ಅಳಿವಿನಂಚಿನಲ್ಲಿರುವ ಬಾವಲಿಗಳು ಅಪಶಕುನವೆಂದು ನಿರಾಕರಣೆಗೊಳ್ಳುತ್ತವೆ. ಆದರೆ ಬಾವಲಿಗಳು ಪರಿಸರಕ್ಕೆ ಅತೀ ಅವಶ್ಯಕ. ಸದಾ ಗುಂಪಿನಲ್ಲಿ ವಾಸಿಸುವ ಬಾವಲಿಗಳು ಗುಹೆ, ಪಾಳುಬಿದ್ದ ಮನೆ, ಹಳೆಯ ಕೊಟೆ, ಹೀಗೆ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತವೆ.
ಆದರೆ ಉಜಿರೆಯ ಅಜ್ಜರ ಕಲ್ಲು ಮೈದಾನದ ಸುತ್ತಲಿನ ಪ್ರದೇಶದಲ್ಲಿ ಜನ ಸಂಚಾರ ಹಾಗೂ ವಾಹನಗಳ ಶಬ್ಧಗಳ ನಡುವೆಯು ಪ್ಲೇಯಿಂಗ್ ಪಾಕ್ಸ ಎಂಬ ಪ್ರಬೇಧದ ಬಾವಲಿಗಳು ವಾಸಿಸುತ್ತಿವೆ. ಸಂಜೆಯಾಗುತ್ತಿದ್ದಂತೆ ಆಹಾರ ಹುಡುಕಾಟಕ್ಕೆ ತೆರಳುವ ಈ ನಿಶಾಚರಿ ಬಾವಲಿಗಳು ರಾತ್ರಿ ತಮ್ಮ ಕಾರ್ಯಮುಗಿಸಿ ಬೆಳಕು ಹರಿಯುವ ಮುನ್ನ ತಮ್ಮ ವಾಸಸ್ಥಾನಕ್ಕೆ ಮರಳುತ್ತವೆ.
ಈ ದೊಡ್ಡ ಬಾವಲಿಗಳು ಹಣ್ಣು ಹಾಗೂ ಹೂವಲ್ಲಿನ ಮಕರಂದ ಹೀರಿ ಜೀವಿಸುತ್ತವೆ. ದೊಡ್ಡ ಬಾವಲಿಗಳು 40 ರಿಂದ 150 ಗ್ರಾಂ ತೂಕವಿದ್ದು, ಒಂದೇ ಹಾರುತ್ತಿರುವಾಗ ಹದ್ದಿನಂತೆ ಕಾಣುತ್ತದೆ.ಕಕತ್ತಲಾಗುತ್ತಿದ್ದಂತೆ ಐದು ನಿಮಿಷ ಆಕಾಶದ ಕಡೆ ಮುಖಮಾಡಿದರೆ ಸಾಕು, ಆಹಾರ ಅರಸಿ ಹೋಗುವ ಬಾವಲಿಗಳ ಹಿಂಡು ಕಾಣುತ್ತದೆ. ಪಕ್ಷಿಗಳಂತೆ ಸ್ವತಂತ್ರವಾಗಿ ಹಾರಾಡುವ ಸಾಮರ್ಥ್ಯವುಳ್ಳ ಏಕೈಕ ಸಸ್ತನಿ ಎಂದರೆ ಅದು ಬಾವಲಿಮಾತ್ರ.
ಶಬ್ದ ತರಂಗಗಳ ಮೂಲಕ ಧ್ವನಿ ಗ್ರಹಿಸುವ ವಿಶೇಷ ಸಾಮರ್ಥ್ಯವನ್ನು ಬಾವಲಿಗಳು ಹೊಂದಿವೆ. ಬಾವಲಿಗಳಲ್ಲಿ ಇತರ ಪ್ರಾಣಿಗಳಂತೆ ಗಡಿ ಸಮಸ್ಯೆಯೂ ಇರುತ್ತದೆ, ಇದಕ್ಕಾಗಿ ಕೆಲ ಸಂಧರ್ಭದಲ್ಲಿ ಇವುಗಳ ನಡುವೆ ಕಾದಾಟ ನಡೆಯುತ್ತದೆ.
ಬಾವಲಿಗಳ ಸಂತತಿ ಅವನತಿಯತ್ತ ಸಾಗುತ್ತಿದ್ದು ಅವುಗಳ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮದಾಗಿದೆ. ಇವುಗಳ ಕುರಿತಾದ ಅಧ್ಯಯನದ ಅವಶ್ಯಕತೆಯೂ ಇದೆ. ಇಲ್ಲವಾದಲ್ಲಿ ನಮ್ಮ ಗಮನಕ್ಕೆ ಬಾರದಂತೆ ಪರಿಸರದಲ್ಲಿ ಏರುಪೇರಾಗುವುದು ಖಂಡಿತ.
ಪರಿಸರ ಬೆಳೆಸುವಲ್ಲಿ ಬೀಜಪ್ರಸರಣ ಮಾಡುವಲ್ಲಿ ಬಾವಲಿಗಳ ಪಾತ್ರ ಬಹಳ ಮುಖ್ಯ. ಆಹಾರವಾಗಿ ತಿಂದ ಹಣ್ಣುಗಳ ಬೀಜವನ್ನು ತಮ್ಮ ಹಿಕ್ಕೆಯ ಮೂಲಕ ಬಾವಲಿಗಳು ಪ್ರಸರಣ ಮಾಡುತ್ತವೆ. ರಾತ್ರಿಹೊತ್ತು ಅರಳುವ ಎಷ್ಟೋ ಹೂವುಗಳ ಪರಾಗಸ್ಪರ್ಶ ಮಾಡುತ್ತವೆ. ಮತ್ತು ಗಂಟೆಗೆ ಸಾವಿರಕ್ಕೂ ಅಧಿಕ ಕೀಟಗಳನ್ನು ಇವು ತಿನ್ನುತ್ತವೆ. ಇವುಗಳ ಗೊಬ್ಬರಕ್ಕೆ ದೇಶ - ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ.
-ಮನೋಜ್ ಗೊಡಬೊಲೆ
ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ
ಸುಮಾ.ಕಂಚೀಪಾಲ್
Comments
Post a Comment