Skip to main content

ಮೇಗಣ್ಮನೆ ಅಜ್ಜ

ಬೆಂಗಳೂರಿನಲ್ಲಿರುವ ನಮಗೆ ಊರಿನ ಸುದ್ದಿ ತಿಳಿಯಲು ಹೆಚ್ಚೇನು ಸಮಯ ಬೇಡ. ಆದರೂ ನನಗೆ ಈ ವಿಷಯ ತುಸು ತಡವಾಗೇ ಗೊತ್ತಾಗಿದ್ದು. ಅಮ್ಮ ಫೋನ್‌ ಮಾಡಿ ವಿಷಯ ಹೌದಾ? ಅಂತ ಅಂದ ತಕ್ಷಣ ಯಾವ ವಿಷಯ ಅಂತ ಗೊತ್ತಾಗಲಿಲ್ಲ. ನಂತರ ನಿಧಾನಕ್ಕೆ ಅರ್ಥವಾಯ್ತು. ಹೇಗಂದ್ರು ಮರುದಿನ ಶನಿವಾರ ಊರಿಗೆ ಹೊರಟೇ ಬಿಡೋಣ ಅಂದುಕೊಂಡರೆ ಅನಿವಾರ್ಯವಾಗಿ ಮತ್ತೆ ಮೂರು ದಿನಗಳ ನಂತರ ಬಸ್‌ ಬುಕ್‌ ಆಗಿತ್ತು. ಇದೆಲ್ಲ ಒಂದು ಕಡೆಯ ಯೋಚನೆ ಆದರೆ. ಸುಬ್ಬಜ್ಜ, ರಾಮಜ್ಜರ ವಿಡಿಯೋ ತುಣುಕೊಂದು ಮನಸಿಗೆ ನಾಟಿತು. 


ಹಾಗೇ ಮೇಗಣ್ಮನೆ ಅಜ್ಜ (ಸುಬ್ಬಜ್ಜ) ನನ್ನ ಅಜ್ಜ ತೀರಿಕೊಂಡಾಗ ರಾಮಾ, ಏ ರಾಮಾ, ಎನ್ನುತ್ತಾ ಮೈಮುಟ್ಟಿ ಕಣ್ಣೀರು ಸುರಿಸಿದ್ದು ನೆನಪಾಗಿ ಹೋಯ್ತು. ಎಲ್ಲ ತಮ್ಮಂದಿರನ್ನು ಕಳೆದುಕೊಂಡು ಅಷ್ಟೊಂದು ಅಪಾರ ದುಃಖವನ್ನು ವರ್ಷದಿಂದ ವರ್ಷಕ್ಕೆ ನೋಡುತ್ತಲೇ ತನ್ನ ತಮ್ಮಂದಿರ ಅಳಿವನ್ನು ಕಣ್ಣಾರೆ ಕಂಡು ಮರುಗುತ್ತಲೇ ಬಂದವ ಮೇಗಣ್ಮನೆ ಅಜ್ಜ. ತಮ್ಮಂದಿರು ಹೋದಾಗಲೆಲ್ಲ ಮಂಕಾಗುತ್ತಾ ಬಂದಿದ್ದ.  

ನಮ್ಮ ಮನೆ ಕಂಚೀಪಾಲಿನ ಹಿರಿಕೊಂಡಿಗಳೆಲ್ಲವೂ ಈಗ ಸುಬ್ಬಜ್ಜನ ಅಂತ್ಯದಿಂದ ಕಳಚಿಕೊಂಡಂತಾಯಿತು. ನನಗೆ ಒಟ್ಟು 4 ಜನ ಮನೆ ಅಜ್ಜಂದಿರು. ಒಂಭತ್ತು ಜನ ಅಜ್ಜನ ಮನೆ ಅಜ್ಜಂದಿರು. ಈಗ ಮನೆಯ ನಾಲ್ಕೂ ಅಜ್ಜಂದಿರೂ ಇಹದ ಋಣ ಮುಗಿಸಿಕೊಂಡು ಹೊರಟಿದ್ದಾರೆ. ಎಲ್ಲರಿಗೂ ಹಿರಿಯಣ್ಣನಾಗಿದ್ದ ಸುಬ್ಬಜ್ಜನೂ ನಿನ್ನೆ ಹೋಗಿಬಿಟ್ಟ. ಯಾವಾಗಲೂ ನನ್ನ ಅಜ್ಜ ರಾಮಜ್ಜ ಹಾಗೂ ಅವನ ಅಣ್ಣ ಮೇಗಣ್ಮನೆ ಅಜ್ಜ ಹೆಚ್ಚಾಗಿ ಒಟ್ಟಿಗಿರುತ್ತಿದ್ದರು. ತಮ್ಮಣ್ಣಜ್ಜನಂತು ತುಂಬಾ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡಿದ್ದಾನೆ. ಅವನು ಹೇಗಿದ್ದ ಎಂಬುದನ್ನೂ ಸಹ ನಾವು ನೋಡಿಲ್ಲ. ಯಾವಾಗಲೂ ಅಬ್ಬೆ ಒಂದು ಬ್ಲಾಕ್‌ ಎಂಡ್‌ ವೈಟ್‌ ಫೋಟೋ ತೋರಿಸಿದ ನೆನಪು ಆದರೂ ಅದು ಅಷ್ಟು ಸ್ಪಷ್ಟವಾಗಿಲ್ಲ. ಇನ್ನು ರಂಗಜ್ಜ ಎಲ್ಲರಿಗಿಂತ ಭಿನ್ನ ಯಾಕೆಂದರೆ ಅಜ್ಜಂದಿರ ಪೈಕಿ ಅವನೊಬ್ಬನೆ ನೌಕರಿ ಮಾಡಿದ್ದು. 

ಮೇಗಣ್ಮನೆ ಅಜ್ಜ ಆಟದ ಚಿನ್ನ ಮಾಡುತ್ತಿದ್ದ (ಯಕ್ಷಗಾನ ಆಭರಣಗಳು) ಕಣ್ಣು ಸರಿಯಾಗಿ ಕಾಣಿಸುವ ಕೊನೆ ದಿನಗಳವರೆಗೂ ಅವನು ಆಟದ ಚಿನ್ನಕ್ಕೆ ಕನ್ನಡಿಗಳನ್ನು ಅಂಟಿಸಿ ಬ್ಯಾಗಡೆ ಹಚ್ಚುತ್ತಿದ್ದ. ಯಾಕೆಂದರೆ ನಾನು ಮೇಗಣ್ಮನೆಗೆ ಯಾವಾಗಲೂ ಹೆಚ್ಚಾಗಿ ಹೋಗಿದ್ದು ಸಂಜೆಯ ಹೊತ್ತಿಗೆ ಆಗ ನಾನೂ ಅವನೊಟ್ಟಿಗೆ ಕೂತು ಅದನ್ನೆಲ್ಲ ನೋಡಿದ್ದೆ. ರಜೆ ಇದ್ದರೆ, ಬೇಜಾರು ಬಂದರೆ, ಕೆಲಸ ಇದ್ದರೆ, ಅಮ್ಮ ಏನಾದರು ಕೊಟ್ಟು ಬರಲು ಹೇಳಿ, ತರಲು ಹೇಳಿದರೆ, ಹಬ್ಬವಿದ್ದರೆ, ಅಕ್ಕ ಬಂದರೆ ಹೀಗೆ ಮೇಗಣ್ಮನೆಗೆ ಹೋಗಲು ಸಾವಿರ ಕಾರಣ ಇರುತ್ತದೆ ಬಿಡಿ. ಹೋದಾಗೆಲ್ಲ ಅಜ್ಜ "ಅಕೋ" ಎಂದು ಮಾತಾಡಿಸಿ ಮೊಟ್ಟ ಮೊದಲು ಕೇಳುತ್ತಿದ್ದ ಪ್ರಶ್ನೆ "ಅಜ್ಜಂದು ಎಲೆ ಇದ್ದ ಖಾಲಿ ಆಯ್ದ?" ಎಂಬುದಾಗಿ. ಅಜ್ಜಂದಿರಿಬ್ಬರು ಬರಪೂರ ಕವಳ ಹಾಕುವವರು ಹಾಗಾಗಿ ಅವರು ಅದನ್ನೇ ವಿಚಾರಿಸುತ್ತಿದ್ದರು. 

ಅದನ್ನು ಬಿಟ್ಟರೆ ಶಾಲೆ, ಕಾಲೇಜಿನ ವಿಚಾರ. ಇನ್ನೊಂದೇನೆಂದರೆ ಅಜ್ಜನಿಗೆ ಸದಾಕಾಲ ಓದುವ ಹವ್ಯಾಸವೂ ಇತ್ತೂ. ಕಣ್ಣು ಮಂಕಾದ ಮೇಲೆ ಪಾಪ ಜಗುಲಿಯ ತುದಿಗೆ ಕೂತು ಕೈಯ್ಯಲ್ಲೇ ಕವಳ ಪೇಳಿಯಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಗ್ರಹಿಸುತ್ತ ಮನೆಗೆ ಯಾರಾದರೂ ಬಂದರೆ ಅವರ ಧ್ವನಿ ಕೇಳಿಯೇ ಮಾತಾಡಿಸುತ್ತಾ ಇರುತ್ತಿದ್ದ. ಅಜ್ಜ ಮೊಮ್ಮಕ್ಕಳು, ಮಿಮ್ಮಕ್ಕಳನ್ನೆಲ್ಲ ಕಂಡು ಹೋಗಿದ್ದಾಯ್ತು. ಆದರೆ ಕೊನೆಗೊಂದು ಸಲ ಮುಖ ನೋಡಿದ್ದರೆ ನನಗೆ ಇನ್ನಷ್ಟು ಸಮಾಧಾನ ಇರುತ್ತಿತ್ತು. 
ಸುಮಾ. ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...