ಬರ್ರಪ್ಪಾ ಎಲ್ರೂ ಡಾನ್ಸ ಮಾಡಿ.
ಒಂದಾದ ಮೇಲೊಂದು ಮಾಡೋಣ.
ಅಯ್ಯೋ ಗಲಾಟೆ ಮಾಡ್ಬೇಡಿ
ಎಂದು ಒಂದಿಬ್ರು ಕೂಗಿದರೆ ಮತ್ತೊಂದಷ್ಟು ಜನ ಗುಂಪುಗುಂಪಲ್ಲಿ ಪ್ರಾಕ್ಟೀಸ್ ನಿರತರಾಗಿರ್ತಾರೆ. ಅದರದೇ ಚರ್ಚೆ ಅದರದ್ದೇ ಗಲಾಟೆ ಒಟ್ಟಿನಲ್ಲಿ ಎಲ್ಲಾ ಕಪ್ಪೆಗಳನ್ನು ಒಂದೇ ಕೊಳಗದಲ್ಲಿ ಕುರಿಸೋಕೆ ಸಾಧ್ಯಾನೆ ಆಗ್ತಿರಲಿಲ್ಲ. ಆದರು ಕದನಗಳ ನಂತರ ಒಂದು ಒಗ್ಗಟ್ಟು ಬಂತು ನಮ್ಮ ಕ್ಲಾಸಿನ ಜನಕ್ಕೆ.
ಹುಡುಗರಿಗೆಲ್ಲ ಕುಣಿತದ ಉಮೇದಿ ಇದೆ ಆದ್ರೆ ಅವರು ಹೇಳಿದ ಹಾಗೆ ಅವರ ಕೈ ಕಾಲು ಆಡೋಲ್ಲ ಅನ್ನೋದೆ ಅವರ ಸಮಸ್ಯೆ. ಕೊನೆಗೆ ಕೈ ಕಾಲು ಆಡಿದ ತರವೇ ಅವರು ಕೇಳಿಕೊಂಡು ತೊಂಡೆಕಾಯಿ ಬೆಂಡೆಕಾಯಿ ನಿತ್ಯ ಹಸಿರಾದ ಮಕ್ಕಳ ಹಾಡಿಗೆ ಸ್ಟೆಪ್ ಹಾಕೇ ಬಿಟ್ರು.
ಇನ್ನು ಒಂದು ಮಾನವನ ನಿರಂತರ ಜೀವನ ಚಕ್ರದ ಕುರಿತು ನೃತ್ಯ ರೂಪಕದ ಮೂಲಕ ಸಾಬೀತು ಪಡಿಸುವ ಇಚ್ಚೆ ನಮಗಿತ್ತು ಅದರಂತೆ ನಾವೊಂದಿಷ್ಟು ಜನ ಸೇರಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಾಯ್ತು. ಬಾಲ್ಯ, ಯವ್ವನ, ಗ್ರಹಸ್ತಾಶ್ರಮ - ಪಂಚೇಂದ್ರಿಯಗಳ ನಿಗ್ರಹ, ವಾನಪ್ರಸ್ತ, ಹೀಗೆ ಎಲ್ಲ ಸನ್ನಿವೇಶಗಳನ್ನು ಒಂದೊಂದಾಗಿ ಜೋಡಿಸಿ ಹೆಣೆದ ಸುಂದರ ಜಡೆಯಾಯ್ತು ನಮ್ಮ ರೂಪಕ.
ಇನ್ನೇದು ವೇದಿಕೆ ಹತ್ತೋಕೆ ಅರ್ಧ ಗಂಟೆ ಇದೆ ಎನ್ನುವಾಗ ನಮ್ಮ ಹೊಟ್ಟೆಯೊಳಗೆಲ್ಲ ಪಾತರಗಿತ್ತಿಗಳ ಸಂಚಲನ ಪ್ರೋಪರ್ಟಿ ಸೆಟ್ಟಪ್ ಮಾಡುವ ಗಡಿಬಿಡಿ ಆರಂಭವಾಗಿಬಿಟ್ಟಿತ್ತು. ಎಲ್ಲರೂ ಹೊಸ ಉಡುಪು ಹಾಕಿ ಲಕಲಕ ಅಂತ ಮಿನಗ್ತಾ ಇದ್ರು. ಅರೆ ! ಇದೇನಪ್ಪ ಹುಡುಗರ ವೇಷವೇ ಬದಲಾಗ್ತಿದೆಯಲ್ಲ ಅಂತ ಹುಡುಗಿಯರು ಕಣ್ಣು ಬಿಟ್ಟು ನೋಡ್ತಾ ಇದ್ದ ಹಾಗೆ ಹುಡುಗರ ಶಾಲೆಗೆ ಹೋಗುವ ಪುಟ್ಟ ಮಕ್ಕಳಂತೆ ಮತ್ತೆ ತಮ್ಮ ಬಾಲ್ಯಕ್ಕೆ ತೆರಳಿದ್ದರು.
ಕತ್ತಿನ ಪಟ್ಟಿಯ ಗುಂಡಿ, ಅಂಗಿ ತುದಿಯ ಗುಂಡಿ, ವಕ್ರವಾದ ಸೊಂಟಪಟ್ಟಿ, ಕತ್ತಿಗೆ ಕಾಲೇಜು ಕಟ್ಟಿದ ಮಾಂಗಲ್ಯ ( ಐಡಿ.ಕಾರ್ಡ್) ಹಾಕಿ ತುಂಬಾ ಮುಗ್ಧರಾಗಿ ಪರಕಾಯ ಪ್ರವೇಶ ಮಾಡಿದ್ರು. ಡಾನ್ಸ ಚನಾಗಿಮಾಡಿದ್ರೆ ಚಾಕಲೇಟ್ ಕೊಡ್ಸತೀಯಾ ಅಂತ ಒಬ್ಬ ಕೇಳೇ ಬಿಟ್ಟ. ನಗುವಲ್ಲೇ ಕಾಲ ಕಳೀತಾ ಇದ್ದ ಹಾಗೆ
ನಮ್ಮ ಕತೆಗೆ ತಕ್ಕಂತೆ ರೆಡಿಯಾಗಿದ್ದ ಬಿಳಿಪಂಚೆ ಬಿಳಿ ಅಂಗಿತೊಟ್ಟ ಮದುಮಗ, ಚಂದದ ಸೀರೆಯುಟ್ಟ ಮದುಮಗಳ ಎಂಟ್ರೀ ಕೂಡ ಆಯ್ತು. ಇನ್ನು ಅವರ ವೃದ್ಧಾಪ್ಯದ ಭಾಗವಾಗಿ ಇನ್ನಿಬ್ಬರು ತಯಾರಾದ್ರು.
ಆಯ್ತು! ಸಮಯ ಬಂದೇ ಬಿಡ್ತು ವಿವೇಕಾನಂದ ಜಯಂತಿ ಕುರಿತು ಮಾತನಾಡಿದ ಗೆಳೆಯ ಜಗದೀಶ ಪರದೆಯ ಹಿಂದೆ ನಿಂತಿದ್ದ ನನ್ನದೇ ಮೊದಲ ಪ್ರವೇಶ ಗೆಳತಿಯೊಬ್ಬಳ ಕಾಲ್ಮೇಲೆ ( ಅಮ್ಮನ ಮಡಿಲು) ಮಲಗಿ ಅಂಬೆಗಾಲಲ್ಲಿ ಅವಳನ್ನ ಸೇರೋದು ಆಡೋದು ಇವೆಲ್ಲ ಇತ್ತು ಸದ್ಯಕ್ಕೆ ಮಂಡಿ ಒಂಚೂರು ನೋವಿದೆ.
ನಂತರ ಶಾಲೆ. ಅದರ ನಡುವೆ ನಮ್ಮ ಮುಗ್ಧ ಹುಡುಗರ ಡಾನ್ಸ ನಂತರ ಕಾಲೇಜು
ಬನ್ನೀ ನನ ಗೆಳೆಯರೆ,
ಬನ್ನೀ ನನ ಗೆಳತಿಯರೇ
ಎಂದು ಹಾಡುಬರುತ್ತಿದ್ದಂತೆ ಎಲ್ಲ ಸೇರಿ ಕುಣಿದು ಕುಪ್ಪಳಿಸಿದ್ರು ಇದರ ನಡುವೆ ಯಾರೂ ಚಪ್ಪಾಳೆನೆ ತಟ್ತಾ ಇಲ್ವಲ್ಲ ಅಂತ ಅನುಮಾನ ಬೇರೆ ಶುರು ನಮಗೆ. ತಲ್ಲೀನರಾಗಿದ್ದವರು ಚಪ್ಪಾಳೆ ಹೊಡೆಯೋದನ್ನು ಮರೆತಿದ್ದು ಆಮೇಲೆ ತಿಳೀತು. ಪುರೋಹಿತ ಪಾತ್ರಧಾರಿ ಪಂಚೆ ಎತ್ತಿ ಕುಣಿದ, ಅಂತರ್ಪಟಕ್ಕೆಂದು ಇಟ್ಟ ಬಿಳಿಪಂಚೆ ಎಗರಿಸಿ ಮದುವೆಯ ವ್ಯವಸ್ಥೆ ನೋಡಿಕೊಳ್ಳುವ ಮಾವ ಇನ್ನೊಬ್ಬನಾದ. ಪ್ರಾಕ್ಟೀಸ್ ಮಾಡದೇ ಬಂದವರೂ ವೇದಿಕೆ ಎರಿ ಗೆಲುವಾದ್ರು. ಒಟ್ಟಿಗೆ ಎಲ್ಲತೊಡಕುಗಳನ್ನು ಅಲ್ಲಲ್ಲೆ ನಿವಾರಿಸಿ ಸಾಗಿತು ನಮ್ಮ ಸವಾರಿ.
ಮದುವೆಯ ಸನ್ನಿವೇಶಕ್ಕಂತು ಜನರ ಮದ್ಯವೇ ಕುಣಿತ. ನಂತರ ಭಾವಪೂರ್ಣತೆಯ ವೃದ್ಸಾಶೃಮ ಸನ್ನಿವೇಶ. ಎಲ್ಲಾ ಮುಗಿದಾಕ್ಷಣ
ಒಳಿತುಮಾಡು ಮನುಷ
ನೀ ಇರೊದು ಮೂರು ನಿಮಿಷ
ಎಂಬ ಸಂದೇಶ ಒಟ್ಟಿನಲ್ಲಿ ನಮ್ಮೆಲ್ಲರಿಗೆ ತೃಪ್ತಿ ಮತ್ತು ಸಂತೋಷ ತಂದುಕೊಟ್ಟ ದಿನ ಇದು ನಿರಂತರ ನೆನಪುಗಳೂ ನಿರಂತರ. ಚನಾಗಾಯ್ತು ಶುಭಾಶಯ ಅಂತ ನಮ್ಮ ಟೀಚರ್ಸ್ ಹೇಳಿದಮೇಲಂತು ಆತ್ಮತೃಪ್ತಿಯೇ ಸಿಕ್ಕಿದ ದಿನ ಈ ನೆನಪುಗಳೇ ನಿರಂತರ
ಸುಮಾ.ಕಂಚೀಪಾಲ್
ಚಿತ್ರ: ಕಿಶನ್
🥰🥰👍
ReplyDelete😁😁
Deleteಮಸ್ತ ಬರಹ.ಅನುಭವ ಜನ್ಯ.ಎಲ್ಲಿಂದಲೋ ಬಂದು ಎಲ್ಲೋ ಒಂದ್ಕಡೆ ಕಾರ್ಯಕ್ರಮ ಈ ಲೈಫ್ ಮತ್ತೆ ಸಿಗೊಲ್ಲ.ಮುದಕರಾದ್ಮೇಲೆ ನೆನಪಷ್ಟೇ ಶಾಶ್ವತ.ಅದೂ ಅರಳು ಮರಳಲ್ಲಿ ಹಲ್ಲಿಲ್ಲದ ಬಾಯಿ ಗಿಂಜುತ್ತಾ.
DeleteJust wow❤️❤️
ReplyDelete😍
ReplyDelete😊
Delete👏👏💓
ReplyDelete😁😁
DeleteAmazing 🥰
ReplyDeleteThank you
Delete💜💜
ReplyDeleteTq u
DeleteSuper 👍😍😍
ReplyDelete👌🏻good programme(especially Boy's dance😜) as well as nice writing.
ReplyDelete