Skip to main content

ನಾನು ಓದಿದ್ದು ಹೀಗೆ - 'ಝಿಪ್ಪಿಗ್ರಫಿ'

ನಾನು ಓದಿದ್ದು ಹೀಗೆ - 'ಝಿಪ್ಪಿಗ್ರಫಿ'

ಝಿಪ್ಪಿಗ್ರಫಿ ಹೆಸರೊಂತರ ಚನಾಗಿದೆ, ಕೇಳೊಕೆ ಸೇಮ್ ಸಿನಿಮಾ ಹೆಸರಿನ‌ಹಾಗಿದೆ ಅಂತ ಎಷ್ಟೋ ಜನ‌ ಈ ಪುಸ್ತಕದ ಕುರಿತು ಮಾತಾಡ್ತಾ ಇದ್ರು. ಶೃತಿ ಜೈನ್ ಅವರು ಬರೆದ ಈ ಪುಸ್ತಕ ಶ್ವಾನ ಪ್ರೇಮಿಗಳಿಗೆ ಬಹಳ ಹಿಡಿಸುವ ಪುಸ್ತಕ ಅಂತಲೂ ಸುದ್ದಿಯಲ್ಲಿತ್ತು. ಕುತೂಹಲದಿಂದ ಓದಿದಾಗ ಇದು ಕೇವಲ ಶ್ವಾನ ಪ್ರಿಯರಿಗಷ್ಟೇ ಅಲ್ಲ ಎಂಬ ಸತ್ಯ ಅರಿವಿಗೆ ಬಂತು.



ಝಿಪ್ಪಿಯ ದಿನಚರಿ ಅದರೊಟ್ಟಿಗೆ ಕಳೆದ ಸಮಯದ ವಿವರಣೆಗಳನ್ನು ಹೊರತುಪಡಿಸಿ ಕೆಲವು ವೈಜ್ಞಾನಿಕ ವಿಷಯಗಳೂ ಸಹ ಈ ಪುಸ್ತಕದಲ್ಲಿ ಅಡಕವಾಗಿದೆ ಎಂಬ ವಿಷಯ ಯಾವ ಓದುಗರ ಅಭಿಪ್ರಾಯದಲ್ಲೂ ನಾನು ಕೇಳಿರಲಿಲ್ಲ. ನಾನೇ ಸ್ವತಃ ಓದಿದ ನಂತರ ಶ್ವಾನಗಳ ಕುರಿತು ಎಷ್ಟೋ ಗೊತ್ತಿಲ್ಲದ ವಿಚಾರಗಳು ಸುಲಭವಾಗಿ ಉದಾಹರಣೆ ಸಹಿತವಾಗಿ ಅರ್ಥವಾಗುವಂತ ಸರಳ ಪುಸ್ತಕ ಝಿಪ್ಪಿಗ್ರಫಿ.


ಲಾಬ್ರಿಡಾರ್ ರಿಟ್ರೀವರ್ ಎಂಬ ತಳಿ ಇಂಗ್ಲೆಂಡ್ ಮತ್ತು ಅಮೇರಿಕದಲ್ಲಿ ಮೊದಲು ಇದ್ದದ್ದು ಮತ್ತು ಲೆಬ್ರಿಡಾರ್ ಎಂಬುದು ನಾಯಿಗೂ ಮೊದಲು ಒಂದು ಊರಿನ ಹೆಸರು ಎಂಬುದು ವಿಶೇಷ.  ಸೂಕ್ಷ್ಮ ಮತಿ, ಚತುರತೆ, ಬೇಟೆಗಾಗಿ ಮತ್ತು ಮೀನುಗಾರು ಬಳಸುತ್ತಿದ್ದ ಸ್ನೇಹಪರ ಪ್ರಾಣಿಗಳೆಂದರೆ ಅವು ಲ್ಯಾಬ್ರಿಡಾರ್‌ಗಳು.
ತಮ್ಮನ್ನೇ ಪ್ರೀತಿಸಬೇಕು ಎಂಬ ಚಿಕ್ಕ ಸ್ವಾರ್ಥದೊಂದಿಗೆ ಮೊಬೈಲ್‌ಗಳನ್ನು ಇವು ದ್ವೇಷಿಸುತ್ತವೆ. ಅದರಲ್ಲೂ ಜನರನಡುವೆಯೇ ಇರ ಬಯಸುವ ಈ ಸ್ನೇಹಜೀವಿ ಝಿಪ್ಪಿಯೊಬ್ಬಳೇ ಕೆಲ ಕಾಲ ಒಂಟಿಯಾಗಿರುವ ಸನ್ನಿವೇಶದ ವಿವರಣೆ ಅವಳ ಮೇಲೆ ಕನಿಕರ ಹುಟ್ಟಿಸಿಬಿಡುತ್ತದೆ.



ನಾಯಿಗಳ ಪ್ರಸವದ ದಿನಗಳು, ಋತುಸ್ರಾವದ ದಿನಗಳು. ಬೀದಿನಾಯಿಗಳ ಪರದಾಟ, ಹೆಣ್ಣು ನಾಯಿಗಳಿಗೆ ಸಮಾಜ ತೋರುತ್ತಿರುವ  ಕ್ರೌರ್ಯದ ಕುರಿತಾದ ವಿವರಣೆಗಳು ಒಂದೊಮ್ಮೆ ಈ ಪುಸ್ತಕ ಓದಿದ ನಂತರ ಇಂತಹ ವಿಕೃತಿಗಳ ಕುರಿತು ತಲ್ಲಣ ಹುಟ್ಟಿಸುತ್ತವೆ.

ಅಷ್ಟು ಮುದ್ದಾದ ಮುಗ್ಧ ಜೀವಿಗಳನ್ನು ತನ್ನ ಮಗುವಿನಂತೆ ನೋಡಿಕೊಂಡು. ಅದರ ಸುಖ ಮತ್ತು ದುಃಖದ ಎಲ್ಲಾ ದಿನಗಳನ್ನು ತನ್ನವು ಎಂದು ಪ್ರೀತಿಸುವಪರಿಶುದ್ಧ ಮನಸಿನ ನಮ್ಮ ಟೀಚರ್ ಬರೆದ ಈ ಪುಸ್ತಕ

ವಿಜ್ಞಾನ, ಕಥನ ಮತ್ತು ಅನುಭವಗಳೊಟ್ಟಿಗೆ ಹೆಣೆದ ಸರಳ ಸುಂದರ ಪುಸ್ತಕವೇ ಝಿಪ್ಪಿಗ್ರಫಿ ನೀವೂ ಒಮ್ಮೆ ಓದಿ.

ಸುಮಾ.ಕಂಚೀಪಾಲ್.

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...