Skip to main content

ಆರಂಭ

ಪ್ರಿಯ ಓದುಗರೆ,

ಐದು ವರ್ಷಗಳಿಂದ ಅಣುಗಾತ್ರದ ಹೆಜ್ಜೆ ಇಟ್ಟು ಬರೆಯುತ್ತಾ ಬಂದವಳು ನಾನು.
ನನ್ನ ಕಿರುಗತೆ ಮತ್ತು ಕೆಲವು ಕವನಗಳನ್ನು ಓದಿ ಪ್ರೋತ್ಸಾಹಿಸಿದವರು ನೀವು. 

ಹೀಗೆ ನನ್ನ ಪ್ರಕಟಿತ ಬರಹಗಳನ್ನು ಓದಿ ಹುರಿದುಂಬಿಸಿದ ನಿಮ್ನೆಲ್ಲರ ಪ್ರೀತಿಯಿಂದ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನ ಕೆಲವು ಪ್ರಕಟಿತ ಬರಹಗಳು ಇಲ್ಲಿ ಮರುಕಳಿಸಬಹುದು. ಅದನ್ನೂ ನೀವು ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಿಲ್ಲಿದೆ. 
ಬ್ಲಾಗ್ ಆರಂಭಿಸುವ ವಿಚಾರ ನನ್ನಲ್ಲಿದ್ದರೂ ಅದಕ್ಕೆ ರೂಪ ಕೊಡುವ ಕೆಲಸ ನನ್ನಿಂದಾಗಿರಲಿಲ್ಲ. ಯಲ್ಲಾಪುರ, ಶಿರಸಿ,ದಕ್ಷಿಣ ಕನ್ನಡ,  ನಾನಾ ಭಾಗದ ಓದುಗರು ಮತ್ತು ಬರಹಗಾರು ನನ್ನೊಟ್ಟಿಗಿದ್ದು ಅವರ ಕೆಲವು ನುಡಿಗಳು ನನಗೆ ಸ್ಪೂರ್ತಿ ತಂದಿದೆ. ನನ್ನೆಲ್ಲಾ ಸ್ನೇಹಿತರು ಬರಹಗಳನ್ನು ಓದಿ ಹುರಿದುಂಬಿಸಿದಕ್ಕಾಗಿ ನನ್ನ ಲೇಖನಿಗಳು ಹರ್ಷಪಡುತ್ತಿವೆ.
ವೈದ್ಯಕೀಯ ವೃತ್ತಿಯಲ್ಲಿದ್ದ ನನ್ನ ಅಕ್ಕ ಪುಟ್ಟ ಮಗುವನ್ನು ಪೋಷಿಸುತ್ತಾ. ನನ್ನೊಟ್ಟಿಗೆ ಈ ವಿಷಯ ಪ್ರಸ್ತಾಪಮಾಡಿದಾಗ. ಬರೆಯಲು ಸಮಯವಿಲ್ಲ ಎಂದುತ್ತರಿಸಿದ ನನಗೆ. ಅವಳ ದಿನದ ಕಾಯಕಗಳೇ ಸ್ಪೂರ್ತಿ. ಒಬ್ಬ ತಾಯಿಯಾಗಿ, ಮಡದಿಯಾಗಿ, ವೈದ್ಯೆಯಾಗಿ, ಕೆಲವೆಡೆ ಇನ್ನೂ ಕಲಿಕೆಯಲ್ಲಿ ನಿರತಳಾಗಿ, ಗೃಹಿಣಿಯೂ ಆಗಿ ಅವಳ ಸಮಯ ಪರಿಪೂರ್ಣ. ಕೇವಲ ವಿದ್ಯಾರ್ಥಿಯಾದ ನನಗೆ ಸಮಯವಿಲ್ಲ ಎಂಬ ಮಾತು.......?!

ಇನ್ನು ನನ್ನ ಪ್ರತಿಯೊಂದು ಬರಹಳನ್ನು ವೈಯಕ್ತಿಕವಾಗಿ ಓದಿ ವಿಮರ್ಶೆಮಾಡಿ ನನ್ನ ಕತೆಗಳಷ್ಟು ಉದ್ದದ ಪ್ರತ್ಯುತ್ತರ ನೀಡುತ್ತಿದ್ದ ಸುಜಾತಾ ಭಟ್ ಬಾಸಲ್ ಇವರನ್ನು ಸ್ಮರಿಸುತ್ತಾ, ಹಾಗೆ ಅವರೊಮ್ಮೆ ಒಂದು ಪೋಸ್ಟ ಕಳಿಸಿದ್ದರು ವಿದೇಶಿಗರೊಬ್ಬರ  ಬ್ಲಾಗ್ ಆರಂಭಿಸಿ ಮೂರ್ನಾಲ್ಕು ವರ್ಷಗಳೇ ಕಳೆದರು ಓದುಗರಿಲ್ಲ ಎಂದು ಅವರಿಗನಿಸಿ ಅವರು ಬರೆಯುವುದನ್ನು ನಿಲ್ಲಿಸಿ ಬಿಡುತ್ತಾರೆ. ಆಗ ಜನರು ಅವರ ಬರಹಗಳಿಗಾಗಿ ಕಾದು ಅವರಿಗೆ ಸಾವಿರಾರು ಸಂದೇಶಗಳು ತಲುಪಿದಾಗ ನಿಜವಾದ ಓದುಗರ ಸಂಖ್ಯೆ ಅರಿವಾಗುತ್ತದೆ. ಎನ್ನುವ ವಿಚಾರವೂ ನನಗೆ ಆಗಾಗ ನೆನಪಾಗುತ್ತಿತ್ತು. ಹಾಗೆ ಜನಮನ್ನಣೆ ದೊರಕದೇ ಹೋದರು ಒಂದಷ್ಟು ಆಸಕ್ತ ಮನಸ್ಸುಗಳು ನನ್ನೊಟ್ಟಿಗಿರುತ್ತಾರೆ ಎಂದು ನಂಬಿ ಮತ್ತು ಬರಹಗಳ ಸದಾ ಉಳಿವಿನ ಸಾಕ್ಷಿ ದಾಖಲೆ ಯಾಗಿಡಬಹುದು ಎಂಬ ಆಶಯದೊಂದಿಗೆ ಆರಂಭಿಸುತ್ತಿದ್ದೇನೆ.

ತಪ್ಪು ತಿದ್ದುಪಡಿಗಳಿಗೆ ಓಗುಡುತ್ತಾ. ಒಪ್ಪಿಗೆ ಮೆಚ್ಚುಗೆಗಳನ್ನು ಸ್ವೀಕರಿಸುತ್ತಾ. ಮುನ್ನುಡಿಯ ಅಲ್ಪವಿರಾಮದೊಟ್ಟಿಗೆ...
ಪೂರ್ಣವಿರಾಮದವರೆಗೂ ನಿಮ್ಮ ಸಹಕಾರ ಬಯಸುತ್ತೇನೆ.


                      ಇಂತಿ, 
                     ನಿಮ್ಮ ಸುಮಾ.ಕಂಚೀಪಾಲ್

ಪ್ರತಿಕ್ರಿಯೆಗಾಗಿ
sumagaonkar22@gmail.com

Comments

  1. ನಿಮ್ಮ ಬರಹವು ಉತ್ತಮವಾಗಿ ಮೂಡಿಬಂದಿದೆ ಮುಂದೆಯು ಬರುತ್ತದೆ ಎಂಬ ಭರವಸೆ ಇದೆ. ಒಳ್ಳೆಯದಾಗಲಿ.All the best suma👍

    ReplyDelete
  2. All the bestooooo Suma.........

    ReplyDelete
  3. ತುಂಬಾ ಚೆನ್ನಾಗಿದೆ ಹೀಗೆಯೇ ಸುದೀರ್ಘವಾಗಿ ಮುಂದುವರಿಸಿ

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...