ಸ್ನೇಹ ಬಾಡದ ಮುದ್ದು ಪುಷ್ಪ
ಹೀಗೆಲ್ಲಾ ಚಿಗುರಿದ್ದು ಇಂದು ಎಣಿಸಲಾಗದಷ್ಟು ನೆನಪೆಂಬ ಎಲೆಗಳಿಂದ ತುಂಬಿಹೋಗಿದೆ . ಈಜಲೆಂದು ಹೋಗಿ ಜೀವ ಕಳೆದುಕೊಂಡ ಬಸ್ಯಾ ಇನ್ನು ನೆನಪಿಗೆ ಬರುತ್ತಾನೆ .. ಹೀಗೆ ಉದುರಿ ಹೋದ ಎಲೆಗಳು ಬಹಳ ಸಂತೋಷಕ್ಕೆ ಸಾತ್ ನೀಡಿ ದುಃಖದಲ್ಲಿ ಸಂತೈಸಿ ಕ್ಷಣ ಕ್ಷಣ ಜೊತೆಯಾಗಿರುವವರು ಸ್ನೇಹಿತರೇ.
ಇನ್ನು ಈ ಮರಕ್ಕೆ ಕೆಲವು ಹೂವುಗಳು ಅನಿರೀಕ್ಷಿತವಾಗಿ ಸಿಗುವ ಗೆಳೆಯರು ಒಂದು ದಿನಕ್ಕೆಲ್ಲಾ ಅರಳಿ ಎರಡು ಮೂರು ದಿನಕ್ಕೆ ಬಾಡಿ ಉದುರಿ ಹೋಗುತ್ತವೆ.ಕ್ಯಾಂಪ್ಗಳಲ್ಲಿ , ಬಸ್ನಲ್ಲಿ , ಪ್ರವಾಸದಲ್ಲಿ ಸಿಗುವ ಈ ಹೂವುಗಳ ಪರಿಮಳವಂತು ಹೂ ಉದುರಿದರೂ ಉಳಿವಂತ ಕಂಪು ನೀಡಿವೆ. ಕೆಲವು ಹೂವಾಗಿ ಹಣ್ಣಾಗಿ ಕೊಳೆತು ನಾರಿ ಹೇಸಿಗೆಯನ್ನು ಉಂಟುಮಾಡಿದೆ . ಎಷ್ಟೇ ಆದರೂ ಅದು ನಮ್ಮ ಮರದ ಕಾಯಿಯೇ ಎಂದುಸುಮ್ಮನಿದ್ದು ಬಿಡುವುದು.
ಇನ್ನು ಕೆಲವು ಹಣ್ಣುಗಳು ತುಂಬಾ ರುಚಿಯಾಗಿ ಸಿಹಿಯನ್ನು ಮಾತ್ರ ನೀಡುವ ಸ್ನೇಹಿತರೂ ಇರುತ್ತಾರೆ . ಜೀವನ ಪೂರ್ತಿ ಆಳವಾಗಿ ಬೇರೂರಿ ಮರ ಗಟ್ಟಿಯಾಗಿ ನಿಲ್ಲಿಸುವಂತ , ಮರಕ್ಕೂ ಜೀವ ತುಂಬಿ ತನ್ನ ಜೀವವನ್ನೂ ಉಳಿದುಕೊಳ್ಳುವ ... ಸಹೃದಯಿ ಸ್ನೇಹಿತರೂ ಇದ್ದಾರೆ . ಒಂದು ಒಳ್ಳೆಯ ಗೆಳೆಯರ ಬಳಗವಿದ್ದವರು ಭುವಿಯನ್ನೇ ಬೆಳಗುವ ದೀಪವಾಗುವರು. ಗೆಳೆಯರ ಬಳಗವೇ ಕೆಟ್ಟದಾದರೆ ಭುವಿಗೆ ಬೆಂಕಿ ಇಡುವರು . ಜೀವನದುದ್ದಕ್ಕೂ ಹೀಗೆ ಹಲವು ಸ್ನೇಹಗಳು ಹುಟ್ಟಿರುತ್ತವೆ ಆದರೆ ಇದಕ್ಕೆಂದೂ ಸಾವಿಲ್ಲ . ವಯಸ್ಸಿನ ಮಿತಿಯೂ ಇಲ್ಲ . ಸ್ನೇಹ ಅಮರ .
ಸುಮಾ ಕಂಚಿಪಾಲ್
2018 ರಲ್ಲಿ ಪ್ರಕಟವಾದ ಬರಹ.
Comments
Post a Comment