ಪಿಯಾನಿನ ಶಬ್ಧ ನಮ್ಮಮನೆ ಅಂಗಳದಲ್ಲಿ ಅದೂ ಮಟ ಮಟ ಮಧ್ಯಾನ್ಹ !!!! ಅರೆ ಎಂದು ನಿದ್ದೆಗಣ್ಣಲ್ಲಿ ಮೆಟ್ಟಿಲಿಳಿದೆ. ಕೊರಳತುಂಬ ರುದ್ರಾಕ್ಷಿ ಅದಕ್ಕೆ ಕೇಸರಿ ಗೊಂಡೆ ಬದಿಗೆ ಇಟ್ಟ ಒಂದು ಕರಿಯ ಕೋಲು ಒಂದು ಅಂಗಿ, ಲುಂಗಿ ತಲೆಗೆ ಕೇಸರಿಯ ಪೊಗಡಿಸುತ್ತಿದ್ದ, ಅತೀ ಕಪ್ಪನೆಯ ಬಣ್ಣದ ಮಣ್ಣು ಕಾಲು, ಬೆಂಡಾಗುತ್ತಿರುವ ಬೆರಳು ಕೆಟ್ಟು ಮುರುಟಿದ ಉಗುರು, ಬಗುಲಲ್ಲಿ ಅರಶಿನ ಬಣ್ಣದ ವಸ್ತ್ರದ ಚೀಲ ಹಳೇಯ ಹಳದಿ ಕೊಡೆ.
ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ.
ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss" ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು.
ಅಪ್ಪ ಪ್ರತಿವರ್ಷವೂ ಅವರಿಗಾಗಿ ಕಾಯುತ್ತಾನೆ. ಅವರು ವರ್ಷಕ್ಕೊಮ್ಮೆ ಬಂದೇ ಬರುತ್ತಾರೆ. ಕೇವಲ ಬೇಡಿಕೊಂಡು ತಿನ್ನುವ ಸಲುವಾಗಿ ಅಲ್ಲ. ತಲಾತಲಾಂತರದಿಂದ ಬಂದ ಹಾಡುವ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಎಂದು ಅವರೇ ಹೆಳುತ್ತಾರೆ . ಅವರಿಗೂ ಸ್ವಂತ ಜಮೀನಿದೆ. ನನ್ನ ಮಕ್ಕಳು ಇದನ್ನು ಮಾಡುವುದಿಲ್ಲ. ನನಗೂ ಊರೂರು ತಿರುಗುವುದು ಬೇಡ ಎನ್ನುತ್ತಾರೆ. "ಆದರೆ ನನಗೆ ಈ ಪದ್ದತಿ ಕೊನೆಗೊಳ್ಳುವದನ್ನು ಸಹಿಸಲು ಆಗದೆ ಬರುತ್ತೇನೆ". ನನ್ನಲ್ಲಿ ದೇವರು ಎಷ್ಟು ದಿನ ತಿರುಗುವ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ. ಎಂದು ಕೈ ಮುಗಿದು, ಚೂರು ನೀರು ಕೊಡಿ ಎಂದವರೆ ಪಟ ಪಟ ಎಂದು ಮಾತು ಶುರು ಮಾಡುತ್ತಾರೆ.
ನಮ್ಮ ಹಳೆಯ ಮನೆ ಈಗಿನ ಮನೆಗಿಂತ ಸ್ವಲ್ಪ ಕೆಳಗಿತ್ತು. ಆಗ ನನಗೆ ಮೂರು ವರ್ಷ ಅದಕ್ಕಿಂಲು ಮುಂಚಿನಿಂದ ಅಂದರೆ ನನ್ನ ಅಜ್ಜನ ಅಪ್ಪ ಬದುಕಿರುವಾಗಿನಿಂದ ಬರುತ್ತಿದ್ದವರು ಇವರೆ ಎಂದು ಹಳೆಯ ನೆನಪುಗಳನ್ನು ಮಾತಿಗೆಳೆಯುತ್ತಾರೆ. ನಮ್ಮ ಹಳೇ ಮನೆಯಲ್ಲೂ ಒಂದು ಪಿಯಾನೋ ಪೆಟ್ಟಿಗೆ ಇತ್ತಂತೆ. ಆಗಿನಿಂದ ನಮ್ಮ ಮನೆಯವರಿಗೆ ಯಕ್ಷಗಾನದ ಹುಚ್ಚು ಬಹಳವಿತ್ತು ಇಂದಿಗೂ ಇದೆ. ಅದರ ಜೊತೆ ಒಂದು ಮದ್ದಳೆಯೂ ಇತ್ತು. ಅದು ನನ್ನ ನೆನಪಿಗೆ ಬರುತ್ತದೆ ನಾನು ಏಳನೇ ತರಗತಿಯಲ್ಲಿರುವಾಗ ಒಮ್ಮೆ ಅಟ್ಟದಿಂದ ಬಿದ್ದು ಒಡೆದು ಹೋಗಿ ನನ್ನ ಅಜ್ಜ ಮರುಗಿದ್ದನ್ನು ಕಂಡಿದ್ದೇನೆ.
ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ.
ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss" ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು.
ಅಪ್ಪ ಪ್ರತಿವರ್ಷವೂ ಅವರಿಗಾಗಿ ಕಾಯುತ್ತಾನೆ. ಅವರು ವರ್ಷಕ್ಕೊಮ್ಮೆ ಬಂದೇ ಬರುತ್ತಾರೆ. ಕೇವಲ ಬೇಡಿಕೊಂಡು ತಿನ್ನುವ ಸಲುವಾಗಿ ಅಲ್ಲ. ತಲಾತಲಾಂತರದಿಂದ ಬಂದ ಹಾಡುವ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಎಂದು ಅವರೇ ಹೆಳುತ್ತಾರೆ . ಅವರಿಗೂ ಸ್ವಂತ ಜಮೀನಿದೆ. ನನ್ನ ಮಕ್ಕಳು ಇದನ್ನು ಮಾಡುವುದಿಲ್ಲ. ನನಗೂ ಊರೂರು ತಿರುಗುವುದು ಬೇಡ ಎನ್ನುತ್ತಾರೆ. "ಆದರೆ ನನಗೆ ಈ ಪದ್ದತಿ ಕೊನೆಗೊಳ್ಳುವದನ್ನು ಸಹಿಸಲು ಆಗದೆ ಬರುತ್ತೇನೆ". ನನ್ನಲ್ಲಿ ದೇವರು ಎಷ್ಟು ದಿನ ತಿರುಗುವ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ. ಎಂದು ಕೈ ಮುಗಿದು, ಚೂರು ನೀರು ಕೊಡಿ ಎಂದವರೆ ಪಟ ಪಟ ಎಂದು ಮಾತು ಶುರು ಮಾಡುತ್ತಾರೆ.
ನಮ್ಮ ಹಳೆಯ ಮನೆ ಈಗಿನ ಮನೆಗಿಂತ ಸ್ವಲ್ಪ ಕೆಳಗಿತ್ತು. ಆಗ ನನಗೆ ಮೂರು ವರ್ಷ ಅದಕ್ಕಿಂಲು ಮುಂಚಿನಿಂದ ಅಂದರೆ ನನ್ನ ಅಜ್ಜನ ಅಪ್ಪ ಬದುಕಿರುವಾಗಿನಿಂದ ಬರುತ್ತಿದ್ದವರು ಇವರೆ ಎಂದು ಹಳೆಯ ನೆನಪುಗಳನ್ನು ಮಾತಿಗೆಳೆಯುತ್ತಾರೆ. ನಮ್ಮ ಹಳೇ ಮನೆಯಲ್ಲೂ ಒಂದು ಪಿಯಾನೋ ಪೆಟ್ಟಿಗೆ ಇತ್ತಂತೆ. ಆಗಿನಿಂದ ನಮ್ಮ ಮನೆಯವರಿಗೆ ಯಕ್ಷಗಾನದ ಹುಚ್ಚು ಬಹಳವಿತ್ತು ಇಂದಿಗೂ ಇದೆ. ಅದರ ಜೊತೆ ಒಂದು ಮದ್ದಳೆಯೂ ಇತ್ತು. ಅದು ನನ್ನ ನೆನಪಿಗೆ ಬರುತ್ತದೆ ನಾನು ಏಳನೇ ತರಗತಿಯಲ್ಲಿರುವಾಗ ಒಮ್ಮೆ ಅಟ್ಟದಿಂದ ಬಿದ್ದು ಒಡೆದು ಹೋಗಿ ನನ್ನ ಅಜ್ಜ ಮರುಗಿದ್ದನ್ನು ಕಂಡಿದ್ದೇನೆ.
ಹಳೆಯ ಪತ್ರವ್ಯವಹಾರದಿಂದ ಕತೆ ಆರಂಭಗೊಂಡು, ಟೆಲಿಗ್ರಾಂ ಸುದ್ದಿಯಿಂದ ಬತ್ತದ ಬಿತ್ತನೆಯ ಬಗ್ಗೆ ಹಾಗೆ ಆರೋಗ, ಕೊರೊನಾ, ಲಾಕ್ ಡೌವ್ನ ಮದುವೆ, ಮುಂಡಗೋಡಿ ಬೆಟ್ಟಗಳು ಮತ್ತು ನಮ್ಮ ಕಡೆಗಿನ ಗದ್ದೆಯ ಪಕ್ಕದ ಮನೆಗಳು, ಕರಡಿಯೊಬ್ಬನ ಮೂಗು ಹರಿದ ಕತೆ ಎಂದೆಲ್ಲಾ ಗಡಿಯಾರ ಒಂದು ತನ್ನ ಮುಳ್ಳುಗಳಿಂದ ಪ್ರತೀ ಸಮಯವನ್ನು ಸೂಚಿಸುತ್ತಾ ತಿರುಗುವಂತೆ ಎಲ್ಲ ವಿಷಯಗಳ ಸುದ್ದಿಯಿಂದ ಪ್ರಸ್ತುತ ವರ್ತಮಾನದ ಮೊಬೈಲ್ ಬಳಕೆಯವರೆಗೆ ಬಂದು ಇನ್ನು ನನ್ನ ಸಮಯವಾಯಿತ್ತು.
"ಮುಂದಿನ ವರ್ಷವೂ ದೇವರು ಬರುವ ಶಕ್ತಿ ಕರುಣಿಸಿದರೆ ಮಾತ್ರ ಬರುತ್ತೇನೆ". ಎಂದು ಹೇಳುವಾಗ ಅವರ ವಯಸ್ಸಿನ ಹಳೆತನ ದನಿಯಲ್ಲಿ ಕೇಳುತ್ತಿತ್ತು. ಇಷ್ಟು ಹೇಳಿ ಅವರು ವಿರಮಿಸುತ್ತಾರೆ.
ಸುಮಾ.ಕಂಚೀಪಾಲ್
"ಮುಂದಿನ ವರ್ಷವೂ ದೇವರು ಬರುವ ಶಕ್ತಿ ಕರುಣಿಸಿದರೆ ಮಾತ್ರ ಬರುತ್ತೇನೆ". ಎಂದು ಹೇಳುವಾಗ ಅವರ ವಯಸ್ಸಿನ ಹಳೆತನ ದನಿಯಲ್ಲಿ ಕೇಳುತ್ತಿತ್ತು. ಇಷ್ಟು ಹೇಳಿ ಅವರು ವಿರಮಿಸುತ್ತಾರೆ.
ಸುಮಾ.ಕಂಚೀಪಾಲ್
Comments
Post a Comment