Skip to main content

ಸಿದ್ಧಣ್ಣ

ಪಿಯಾನಿನ ಶಬ್ಧ ನಮ್ಮ‌ಮನೆ ಅಂಗಳದಲ್ಲಿ ಅದೂ ಮಟ ಮಟ ಮಧ್ಯಾನ್ಹ !!!! ಅರೆ ಎಂದು ನಿದ್ದೆಗಣ್ಣಲ್ಲಿ ಮೆಟ್ಟಿಲಿಳಿದೆ. ಕೊರಳತುಂಬ ರುದ್ರಾಕ್ಷಿ ಅದಕ್ಕೆ ಕೇಸರಿ ಗೊಂಡೆ ಬದಿಗೆ ಇಟ್ಟ ಒಂದು ಕರಿಯ ಕೋಲು ಒಂದು ಅಂಗಿ, ಲುಂಗಿ ತಲೆಗೆ ಕೇಸರಿಯ ಪೊಗಡಿಸುತ್ತಿದ್ದ, ಅತೀ ಕಪ್ಪನೆಯ ಬಣ್ಣದ ಮಣ್ಣು ಕಾಲು, ಬೆಂಡಾಗುತ್ತಿರುವ ಬೆರಳು ಕೆಟ್ಟು ಮುರುಟಿದ ಉಗುರು, ಬಗುಲಲ್ಲಿ ಅರಶಿನ ಬಣ್ಣದ ವಸ್ತ್ರದ ಚೀಲ ಹಳೇಯ ಹಳದಿ ಕೊಡೆ.
ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ‌ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ.



ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss"  ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು.

ಅಪ್ಪ ಪ್ರತಿವರ್ಷವೂ ಅವರಿಗಾಗಿ ಕಾಯುತ್ತಾನೆ. ಅವರು ವರ್ಷಕ್ಕೊಮ್ಮೆ ಬಂದೇ ಬರುತ್ತಾರೆ‌. ಕೇವಲ ಬೇಡಿಕೊಂಡು ತಿನ್ನುವ ಸಲುವಾಗಿ ಅಲ್ಲ. ತಲಾತಲಾಂತರದಿಂದ ಬಂದ ಹಾಡುವ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಎಂದು ಅವರೇ ಹೆಳುತ್ತಾರೆ . ಅವರಿಗೂ ಸ್ವಂತ ಜಮೀನಿದೆ. ನನ್ನ ಮಕ್ಕಳು ಇದನ್ನು ಮಾಡುವುದಿಲ್ಲ. ನನಗೂ ಊರೂರು ತಿರುಗುವುದು ಬೇಡ ಎನ್ನುತ್ತಾರೆ. "ಆದರೆ ನನಗೆ ಈ ಪದ್ದತಿ ಕೊನೆಗೊಳ್ಳುವದನ್ನು ಸಹಿಸಲು ಆಗದೆ ಬರುತ್ತೇನೆ". ನನ್ನಲ್ಲಿ ದೇವರು ಎಷ್ಟು ದಿನ ತಿರುಗುವ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ. ಎಂದು ಕೈ ಮುಗಿದು, ಚೂರು ನೀರು ಕೊಡಿ ಎಂದವರೆ ಪಟ ಪಟ ಎಂದು ಮಾತು ಶುರು ಮಾಡುತ್ತಾರೆ.

ನಮ್ಮ ಹಳೆಯ ಮನೆ ಈಗಿನ ಮನೆಗಿಂತ ಸ್ವಲ್ಪ ಕೆಳಗಿತ್ತು. ಆಗ ನನಗೆ ಮೂರು ವರ್ಷ ಅದಕ್ಕಿಂಲು ಮುಂಚಿನಿಂದ ಅಂದರೆ ನನ್ನ ಅಜ್ಜನ ಅಪ್ಪ ಬದುಕಿರುವಾಗಿನಿಂದ ಬರುತ್ತಿದ್ದವರು ಇವರೆ ಎಂದು ಹಳೆಯ ನೆನಪುಗಳನ್ನು ಮಾತಿಗೆಳೆಯುತ್ತಾರೆ. ನಮ್ಮ ಹಳೇ  ಮನೆಯಲ್ಲೂ ಒಂದು ಪಿಯಾನೋ ಪೆಟ್ಟಿಗೆ ಇತ್ತಂತೆ. ಆಗಿನಿಂದ ನಮ್ಮ ಮನೆಯವರಿಗೆ ಯಕ್ಷಗಾನದ ಹುಚ್ಚು ಬಹಳವಿತ್ತು ಇಂದಿಗೂ ಇದೆ. ಅದರ ಜೊತೆ ಒಂದು ಮದ್ದಳೆಯೂ ಇತ್ತು. ಅದು ನನ್ನ ನೆನಪಿಗೆ ಬರುತ್ತದೆ ನಾನು ಏಳನೇ ತರಗತಿಯಲ್ಲಿರುವಾಗ ಒಮ್ಮೆ ಅಟ್ಟದಿಂದ ಬಿದ್ದು ಒಡೆದು ಹೋಗಿ ನನ್ನ ಅಜ್ಜ ಮರುಗಿದ್ದನ್ನು ಕಂಡಿದ್ದೇನೆ.

ಹಳೆಯ ಪತ್ರವ್ಯವಹಾರದಿಂದ ಕತೆ ಆರಂಭಗೊಂಡು, ಟೆಲಿಗ್ರಾಂ ಸುದ್ದಿಯಿಂದ ಬತ್ತದ ಬಿತ್ತನೆಯ ಬಗ್ಗೆ ಹಾಗೆ ಆರೋಗ, ಕೊರೊನಾ, ಲಾಕ್ ಡೌವ್ನ ಮದುವೆ, ಮುಂಡಗೋಡಿ ಬೆಟ್ಟಗಳು ಮತ್ತು ನಮ್ಮ ಕಡೆಗಿನ ಗದ್ದೆಯ ಪಕ್ಕದ ಮನೆಗಳು, ಕರಡಿಯೊಬ್ಬನ ಮೂಗು ಹರಿದ ಕತೆ ಎಂದೆಲ್ಲಾ ಗಡಿಯಾರ ಒಂದು ತನ್ನ ಮುಳ್ಳುಗಳಿಂದ ಪ್ರತೀ ಸಮಯವನ್ನು ಸೂಚಿಸುತ್ತಾ ತಿರುಗುವಂತೆ ಎಲ್ಲ ವಿಷಯಗಳ ಸುದ್ದಿಯಿಂದ ಪ್ರಸ್ತುತ ವರ್ತಮಾನದ ಮೊಬೈಲ್ ಬಳಕೆಯವರೆಗೆ ಬಂದು ಇನ್ನು ನನ್ನ ಸಮಯವಾಯಿತ್ತು.
"ಮುಂದಿನ ವರ್ಷವೂ ದೇವರು ಬರುವ ಶಕ್ತಿ ಕರುಣಿಸಿದರೆ ಮಾತ್ರ ಬರುತ್ತೇನೆ". ಎಂದು ಹೇಳುವಾಗ ಅವರ ವಯಸ್ಸಿನ ಹಳೆತನ ದನಿಯಲ್ಲಿ ಕೇಳುತ್ತಿತ್ತು. ಇಷ್ಟು ಹೇಳಿ ಅವರು ವಿರಮಿಸುತ್ತಾರೆ.

ಸುಮಾ.ಕಂಚೀಪಾಲ್ 

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...