Skip to main content

ಚೌಕಿಯ ಹೊರಗಿನ ಪ್ರಸಂಗ

ಪ್ರಸಂಗದ ಹೆಸರು ಮತ್ತು ಅದರ ಪಾತ್ರದ ವಿವರಣೆ ಹೊರಗೆ ನಡೆಯುತ್ತಿದ್ದರೆ, ಒಳಗೆ ಗಣಪತಿ ಪೂಜೆಯ ವಾದನ ರಂಗಸ್ಥಳದ ಎದುರು ಕೂತವರ ಕಿವಿ ನೆಟ್ಟಗಾಗಿಸುತ್ತದೆ. ಹಿರಿಯರ ಬಾಯಲ್ಲಿದ್ದ ಕವಳ ನುಗ್ಗಾಗಿ ರಸ ಉಗಿದು ಒಂದು ಹೊಸ ಕವಳದ ಪಾನು ತಯಾರಾಗುತ್ತದೆ. ಒಳಗಿನ ಚಂಡೆ ಶಬ್ದಕ್ಕೆ ಕೂರ್ಚೆಯಿಂದ ಕೆಳಬಿಟ್ಟ ಕಾಲುಗಳು ತಂತಾನೆ ಕುಣಿಯಲು ಆರಂಭಿಸುತ್ತದೆ.

ನುಡಿಜೇನು.‌ 11/ 11/21

ಕೈಯಲ್ಲಿ ಪಾಪ್ ಕಾರ್ನ ಹಿಡಿದ, ಬೋರಾಗಿ ಕೂತ ಮಕ್ಕಳು ನಿಧಾನಕ್ಕೆ ಪ್ಲಾಸ್ಟಿಕ್ ಕೂರ್ಚೆಯ ಮೇಲೆ ಎದ್ದು ನಿಂತು ವೇದಿಕೆಯಲ್ಲಿ ಏನಾಗುತ್ತಿದೆ ಎಂದು ಬೆರಗುಗಣ್ಣಿನಿಂದ ಕಾಯುತ್ತಾರೆ. ಪೊಗಡಿ ಸುತ್ತಿದ ಹಿಮ್ಮೇಳ ವಾದಕರು, ಮೇಜು ಕೂರ್ಚಿತಂದಿಡುವ ಪರಿಚಾರಕರು‌, ಲೈಟ್ ಮ್ಯಾನ್ ಇವರೆಲ್ಲರ ಓಡಾಟ ಮೊದಲು ವೇದಿಕೆಯಲ್ಲಿ ಗೋಚರವಾಗುತ್ತದೆ. ಚಂಡೆಯ ಒಂದೇ ಒಂದು ಬಡಿತಕ್ಕೆ ಸ್ಪೀಕರ್ ಪಕ್ಕ ಕೂತ ಕೆಲವರು ಕೊಂಚ ದೂರ ಸರಿಯುತ್ತಾರೆ.

ವೇದಿಕೆಯ ತುಂಬೆಲ್ಲ ಹಾಸಿಕೊಂಡಿದ್ದ ಕರೆಂಟ್ ವಯರ್ ಗಳು ಕುಣಿಯುವವನ ಕಾಲಿಗೆಡವಬಾರದು ಎಂಬ ಕಾಳಜಿಯಿಂದ ಕೆಳ ಕೂತ ಕೆಲವರು ಸೂಚನೆಕೊಟ್ಟು ಅದನ್ನು ಪಕ್ಕಕ್ಕೆ ಎಳೆಯುತ್ತಾರೆ. ಹಿಮ್ಮೇಳದವರ ಹಿಂದಿನ ನೀಲಿ ಪರದೆ ನಿಧಾನಕ್ಕೆ ಅಲುಗಾಡಲು ಪ್ರಾರಂಭವಾಗುತ್ತದೆ. ಆಗ ಕೂತವರ ಕಣ್ಣುಗಳು ಪರದೆಯಂಚಿನ ತುದಿಗೆ ಹೋಗುತ್ತದೆ. ಯಾಕೆಂದರೆ ಪರದೆಹಿಂದಿನ ಕಲಾವಿದನ ಬಣ್ಣದ ವೇಷದ ಸೋಗು ಅವರನ್ನ ಕಾಡುತ್ತಿರುತ್ತದೆ. ಗೆಜ್ಜೆಯ ಶಬ್ಧ ಮೈ ಜುಮುಗುಡಿಸುತ್ತದೆ‌.

ಅರರೆ ನಿನ್ನಯ ಮಹಿಮೆಯನು ಪೊಗಳಲಳವಲ್ಲssss..
ಧರಣಿಯನು ಪೊತ್ತಿರ್ದ ದೇssವ ಜಗದೀಶ
ಧರೆಯೊಳು ವಿಷೇಶ
ಎಂಬ ಪದ ಕೇಳುತ್ತದೆ. ,


ಈ ಪದ್ಯ ಮುಗಿಯುತ್ತಿದ್ದಂತೆ ಪಾತ್ರವೊಂದು ಹೊರಬಿದ್ದು ಹೆಜ್ಜೆ ಹಾಕಿ ಒಂದೆರಡು ಅರ್ಥ ಉಸುರುತ್ತಿದ್ದಂತೆಯೇ. ಇತ್ತ ಮಗುವೊಂದು ಹಠ ಹಿಡಿದು ಅಳತೊಡಗುತ್ತದೆ. ಅಮ್ಮ ಮಗುವನ್ನು ಸಂತೈಸಲಾಗದೆ ತನ್ನ ಗಂಡನ ಕೈಗೆ ಮಗುವನ್ನಿತ್ತು ಮುಖ ತಿರುವುತ್ತಾಳೆ. ಅವನು ಮಗುವನ್ನು ಸಲ್ಪ‌ ದೂರ ಕೊಂಡೊಗಿ ಸಮಾಧಾನ ಮಾಡಿ ತನ್ನ ಹೆಗಲ ಮೇಲೆ ವರಗಿಸಿ ತಂದು ಹೆಂಡತಿಯ ಮಡಿಲಲ್ಲಿ ಮಲಗಿಸುತ್ತಾನೆ. ತನ್ನ ಕೈಚೀಲದಲ್ಲಿದ್ದ ಪುಟ್ಟ ವಸ್ತ್ರ ಒಂದನ್ನು ತೆಗೆದು ಪುಟ್ಟ ಮಗುವಿನ ದೇಹ ಮುಚ್ಚುತ್ತಾಳೆ.

ಇತ್ತ ವೇದಿಕೆಯಲ್ಲಿ ಪ್ರಸಂಗ ಮುಂದುವರೆಯುತ್ತಿರುತ್ತದೆ.‌ ಇನ್ನೇನು ಕೂತ ಮಕ್ಕಳಿಗೆಲ್ಲ ಬೋರಾಗುತ್ತಿದೆ ಎನ್ನುವ ಹೊತ್ತಿಗೆ ಹಾಸ್ಯ ಪಾತ್ರದವರ ಆಗಮನವಾಗುತ್ತದೆ‌.  ಮಾಣಿಗಳು ಮಾಡುವ ಅತಿ ಆಧುನಿಕ ಯಕ್ಷಗಾನ ಹಾಸ್ಯಕ್ಕೆ ಕೂತವರೆಲ್ಲ ನನಗೆಗಡಲಲ್ಲಿ ತೇಲುತ್ತಾರೆ. ಇಷ್ಟಾಗಿ ಪ್ರಸಂಗದ ಮಧ್ಯ ಕರೆಂಟ್ ಹೋದರೆ ಶೀಟಿ, ಚಪ್ಪಾಳೆ, ಬ್ಯಾಟರಿ ಬೆಳಕು ಅತ್ತ ಹೆಣ್ಣು ಪಾತ್ರ ಹಾಕಿದ ಗಂಡು ಅದೇ ಸಮಯಕ್ಕೆ ಸೀರೆ ಎತ್ತಿ ಕೂರುತ್ತಾನೆ. ಆಗಲೇ ಹೊರಹೋಗಿ ಸುಟ್ಟ ಜೋಳ ಕೈಯಲ್ಲಿ ಹಿಡಿದುಬರಲು ಒಳ್ಳೆಯ ವೇಳೆ. ಪ್ರಸಂಗ ಮುಗಿಯುವ ಹೊತ್ತಿಗೆ ಅರ್ಧ ಬೆಳಗಾಗುತ್ತದೆ.

ರಂಗ ನಾಯಕ ರಾಜೀವ ಲೋಚನ
ರಮಣನೆ ಬೆಳಗಾಯಿತ್ ಏಳೆನ್ನುತ


ಎಂಬ ಪದ್ಯದಿಂದ ಪ್ರಸಂಗ ಕೊನೆಯಾಗುತ್ತದೆ.‌


ಸುಮಾ.ಕಂಚೀಪಾಲ್

Comments

  1. ಬರಹ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  2. ಬರವಣಿಗೆ ವಾಸ್ತವಿಕತೆಯಿಂದ ಕೂಡಿದೆ.ರಂಗಸ್ಥಲದ ಹೊರ ಜಗತ್ತು ಎನೆಲ್ಲ ಕೂತೂಹಲ ದಿಂದ ಕೂಡಿದೆ..ಓದುತ್ತಿದ್ದಂತೆ ತುಟಿಗಳಲ್ಲಿ ಮಂದಹಾಸ ಮೂಡುತ್ತದೆ......






    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...