ಮನಸ್ಸಿಗೆ ಅಂಟಿದ ಬಾಲ್ಯದ ಘಮಲು.
ಹೊಳೆ ಅಂಚಿನ ದಂಡೆಯ ಗುಂಟ ಓಡಿದ್ದೇ ಓಡಿದ್ದು ಸಂಪಿಗೆ ಮರದ ಹಣ್ಣು ಕೀಳಲಿಕ್ಕಾಗಿ. ಆಗಂತು ಚಿಕ್ಕ ಸ್ಕರ್ಟ ಮೇಲಂಗಿ ಇಷ್ಟೇ ಬಿಟ್ಟರೆ ಚೂಡಿದಾರದ ಸಹವಾಸವೇ ಇರಲಿಲ್ಲ. ಮರಹತ್ತಲು ಬಂದರೂ,ಈ ಸ್ಕರ್ಟನ ಸಹವಾಸಕ್ಕೆ ಹೆದರಿ ಮರ ಹತ್ತದೇ ನಮ್ಮ ಸಹಪಾಠಿ ಹುಡುಗರು ಕೊಯ್ಯೊ ಹಣ್ಣುಗಳನ್ನು ಹೆಕ್ಕುವ ಕೆಲಸ ಮಾತ್ರ ನಮ್ಮದಾಗಿತ್ತು.
ಹೀಗಿರುವಾಗ ಒಮ್ಮೆ ದಾರಿ ಹತ್ತಿರದ ಮರದ ತುಂಬ ಬೊಕ್ಕಳದ ಹೂವು ಬಿಟ್ಟಿತ್ತು ಅದನ್ನು ಆರಿಸಿ ಪೋಣಿಸಿ ಮಾಲೆ ಮಾಡಿ ಶಾಲೆಗೆ ಹೋದರೆ ಅಕ್ಕೋರಿಗೆ ಮಾಲೆ ಕೊಟ್ಟು ಖುಷಿಪಡಿಸಬಹುದು ಎಂಬ ಆಸೆಗೆ ಲಂಗದ ತುದಿ ಮಡಿಸಿ ಹೂ ಆರಿಸೋವಾಗ ಕಟ್ಟಿರುವೆಗಳು ಕಚ್ಚದೇ ಹೋದರೆ ಅವುಗಳ ಖುಷಿ ಕಡಿಮೆ ಅಗುತ್ತಿತ್ತೋ ಎನೋ?! ಅವಂತು ಕಚ್ಚಿಯೆ ಕಚ್ಚುತ್ತಿದ್ದವು.
ಅಂಗಿ ತೊಳೆದರು ಮೂಗಿಗೆ ಅಂಟಿದ ಘಮಲು ಹೋಗದಷ್ಟು ಘಾಡವಾದ ಕಂಪು ಅದು. ಮನೆಗೆ ಬಂದು ಬಾಗಿಲ ಪಕ್ಕದ ಸಣ್ಣ ಚಿಟ್ಟೆಯ ಮೇಲೆ ಹೂವು ಹರವಿ ಕೈ ಕಾಲು ತೊಳೆಯುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಅದೇ ಬೆಳಗಿನ ತೆಳ್ಳವು ದೋಸೆ ಬೆಲ್ಲ ತುಪ್ಪದ ರುಚಿಯೊಂದಿಗೆ ಹೊಟ್ಟೆ ತುಂಬಿಸಿಕೊಂಡು ಬರುವಷ್ಟರಲ್ಲಿ ಬೊಕ್ಕಳ ಪೋಣಿಸಿ ಮಾಲೆ ಮಾಡುವ ಕೆಲಸದ ಖುಷಿ ಕಾದಿರುತ್ತಿತ್ತು.
ಅಷ್ಟಾದ ಮೇಲೆ ನಾಳೆಗಾಗಿ ಟೀಚರ್ ಕೊಟ್ಟ ಲೆಕ್ಕ. ಗುರೂಜಿ ಕೊಟ್ಟ ಮಗ್ಗಿ ದಿನಚರಿ. ಒಂದು ಎರಡು ಮೂರು ಗೆರೆಗಳ ತುಂಬಿಸೋದೆ ದೊಡ್ಡ ಕೆಲಸ. ಇಷ್ಟಾದ ಮೇಲೆ ಚೂರು ಟಿ. ವಿ ನೋಡೋಣ ಎಂದು ಕೂತರೆ ಅಮ್ಮ ಗದರುತ್ತಾಳೆ. ಕೈ ಕಾಲು ತೋಳೆದು ದೇವರಿಗೆ ದೀಪ ಹಚ್ಚು ಎಂದು ತಮ್ಮನಿಗೂ ತಪ್ಪಿದ್ದಲ್ಲ ಸಂಧ್ಯಾ ವಂದನೆ.
ಇಷ್ಟಾಗಿ ಸದಾ ಕಾರ್ಯನಿರತರಾದ ನಮಗೆ ಬಾಯಿಪಾಠದ ಬಿಸಿ ಮುಟ್ಟಿಸುತ್ತಿದ್ದ ಚಿಕ್ಕಮ್ಮನ ಕೆಲಸ ಆರಂಭ ಅದೇ ಹೇಳಿದ್ದನ್ನೇ ಹೇಳೊ ಪರಿಪಾಠ ಅ. ಆ, ಇ, ಈ. ಒಂದೊಂದ್ಲೆ ಒಂದ, ಆದರೆ ಅಂದಿನಿಂದ ಇಂದಿಗೂ ಹದಿಮೂರು ಮತ್ತು ಹದಿನೇರ ಮಗ್ಗಿ ಮಾತ್ರ ನಾನು ಕೂತ ಮಣೆ ಅಡಿಗೆ ಉಳಿದು ಬಿಟ್ಟಿದೆ.
ಮನೆಗೆ ನೆಂಟರು ಬಂದ ದಿನ ಬಾಯಿಪಾಠಕ್ಕೆ ರಜೆ. ತಿನ್ನು ಏನಾದರೊಂದು ವಿಷೇಶ ಕಜ್ಜಾಯ. ಇಷ್ಟಾಗಿ ಮಲಗಿದರೆ ಬೆಳಿಗ್ಗೆ ಟೀಚರಿಗೆ ಬೊಕ್ಕಳಮಾಲೆ ಕೊಡುವ ಹಂಬಲದಲ್ಲಿ ನಿದ್ದೆ.
ಇಂತಹ ಬಾಲ್ಯ ಈಗಿನ ಹಳ್ಳಿಮಕ್ಕಳಿಗೂ ಇಲ್ಲ. ಆಧುನಿಕತೆಯ ಅಡಿಯಲ್ಲಿ ಇಂತಹ ಎಷ್ಟೋ ಖುಷಿಗಳು ಹುದುಗಿ ಹೋಗಿವೆ.
ಸುಮಾ.ಕಂಚೀಪಾಲ್
ಹೊಳೆ ಅಂಚಿನ ದಂಡೆಯ ಗುಂಟ ಓಡಿದ್ದೇ ಓಡಿದ್ದು ಸಂಪಿಗೆ ಮರದ ಹಣ್ಣು ಕೀಳಲಿಕ್ಕಾಗಿ. ಆಗಂತು ಚಿಕ್ಕ ಸ್ಕರ್ಟ ಮೇಲಂಗಿ ಇಷ್ಟೇ ಬಿಟ್ಟರೆ ಚೂಡಿದಾರದ ಸಹವಾಸವೇ ಇರಲಿಲ್ಲ. ಮರಹತ್ತಲು ಬಂದರೂ,ಈ ಸ್ಕರ್ಟನ ಸಹವಾಸಕ್ಕೆ ಹೆದರಿ ಮರ ಹತ್ತದೇ ನಮ್ಮ ಸಹಪಾಠಿ ಹುಡುಗರು ಕೊಯ್ಯೊ ಹಣ್ಣುಗಳನ್ನು ಹೆಕ್ಕುವ ಕೆಲಸ ಮಾತ್ರ ನಮ್ಮದಾಗಿತ್ತು.
ಹೀಗಿರುವಾಗ ಒಮ್ಮೆ ದಾರಿ ಹತ್ತಿರದ ಮರದ ತುಂಬ ಬೊಕ್ಕಳದ ಹೂವು ಬಿಟ್ಟಿತ್ತು ಅದನ್ನು ಆರಿಸಿ ಪೋಣಿಸಿ ಮಾಲೆ ಮಾಡಿ ಶಾಲೆಗೆ ಹೋದರೆ ಅಕ್ಕೋರಿಗೆ ಮಾಲೆ ಕೊಟ್ಟು ಖುಷಿಪಡಿಸಬಹುದು ಎಂಬ ಆಸೆಗೆ ಲಂಗದ ತುದಿ ಮಡಿಸಿ ಹೂ ಆರಿಸೋವಾಗ ಕಟ್ಟಿರುವೆಗಳು ಕಚ್ಚದೇ ಹೋದರೆ ಅವುಗಳ ಖುಷಿ ಕಡಿಮೆ ಅಗುತ್ತಿತ್ತೋ ಎನೋ?! ಅವಂತು ಕಚ್ಚಿಯೆ ಕಚ್ಚುತ್ತಿದ್ದವು.
ಅಂಗಿ ತೊಳೆದರು ಮೂಗಿಗೆ ಅಂಟಿದ ಘಮಲು ಹೋಗದಷ್ಟು ಘಾಡವಾದ ಕಂಪು ಅದು. ಮನೆಗೆ ಬಂದು ಬಾಗಿಲ ಪಕ್ಕದ ಸಣ್ಣ ಚಿಟ್ಟೆಯ ಮೇಲೆ ಹೂವು ಹರವಿ ಕೈ ಕಾಲು ತೊಳೆಯುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಅದೇ ಬೆಳಗಿನ ತೆಳ್ಳವು ದೋಸೆ ಬೆಲ್ಲ ತುಪ್ಪದ ರುಚಿಯೊಂದಿಗೆ ಹೊಟ್ಟೆ ತುಂಬಿಸಿಕೊಂಡು ಬರುವಷ್ಟರಲ್ಲಿ ಬೊಕ್ಕಳ ಪೋಣಿಸಿ ಮಾಲೆ ಮಾಡುವ ಕೆಲಸದ ಖುಷಿ ಕಾದಿರುತ್ತಿತ್ತು.
ಅಷ್ಟಾದ ಮೇಲೆ ನಾಳೆಗಾಗಿ ಟೀಚರ್ ಕೊಟ್ಟ ಲೆಕ್ಕ. ಗುರೂಜಿ ಕೊಟ್ಟ ಮಗ್ಗಿ ದಿನಚರಿ. ಒಂದು ಎರಡು ಮೂರು ಗೆರೆಗಳ ತುಂಬಿಸೋದೆ ದೊಡ್ಡ ಕೆಲಸ. ಇಷ್ಟಾದ ಮೇಲೆ ಚೂರು ಟಿ. ವಿ ನೋಡೋಣ ಎಂದು ಕೂತರೆ ಅಮ್ಮ ಗದರುತ್ತಾಳೆ. ಕೈ ಕಾಲು ತೋಳೆದು ದೇವರಿಗೆ ದೀಪ ಹಚ್ಚು ಎಂದು ತಮ್ಮನಿಗೂ ತಪ್ಪಿದ್ದಲ್ಲ ಸಂಧ್ಯಾ ವಂದನೆ.
ಇಷ್ಟಾಗಿ ಸದಾ ಕಾರ್ಯನಿರತರಾದ ನಮಗೆ ಬಾಯಿಪಾಠದ ಬಿಸಿ ಮುಟ್ಟಿಸುತ್ತಿದ್ದ ಚಿಕ್ಕಮ್ಮನ ಕೆಲಸ ಆರಂಭ ಅದೇ ಹೇಳಿದ್ದನ್ನೇ ಹೇಳೊ ಪರಿಪಾಠ ಅ. ಆ, ಇ, ಈ. ಒಂದೊಂದ್ಲೆ ಒಂದ, ಆದರೆ ಅಂದಿನಿಂದ ಇಂದಿಗೂ ಹದಿಮೂರು ಮತ್ತು ಹದಿನೇರ ಮಗ್ಗಿ ಮಾತ್ರ ನಾನು ಕೂತ ಮಣೆ ಅಡಿಗೆ ಉಳಿದು ಬಿಟ್ಟಿದೆ.
ಮನೆಗೆ ನೆಂಟರು ಬಂದ ದಿನ ಬಾಯಿಪಾಠಕ್ಕೆ ರಜೆ. ತಿನ್ನು ಏನಾದರೊಂದು ವಿಷೇಶ ಕಜ್ಜಾಯ. ಇಷ್ಟಾಗಿ ಮಲಗಿದರೆ ಬೆಳಿಗ್ಗೆ ಟೀಚರಿಗೆ ಬೊಕ್ಕಳಮಾಲೆ ಕೊಡುವ ಹಂಬಲದಲ್ಲಿ ನಿದ್ದೆ.
ಇಂತಹ ಬಾಲ್ಯ ಈಗಿನ ಹಳ್ಳಿಮಕ್ಕಳಿಗೂ ಇಲ್ಲ. ಆಧುನಿಕತೆಯ ಅಡಿಯಲ್ಲಿ ಇಂತಹ ಎಷ್ಟೋ ಖುಷಿಗಳು ಹುದುಗಿ ಹೋಗಿವೆ.
ಸುಮಾ.ಕಂಚೀಪಾಲ್
💖💖suma
ReplyDelete😍😍
DeleteGood one
ReplyDeleteTq u
DeleteSuper....
ReplyDeleteTq uu
ReplyDelete😍
ReplyDelete