Skip to main content

ದೀಪಾವಳಿ ಎಣ್ಣೆ ಸ್ನಾನ

"ಅಮ್ಮಾ ಅಂಟಂಟೂ ಬೇಡ ಎಣ್ಣೆ ಸ್ನಾನ ಚಳಿ ಅದೂ ಇಷ್ಟು ಬೆಳಿಗ್ಗೆ " ಎನ್ನುತ್ತಾ ದೊಡ್ಡ ಮಣ್ಣಿನ ಮನೆಯ ಸುತ್ತ ಅಮ್ಮ ಬಿಚ್ಚಿದ ಅಂಗಿ ಕೈಯಲ್ಲಿ ಹಿಡಿದು ಅರೆ ಬೆತ್ತಲಾಗಿ ಓಡುತ್ತಿದ್ದೆ. ದೀಪಾವಳಿಯ ಎಣ್ಣೆ ಸ್ನಾನಕ್ಕೆ ನನ್ನ ಬಾಲ್ಯದಲ್ಲಿ ಪ್ರತಿಸಲವೂ ಅಜ್ಜಿಯ ಮನೆಗೇ ಹೋಗುತ್ತಿದ್ದೆವು. ಅದು ಕೂಡುಕುಟುಂಬ ಮೂವತ್ತೆರಡು ಜನ. ಅಲ್ಲಿ ನಿತ್ಯವೂ ಹಬ್ಬವೇ ದೀಪಾವಳಿಗಂತೂ ಎಲ್ಲರ ನೆಂಟರೂ ಒಟ್ಟುಗೂಡಿ ಒಂದು ಮದುವೆ ಮನೆಯ ಅದ್ದೂರಿ ಅಲ್ಲಿ ಕಾಣುತ್ತಿತ್ತು.

ಎಲ್ಲರೂ ಸಾಲಾಗಿ ಶೇಡಿಯಿಂದ ಬರೆದ ಚಿತ್ರಗಳೆದರು ಚಾಪೆಯಮೇಲೆ ಕೂತು ಎಣ್ಣೆ ಹಚ್ಚಿಸಿಕೊಳ್ಳುವ ಮಜ ನೋಡಲು ಬಹಳ ಚಂದವಿತ್ತು. ಅದೇ ಶೇಡಿಯಲ್ಲಿ ಪುಟ್ಟ ಮಕ್ಕಳ ಕಾಲನ್ನು ನೆನೆಸಿ ಮರದ ಕಂಬಗಳ ಮೇಲೇ ಅಚ್ಚು ಹಾಕುತ್ತಿದ್ದರು ನನ್ನ ಪುಟ್ಟ ಕಾಲನ್ನು ನೋಡಿ ನಾನು ಈಗಲೂ ಖುಷಿಪಡುತ್ತಿದ್ದೆ. ಆದರೆ ಇತ್ತೀಚೆಗೆ ಹೊಸಮನೆ ಕಟ್ಟಿಸಿ ಎಲ್ಲರೂ ಬೇರೆ ಬೇರೆಯಾಗಿರುವುದು ಬೇಸರದ ಸಂಗತಿಯಾದರೂ ದೀಪಾವಳಿ ಹಬ್ಬದ ಸಂಭ್ರಮಕ್ಕೇನು ಕೊರತೆಇಲ್ಲ
ಯಾಕೆಂದರೆ ಮೂಲ ದೇವರಿರುವ ಮನೆಯಲ್ಲಿ ಪ್ರತೀ ದೀಪಾವಳಿಗೂ ಲಕ್ಷ್ಮಿ ಪೂಜೆ ಮಾಡುತ್ತಾರೆ ಅದಕ್ಕೆ ನಾವೆಲ್ಲ ತಪ್ಪದೆ ಹೋಗುತ್ತೇವೆ. ತುಪ್ಪದ ಅವಲಕ್ಕಿ ಹಬ್ಬದ ವಿಶೇಷ ತಿನಿಸು. ಸಿಹಿ ಎದ್ದು ಹೊಡೆಯುವ ಹಾಗೆ ಕರಿಯ ಬಣ್ಣದ ಹಳ್ಳಿ ಬೆಲ್ಲ ಆಕಳ ತುಪ್ಪವನ್ನು ಅವಲಕ್ಕಿಗೆ ಸೇರಿಸಿ ಕಲೆಸಿ ಕೈ ತುತ್ತು ಕೊಡುತ್ತಾರೆ. ಅದ್ನು ತಿನ್ನುತ್ತಿದ್ದಂತೆ ಹಬ್ಬದ ಅಮಲೇರುವುದು. ನೋಡಿ ನಾನೀಗ ಬರೆಯುತ್ತಾ ಅದನ್ನು ನೆನಪಿಸಿಕೊಂಡೆನಲ್ಲ ನನಗೆ ಈಗಲೂ ಬಾಯಲ್ಲಿ‌ ನೀರೂರುತ್ತಿದೆ. ನೀವು ಒಮ್ಮೆ ಹಬ್ಬದ ಆಚರಣೆಗೆ ನನ್ನೂರಿಗೆ ಬಂದು ನೋಡಿ.


ದೀಪಾವಳಿಯ ಮೂರು ದಿನದಲ್ಲಿ ಒಂದು ದಿನ ನಮ್ಮ ಊರಲ್ಲಿ  ಹುಲಿಯಪ್ಪನ ಪೂಜೆ ಇರುತ್ತಿತ್ತು ನಾವು ಚಿಕ್ಕವರೆಲ್ಲಾ ಸೇರಿ ಸಾಲುಗಟ್ಟಿ ಕಾಡುದಾರಿಯಿಂದ ಹುಲಿಯಪ್ಪನ ಮೂರ್ತಿ ಇದ್ದಲ್ಲಿಗೆ ಹೋಗುವುದು ಒಂದು ಹರ್ಷ ಹಿಂದಿನ ದಿನ ರಾತ್ರಿ ನಾಳಿನ ಖುಷಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ಅಲ್ಲಿ ಹೋಗಿ ಮಾಡುವ ಮುಖ್ಯ ಕೆಲಸವೆಂದರೆ ದೇವರಿಗೆ ಒಡೆದ ಕಾಯಿಯ ನೀರನ್ನು ಕ್ಯಾನುಗಳಲ್ಲಿ ಹಿಡಿದಿಟ್ಟು ಜನರಿಗೆ ಹಂಚುತ್ತಿದ್ದರು. ಆ ಉರಿಬಿಸಿಲ ಬಯಲಲ್ಲಿ ಕಾಯಿ ನೀರು ಹೀರುವುದಿದೆಯಲ್ಲ ಆಹಾ!! ಅದರ ರುಚಿ ಹುಲಿಯಪ್ಪನ ಎದುರೆ ಬೇರೆಯದು ನಾವು ಮನೆಗೆ ಬಂದು ಕಾಯಿ ನೀರು ಕುಡಿದರೆ ಅದರಲ್ಲಿ ಆ ರುಚಿ ಸಿಗುತ್ತಿರಲಿಲ್ಲ.

ಈಗೆಲ್ಲಾ ಹಾಗಿಲ್ಲ ಕಾಲೇಜು ದೂರದ ಊರು ಮನೆಗೆ ಬಂದ ದಣಿವು ನಿದ್ದೆ ಮನೆಯಲ್ಲೇ ಹಬ್ಬದ ಊಟ ಬೂದೆ ಕಳುವು ಸಿಂಪಲ್ ಎಣ್ಣೆ ಸ್ನಾನ ಅದು ಮನೆಯಲ್ಲೆ ಅಜ್ಜಿ ಮನೆಯ ಮಜ ಈಗಿಲ್ಲಾ.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...