ಸ್ನೇಹ ಬಾಡದ ಮುದ್ದು ಪುಷ್ಪ ಅಂಗನವಾಡಿ ಗೋಡೆ ಮೇಲೆ ಅಂದೆಂದೂ ಗೀಚಿದ ಸೇಹದ ಗೆರೆಗಳು ಇಂದಿಗೂ ಹಸಿರು . ಗೆಳೆತನದ ಬೀಜ ಅಂದು ಮನದಲ್ಲಿ ನೆಟ್ಟಿದ್ದು ಇಂದಿಗೂ ಹಸಿರಾಗಿ ಚಿಗುರಿಕೊಂಡೇ ಇದೇ..ಕಡ್ಡಿ ಕಳೆದೋದಾಗ ಕಡ್ಡಿ ಕೊಟ್ಟ ಗೆಳೆಯ ಇಂದು ದೊಡ್ಡ ಕಲಾಕಾರ . ಆದೆಷ್ಟೊ ಚಿತ್ರಗಳಿಗೆ ಜೀವ ತುಂಬುತ್ತಿದ್ದಾನೆ .. ಕನ್ನಡ ಶಾಲೆಯಲ್ಲಿ ಪಕ್ಕದಲ್ಲೇ ಕುಳಿತು ಲೆಕ್ಕ ಬಿಡಿಸುತ್ತಿದ್ದವಳು ಇಂದು ಬ್ಯಾಂಕ್ ಮ್ಯಾನೇಜರ್. ಹೀಗೆಲ್ಲಾ ಚಿಗುರಿದ್ದು ಇಂದು ಎಣಿಸಲಾಗದಷ್ಟು ನೆನಪೆಂಬ ಎಲೆಗಳಿಂದ ತುಂಬಿಹೋಗಿದೆ . ಈಜಲೆಂದು ಹೋಗಿ ಜೀವ ಕಳೆದುಕೊಂಡ ಬಸ್ಯಾ ಇನ್ನು ನೆನಪಿಗೆ ಬರುತ್ತಾನೆ .. ಹೀಗೆ ಉದುರಿ ಹೋದ ಎಲೆಗಳು ಬಹಳ ಸಂತೋಷಕ್ಕೆ ಸಾತ್ ನೀಡಿ ದುಃಖದಲ್ಲಿ ಸಂತೈಸಿ ಕ್ಷಣ ಕ್ಷಣ ಜೊತೆಯಾಗಿರುವವರು ಸ್ನೇಹಿತರೇ. ಇನ್ನು ಈ ಮರಕ್ಕೆ ಕೆಲವು ಹೂವುಗಳು ಅನಿರೀಕ್ಷಿತವಾಗಿ ಸಿಗುವ ಗೆಳೆಯರು ಒಂದು ದಿನಕ್ಕೆಲ್ಲಾ ಅರಳಿ ಎರಡು ಮೂರು ದಿನಕ್ಕೆ ಬಾಡಿ ಉದುರಿ ಹೋಗುತ್ತವೆ.ಕ್ಯಾಂಪ್ಗಳಲ್ಲಿ , ಬಸ್ನಲ್ಲಿ , ಪ್ರವಾಸದಲ್ಲಿ ಸಿಗುವ ಈ ಹೂವುಗಳ ಪರಿಮಳವಂತು ಹೂ ಉದುರಿದರೂ ಉಳಿವಂತ ಕಂಪು ನೀಡಿವೆ. ಕೆಲವು ಹೂವಾಗಿ ಹಣ್ಣಾಗಿ ಕೊಳೆತು ನಾರಿ ಹೇಸಿಗೆಯನ್ನು ಉಂಟುಮಾಡಿದೆ . ಎಷ್ಟೇ ಆದರೂ ಅದು ನಮ್ಮ ಮರದ ಕಾಯಿಯೇ ಎಂದುಸುಮ್ಮನಿದ್ದು ಬಿಡುವುದು. ಇನ್ನು ಕೆಲವು ಹಣ್ಣುಗಳು ತುಂಬಾ ರುಚಿಯಾಗಿ ಸಿಹಿಯನ್ನು ಮಾತ್ರ ನೀಡುವ ಸ್ನೇಹಿತರೂ ಇರುತ್ತಾರೆ . ಜೀವನ...