ಬಡಿಸಿದೆ. ಉಂಡೆ - ತಿಂದೆ ಈಗ ಬ್ಲಾಗ್ ಬರೆಯುತ್ತಿದ್ದೇನೆ.  ಇದಾದ ಮೇಲೆ ಕಾರಿಗೆ ಅಲಂಕಾರ ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಬೂದೆ ಕಳು ಹಬ್ಬ

ದೀಪಾವಳಿಯಲ್ಲಿ 'ಬೂದೆ ಕಳು' ಎಂಬ ಹಬ್ಬ ಬರುತ್ತದೆ. ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಇಲ್ಲವಾದರೂ ಹಿಂದೆಲ್ಲ ಈ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಜ್ಜಿ ಮನೆಯಲ್ಲಿ ನಾನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡೆ. ಇನ್ನು ನಮ್ಮ ಮನೆಯಲ್ಲಿ ಈ ರೀತಿ ಹಬ್ಬದ ಆಚರಣೆಯ ಬಗ್ಗೆ ನಾನು ವಿವರಣೆಯನ್ನು ಮಾತ್ರ ಕೇಳಿದ್ದೆ.  ಆದರೆ ಇದನ್ನು ಕಣ್ಣಾರೆ ಕಂಡು ಭಾಗಿಯಾಗಿದ್ದು ಮಾತ್ರ ಅಜ್ಜನ ಮನೆಯಲ್ಲಿ. ಅಜ್ಜನ ಮನೆಯೆಂದರೆ ಅದೊಂದು ದ್ವೀಪ. ಸುತ್ತಲೂ ನೀರು, ನಡುವೆ ನನ್ನ ಅಜ್ಜನ ಮನೆ. 'ಅಮ್ಮ' ಎಂಬ ಬಳ್ಳಿಯ ಬೇರು ಊರಿಕೊಂಡಿದ್ದ ಜಾಗ ಅದು. ಅಲ್ಲಿ ಹೋದಾಗಲೆಲ್ಲ ತುಂಬಿ ಗಲಗುಡುವ ಮನೆ. ಹತ್ತಾರು ಜನರು ಒಟ್ಟಿಗೆ ಕೂಡಿ ಬಾಳುತ್ತಿದ್ದ ಮನೆ ದಬ್ಬೇಸಾಲು. ಮರುದಿನವಾದರೆ ಲಕ್ಷ್ಮೀ ಪೂಜೆ. ಹಿಂದಿನ ದಿನವೇ ಈ ಬೂದೆ ಕಳು ಹಬ್ಬ. ಯಾರಿಗೂ ನಷ್ಟವಾಗದಂತೆ ಚಿಕ್ಕ ಪುಟ್ಟ ವಸ್ತುಗಳನ್ನು ಮಾತ್ರ ಕದಿಯುವ ಹಬ್ಬ. ಈ ಕಳು ಮಾಡುವ ಹಬ್ಬ ಯಾಕೆ ಆಚರಣೆಯಲ್ಲಿ ಬಂತು? ಅದರ ಹಿಂದಿನ ಇತಿಹಾಸ ಮತ್ತು ಆಚರಣೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದ್ದರೆ ನೀವು ವಿವರಿಸಬಹುದು. ದಬ್ಬೇಸಾಲು ಊರಿನಲ್ಲಿ ಹಳ್ಳಗಳನ್ನು ದಾಟುತ್ತಲೇ ಒಂದೊಂದು ಮನೆ ತಲುಪಬೇಕು. ಹೀಗಿರುವಾಗ ನಾನು ತುಂಬಾ ಚಿಕ್ಕವಳು, ಒಂದೆರಡನೇ ತರಗತಿ ...

ಹಳೆ ಲೇಖನಕ್ಕೆ ಪ್ರಕಟಣೆಯ ಭಾಗ್ಯ!

ಅಷ್ಟಕ್ಕೂ ನಾವು ಮದುವೆ ಆಗಿದ್ದೇ ಬರೋಬ್ಬರಿ ಚುನಾವಣೆಯ ಕಾಲಗತಿಯಲ್ಲಿ.  ನಾವು ಅಂದರೆ ಮತ್ಯಾರೂ ಅಲ್ಲ, ನಾನು ಮತ್ತು ಸುಮಾ.  ಇಬ್ಬರೂ ಮಾಧ್ಯಮದಲ್ಲಿ, ಹೇಳಿಕೇಳಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಮತದಾನ ಮುಗಿದರೂ ನಾಕು ದಿನ ರಜೆ ಹಾಕಲು ಅನುವು ಮಾಡಿರಲಿಲ್ಲ. ಚುನಾವಣೆ ಮುಗಿದು, ಸರ್ಕಾರ- ಮಂತ್ರಿ ಮಂಡಲ ರಚನೆಯೂ ಆಗಿಹೋದ ಮೇಲಾದರೂ ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ನಮಗೆ ಬೇಕಿದ್ದು, ಅದಾಗೇ ಕೂಡಿಬಂದದ್ದು ಎಲ್ಲವೂ ಸೇರಿ ಒಂದು ರಾತ್ರಿ ಕಳೆದು ಬೆಳಗು ಕೂಗುವದರಲ್ಲಿ ಒಂದು ಮುತ್ತಿನ ನಗರಿ!  ನಮ್ಮ ಸಮಯಕ್ಕೆ ರೈಲು, ರೈಲಿನ ಸಮಯಕ್ಕೆ ನಾವು ಸೆಟ್ ಆಗುವುದಿಲ್ಲ ಎಂದು ಅಳೆದು ತೂಗಿ ಕೊನೆಕ್ಷಣದಲ್ಲಿ ಬಸ್ ಮೆಟ್ಟಿಲು ಹತ್ತುವ ನಿರ್ಧಾರ ಮಾಡಿದ್ದಾಯಿತು. ಮೊದಲು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಟಿಎಸ್ಆರ್‌ಟಿಸಿ ಬಸ್‌ ಪರಿಶೀಲಿಸಲಾಗಿ ಬಸ್‌ಗಳ ಚಿತ್ರಗಳೇ ನಮ್ಮನ್ನು ಭ್ರಮನಿರಸನ ಮಾಡಿದ್ದು ಸುಳ್ಳಲ್ಲ. ತೆಲಂಗಾಣದ ಲಹರಿ ಹೆಸರಿನ ಬಸ್‌ಗಳು ನಮ್ಮ ರಾಜಹಂಸ ಇದ್ದಹಾಗೆ, ಆದರೆ ನಮ್ಮ ಯಲ್ಲಾಪುರದಿಂದ ಕಾರವಾರಕ್ಕೋ, ಹುಬ್ಬಳ್ಳಿಗೋ ಬುರುಬುರುನೇ ತಿರುಗುವ, ಕೊನೆಗೆ ಕೊರೋನಾಕ್ಕಿಂತ ಮೊದಲು ಕಮ್ಮಾಣಿಯೋ ಕೆಳಾಸೆಗಳೆಂಬೋ ಮೂಲೆ ಮೂಲೆಯ ಊರುಗಳಿಗೆ ಓಡುವ ಬಸ್‌ಗಳೇ ಇವಕ್ಕಿಂತ ಚೆನ್ನ. ಆ ಲೆಕ್ಕದಲ್ಲಿ ನಮ್ಮ ಕೆಎಸ್ಆರ್‌ಟಿಸಿ ಎಷ್ಟೋ ಬೆಸ್ಟ್.   ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆ ಕೆಎಸ್ಆರ್‌ಟಿಸಿ...