ಚಿತ್ರ: ಶ್ರೀನಿಧಿ
ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ.
ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ. ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ.
ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ.
ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದರೆ ಅರ್ಧಗೆದ್ದಂತೆ. ಅದು ಇದು ಕತೆ ಹೇಳಿ ಇಲ್ಲವೋ ಇನ್ಯಾರದ್ದೋ ಗೋಸಿಪ್ ಕತೆಗಳನ್ನು ಹೇಳುತ್ತಾ ತಿಂದರೆ ಅದರ ರುಚಿ ಹುಡುಗಿಯರ ಬಾಯಲ್ಲಿ ಇನ್ನು ಹೆಚ್ಚುತ್ತದೆ. ಅಷ್ಟಾದಮೇಲೆ ಬಸ್ ಬರುವ ಹೊತ್ತಿಗಾಗಲೇ ಅರ್ದಕಾಲಿಯಾದ ತೆನೆಯನ್ನು ಬಿಸಾಡಲು ಆಗದೆ, ಪೂರ್ತಿ ತಿನ್ನಲು ಆಗದೆ ಸಮಸ್ಯೆಯಲ್ಲಿ ಮಳೆಯಲ್ಲಿ ತೊಯ್ದು ಕೊಡೆ ಹಿಡಿದೇ ಬಸ್ಸ ಹತ್ತಿದರು ಆ ನೂಕು ನುಗ್ಗಲಿಗೆ ಜೋಳದ ತೆನೆಯ ಉಪ್ಪು ಕಾರಗಳು ಸ್ವಲ್ಲ ಕಡಿಮೆಯಾಗಿಬಿಟ್ಟಿರುತ್ತಿದ್ದವು.
ಆದರೂ ಬಿಡದೆ ಒಂದು ಸೀಟ್ ಹಿಡಿದು ಕುಳಿತು ಕಂಡಕ್ಟರ್ ಬಂದ ತಕ್ಷಣ ಎಡಗೈಯಿಂದ ಬಸ್ ಪಾಸ್ ತೋರಿಸಿ. ಕಿಟಕಿ ಅಂಚಿನಿಂದೆಲ್ಲಾ ಮಳೆ ನೀರುನುಗ್ಗಿ ಒದ್ದೆಯಾದ ಸೀಟ್ ಮೇಲೆ ಅದಕ್ಕೆಂದೆ ಮೀಸಲಿಟ್ಟ ಪೇಪರ್ ತುಂಡುಗಳು, ಇನ್ಯಾರದೊ ಕರವಸ್ತ್ರಗಳನ್ನು ಬಳಸಿ ಅಲ್ಲಿನ ತೇವ ಹೀರಿಸಿ ನಾವು ಕುಳಿತುಕೊಳ್ಳುತ್ತಿದ್ದೆವು.
ಈಗಲೂ ಮಳೆ ಸುರಿಯುತ್ತಿದೆ. ಇಂದು ಜೋಳ ಸಿಗಲಿಲ್ಲ ಅದಕ್ಜೇ ಇದನ್ನು ಬರೆದದ್ದು. ಆಸೆ ತೀರಿತು.
ಸುಮಾ.ಕಂಚೀಪಾಲ್
sumagaonkar22@gmail.com
ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ. ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ.
ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ.
ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದರೆ ಅರ್ಧಗೆದ್ದಂತೆ. ಅದು ಇದು ಕತೆ ಹೇಳಿ ಇಲ್ಲವೋ ಇನ್ಯಾರದ್ದೋ ಗೋಸಿಪ್ ಕತೆಗಳನ್ನು ಹೇಳುತ್ತಾ ತಿಂದರೆ ಅದರ ರುಚಿ ಹುಡುಗಿಯರ ಬಾಯಲ್ಲಿ ಇನ್ನು ಹೆಚ್ಚುತ್ತದೆ. ಅಷ್ಟಾದಮೇಲೆ ಬಸ್ ಬರುವ ಹೊತ್ತಿಗಾಗಲೇ ಅರ್ದಕಾಲಿಯಾದ ತೆನೆಯನ್ನು ಬಿಸಾಡಲು ಆಗದೆ, ಪೂರ್ತಿ ತಿನ್ನಲು ಆಗದೆ ಸಮಸ್ಯೆಯಲ್ಲಿ ಮಳೆಯಲ್ಲಿ ತೊಯ್ದು ಕೊಡೆ ಹಿಡಿದೇ ಬಸ್ಸ ಹತ್ತಿದರು ಆ ನೂಕು ನುಗ್ಗಲಿಗೆ ಜೋಳದ ತೆನೆಯ ಉಪ್ಪು ಕಾರಗಳು ಸ್ವಲ್ಲ ಕಡಿಮೆಯಾಗಿಬಿಟ್ಟಿರುತ್ತಿದ್ದವು.
ಆದರೂ ಬಿಡದೆ ಒಂದು ಸೀಟ್ ಹಿಡಿದು ಕುಳಿತು ಕಂಡಕ್ಟರ್ ಬಂದ ತಕ್ಷಣ ಎಡಗೈಯಿಂದ ಬಸ್ ಪಾಸ್ ತೋರಿಸಿ. ಕಿಟಕಿ ಅಂಚಿನಿಂದೆಲ್ಲಾ ಮಳೆ ನೀರುನುಗ್ಗಿ ಒದ್ದೆಯಾದ ಸೀಟ್ ಮೇಲೆ ಅದಕ್ಕೆಂದೆ ಮೀಸಲಿಟ್ಟ ಪೇಪರ್ ತುಂಡುಗಳು, ಇನ್ಯಾರದೊ ಕರವಸ್ತ್ರಗಳನ್ನು ಬಳಸಿ ಅಲ್ಲಿನ ತೇವ ಹೀರಿಸಿ ನಾವು ಕುಳಿತುಕೊಳ್ಳುತ್ತಿದ್ದೆವು.
ಈಗಲೂ ಮಳೆ ಸುರಿಯುತ್ತಿದೆ. ಇಂದು ಜೋಳ ಸಿಗಲಿಲ್ಲ ಅದಕ್ಜೇ ಇದನ್ನು ಬರೆದದ್ದು. ಆಸೆ ತೀರಿತು.
ಸುಮಾ.ಕಂಚೀಪಾಲ್
sumagaonkar22@gmail.com
Akkkaaa...bayalli neer tarsdyallee 😋😋🤤
ReplyDelete😁.. ಕೊಂಡು ತಿಂದರಾಯ್ತು
DeleteSuperr
ReplyDeleteTq uuuuu...
DeleteSuperbbb
ReplyDeleteಧನ್ಯವಾದ
Delete😍😍
ReplyDelete