Skip to main content

Posts

Showing posts from November, 2021

ಧರ್ಮಸ್ಥಳ ಲಕ್ಷದೀಪೋತ್ಸವ

kannadanadi ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗುವ ಲಕ್ಷದೀಪೋತ್ಸವಕ್ಕೆ  ಸೋಮವಾರ (ನವೆಂಬರ್ 29)ರಂದು ಪಾದಯಾತ್ರೆಯ ಮೂಲಕ ಚಾಲನೆ ದೊರೆಯಿತು. ಸುಮಾರು ಹತ್ತು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಾಡಿನ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಕಾಲ್ನಡಿಗೆಯ ಮೂಲಕ ಧರ್ಮಸ್ಥಳದೆಡೆಗೆ ಸಾಗಿದರು. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಬಾಗದಿಂದ ಪಾದಯಾತ್ರೆ ಆರಂಭಗೊಂಡಿತು. ಸಾಗರೋಪಾದಿಯಲ್ಲಿ ಜನರು ಸಾಲುಗಟ್ಟಿ ಕಾಲ್ನಡಿಗೆಯ ಮೂಲಕ ಸಾಗುತ್ತಿದ್ದಾಗ ಭಕ್ತಿ ಮತ್ತು ಶಕ್ತಿ  ಪಾದಯಾತ್ರಿಗಳಲ್ಲಿ ಎದ್ದು ತೋರುತ್ತಿತ್ತು.‌ ಹಲವಾರು ತಂಡಗಳು ವಿವಿಧ ರೂಪಕ ಮತ್ತು  ಮೆರವಣಿಗೆಯೊಟ್ಟಿಗೆ  ಗೋವಿಂದ,  ಮಂಜುನಾಥ ಹೀಗೆ ದೇವರ ಸ್ಮರಣೆ ಮಾಡುತ್ತಾ 10  ಕಿಮೀ ದೂರ ಸಾಗಿದರು.‌  ಕನ್ನಡನಾಡಿ ಪಾದಯಾತ್ರೆಯಲ್ಲಿ ವಯಸ್ಸಿನ ಮಿತಿ ಇಲ್ಲದೇ ವಯಸ್ಕರು, ಹಿರಿಯರು, ಪುಟ್ಟ ಮಕ್ಕಳು ಮತ್ತು ಮಹಿಳೆಯರು ಹೀಗೆ ಎಲ್ಲ ವಯೋಮಾನದವರು ಪಾಲ್ಗೊಂಡು ಹೆಜ್ಜೆಹಾಕಿದರು. ಅಲ್ಲಲ್ಲಿ ಪಾದಯಾತ್ರಿಗಳ ದಾಹ ತಣಿಸುವದಕ್ಕೆಂದೇ ಪಾನೀಯ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ನಾರದ ವೇಷ ಧರಿಸಿ ಸೈಕಲ್ ಮೇಲೆ ಸವಾರಿ ನಡೆಸಿದ ಬೈಂದೂರಿನ ಯುವಕರೊಬ್ಬರ  ವೈಖರಿ ಪಾದಯಾತ್ರೆಯಲ್ಲಿ ವಿಶೇಷ ಎನಿಸಿತು.‌  ವಿಪತ್ತು ನಿರ್ವಹಣಾ ತಂಡ ಹಾಗೂ ಬದುಕು ಕಟ್ಟೋಣಬನ್ನಿ ಹೀಗೆ ಹಲವು ತಂಡದ ಸದಸ್...

ಅನಾಮಿಕ‌ ಜಲಪಾತದ ಹಾದಿ

udyavani digital ಯಾವುದೋ ಅನಾಮಿಕ ಜಲಪಾತ ಒಂದರ ಬುಡದಲ್ಲಿ ನಿಂತು ನಾನಿದನ್ನು ನಿಮಗೆ ವಿವರಿಸುತ್ತಿದ್ದೇನೆ ಎಂದು ಊಹಿಸಿಕೊಳ್ಳಿ. ನೀವೂ ನನ್ನೊಟ್ಟಿಗೆ ಈ ಪಯಣದಲ್ಲಿ ಸಾತ್ ನೀಡಿದ್ದೀರಿ ಎಂದು ನಾನು ಊಹಿಸಿಕೊಳ್ಳುತ್ತೇನೆ.‌ ಆಗ ಈ ಬರಹ ನಿಮಗೆ ನಾನು ನಡೆದುಹೋದ ದಾರಿಯ ಪ್ರತಿಯೊಂದು ಚಿತ್ರಣವನ್ನು ಬಿಂಬಿಸುತ್ತಾ ಹೋಗುತ್ತದೆ. ತೀರಾ ಕಡಿದಾದ ಮಣ್ಣು ರಸ್ತೆಯಲ್ಲಿ ನಾವು ಒಂದಷ್ಟು ಜನ ಸಾಹಸ ಮಾಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದೇವೆ. ದಾರಿಯ ಉದ್ದಕ್ಕೂ ಆಗಾಗ ಮಳೆ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ರಬ್ಬರ್ ಮರಗಳೇ ಹಾಸಿಕೊಂಡಿವೆ. ಇಷ್ಟರ ನಡುವೆ ಕೆಲವರಿಗೆ ರೇನ್ ಕೋಟ್ ಇದೆ ಇನ್ನು ಕೆಲವರಿಗಿಲ್ಲ.  ರಸ್ತೆ ಕಳೆದು ಇನ್ನೇನು ಜಲಪಾತ ಬರುತ್ತದೆ ಎನ್ನುವಷ್ಟರಲ್ಲಿ ಆ ಜಲಪಾತಕ್ಕೆ ಹೋಗುವ ಮಾರ್ಗವನ್ನೇ ಬಂದ್ ಮಾಡಲಾಗಿದೆ ಎಂಬ ಸುದ್ದಿ ಸಿಕ್ಕಿತು. ಪ್ರವಾಸಿಗರಿಗೆ ಅಲ್ಲಿ ನಿಷೇಧವಿದೆ ಎಂದು ತಿಳಿದಾಗ ಕೊಂಚ ಬೇಸರವೆನಿಸಿದರೂ ಜೊತೆಯಲ್ಲಿ ಇದ್ದ ಘಟಾನುಘಟಿಗಳು ಯಾರದೋ ಪರವಾನಿಗೆ ಪಡೆದು ಅಂತು ಮುಂದೆ ಸಾಗಿದೆವು. ತಲುಪುವ ಸ್ಥಳಕ್ಕಿಂತ ಹೊರಟಿದ್ದ ಹಾದಿಯ ಫಜೀತಿಯೇ ಬೇರೆ ಅನುಭವ ನೀಡುತ್ತಿದೆ. ಅಷ್ಟು ಕಲ್ಲು ಗುಡ್ಡೆಯಂತ ದಾರಿ, ಮೂಗಿನ ನೇರಕ್ಕೆ ಘಟ್ಟಗಳು, ಅಲ್ಲಲ್ಲಿ ಒಬ್ಬರೇ ದಾಟುವಷ್ಟು ಚಿಕ್ಕ ಸೇತುವೆ, ನೀರಿನ ಚಿಕ್ಕ ಚಿಕ್ಕ ಝರಿಗಳು, ಇಷ್ಟರ ನಡುವೆ ಅದ್ಭುತದಲ್ಲಿ ಅದ್ಬುತ ಅನುಭವ ನೀಡಿದ್ದು ಅಚ್ಚರಿಯ ಜೀವಿ ಇಂಬಳ ( ಜಿಗಣೆ, ಲೀ...

ಸರಳತೆಯ ಅಕ್ಷರ ಸಂತ

ಉಜಿರೆ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಹಲವು ಸಂಘಸಂಸ್ಥೆಗಳು ಅಭಿನಂದಿಸುತ್ತಿವೆ. ಸನ್ಮಾನಿಸುತ್ತಿವೆ. ಇವುಗಳ ನಡುವೆ ಉಜಿರೆಯಲ್ಲಿ ಹರೇಕಳ ಹಾಜಬ್ಬ ಅವರನ್ನು ಅಭಿನಂದಿಸಿದ ರೀತಿ ವಿಭಿನ್ನವಾಗಿತ್ತು. ಕಾರ್ಯಕ್ರಮ ಕೇವಲ ಶಾಲು, ಹಾರಗಳಿಂದ ವಿಜೃಂಭಿಸದೆ ಸರಳ ಮತ್ತು ಸಹಜವಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಗೆ ದೀಪ ಪ್ರಜ್ವಲನೆ ಇರಲಿಲ್ಲ. ಬದಲಿಗೆ ವಿದ್ಯಾರ್ಥಿ ಪ್ರತಿನಿಧಿಗಳಿಂದ ಹರೇಕಳ ಹಾಜಬ್ಬ ಅವರ ಕನಸಿನ‌ ಶಾಲೆಗೆ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು.  ಬೆಳ್ತಂಗಡಿಯ ಹರೇಕಳ ಹಾಜಬ್ಬ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಬೆಳ್ತಂಗಡಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.   ಮಾನವ ರೂಪವೆತ್ತಿದ ಸರಳತೆ ಸರಳತೆಯೇ ಮಾನವ ರೂಪವೆತ್ತಂತಿದ್ದರು ಹರೇಕಳ ಹಾಜಬ್ಬ. ಬಿಳಿಯ ಪಂಚೆ, ಬಿಳಿ ಅಂಗಿ, ಕೈಯಲ್ಲೊಂದು ಪುಟ್ಟ ಕರವಸ್ತ್ರ ಹಿಡಿದು ವೇಗದ ನಡಿಗೆಯ ಮೂಲಕ ವೇದಿಕೆಯ ಮುಂಭಾಗದಲ್ಲಿ ನಡೆದು ಬರುವಾಗ ಎಲ್ಲರ ಕಾತರದ ಕಣ್ಣುಗಳು ಅವರನ್ನೇ ದಿಟ್ಟಿಸುತ್ತಿದ್ದವು.‌  ವೇದಿಕೆಯಲ್ಲಿ ಆಸೀನರಾಗಿದ್ದ ಹಾಜಬ್ಬ ಅವ...

ನಾನು ಓದಿದ್ದು ಹೀಗೆ

ಹಾಸ್ಟೆಲ್ನಲ್ಲಿ ಸುಮ್ಮನೆ ಕೂತಿದ್ದಾಗ ಗೆಳತಿ ಮಧುರಾ ಮಂಜುನಾಥ ಕಾಮತ್ ಅವರು ಬರೆದ 'ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕತೆ' ಎನ್ನುವ ಪುಸ್ತಕ  ಕೈಗಿಟ್ಟು "ಸುಮಾ ಈ ಪುಸ್ತಕ ನಿನಗಾಗಿ, ಓದು ಎಂದಳು". ಪುಸ್ತಕದ ಮುಖಪುಟ ನೋಡುತ್ತಿದ್ದಂತೆ ತಲೆಕೆಳಗಾದೆ. ಆಕರ್ಷಕವಾಗಿತ್ತು. ಹೆಸರು ಓದಿದಾಗ ಇದೆಂತ ವಿಚಿತ್ರ ಹೆಸರಿನ ಪುಸ್ತಕ ಅನಿಸಿತು‌‌. ಪರಿವಿಡಿಗೆ ಹೋದಾಗ ಕೆಲವು ಸಣ್ಣಕತೆಗಳ ಗುಚ್ಛ ಇದು ಎನ್ನುವುದು ತಿಳಿದುಬಂತು. ನಾನು ಸನ್ಯಾಸಿಯಾಗಲು ಹೊರಟಾಗ ಎಂಬ ಪುಸ್ತಕದ ಪ್ರಸ್ತಾಪದೊಂದಿಗೆ ದಿಗಂತನ  ಸಿನಿಮಾದ ಹಾಗಿರುವ ಈ ಕತೆಗಳು ನನ್ನನ್ನು ಸೆಳೆಯುತ್ತಾ ಸಾಗಿತು. ನಾನು ಪತ್ರಿಕೋದ್ಯಮ ಓದುತ್ತಿದ್ದೇನೆ ಕತೆ, ಕವಿತೆ, ಲೇಖನ ಮತ್ತು ನುಡಿಚಿತ್ರ ಬರೆಯಬೇಕು, ಅವು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಆಸೆ ಹೊಂದಿದ್ದವನು ಎಂದು ಬರೆದಿತ್ತು. ಈ ಸಾಲುಗಳನ್ನು ಓದಿದ ಮೇಲಂತು ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನನ್ನ ಆಸೆಗಳಿಗೆ ಸರಿಹೊಂದುವ ಮನೋಭಾವನೆಯನ್ನೇ ಈ ಪುಸ್ತಕವೂ ಹೊಂದಿದೆ ಎಂಬ ಹುಮ್ಮಸ್ಸಿನಲ್ಲಿ ಓದಲು ಶುರುವಿಟ್ಟೆ. ಮುನ್ನುಡಿಯೂ ಅವರದೇ ಇತ್ತು. ಪರಿವಿಡಿ ತೆರೆದರೆ ಹದಿನೆಂಟು ಮೆಟ್ಟಿಲುಗಳು ಎಂದು ಹದಿನೆಂಟು ಹೆಸರು ಕಂಡಿತು. ಹಿಮಚಂದ್ರಿಕೆ, ಕಾಳಿಂಗ ಮರ್ದನ ಮತ್ತು ಹಲ್ನುಡಿ ವಿಶೇಷ ಎನಿಸಿತು. ಬಸ್ಸಿನ‌ ಕಂಡಕ್ಟರ್ ಮತ್ತು ಪಾಠಮಾಡುವ ಟೀಚರ್ ಹಾಗೂ ರೈಟರ್ ಗಳಿಗೆ ಅಷ್ಟು ಬೇಗ ಕಲ್ಯಾಣ ಭಾಗ...

ಚೌಕಿಯ ಹೊರಗಿನ ಪ್ರಸಂಗ

ಪ್ರಸಂಗದ ಹೆಸರು ಮತ್ತು ಅದರ ಪಾತ್ರದ ವಿವರಣೆ ಹೊರಗೆ ನಡೆಯುತ್ತಿದ್ದರೆ, ಒಳಗೆ ಗಣಪತಿ ಪೂಜೆಯ ವಾದನ ರಂಗಸ್ಥಳದ ಎದುರು ಕೂತವರ ಕಿವಿ ನೆಟ್ಟಗಾಗಿಸುತ್ತದೆ. ಹಿರಿಯರ ಬಾಯಲ್ಲಿದ್ದ ಕವಳ ನುಗ್ಗಾಗಿ ರಸ ಉಗಿದು ಒಂದು ಹೊಸ ಕವಳದ ಪಾನು ತಯಾರಾಗುತ್ತದೆ. ಒಳಗಿನ ಚಂಡೆ ಶಬ್ದಕ್ಕೆ ಕೂರ್ಚೆಯಿಂದ ಕೆಳಬಿಟ್ಟ ಕಾಲುಗಳು ತಂತಾನೆ ಕುಣಿಯಲು ಆರಂಭಿಸುತ್ತದೆ. ನುಡಿಜೇನು.‌ 11/ 11/21 ಕೈಯಲ್ಲಿ ಪಾಪ್ ಕಾರ್ನ ಹಿಡಿದ, ಬೋರಾಗಿ ಕೂತ ಮಕ್ಕಳು ನಿಧಾನಕ್ಕೆ ಪ್ಲಾಸ್ಟಿಕ್ ಕೂರ್ಚೆಯ ಮೇಲೆ ಎದ್ದು ನಿಂತು ವೇದಿಕೆಯಲ್ಲಿ ಏನಾಗುತ್ತಿದೆ ಎಂದು ಬೆರಗುಗಣ್ಣಿನಿಂದ ಕಾಯುತ್ತಾರೆ. ಪೊಗಡಿ ಸುತ್ತಿದ ಹಿಮ್ಮೇಳ ವಾದಕರು, ಮೇಜು ಕೂರ್ಚಿತಂದಿಡುವ ಪರಿಚಾರಕರು‌, ಲೈಟ್ ಮ್ಯಾನ್ ಇವರೆಲ್ಲರ ಓಡಾಟ ಮೊದಲು ವೇದಿಕೆಯಲ್ಲಿ ಗೋಚರವಾಗುತ್ತದೆ. ಚಂಡೆಯ ಒಂದೇ ಒಂದು ಬಡಿತಕ್ಕೆ ಸ್ಪೀಕರ್ ಪಕ್ಕ ಕೂತ ಕೆಲವರು ಕೊಂಚ ದೂರ ಸರಿಯುತ್ತಾರೆ. ವೇದಿಕೆಯ ತುಂಬೆಲ್ಲ ಹಾಸಿಕೊಂಡಿದ್ದ ಕರೆಂಟ್ ವಯರ್ ಗಳು ಕುಣಿಯುವವನ ಕಾಲಿಗೆಡವಬಾರದು ಎಂಬ ಕಾಳಜಿಯಿಂದ ಕೆಳ ಕೂತ ಕೆಲವರು ಸೂಚನೆಕೊಟ್ಟು ಅದನ್ನು ಪಕ್ಕಕ್ಕೆ ಎಳೆಯುತ್ತಾರೆ. ಹಿಮ್ಮೇಳದವರ ಹಿಂದಿನ ನೀಲಿ ಪರದೆ ನಿಧಾನಕ್ಕೆ ಅಲುಗಾಡಲು ಪ್ರಾರಂಭವಾಗುತ್ತದೆ. ಆಗ ಕೂತವರ ಕಣ್ಣುಗಳು ಪರದೆಯಂಚಿನ ತುದಿಗೆ ಹೋಗುತ್ತದೆ. ಯಾಕೆಂದರೆ ಪರದೆಹಿಂದಿನ ಕಲಾವಿದನ ಬಣ್ಣದ ವೇಷದ ಸೋಗು ಅವರನ್ನ ಕಾಡುತ್ತಿರುತ್ತದೆ. ಗೆಜ್ಜೆಯ ಶಬ್ಧ ಮೈ ಜುಮುಗುಡಿಸುತ್ತದೆ‌. ...

ದೀಪ ಯಾವುದರ ಸಂಕೇತ?!

ದೀಪ ಎನ್ನುವುದು ಕೇವಲ ಬತ್ತಿ ಹೊತ್ತಿಸಿ ಉರಿವ ಬೆಂಕಿಯ ಬೆಳಕಲ್ಲ . ಇದು ಹಲವು ಧನಾತ್ಮಕ ಅಂಶಗಳ ಸಂಕೇತ , ಅಗ್ನಿ ಮತ್ತು ಸೂರ್ಯನ ಸಂಕೇತ , ಜ್ಞಾನದ ಸಂಕೇತ , ಜೀವದ ಸಂಕೇತ ಮತ್ತು ಭಕ್ತಿಯ ಸಂಕೇತ . ಪ್ರಾಚೀನ ಕಾಲದಲ್ಲಿ ಮಾನವನ ಅದ್ಭುತ ಸಂಶೋಧನೆಯಲ್ಲಿ ಅಗ್ನಿಯೂ ಒಂದು . ಅಲ್ಲಿ ಬೆಂಕಿಯ ಸೂಡಿ ರಾತ್ರಿ ಹೊತ್ತಿನ ದಾರಿ ತೋರುವ ಮತ್ತು ಪ್ರಾಣಿಗಳ ಕಾಟದಿಂದ ತಪ್ಪಿಸಿಕೊಳ್ಳುವ ದೀಪವಾಗಿತ್ತು .  ಬಳಿಕ ಕಲ್ಲಿನ ಹಣತೆಗಳು , ದೀಪಸ್ತಂಭ ನಿರ್ಮಾಣವಾಗಿ ಅಲ್ಲಲ್ಲಿ ಬೆಳಕಿನ ಗೋಚರಕ್ಕೆ ಕಾರಣವಾಯಿತು . ಮುಂದೆ ಇದು ಅಲಂಕೃತ ಮಣ್ಣಿನ ಹಣತೆ , ಪ್ಲಾಸ್ಟಿಕ್ ದೀಪ , ಎಲೆಕ್ಟ್ರಾನಿಕ್ ದೀಪ , ಕಲ್ಲಿನ ದೀಪ ಹೀಗೆ ನಾನಾ ಬಗೆಯ ದೀಪಗಳ ಉಗಮಕ್ಕೆ ನಾಂದಿಯಾಯಿತು . ಅಗ್ನಿ ಮತ್ತು ಸೂರ್ಯ ಎಂದಾಗ ಉರಿಯುವ ಚಿತ್ರವೊಂದು ಮನದಲ್ಲಿ ಮೂಡುತ್ತದೆ . ಅದರಂತೆ ದೀಪವೂ ಸಹ ಒಂದು ಬೆಳಕಿನ ಸಂಕೇತ .  ಅರಿವಿನ ದೀವಿಗೆ ಎಂಬ ಮಾತನ್ನು ಕೇಳಿರುತ್ತೀರಿ ಅಥವಾ ಜ್ಞಾನ ಜ್ಯೋತಿ ಎಂಬ ಪದ ನಿಮ್ಮ ಕಿವಿಗೆ ಬಿದ್ದಿರುತ್ತದೆ . ಒಟ್ಟಿನಲ್ಲಿ ದೀಪವನ್ನು ನಮ್ಮೊಳಗಿನ ಓದು , ಜ್ಞಾನ ಮತ್ತು ಅರಿವಿನ ಸಾಂಕೇತಿಕ ರೂಪವಾಗಿಯೂ ಹೇಳಲಾಗುತ್ತದೆ .  ಭಕ್ತಿಯ ಸಂಕೇತವಾಗಿ ದೀಪವನ್ನು ಹೆಚ್ಚಾಗಿ ಬಳಸಲಾಗುತ್ತದೆ ಯಾವುದೇ ದೈವಿಕ ಕಾರ್ಯಗಳಿದ್ದರೂ ಪ್ರಥಮವಾಗಿ ದೀಪ ಹೊತ್ತಿಸಿ ನಮಸ್ಕರಿಸಿ ಮುಂದಿನ ಕಾರ್ಯ ಆರಂಭವಾ ಗುತ್ತದೆ . ಸ್ನಾನ ಮಾಡಿ ಮಡಿ ಮಾಡಿಕೊಂಡು ದೇವರಿಗೆ ದೀ...

ದೀಪಾವಳಿ ಎಣ್ಣೆ ಸ್ನಾನ

"ಅಮ್ಮಾ ಅಂಟಂಟೂ ಬೇಡ ಎಣ್ಣೆ ಸ್ನಾನ ಚಳಿ ಅದೂ ಇಷ್ಟು ಬೆಳಿಗ್ಗೆ " ಎನ್ನುತ್ತಾ ದೊಡ್ಡ ಮಣ್ಣಿನ ಮನೆಯ ಸುತ್ತ ಅಮ್ಮ ಬಿಚ್ಚಿದ ಅಂಗಿ ಕೈಯಲ್ಲಿ ಹಿಡಿದು ಅರೆ ಬೆತ್ತಲಾಗಿ ಓಡುತ್ತಿದ್ದೆ. ದೀಪಾವಳಿಯ ಎಣ್ಣೆ ಸ್ನಾನಕ್ಕೆ ನನ್ನ ಬಾಲ್ಯದಲ್ಲಿ ಪ್ರತಿಸಲವೂ ಅಜ್ಜಿಯ ಮನೆಗೇ ಹೋಗುತ್ತಿದ್ದೆವು. ಅದು ಕೂಡುಕುಟುಂಬ ಮೂವತ್ತೆರಡು ಜನ. ಅಲ್ಲಿ ನಿತ್ಯವೂ ಹಬ್ಬವೇ ದೀಪಾವಳಿಗಂತೂ ಎಲ್ಲರ ನೆಂಟರೂ ಒಟ್ಟುಗೂಡಿ ಒಂದು ಮದುವೆ ಮನೆಯ ಅದ್ದೂರಿ ಅಲ್ಲಿ ಕಾಣುತ್ತಿತ್ತು. ಎಲ್ಲರೂ ಸಾಲಾಗಿ ಶೇಡಿಯಿಂದ ಬರೆದ ಚಿತ್ರಗಳೆದರು ಚಾಪೆಯಮೇಲೆ ಕೂತು ಎಣ್ಣೆ ಹಚ್ಚಿಸಿಕೊಳ್ಳುವ ಮಜ ನೋಡಲು ಬಹಳ ಚಂದವಿತ್ತು. ಅದೇ ಶೇಡಿಯಲ್ಲಿ ಪುಟ್ಟ ಮಕ್ಕಳ ಕಾಲನ್ನು ನೆನೆಸಿ ಮರದ ಕಂಬಗಳ ಮೇಲೇ ಅಚ್ಚು ಹಾಕುತ್ತಿದ್ದರು ನನ್ನ ಪುಟ್ಟ ಕಾಲನ್ನು ನೋಡಿ ನಾನು ಈಗಲೂ ಖುಷಿಪಡುತ್ತಿದ್ದೆ. ಆದರೆ ಇತ್ತೀಚೆಗೆ ಹೊಸಮನೆ ಕಟ್ಟಿಸಿ ಎಲ್ಲರೂ ಬೇರೆ ಬೇರೆಯಾಗಿರುವುದು ಬೇಸರದ ಸಂಗತಿಯಾದರೂ ದೀಪಾವಳಿ ಹಬ್ಬದ ಸಂಭ್ರಮಕ್ಕೇನು ಕೊರತೆಇಲ್ಲ ಯಾಕೆಂದರೆ ಮೂಲ ದೇವರಿರುವ ಮನೆಯಲ್ಲಿ ಪ್ರತೀ ದೀಪಾವಳಿಗೂ ಲಕ್ಷ್ಮಿ ಪೂಜೆ ಮಾಡುತ್ತಾರೆ ಅದಕ್ಕೆ ನಾವೆಲ್ಲ ತಪ್ಪದೆ ಹೋಗುತ್ತೇವೆ. ತುಪ್ಪದ ಅವಲಕ್ಕಿ ಹಬ್ಬದ ವಿಶೇಷ ತಿನಿಸು. ಸಿಹಿ ಎದ್ದು ಹೊಡೆಯುವ ಹಾಗೆ ಕರಿಯ ಬಣ್ಣದ ಹಳ್ಳಿ ಬೆಲ್ಲ ಆಕಳ ತುಪ್ಪವನ್ನು ಅವಲಕ್ಕಿಗೆ ಸೇರಿಸಿ ಕಲೆಸಿ ಕೈ ತುತ್ತು ಕೊಡುತ್ತಾರೆ. ಅದ್ನು ತಿನ್ನುತ್ತಿದ್ದಂತೆ ಹಬ್ಬದ ಅಮಲೇರುವುದು. ನೋಡ...