ಉಜಿರೆಯಿಂದ ಬಸ್ಸಿನಲ್ಲಿ ಹೊರಟಿದ್ದೆ ದಾರಿಯ ಅರ್ಧಕ್ಕೆ ಬಹಳಷ್ಟು ಜನ ನಿಂತಿದ್ದರು. ತುಂಬಾ ಕತ್ತಲಾಗಿತ್ತು. ಸುಮಾರು ಇಪ್ಪತ್ತೈದು ಜನ ಬಸ್ಸಿಗೆ ತಮ್ಮ ಕೈ ಅಡ್ಡಹಿಡಿದರು. "ಓ ಯಾವುದೊ ಬಸ್ಸ ಕೆಟ್ಟು ನಿಂತಿದೆ" ಎಂದು ಅರ್ಥಾಯ್ತು. ಬಸ್ ನಿಲ್ತಿದ್ದಂತೆ ಜನರ ಗುಂಪೊಂದು ವೇಗವಾಗಿ ಬಸ್ ಏರಿತು. ಸಿಟಿಗಾಗಿ ತಡಕಾಡಿ ಒಮ್ಮಿಂದೊಮ್ಮೆಲೆ ನುಗ್ಗಿ ಅಲ್ಲಿ ಇಲ್ಲಿ ಜಾಗ ಸಿಕ್ಕಿದಲ್ಲೆಲ್ಲ ಕೂತು ಬಿಟ್ಟರು.
ನನ್ನ ಪಕ್ಕದ ಸೀಟೊಂದು ಖಾಲಿ ಇತ್ತು ಆದರೆ ನಾನು ನನ್ನ ಬ್ಯಾಗ್ ಒಂದನ್ನು ಅರ್ಧ ಸೀಟಿನ ಮೇಲೆ ಇಟ್ಟ ಕಾರಣ ಯಾರು ಕೂರಲು ಇಷ್ಟ ಪಡಲಿಲ್ಲ. ಕೊನೆಗೆ ಎಲ್ಲಾ ಸೀಟು ಸಂಪೂರ್ಣ ತುಂಬಿ ಹೋದಾಗ ಮದುಮಗನ ರೀತಿ ರೆಡಿಯಾಗಿದ್ದ ಒಬ್ಬ ಹುಡುಗ ಬಂದು "ನಾನು ಕೂರ್ಬಹುದಾ"? ಎಂದು ಕೇಳಿದ. ಅವನ ಮುಖ ನೋಡಿದರೆ ಅತ್ತಂತಿತ್ತು. "ಹಾ ಬನ್ನಿ" ಅಂತ ಬ್ಯಾಗ್ ಸರಿಸಿದೆ. ಕೂತ ಮೊಬೈಲ್ ಕವರ್ ಹಿಂದುಗಡೆ ಇದ್ದ ಒಂದಷ್ಟು ಟಿಕೆಟ್ಗಳನ್ನು ಹರಿದು ಬಿಸಾಡಿದ. ಗ್ಯಾಲರಿ ಓಪನ್ ಮಾಡಿ ಅದ್ಯಾರದೋ ಒಂದಿಷ್ಟು ಪೋಟೋ ನೋಡಲು ಆರಂಭಿಸಿದ.
ತುಂಬಾ ಕತ್ತಲಿತ್ತು ಬಸ್ ಒಳಗಡೆ ಇದ್ದ ಲೈಟ್ ಕೂಡಾ ಬಂದ್ ಮಾಡಿದ್ದರು. ಆ ಕಾರಣದಿಂದಾಗೇ ಅವನ ಮೊಬೈಲ್ ಬೆಳಕು ನನ್ನ ಕಣ್ಣಿಗೆ ಸ್ವಲ್ಪ ಹೆಚ್ಚೇ ತಾಕಿ ಬೇಡ ಬೇಡವೆಂದರು ಅವನ ಗ್ಯಾಲರಿ ನನ್ನ ಕಣ್ಣಿಗೆ ಬಿತ್ತು ಆದರೂ ನಾನಷ್ಟು ಲಕ್ಷ ಹಾಕಲಿಲ್ಲ. ಅವನು ಅಳುವ ಸದ್ದು ಕೇಳುತ್ತಿದ್ದರು ವಿಷಯ ಏನು ಎಂದು ಕೇಳಲು ನಾನು ಮುಂದಾಗಲಿಲ್ಲ. ಅವನ ಪಾಡಿಗವನೆ ಸಮಾಧನ ಮಾಡಿಕೊಂಡು ಸ್ವಲ್ಪ ಸಮಯದ ಬಳಿಕ. "ನಿಮ್ ಊರು " ಅಂತ ಕೇಳ್ದ ಯಲ್ಲಾಪುರ ಅಂದೆ ಅದಾಗ್ಲೆ ಅರಬೈಲು ಗಟ್ಟ ಹತ್ತಿದ್ದೆವು. ನಾನು ಅಪರಚಿತರೊಬ್ಬರಲ್ಲಿ ಹೇಳಲೇ ಬೇಕಾದ ನನ್ನ ಕತೆಯನ್ನು ಈಗ ನಿಮಗೆ ಹೇಳಲೇ ಬೇಕು ನೀವು ಕೇಳುವುದಾದರೆ ಕೇಳಿ ಇಲ್ಲವಾದರೆ ಬಿಡಿ ನನ್ನ ಸಮಾಧನ ನನಗೆ ಮುಖ್ಯ ಎಂದ. ಅರೆ! ಇವನಿಗೇನು ಮರ್ಲ? ಅಂತ ನಂಗನಿಸಿದರು ಅವನ ಕಥೆ ಮಾತ್ರ ಇಂಟ್ರೆಸ್ಟಿಂಗ್ ಆಗಿತ್ತು.
ಇಪ್ಪತ್ತೊಂದು ವರ್ಷದ ಹುಡುಗ ಅವನು ಯಾವುದೋ ೧೮ ವರ್ಷದ ಹುಡುಗಿಯನ್ನು ಪ್ರೀತಿಸಿ ಮನೆಯಿಂದ ಕರ್ಕೊಂಡು ಬಂದಿದಾನೆ. ನಾಲ್ಕು ವರ್ಷಗಳಿಂದ ಅವಳನ್ನೇ ಪ್ರೀತಿಸಿ ಇವನು ಈಗ ಬೇರೆ ಊರಲ್ಲಿ ತನ್ನ ಓದು ಮುಂದುವರಿಸಿದ್ದ. ಇವನಿಗೆ ಅವಳ ಮದುವೆ ನಿಶ್ಚಯವಾಗಿದೆ ಎಂದು ಅವಳು ಪೋನು ಮಾಡಿ ಹೇಳಿ ಅತ್ತಿದ್ದಾಳೆ. ಅದನ್ನು ಕೇಳಿ ಅವಳ ಮದುವೆಗೆ ಒಂದು ವಾರವಿರುವಾಗ ಇವನು ಗಾಬರಿಯಿಂದ ಅವಳನ್ನು ತನ್ನ ಊರಿಗೆ ಕರೆದುಕೊಂಡು ಹೋಗಿ ಚಿಕ್ಕಪ್ಪನ ಬಳಿ ಹೇಳಿ ಮದುವೆಯ ಸಿದ್ದತೆ ಮಾಡಿಸಿದ್ದಾನೆ.
ಆದರೆ ಇವರು ಅರ್ಧ ದಾರಿ ತಲುಪಿದಾಗ ಅವಳ ಅಣ್ಣಂದಿರಿಗೆ ವಿಷಯ ಗೊತ್ತಾಗಿ. ಇವರನ್ನು ಟ್ರಾಕ್ ಮಾಡಿ ಅವಳನ್ನು ವಾಪಸ್ ಕರೆದೊಯ್ದಿದ್ದಾರೆ. ಅದೇ ಬೇಜಾರಿನಲ್ಲಿ ಇವನು ಅವಳ ಜೊತೆ ಕಳೆದ ದಿನವನ್ನು ನೆನೆಯುತ್ತಾ. ಬೆಳಿಗ್ಗೆ ಎಷ್ಟು ಸುಖದಿಂದ ಆರಂಭ ಆಗಿತ್ತೊ ಅದಕ್ಕೂ ಹೆಚ್ಚಿನ ದುಃಖದಲ್ಲಿ ಮುಗಿತಿದೆ. ಎಂದು ಕೊರಗಿದ. ಅವಳ ಪೋಟೋ ತೋರಿಸಿದ ನನಗೊಂಚೂರು ಭಯ ಪೋಲಿಸ್ ಕೇಸ್ ಬೇರೆ ಆಗಿದೆ ಅಂತಿದ್ದ.
ನಾನು..ನೀನು ಏನ್ ಕಲಿತಿದಿಯಾ ಅಂದಾಗ ಡಿಪ್ಲೊಮಾ ಅಂದ. ನಿನ್ನ ಕಾಲೇಜು ಪೀಸ್ ಯಾರು ಕಟ್ಟತಾರೆ ಅಂತ ಕೇಳ್ದೆ ಅಪ್ಪ ಅಂದ. ನೀನ್ ಅವಳನ್ನ ಹೇಗ್ ಸಾಕ್ತಿದ್ದೆ ಅಂತ ಕೇಳ್ದಾಗ. ಸುಮ್ನಾದ. ಎರಡ್ ನಿಮ್ಶದ್ ನಂತ್ರ. ನಾನ್ ಕಲ್ತು ಮುಗ್ಸತೀನಿ ನಂದೆ ದುಡ್ಡಲ್ಲಿ ನನ್ ಹೆಣ್ತಿ ಕೊರ್ಳಿಗ್ ತಾಳಿ ಮಾಡಿ ಹಾಕಿ ಸೆಲ್ಪಿ ಕಳಸ್ತೀನಿ ಪೇಸ್ಬುಕ್ ಇದ್ಯಾ ಅಂತ ಕೇಳ್ದ.?
ನಾನ್ ಇಳಿಯೋ ಜಾಗ ಹತ್ರ ಬಂದಿತ್ತು. ಇಷ್ಟೊತ್ತಾದ್ರು ಒಬ್ರಿಗೊಬ್ರು ಹೆಸ್ರು ಕೇಳ್ಕೊಂಡಿರ್ಲಿಲ್ಲ. ಬಸ್ ಇಂದ ಇಳಿತಿದ್ದಾಗೆ. ಟಾಟಾ ಮತ್ತೆ ಸಿಗೋಣ ನನ್ನ ಹೆಸ್ರು ಬಸವರಾಜು. ಗದಗ ನಮ್ಮೂರು. ನಿಮ್ಮೆಸ್ರ ಏನ್ರೀ ಅಂತ ದೊಡ್ದಾಗಿ ಕೂಗ್ದ. ನಾನ್ ಹೇಳ್ದೆ ಸುಮಾ..ಅದಾಗ್ಲೆ ಬಸ್ ಹೊರ್ಟಿತ್ತು. ಅಳ್ತಿದ್ದ ಆಸಾಮಿ ಮುಖದಲ್ಲಿ ಒಂದ್ ನಗುವಿತ್ತು.
ಸುಮಾ.ಕಂಚೀಪಾಲ್
��
ReplyDeleteNice one👍
ReplyDeleteಅವನು ಫೋಟೊ ಕಳಿಸೇ ಕಳಿಸ್ತಾನೆ, ಆಗ ಅವನು ಗೆದ್ದ ಕಥೆಯನ್ನೊಮ್ಮೆ ಕೇಳಿ.
ReplyDeleteಸಾಧ್ಯವಾದರೆ ಆಗ ಅದನ್ನೂ ಬರೆಯಿರಿ.
����ಅಕ್ಕಾ ����
ಖಂಡಿತವಾಗಿ
Deleteಬಸವರಾಜುವಿನ fb a/c ಸಿಕ್ತಾ..!?✌
ReplyDeleteWow
ReplyDelete