Skip to main content

ಉದ್ದುದ್ದನೆಯವರಿಗೊಂದು ನಮನ

ಜಗತ್ತಿನಲ್ಲಿ ಉದ್ದುದ್ದದ ಕೆಲವು ಪ್ರಾಣಿಗಳಿವೆ. ಈ ವಾಕ್ಯವನ್ನು ಓದಿದಾಕ್ಷಣ ನಿಮ್ಮ ಮನಸಿನಲ್ಲಿ ಒಂಟೆ, ಜಿರಾಫೆಯ ಚಿತ್ರಣ ಮೂಡಿರಬಹುದು. ಹೀಗೆ ಮನುಷ್ಯರಲ್ಲೂ ಕೆಲವರು ಉದ್ದುದ್ದದ ಜೀವಿಗಳಿರುತ್ತಾರೆ‌.ಉಷ್ಟ್ರಪಕ್ಷಿಗಳಂತವರು ನಾನು ಇದನ್ನು ತಮಾಷೆಗಾಗಿ ಬರೆಯುತ್ತಿದ್ದರು ನಾನು ಗಮನಿಸಿದ ಕೆಲವು ಸತ್ಯ ಅಂಶಗಳನ್ನು ನೀವಿಲ್ಲಿ ಗಮನಿಸಲೇ ಬೇಕು. 

ಶಾಲೆಯಲ್ಲಿ ಪಾಠ ಕೇಳಲು ಕುಳಿತರೆ ಅವರಿಗೆ ಕಾಲು ಬಿಡಿಸಿಕೊಳ್ಳಲು ಜಾಗ ಸಾಲುವುದಿಲ್ಲ. ಮುಂದಿನ ಬೆಂಚ್ ನಲ್ಲಿ ಕೂರುವ ತಾಪತ್ರಯ ಅವರಿಗೆ ಎಂದೂ ಬರಲ್ಲ. ಇನ್ನು ದೂರದ ಊರಿಗೆ  ಪುಟ್ಟ  ಕಾರು ಅಥವಾ ಬಸ್ಸಿನ ಪ್ರಯಾಣವಂತು ಸುಲಭ ಅಲ್ಲವೇ ಅಲ್ಲ. ಕಾಲು ಎಷ್ಟು ಮಡಚಿ ಕೂತರು ಊರು ಸೇರುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಇನ್ನು ಎಷ್ಟೆತ್ತರದಲ್ಲಿ ವಸ್ತುಗಳನ್ನಿಟ್ಟರು ಇವರಿಗೆ ಸುಲಭವಾಗಿ ಕೈಗೆಟಕುತ್ತದೆ ಎನ್ನುವ ಕಾರಣಕ್ಕಾಗಿ ಅಂತಹ ಕೆಲಸಗಳಿಗೆ ಇವರನ್ನೇ ಕೂಗುವುದು ಜಾಸ್ತಿ. 
ನಮ್ಮ ಮನೆಯದೇ ಒಂದು ಉದಾಹರಣೆ ಕೊಡಬೇಕೆಂದರೆ. ಸ್ಟಾಂಡಿನ ಮೇಲಿಟ್ಟ ಡಬ್ಬಿ, ಹಪ್ಪಳ, ಉಪ್ಪಿನಕಾಯಿ, ಬೆಲ್ಲ ಮತ್ತು ಎಣ್ಣೆ ಇಷ್ಟನ್ನು ಸದಾ ಅಮ್ಮನಿಗೆ ಇಳಿಸಿಕೊಡುವವನೆ ನನಗಿಂತ ಲಂಬು ಆಗಿರುವ ನನ್ನ ತಮ್ಮ. ಇನ್ನೂ ಕಾಲೇಜಿನ ದಿನಗಳಲ್ಲಿ ಕೆಲವರು ಹುಡುಗಿಯರು ಮತ್ತು ಕೆಲವರು ಹುಡುಗರು ಇದೇ ಸಾಲಿಗೆ ಸೇರಿದವರಿದ್ದಾರೆ.ನಮ್ಮಂತವರು ಅವರನ್ನು ಹಾರಿಮರ, ಒಂಟೆ, ಜಿರಾಫೆಗಳು ಎಂದೇ ಕರೆಯುತ್ತೇವೆ. 

ನನ್ನ ದಿನಗಳಲ್ಲಿ ನೆನಪುಳಿಯಬಲ್ಲ ಕೆಲವು ಹೆಸರೆಂದರೆ ಕಟ್ಟಿ ಸರ್, ಯಮುನಕ್ಕ, ವೆಂಕಟೇಶ್ ಪ್ರಸಾದ, ಶೀಥಲ್, ಆಕರ್ಷ,  ವಿನಯ್, ಸಂಪತ್, ಶ್ರೀರಕ್ಷ, ಪ್ರದೀಪ ಅಣ್ಣ. ಇನ್ನು ನಿಮ್ಮ ಮನೆಯಲ್ಲೂ ಇಂತವರು ಹಲವರಿರಬಹುದು ಅವರ ಹೆಸರನ್ನೂ ಇದರೊಟ್ಟಿಗೆ ಸೇರಿಸಿ ಓದಿಕೊಂಡು ಬಿಡಿ. ಒಂದು ಸಾಮಾನ್ಯ ಹಳೆ ಕಾಲದ ಮನೆಯ ಬಾಗಿಲ ಒಳಹೋಗಬೇಕೆಂದರೂ ಇವರು ಬಾಗಿಲ ಪಟ್ಟಿಯನ್ನು ಹಣೆಗೆ ಎಟಕಿಸಿಕೊಂಡೆ ನಡೆಯುತ್ತಾರೆ‌.

 

ಇನ್ನೊಂದು ಮುಖ್ಯ ವಿಷಯವೆಂದರೆ ಇಂತವರಿಗೆ ಹಾಸಲು ಹೊದಿಯಲು ಇರುವ ಬಟ್ಟೆಗಳು ಕಾಲು ಮುಚ್ಚಿದರೆ ತಲೆ ಮುಚ್ಚುವುದಿಲ್ಲ. ತಲೆ ಮುಚ್ಚಿದರೆ ಕಾಲಿಗಿಲ್ಲ. ಉದ್ದಿರುವವರಿ ಇತ್ತೀಚೆಗೆ ಪ್ರಸಿದ್ಧವಾದ ಸಾರ್ವತ್ರಿಕ ಹೆಸರೊಂದಿದೆ 'ಸೆಲ್ಪಿಸ್ಟಿಕ್'.

ಮೊನ್ನೆ ಮೊನ್ನೆ ಎತ್ತರದೊಂದು ಕೋಲಿಗೆ ಬಟ್ಟೆ ಒಣಗಿಸಲು ನಾನು ಹರಸಾಹಪಡುತ್ತಿದ್ದಾಗ ಇಂತದೇ ಒಂದು ಒಂಟೆಯಂತ ಪ್ರಾಣಿರೂಪದ ಹುಡುಗಿ ಶ್ರೀರಕ್ಷ ಬಟ್ಟೆ ಒಣಗಿಸಿಕೊಟ್ಟು ನಗುತ್ತಿದ್ದಳು. ಅದನ್ನು ನೆನಪಿಸಿಕೊಂಡು ಈ ತಮಾಷೆಯ ಬರಹ ಬರೆಯುವ ಮನಸಾಯಿತು. 

ಸುಮಾ.ಕಂಚೀಪಾಲ್

Comments

  1. ಮಾರಾಯತಿ ಎನ್ನ ಹೆಸರೊಂದು ಬರಿದ್ಲೆ

    ReplyDelete
    Replies
    1. ಇನ್ನು ಹಲವಾರು ಹೆಸರು ಬರಿಲ್ ಅವ್ತಿಪು

      Delete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...