ಹಾಸ್ಟೆಲ್ನಲ್ಲಿ ಸುಮ್ಮನೆ ಕೂತಿದ್ದಾಗ ಗೆಳತಿ ಮಧುರಾ ಮಂಜುನಾಥ ಕಾಮತ್ ಅವರು ಬರೆದ 'ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕತೆ' ಎನ್ನುವ ಪುಸ್ತಕ ಕೈಗಿಟ್ಟು "ಸುಮಾ ಈ ಪುಸ್ತಕ ನಿನಗಾಗಿ, ಓದು ಎಂದಳು". ಪುಸ್ತಕದ ಮುಖಪುಟ ನೋಡುತ್ತಿದ್ದಂತೆ ತಲೆಕೆಳಗಾದೆ. ಆಕರ್ಷಕವಾಗಿತ್ತು. ಹೆಸರು ಓದಿದಾಗ ಇದೆಂತ ವಿಚಿತ್ರ ಹೆಸರಿನ ಪುಸ್ತಕ ಅನಿಸಿತು. ಪರಿವಿಡಿಗೆ ಹೋದಾಗ ಕೆಲವು ಸಣ್ಣಕತೆಗಳ ಗುಚ್ಛ ಇದು ಎನ್ನುವುದು ತಿಳಿದುಬಂತು.
ನಾನು ಸನ್ಯಾಸಿಯಾಗಲು ಹೊರಟಾಗ ಎಂಬ ಪುಸ್ತಕದ ಪ್ರಸ್ತಾಪದೊಂದಿಗೆ ದಿಗಂತನ ಸಿನಿಮಾದ ಹಾಗಿರುವ ಈ ಕತೆಗಳು ನನ್ನನ್ನು ಸೆಳೆಯುತ್ತಾ ಸಾಗಿತು. ನಾನು ಪತ್ರಿಕೋದ್ಯಮ ಓದುತ್ತಿದ್ದೇನೆ ಕತೆ, ಕವಿತೆ, ಲೇಖನ ಮತ್ತು ನುಡಿಚಿತ್ರ ಬರೆಯಬೇಕು, ಅವು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಆಸೆ ಹೊಂದಿದ್ದವನು ಎಂದು ಬರೆದಿತ್ತು. ಈ ಸಾಲುಗಳನ್ನು ಓದಿದ ಮೇಲಂತು ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನನ್ನ ಆಸೆಗಳಿಗೆ ಸರಿಹೊಂದುವ ಮನೋಭಾವನೆಯನ್ನೇ ಈ ಪುಸ್ತಕವೂ ಹೊಂದಿದೆ ಎಂಬ ಹುಮ್ಮಸ್ಸಿನಲ್ಲಿ ಓದಲು ಶುರುವಿಟ್ಟೆ. ಮುನ್ನುಡಿಯೂ ಅವರದೇ ಇತ್ತು.
ಪರಿವಿಡಿ ತೆರೆದರೆ ಹದಿನೆಂಟು ಮೆಟ್ಟಿಲುಗಳು ಎಂದು ಹದಿನೆಂಟು ಹೆಸರು ಕಂಡಿತು. ಹಿಮಚಂದ್ರಿಕೆ, ಕಾಳಿಂಗ ಮರ್ದನ ಮತ್ತು ಹಲ್ನುಡಿ ವಿಶೇಷ ಎನಿಸಿತು. ಬಸ್ಸಿನ ಕಂಡಕ್ಟರ್ ಮತ್ತು ಪಾಠಮಾಡುವ ಟೀಚರ್ ಹಾಗೂ ರೈಟರ್ ಗಳಿಗೆ ಅಷ್ಟು ಬೇಗ ಕಲ್ಯಾಣ ಭಾಗ್ಯವಿಲ್ಲ ಎಂಬ ಮಾತೊಂದು ಉಲ್ಲೇಖ ಮಾಡಿದ್ದನ್ನು ಕಂಡು ನನ್ನ ಸ್ಥಿತಿ ಏನಿರಬಹುದು ಎಂದು ಮನದಲ್ಲೇ ನಕ್ಕೆ. ಒಳ ನುಗ್ಗುತ್ತಿದ್ದಂತೆ ಸಾಲು ಸಾಲು ಪ್ರೇಮ ಪುರಾಣ. ಅದೆಷ್ಟು ಹುಡುಗಿಯರು ಜೀವನದಲ್ಲಿ ಇಣುಕಿ ಹೋದರೋ, ಅಂಗನವಾಡಿ ಟೀಚರ್ ಕತೆಯನ್ನು ಇದೆ ಸಾಲಿನಲ್ಲಿ ಸೇರಿಸಿದ್ದು ಚೂರು ಗೊಂದಲ ಎನಿಸಿತು.
ಬಸ್ಸಿನಲ್ಲಿ ತೋಳಮೇಲೆ ಒರಗಿದ ಕುವರಿ, ರಾತ್ರಿ ಹನ್ನೆರಡು ದಾಟಿದರೂ ಮುಗಿಯದ ಮಾತು. ಗೋವಾಕ್ಕೆ ಹೊರಟು ಕೇದಾರನಾಥ ತಲುಪಿದ ಕತೆ. ಹನಿಮೂನಿಗೆ ಬಂದಿದ್ದ ಶಿಮ್ಲಾ ಜೋಡಿಗಳ ಕತೆ, ತುಟಿಗುರುತು ಮೂಡಿದ ಪೇಪರ್ ಕಪ್ ಟೀ ಕತೆ, ಸಿಗಂದೂರಿನ ಅಪ್ಪೆಮಿಡಿಯ ಉಪ್ಪಿನಕಾಯಂತೆ ರುಚಿಯಾದ ಕತೆ, ಮೂರು ಮಚ್ಚೆಯ ಹುಡುಗಿ ಹುಚ್ಚು ಹಿಡಿಸಿದ್ದು, ಕಡಲ ತೀರದ ಚಿಪ್ಪು, ನವಿಲು ಗರಿ ಕೊನೆಗೆ ಕೋಳಿ ಪುಕ್ಕವನ್ನು ಬಿಡದೆ ಒಪ್ಪಿಸಿದ್ದು, ಕಾಳಿಂಗ ಎಂಬ ಕರಿ ಬೈಕಿನ ಕತೆ, ಒಂದಕ್ಕಿಂತ ಒಂದು ಚಂದವಿತ್ತು. ಆದರೂ ಮೊದಲ ಮುತ್ತು ಎಂಬ ಕತೆಯ ಕುರಿತು ಆಲೋಚಿಸುವಂತಾಯಿತು. ಹತ್ತನೆ ಕ್ಲಾಸಿನ ಕ್ರಶ್ ಒಬ್ಬಳ ಕುರಿತು ಬರೆದು ಅವರಲ್ಲೇ ಈ ಪುಸ್ತಕದ ಮುನ್ನುಡಿ ಬರೆಯುವಂತೆ ಕೇಳಿದೆ ಎಂದಾಕ್ಷಣ. ಒಮ್ಮೆಲೆ ಕೊನೆ ಪುಟದಿಂದ ಮೊದಲ ಪುಟಕ್ಕೆ ಅವಳ ಹೆಸರು ತಿಳಿಯಲು ಪುಟ ತಿರುವಿಹಾಕದೆ ಇರಲು ಸಾಧ್ಯವಿಲ್ಲ. ಎಲ್ಲಾ ಓದುಗರು ಒಮ್ಮೆ ಪುಟತಿರುವುತ್ತಾರೆ. ಆದರೆ ಮುನ್ನುಡಿಯ ಬದಲು ಹಲ್ನುಡಿ ದೊರೆಯುವ ಮೋಜಿದೆ ನೀವು ಈ ಪುಸ್ತಕವನ್ನು ಒಂದೇ ದಿನದಲ್ಲಿ ಓದಬಲ್ಲಿರಿ.
ಸುಮಾ.ಕಂಚೀಪಾಲ್
ನಾನು ಸನ್ಯಾಸಿಯಾಗಲು ಹೊರಟಾಗ ಎಂಬ ಪುಸ್ತಕದ ಪ್ರಸ್ತಾಪದೊಂದಿಗೆ ದಿಗಂತನ ಸಿನಿಮಾದ ಹಾಗಿರುವ ಈ ಕತೆಗಳು ನನ್ನನ್ನು ಸೆಳೆಯುತ್ತಾ ಸಾಗಿತು. ನಾನು ಪತ್ರಿಕೋದ್ಯಮ ಓದುತ್ತಿದ್ದೇನೆ ಕತೆ, ಕವಿತೆ, ಲೇಖನ ಮತ್ತು ನುಡಿಚಿತ್ರ ಬರೆಯಬೇಕು, ಅವು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಆಸೆ ಹೊಂದಿದ್ದವನು ಎಂದು ಬರೆದಿತ್ತು. ಈ ಸಾಲುಗಳನ್ನು ಓದಿದ ಮೇಲಂತು ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನನ್ನ ಆಸೆಗಳಿಗೆ ಸರಿಹೊಂದುವ ಮನೋಭಾವನೆಯನ್ನೇ ಈ ಪುಸ್ತಕವೂ ಹೊಂದಿದೆ ಎಂಬ ಹುಮ್ಮಸ್ಸಿನಲ್ಲಿ ಓದಲು ಶುರುವಿಟ್ಟೆ. ಮುನ್ನುಡಿಯೂ ಅವರದೇ ಇತ್ತು.
ಪರಿವಿಡಿ ತೆರೆದರೆ ಹದಿನೆಂಟು ಮೆಟ್ಟಿಲುಗಳು ಎಂದು ಹದಿನೆಂಟು ಹೆಸರು ಕಂಡಿತು. ಹಿಮಚಂದ್ರಿಕೆ, ಕಾಳಿಂಗ ಮರ್ದನ ಮತ್ತು ಹಲ್ನುಡಿ ವಿಶೇಷ ಎನಿಸಿತು. ಬಸ್ಸಿನ ಕಂಡಕ್ಟರ್ ಮತ್ತು ಪಾಠಮಾಡುವ ಟೀಚರ್ ಹಾಗೂ ರೈಟರ್ ಗಳಿಗೆ ಅಷ್ಟು ಬೇಗ ಕಲ್ಯಾಣ ಭಾಗ್ಯವಿಲ್ಲ ಎಂಬ ಮಾತೊಂದು ಉಲ್ಲೇಖ ಮಾಡಿದ್ದನ್ನು ಕಂಡು ನನ್ನ ಸ್ಥಿತಿ ಏನಿರಬಹುದು ಎಂದು ಮನದಲ್ಲೇ ನಕ್ಕೆ. ಒಳ ನುಗ್ಗುತ್ತಿದ್ದಂತೆ ಸಾಲು ಸಾಲು ಪ್ರೇಮ ಪುರಾಣ. ಅದೆಷ್ಟು ಹುಡುಗಿಯರು ಜೀವನದಲ್ಲಿ ಇಣುಕಿ ಹೋದರೋ, ಅಂಗನವಾಡಿ ಟೀಚರ್ ಕತೆಯನ್ನು ಇದೆ ಸಾಲಿನಲ್ಲಿ ಸೇರಿಸಿದ್ದು ಚೂರು ಗೊಂದಲ ಎನಿಸಿತು.
ಬಸ್ಸಿನಲ್ಲಿ ತೋಳಮೇಲೆ ಒರಗಿದ ಕುವರಿ, ರಾತ್ರಿ ಹನ್ನೆರಡು ದಾಟಿದರೂ ಮುಗಿಯದ ಮಾತು. ಗೋವಾಕ್ಕೆ ಹೊರಟು ಕೇದಾರನಾಥ ತಲುಪಿದ ಕತೆ. ಹನಿಮೂನಿಗೆ ಬಂದಿದ್ದ ಶಿಮ್ಲಾ ಜೋಡಿಗಳ ಕತೆ, ತುಟಿಗುರುತು ಮೂಡಿದ ಪೇಪರ್ ಕಪ್ ಟೀ ಕತೆ, ಸಿಗಂದೂರಿನ ಅಪ್ಪೆಮಿಡಿಯ ಉಪ್ಪಿನಕಾಯಂತೆ ರುಚಿಯಾದ ಕತೆ, ಮೂರು ಮಚ್ಚೆಯ ಹುಡುಗಿ ಹುಚ್ಚು ಹಿಡಿಸಿದ್ದು, ಕಡಲ ತೀರದ ಚಿಪ್ಪು, ನವಿಲು ಗರಿ ಕೊನೆಗೆ ಕೋಳಿ ಪುಕ್ಕವನ್ನು ಬಿಡದೆ ಒಪ್ಪಿಸಿದ್ದು, ಕಾಳಿಂಗ ಎಂಬ ಕರಿ ಬೈಕಿನ ಕತೆ, ಒಂದಕ್ಕಿಂತ ಒಂದು ಚಂದವಿತ್ತು. ಆದರೂ ಮೊದಲ ಮುತ್ತು ಎಂಬ ಕತೆಯ ಕುರಿತು ಆಲೋಚಿಸುವಂತಾಯಿತು. ಹತ್ತನೆ ಕ್ಲಾಸಿನ ಕ್ರಶ್ ಒಬ್ಬಳ ಕುರಿತು ಬರೆದು ಅವರಲ್ಲೇ ಈ ಪುಸ್ತಕದ ಮುನ್ನುಡಿ ಬರೆಯುವಂತೆ ಕೇಳಿದೆ ಎಂದಾಕ್ಷಣ. ಒಮ್ಮೆಲೆ ಕೊನೆ ಪುಟದಿಂದ ಮೊದಲ ಪುಟಕ್ಕೆ ಅವಳ ಹೆಸರು ತಿಳಿಯಲು ಪುಟ ತಿರುವಿಹಾಕದೆ ಇರಲು ಸಾಧ್ಯವಿಲ್ಲ. ಎಲ್ಲಾ ಓದುಗರು ಒಮ್ಮೆ ಪುಟತಿರುವುತ್ತಾರೆ. ಆದರೆ ಮುನ್ನುಡಿಯ ಬದಲು ಹಲ್ನುಡಿ ದೊರೆಯುವ ಮೋಜಿದೆ ನೀವು ಈ ಪುಸ್ತಕವನ್ನು ಒಂದೇ ದಿನದಲ್ಲಿ ಓದಬಲ್ಲಿರಿ.
ಸುಮಾ.ಕಂಚೀಪಾಲ್
Comments
Post a Comment