Skip to main content

ಆರಂಭ

ಪ್ರಿಯ ಓದುಗರೆ,

ಐದು ವರ್ಷಗಳಿಂದ ಅಣುಗಾತ್ರದ ಹೆಜ್ಜೆ ಇಟ್ಟು ಬರೆಯುತ್ತಾ ಬಂದವಳು ನಾನು.
ನನ್ನ ಕಿರುಗತೆ ಮತ್ತು ಕೆಲವು ಕವನಗಳನ್ನು ಓದಿ ಪ್ರೋತ್ಸಾಹಿಸಿದವರು ನೀವು. 

ಹೀಗೆ ನನ್ನ ಪ್ರಕಟಿತ ಬರಹಗಳನ್ನು ಓದಿ ಹುರಿದುಂಬಿಸಿದ ನಿಮ್ನೆಲ್ಲರ ಪ್ರೀತಿಯಿಂದ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನ ಕೆಲವು ಪ್ರಕಟಿತ ಬರಹಗಳು ಇಲ್ಲಿ ಮರುಕಳಿಸಬಹುದು. ಅದನ್ನೂ ನೀವು ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಿಲ್ಲಿದೆ. 
ಬ್ಲಾಗ್ ಆರಂಭಿಸುವ ವಿಚಾರ ನನ್ನಲ್ಲಿದ್ದರೂ ಅದಕ್ಕೆ ರೂಪ ಕೊಡುವ ಕೆಲಸ ನನ್ನಿಂದಾಗಿರಲಿಲ್ಲ. ಯಲ್ಲಾಪುರ, ಶಿರಸಿ,ದಕ್ಷಿಣ ಕನ್ನಡ,  ನಾನಾ ಭಾಗದ ಓದುಗರು ಮತ್ತು ಬರಹಗಾರು ನನ್ನೊಟ್ಟಿಗಿದ್ದು ಅವರ ಕೆಲವು ನುಡಿಗಳು ನನಗೆ ಸ್ಪೂರ್ತಿ ತಂದಿದೆ. ನನ್ನೆಲ್ಲಾ ಸ್ನೇಹಿತರು ಬರಹಗಳನ್ನು ಓದಿ ಹುರಿದುಂಬಿಸಿದಕ್ಕಾಗಿ ನನ್ನ ಲೇಖನಿಗಳು ಹರ್ಷಪಡುತ್ತಿವೆ.
ವೈದ್ಯಕೀಯ ವೃತ್ತಿಯಲ್ಲಿದ್ದ ನನ್ನ ಅಕ್ಕ ಪುಟ್ಟ ಮಗುವನ್ನು ಪೋಷಿಸುತ್ತಾ. ನನ್ನೊಟ್ಟಿಗೆ ಈ ವಿಷಯ ಪ್ರಸ್ತಾಪಮಾಡಿದಾಗ. ಬರೆಯಲು ಸಮಯವಿಲ್ಲ ಎಂದುತ್ತರಿಸಿದ ನನಗೆ. ಅವಳ ದಿನದ ಕಾಯಕಗಳೇ ಸ್ಪೂರ್ತಿ. ಒಬ್ಬ ತಾಯಿಯಾಗಿ, ಮಡದಿಯಾಗಿ, ವೈದ್ಯೆಯಾಗಿ, ಕೆಲವೆಡೆ ಇನ್ನೂ ಕಲಿಕೆಯಲ್ಲಿ ನಿರತಳಾಗಿ, ಗೃಹಿಣಿಯೂ ಆಗಿ ಅವಳ ಸಮಯ ಪರಿಪೂರ್ಣ. ಕೇವಲ ವಿದ್ಯಾರ್ಥಿಯಾದ ನನಗೆ ಸಮಯವಿಲ್ಲ ಎಂಬ ಮಾತು.......?!

ಇನ್ನು ನನ್ನ ಪ್ರತಿಯೊಂದು ಬರಹಳನ್ನು ವೈಯಕ್ತಿಕವಾಗಿ ಓದಿ ವಿಮರ್ಶೆಮಾಡಿ ನನ್ನ ಕತೆಗಳಷ್ಟು ಉದ್ದದ ಪ್ರತ್ಯುತ್ತರ ನೀಡುತ್ತಿದ್ದ ಸುಜಾತಾ ಭಟ್ ಬಾಸಲ್ ಇವರನ್ನು ಸ್ಮರಿಸುತ್ತಾ, ಹಾಗೆ ಅವರೊಮ್ಮೆ ಒಂದು ಪೋಸ್ಟ ಕಳಿಸಿದ್ದರು ವಿದೇಶಿಗರೊಬ್ಬರ  ಬ್ಲಾಗ್ ಆರಂಭಿಸಿ ಮೂರ್ನಾಲ್ಕು ವರ್ಷಗಳೇ ಕಳೆದರು ಓದುಗರಿಲ್ಲ ಎಂದು ಅವರಿಗನಿಸಿ ಅವರು ಬರೆಯುವುದನ್ನು ನಿಲ್ಲಿಸಿ ಬಿಡುತ್ತಾರೆ. ಆಗ ಜನರು ಅವರ ಬರಹಗಳಿಗಾಗಿ ಕಾದು ಅವರಿಗೆ ಸಾವಿರಾರು ಸಂದೇಶಗಳು ತಲುಪಿದಾಗ ನಿಜವಾದ ಓದುಗರ ಸಂಖ್ಯೆ ಅರಿವಾಗುತ್ತದೆ. ಎನ್ನುವ ವಿಚಾರವೂ ನನಗೆ ಆಗಾಗ ನೆನಪಾಗುತ್ತಿತ್ತು. ಹಾಗೆ ಜನಮನ್ನಣೆ ದೊರಕದೇ ಹೋದರು ಒಂದಷ್ಟು ಆಸಕ್ತ ಮನಸ್ಸುಗಳು ನನ್ನೊಟ್ಟಿಗಿರುತ್ತಾರೆ ಎಂದು ನಂಬಿ ಮತ್ತು ಬರಹಗಳ ಸದಾ ಉಳಿವಿನ ಸಾಕ್ಷಿ ದಾಖಲೆ ಯಾಗಿಡಬಹುದು ಎಂಬ ಆಶಯದೊಂದಿಗೆ ಆರಂಭಿಸುತ್ತಿದ್ದೇನೆ.

ತಪ್ಪು ತಿದ್ದುಪಡಿಗಳಿಗೆ ಓಗುಡುತ್ತಾ. ಒಪ್ಪಿಗೆ ಮೆಚ್ಚುಗೆಗಳನ್ನು ಸ್ವೀಕರಿಸುತ್ತಾ. ಮುನ್ನುಡಿಯ ಅಲ್ಪವಿರಾಮದೊಟ್ಟಿಗೆ...
ಪೂರ್ಣವಿರಾಮದವರೆಗೂ ನಿಮ್ಮ ಸಹಕಾರ ಬಯಸುತ್ತೇನೆ.


                      ಇಂತಿ, 
                     ನಿಮ್ಮ ಸುಮಾ.ಕಂಚೀಪಾಲ್

ಪ್ರತಿಕ್ರಿಯೆಗಾಗಿ
sumagaonkar22@gmail.com

Comments

  1. ನಿಮ್ಮ ಬರಹವು ಉತ್ತಮವಾಗಿ ಮೂಡಿಬಂದಿದೆ ಮುಂದೆಯು ಬರುತ್ತದೆ ಎಂಬ ಭರವಸೆ ಇದೆ. ಒಳ್ಳೆಯದಾಗಲಿ.All the best suma👍

    ReplyDelete
  2. All the bestooooo Suma.........

    ReplyDelete
  3. ತುಂಬಾ ಚೆನ್ನಾಗಿದೆ ಹೀಗೆಯೇ ಸುದೀರ್ಘವಾಗಿ ಮುಂದುವರಿಸಿ

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...