Skip to main content

ಸಿದ್ಧಣ್ಣ

ಪಿಯಾನಿನ ಶಬ್ಧ ನಮ್ಮ‌ಮನೆ ಅಂಗಳದಲ್ಲಿ ಅದೂ ಮಟ ಮಟ ಮಧ್ಯಾನ್ಹ !!!! ಅರೆ ಎಂದು ನಿದ್ದೆಗಣ್ಣಲ್ಲಿ ಮೆಟ್ಟಿಲಿಳಿದೆ. ಕೊರಳತುಂಬ ರುದ್ರಾಕ್ಷಿ ಅದಕ್ಕೆ ಕೇಸರಿ ಗೊಂಡೆ ಬದಿಗೆ ಇಟ್ಟ ಒಂದು ಕರಿಯ ಕೋಲು ಒಂದು ಅಂಗಿ, ಲುಂಗಿ ತಲೆಗೆ ಕೇಸರಿಯ ಪೊಗಡಿಸುತ್ತಿದ್ದ, ಅತೀ ಕಪ್ಪನೆಯ ಬಣ್ಣದ ಮಣ್ಣು ಕಾಲು, ಬೆಂಡಾಗುತ್ತಿರುವ ಬೆರಳು ಕೆಟ್ಟು ಮುರುಟಿದ ಉಗುರು, ಬಗುಲಲ್ಲಿ ಅರಶಿನ ಬಣ್ಣದ ವಸ್ತ್ರದ ಚೀಲ ಹಳೇಯ ಹಳದಿ ಕೊಡೆ.
ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ‌ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ.



ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss"  ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು.

ಅಪ್ಪ ಪ್ರತಿವರ್ಷವೂ ಅವರಿಗಾಗಿ ಕಾಯುತ್ತಾನೆ. ಅವರು ವರ್ಷಕ್ಕೊಮ್ಮೆ ಬಂದೇ ಬರುತ್ತಾರೆ‌. ಕೇವಲ ಬೇಡಿಕೊಂಡು ತಿನ್ನುವ ಸಲುವಾಗಿ ಅಲ್ಲ. ತಲಾತಲಾಂತರದಿಂದ ಬಂದ ಹಾಡುವ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಎಂದು ಅವರೇ ಹೆಳುತ್ತಾರೆ . ಅವರಿಗೂ ಸ್ವಂತ ಜಮೀನಿದೆ. ನನ್ನ ಮಕ್ಕಳು ಇದನ್ನು ಮಾಡುವುದಿಲ್ಲ. ನನಗೂ ಊರೂರು ತಿರುಗುವುದು ಬೇಡ ಎನ್ನುತ್ತಾರೆ. "ಆದರೆ ನನಗೆ ಈ ಪದ್ದತಿ ಕೊನೆಗೊಳ್ಳುವದನ್ನು ಸಹಿಸಲು ಆಗದೆ ಬರುತ್ತೇನೆ". ನನ್ನಲ್ಲಿ ದೇವರು ಎಷ್ಟು ದಿನ ತಿರುಗುವ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ. ಎಂದು ಕೈ ಮುಗಿದು, ಚೂರು ನೀರು ಕೊಡಿ ಎಂದವರೆ ಪಟ ಪಟ ಎಂದು ಮಾತು ಶುರು ಮಾಡುತ್ತಾರೆ.

ನಮ್ಮ ಹಳೆಯ ಮನೆ ಈಗಿನ ಮನೆಗಿಂತ ಸ್ವಲ್ಪ ಕೆಳಗಿತ್ತು. ಆಗ ನನಗೆ ಮೂರು ವರ್ಷ ಅದಕ್ಕಿಂಲು ಮುಂಚಿನಿಂದ ಅಂದರೆ ನನ್ನ ಅಜ್ಜನ ಅಪ್ಪ ಬದುಕಿರುವಾಗಿನಿಂದ ಬರುತ್ತಿದ್ದವರು ಇವರೆ ಎಂದು ಹಳೆಯ ನೆನಪುಗಳನ್ನು ಮಾತಿಗೆಳೆಯುತ್ತಾರೆ. ನಮ್ಮ ಹಳೇ  ಮನೆಯಲ್ಲೂ ಒಂದು ಪಿಯಾನೋ ಪೆಟ್ಟಿಗೆ ಇತ್ತಂತೆ. ಆಗಿನಿಂದ ನಮ್ಮ ಮನೆಯವರಿಗೆ ಯಕ್ಷಗಾನದ ಹುಚ್ಚು ಬಹಳವಿತ್ತು ಇಂದಿಗೂ ಇದೆ. ಅದರ ಜೊತೆ ಒಂದು ಮದ್ದಳೆಯೂ ಇತ್ತು. ಅದು ನನ್ನ ನೆನಪಿಗೆ ಬರುತ್ತದೆ ನಾನು ಏಳನೇ ತರಗತಿಯಲ್ಲಿರುವಾಗ ಒಮ್ಮೆ ಅಟ್ಟದಿಂದ ಬಿದ್ದು ಒಡೆದು ಹೋಗಿ ನನ್ನ ಅಜ್ಜ ಮರುಗಿದ್ದನ್ನು ಕಂಡಿದ್ದೇನೆ.

ಹಳೆಯ ಪತ್ರವ್ಯವಹಾರದಿಂದ ಕತೆ ಆರಂಭಗೊಂಡು, ಟೆಲಿಗ್ರಾಂ ಸುದ್ದಿಯಿಂದ ಬತ್ತದ ಬಿತ್ತನೆಯ ಬಗ್ಗೆ ಹಾಗೆ ಆರೋಗ, ಕೊರೊನಾ, ಲಾಕ್ ಡೌವ್ನ ಮದುವೆ, ಮುಂಡಗೋಡಿ ಬೆಟ್ಟಗಳು ಮತ್ತು ನಮ್ಮ ಕಡೆಗಿನ ಗದ್ದೆಯ ಪಕ್ಕದ ಮನೆಗಳು, ಕರಡಿಯೊಬ್ಬನ ಮೂಗು ಹರಿದ ಕತೆ ಎಂದೆಲ್ಲಾ ಗಡಿಯಾರ ಒಂದು ತನ್ನ ಮುಳ್ಳುಗಳಿಂದ ಪ್ರತೀ ಸಮಯವನ್ನು ಸೂಚಿಸುತ್ತಾ ತಿರುಗುವಂತೆ ಎಲ್ಲ ವಿಷಯಗಳ ಸುದ್ದಿಯಿಂದ ಪ್ರಸ್ತುತ ವರ್ತಮಾನದ ಮೊಬೈಲ್ ಬಳಕೆಯವರೆಗೆ ಬಂದು ಇನ್ನು ನನ್ನ ಸಮಯವಾಯಿತ್ತು.
"ಮುಂದಿನ ವರ್ಷವೂ ದೇವರು ಬರುವ ಶಕ್ತಿ ಕರುಣಿಸಿದರೆ ಮಾತ್ರ ಬರುತ್ತೇನೆ". ಎಂದು ಹೇಳುವಾಗ ಅವರ ವಯಸ್ಸಿನ ಹಳೆತನ ದನಿಯಲ್ಲಿ ಕೇಳುತ್ತಿತ್ತು. ಇಷ್ಟು ಹೇಳಿ ಅವರು ವಿರಮಿಸುತ್ತಾರೆ.

ಸುಮಾ.ಕಂಚೀಪಾಲ್ 

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...