ಮೌಢ್ಯಗಳಿಂದ ಹೊರಬನ್ನಿ
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಕೊರೊನಾ ತಡೆಗಟ್ಟಲು ಕೆಲ ಹಳ್ಳಿಗಳಲ್ಲಿ ಮತ್ತು ಬೆಂಗಳೂರಿನಂತಹ ಭಾರಿ ನಗರಗಳಲ್ಲಿಯೂ ಮೂಢನಂಬಿಕೆಗಳನ್ನು ಜನರು ನಂಬುತ್ತಿದ್ದಾರೆ. ಈ ಹಿಂದೆಯೂ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಮ್ಮ ಎಂದು ಅದಕ್ಕೆ ಸ್ತ್ರೀ ರೂಪ ನೀಡಿ ದೇವಿಯ ರೂಪದಲ್ಲಿ ಆರಾಧಿಸುವ ಮೂಲಕ ಹೇಗೆ ಅವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದರೊ ಹಾಗೇ ಈಗಲೂ ಪುನರಾವರ್ತನೆಯಾಗುತ್ತಿದೆ.
ಮದ್ದೂರು ಪಟ್ಟಣದಲ್ಲಿ ಯುವಕ ಮತ್ತು ಯುವತಿಯರು ಸೇರಿ ಕೋರೊನಾ ಮಾರಮ್ಮನ ಹೆಸರಿನಲ್ಲಿ ಹಬ್ಬವನ್ನೇ ಆಚರಿಸಿದರು.ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ವೇಷಧರಿಸಿ ತಲೆ ಮೇಲೆಹೊತ್ತುಕೊಂಡು ಊರಿನ ಕೆಲ ಭಾಗಗಳಲ್ಲಿ ಮೆರವಣಿಗೆ ಸಾಗಿದ ಘಟನೆಯು ಜರುಗಿದೆ.
ಇವುಗಳಿಂದಾಗಿ ಸೊಂಕು ಹರಡುವ ಪ್ರಮಾಣ ಹೆಚ್ಚುತ್ತಿದೆ ಹೊರತಾಗಿ ರೋಗದ ಮುಕ್ತಿಗಾಗಿ ಅವರ ಬೇಡಿಕೆ ಇಡೇರುತ್ತಿಲ್ಲ. ಇದರೊಟ್ಟಿಗೆ ಶಿಂಷಾ ನದಿಯ ತೀರದಲ್ಲಿ ಮೂರ್ತಿಯನ್ನು ಮುಳುಗಿಸಿ, ಮೊಸರಿನಿಂದ ಪೂಜೆಮಾಡಿ ನೀರನ್ನು ಸಿಂಪಡಣೆ ಮಾಡಿದ್ದಾರೆ.
ನದಿಗಳಲ್ಲಿ ನಿಂಬೆಹಣ್ಣು ತೇಲಿಬಿಡುವುದು. ಮಾಹಾಪೂಜೆ , ಯಾಗಗಳ ಹೆಸರಿನಲ್ಲಿ ಅನ್ನದ ಆಹುತಿ ಬಲಿಯ ಹೆಸರಿನಲ್ಲಿ ಬಂಡಿತುಂಬ ಅನ್ನವನ್ನು ಊರಿನ ಹೊರವಲಯದಲ್ಲಿ ಬೀರುವ ಆಚರಣೆಗಳು ಖಂಡಿಸುವಂತದ್ದು. ಸಾಮಾಜಿಕ ಪರಿಕಲ್ಪನೆಯನ್ನೂ ಹೊರತುಪಡಿಸಿ ಇಂತಹ ಆಚರಣೆಗಳು ಇಂದಿನ ಆಧುನಿಕ ಕಾಲದಲ್ಲಿ ಕಾಣಿಸುತ್ತಿದೆ.
ಬೆಂಗಳೂರಿನ ರಸ್ತೆಯಲ್ಲಿ ಮೂರುಕಲ್ಲಿನ ಚೂರುಗಳನ್ನು ಒಂದೆಡೆ ಇಟ್ಟು ಅದಕ್ಕೆ ಅರಶಿನ ಕುಂಕುಮ ಬಳಿದು ಪೂಜೆಮಾಡಿ ಕೊರೋನಾದಿಂದ ರಕ್ಷಿಸುವಂತೆ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಇಂತಹ ಕಾರ್ಯದಲ್ಲಿ ವಿದ್ಯಾವಂತರು ತಮ್ಮ ನಿಲುವನ್ನು ತೋರಿಸುತ್ತಾ, ಮೂಕ ಪ್ರಾಣಿಗಳನ್ನು ಬಲಿಕೊಡುತ್ತಿರುವ ಸಂಗತಿಯೂ ನಡೆಯುತ್ತಿದೆ. ಮಣ್ಣಿನ ಮೂರ್ತಿ ಮಾಡಿ ನದಿಗಳಲ್ಲಿ ತೇಲಿಬಿಡಲಾಗುತ್ತಿದೆ.
ಚಿಕ್ಕನಾಯಕನಹಳ್ಳಿಯಲ್ಲಿ ಎಂ.ಎಸ್.ಡಬ್ಲ್ಯೂ ಪದವಿದರನೊಬ್ಬ ಕೊರೊನಾ ದೇವಿ ದೇವಸ್ಥಾನದ ಅರ್ಚಕನಾಗಿ ಕೋರೊನಾ ಮಾರಮ್ಮನ ಭಕ್ತನಾಗಿದ್ದೇನೆ ಇದರಿಂದ ಜನರಿಗೆ ಒಳಿತಾಗುತ್ತದೆ ಎಂದು ಮಾಧ್ಯಮಗಳ ಎದುರಲ್ಲಿ ನೀಡಿದ ಉತ್ತರ ಇಂದಿನ ಸಮಾಜದ ವಿದ್ಯಾವಂತರ ಸ್ಥಾನವನ್ನು ತೋರ್ಪಡಿಸುತ್ತಿದೆ.
ಮೂಢನಂಬಿಕೆ ಅಲ್ಲ ಇದು ಮೂಲ ನಂಬಿಕೆ ಎಂಬ ವಿಚಾರಗಳು ಆಚರಣೆ ಮಾಡುವವರ ತಲೆಯಲ್ಲಿದೆ. ಕೊರೊನಾ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದರೆ, ನಮಗೆ ಯಾವ ಖಾಯಿಲೆಯೂ ಇಲ್ಲ ಎಂದು ವ್ಯಾಕ್ಸಿನೇಷನ್ ನಿಂದ ದೂರ ಉಳಿದಿದ್ದಾರೆ.
ಕೆಲವೆಡೆ ಸಗಣಿ ನೀರಿನಿಂದ ಸ್ನಾನಮಾಡಿ ಕೊವಿಡ್ ಓಡಿಸುವ ಯತ್ನಗಳೂ ನಡೆದಿವೆ. ಏನೇ ಆದರೂ ಮೂಢ ನಂಬಿಕೆಗಳಿಗಳಿಂದ ಕೊವಿಡ್ ಸೋಂಕನ್ನು ದೂರಮಾಡಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಇಂತಹ ಮೌಢ್ಯಗಳಿಂದ ದೂರವುಳಿಯವುದು ಸಹ ಕೊವಿಡ್ ಪಿಡುಗನ್ನು ಇಲ್ಲವಾಗಿಸುವ ಒಂದು ವಿಧಾನವೇ ಸರಿ.
ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಈ ಸಂಧರ್ಭದಲ್ಲಿ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಲಸಿಕೆ ಪಡೆದುಕೊಳ್ಳಬೇಕೆ ಹೊರತು ಮೂಢನಂಬಿಕೆ ಆಚರಣೆ ಸಲ್ಲದು.
ಸುಮಾ.ಕಂಚೀಪಾಲ್
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಕೊರೊನಾ ತಡೆಗಟ್ಟಲು ಕೆಲ ಹಳ್ಳಿಗಳಲ್ಲಿ ಮತ್ತು ಬೆಂಗಳೂರಿನಂತಹ ಭಾರಿ ನಗರಗಳಲ್ಲಿಯೂ ಮೂಢನಂಬಿಕೆಗಳನ್ನು ಜನರು ನಂಬುತ್ತಿದ್ದಾರೆ. ಈ ಹಿಂದೆಯೂ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಮ್ಮ ಎಂದು ಅದಕ್ಕೆ ಸ್ತ್ರೀ ರೂಪ ನೀಡಿ ದೇವಿಯ ರೂಪದಲ್ಲಿ ಆರಾಧಿಸುವ ಮೂಲಕ ಹೇಗೆ ಅವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದರೊ ಹಾಗೇ ಈಗಲೂ ಪುನರಾವರ್ತನೆಯಾಗುತ್ತಿದೆ.
ಮದ್ದೂರು ಪಟ್ಟಣದಲ್ಲಿ ಯುವಕ ಮತ್ತು ಯುವತಿಯರು ಸೇರಿ ಕೋರೊನಾ ಮಾರಮ್ಮನ ಹೆಸರಿನಲ್ಲಿ ಹಬ್ಬವನ್ನೇ ಆಚರಿಸಿದರು.ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ವೇಷಧರಿಸಿ ತಲೆ ಮೇಲೆಹೊತ್ತುಕೊಂಡು ಊರಿನ ಕೆಲ ಭಾಗಗಳಲ್ಲಿ ಮೆರವಣಿಗೆ ಸಾಗಿದ ಘಟನೆಯು ಜರುಗಿದೆ.
ಇವುಗಳಿಂದಾಗಿ ಸೊಂಕು ಹರಡುವ ಪ್ರಮಾಣ ಹೆಚ್ಚುತ್ತಿದೆ ಹೊರತಾಗಿ ರೋಗದ ಮುಕ್ತಿಗಾಗಿ ಅವರ ಬೇಡಿಕೆ ಇಡೇರುತ್ತಿಲ್ಲ. ಇದರೊಟ್ಟಿಗೆ ಶಿಂಷಾ ನದಿಯ ತೀರದಲ್ಲಿ ಮೂರ್ತಿಯನ್ನು ಮುಳುಗಿಸಿ, ಮೊಸರಿನಿಂದ ಪೂಜೆಮಾಡಿ ನೀರನ್ನು ಸಿಂಪಡಣೆ ಮಾಡಿದ್ದಾರೆ.
ನದಿಗಳಲ್ಲಿ ನಿಂಬೆಹಣ್ಣು ತೇಲಿಬಿಡುವುದು. ಮಾಹಾಪೂಜೆ , ಯಾಗಗಳ ಹೆಸರಿನಲ್ಲಿ ಅನ್ನದ ಆಹುತಿ ಬಲಿಯ ಹೆಸರಿನಲ್ಲಿ ಬಂಡಿತುಂಬ ಅನ್ನವನ್ನು ಊರಿನ ಹೊರವಲಯದಲ್ಲಿ ಬೀರುವ ಆಚರಣೆಗಳು ಖಂಡಿಸುವಂತದ್ದು. ಸಾಮಾಜಿಕ ಪರಿಕಲ್ಪನೆಯನ್ನೂ ಹೊರತುಪಡಿಸಿ ಇಂತಹ ಆಚರಣೆಗಳು ಇಂದಿನ ಆಧುನಿಕ ಕಾಲದಲ್ಲಿ ಕಾಣಿಸುತ್ತಿದೆ.
ಬೆಂಗಳೂರಿನ ರಸ್ತೆಯಲ್ಲಿ ಮೂರುಕಲ್ಲಿನ ಚೂರುಗಳನ್ನು ಒಂದೆಡೆ ಇಟ್ಟು ಅದಕ್ಕೆ ಅರಶಿನ ಕುಂಕುಮ ಬಳಿದು ಪೂಜೆಮಾಡಿ ಕೊರೋನಾದಿಂದ ರಕ್ಷಿಸುವಂತೆ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಇಂತಹ ಕಾರ್ಯದಲ್ಲಿ ವಿದ್ಯಾವಂತರು ತಮ್ಮ ನಿಲುವನ್ನು ತೋರಿಸುತ್ತಾ, ಮೂಕ ಪ್ರಾಣಿಗಳನ್ನು ಬಲಿಕೊಡುತ್ತಿರುವ ಸಂಗತಿಯೂ ನಡೆಯುತ್ತಿದೆ. ಮಣ್ಣಿನ ಮೂರ್ತಿ ಮಾಡಿ ನದಿಗಳಲ್ಲಿ ತೇಲಿಬಿಡಲಾಗುತ್ತಿದೆ.
ಚಿಕ್ಕನಾಯಕನಹಳ್ಳಿಯಲ್ಲಿ ಎಂ.ಎಸ್.ಡಬ್ಲ್ಯೂ ಪದವಿದರನೊಬ್ಬ ಕೊರೊನಾ ದೇವಿ ದೇವಸ್ಥಾನದ ಅರ್ಚಕನಾಗಿ ಕೋರೊನಾ ಮಾರಮ್ಮನ ಭಕ್ತನಾಗಿದ್ದೇನೆ ಇದರಿಂದ ಜನರಿಗೆ ಒಳಿತಾಗುತ್ತದೆ ಎಂದು ಮಾಧ್ಯಮಗಳ ಎದುರಲ್ಲಿ ನೀಡಿದ ಉತ್ತರ ಇಂದಿನ ಸಮಾಜದ ವಿದ್ಯಾವಂತರ ಸ್ಥಾನವನ್ನು ತೋರ್ಪಡಿಸುತ್ತಿದೆ.
ಮೂಢನಂಬಿಕೆ ಅಲ್ಲ ಇದು ಮೂಲ ನಂಬಿಕೆ ಎಂಬ ವಿಚಾರಗಳು ಆಚರಣೆ ಮಾಡುವವರ ತಲೆಯಲ್ಲಿದೆ. ಕೊರೊನಾ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದರೆ, ನಮಗೆ ಯಾವ ಖಾಯಿಲೆಯೂ ಇಲ್ಲ ಎಂದು ವ್ಯಾಕ್ಸಿನೇಷನ್ ನಿಂದ ದೂರ ಉಳಿದಿದ್ದಾರೆ.
ಕೆಲವೆಡೆ ಸಗಣಿ ನೀರಿನಿಂದ ಸ್ನಾನಮಾಡಿ ಕೊವಿಡ್ ಓಡಿಸುವ ಯತ್ನಗಳೂ ನಡೆದಿವೆ. ಏನೇ ಆದರೂ ಮೂಢ ನಂಬಿಕೆಗಳಿಗಳಿಂದ ಕೊವಿಡ್ ಸೋಂಕನ್ನು ದೂರಮಾಡಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಇಂತಹ ಮೌಢ್ಯಗಳಿಂದ ದೂರವುಳಿಯವುದು ಸಹ ಕೊವಿಡ್ ಪಿಡುಗನ್ನು ಇಲ್ಲವಾಗಿಸುವ ಒಂದು ವಿಧಾನವೇ ಸರಿ.
ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಈ ಸಂಧರ್ಭದಲ್ಲಿ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಲಸಿಕೆ ಪಡೆದುಕೊಳ್ಳಬೇಕೆ ಹೊರತು ಮೂಢನಂಬಿಕೆ ಆಚರಣೆ ಸಲ್ಲದು.
ಸುಮಾ.ಕಂಚೀಪಾಲ್
Comments
Post a Comment