Skip to main content

ಗೋಡೆಗೆ ಅಂಟಿದ ಮುಖ

ಅವಧಿ

ಗೋಡೆಗೆ ಅಂಟಿದ ಮುಖ

ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ ವ್ಯಕ್ತಿ. ಅಗತ್ಯಕ್ಕಿಂತ ಹೆಚ್ಚಿನದನ್ನು ಎಂದಿಗೂ ಬಯಸದ ಸದ್ಗುಣಿ. ಅವನ ಬಾಳ ಸಂಗಾತಿ ಹೊಲಿಗೆ ಯಂತ್ರವೇ ಆಗಿಹೋಗಿದೆ. ಆದರೆ ನಮ್ಮ ನಾಣಿಗೀಗ ಮದುವೆ ವಯಸ್ಸು ಬಂದಿದೆ.

" ನಿಮ್ಮಲ್ಲಿ ಯಾರಾದರೂ ಒಳ್ಳೆಯ ಹೆಣ್ಣಿದ್ದರೆ ತಿಳಿಸಿ" ಎಂದು ಹೇಳುವುದಕ್ಕೂ ಅವನ ಜನರು ಅಲ್ಲಿಲ್ಲಾ. ಇವನೇ ಹಾಗೆ ಹೇಳಿಕೊಳ್ಳೊಕೆ ಆಗೋದಿಲ್ಲಾ. ವರ್ಷಕೊಮ್ಮೆ ಬಂದು ತನ್ನ ತಾಯಿಗೆ ಸೀರೆಕೊಟ್ಟು, ಸ್ವಲ್ಪ ಮಟ್ಟಿನ ಹಣ ಕೊಟ್ಟು ಹೋಗುವುದು ಅವನ ರೂಡಿ ದೂರದಿಂದ ಬಂದರೂ ಮನೆಯಿಂದ ಅಣ್ಣ ಹೊರಹಾಕಿದ್ದ ಎನ್ನುವ ಕಾರಣಕ್ಕಾಗಿ ಈತ  ಮನೆಗೇ..ಬಂದರು ಅಂಗಳದಲ್ಲಿಯೇ ಕುಳಿತು ಒಂದು ಗುಟುಕು ನೀರನ್ನೂ ಕುಡಿಯದೆ ಹೊರಗಿನಿಂದ ಹೊರಗೇ ತಾಯಿಯನ್ನು ಮಾತನಾಡಿಸಿ ಹೋಗುತ್ತಿದ್ದ. ಇದು ಹೀಗೆ ನಡೆಯಲು ಪ್ರಾರಂಭವಾಗಿ ಏಳೆಂಟು ವರ್ಷಗಳೇ ಕಳೆದು ಹೋಗಿದೆ.



ಅತ್ತಿಗೆಗೆ ಮೈದುನನ್ನು ಕಂಡು ಕನಿಕರ ಗಂಡನಿಗೆ ಕಾಣದ ಹಾಗೆ ಹಲಸಿನ ಹಪ್ಪಳ, ಸಂಡಿಗೆ , ಚಕ್ಕುಲಿ ಇಂತವನ್ನು ಡಬ್ಬಿಯಲ್ಲಿ ತುಂಬಿ ಗಂಡನ ಕಣ್ಣಿಗೆ ಕಾಣದಂತೆ ಅವನ ಗಾಡಿಗೆ ಮುಟ್ಟಿಸುತ್ತಿದ್ದಳು. ತಾಯಿಯಂತೂ ಇಂತ ಪರಿಸ್ಥಿತಿ ನೋಡಲಾರದೇ ಪ್ರತೀ ಬಾರಿಯೂ ಅಳುವುದೆ ಅವಳ ಕೆಲಸ. ಇತ್ತೀಚಿಗೆ ನಾಣಿ ವರ್ಷಕ್ಕೊಮ್ಮೆ ಬರುವವನು ವಾರ ವಾರ ಪೋನಿಸಿ ಮೂರು ತಿಂಗಳಿಗೊಮ್ಮೆ ಮನೆಕಡೆ ಬರಲು ಆರಂಭಿಸಿದ್ದ . ಪಾಪ ಅವನ ಮನಸ್ಸಿನಲ್ಲಿ ಏನು ತಳಮಳವಿತ್ತೊ ತಿಳಿಯದು ಸುಮ್ಮನೆ ಕಣ್ಣಂಚು ತೇವವಾಗುತ್ತಿತ್ತು. ತಾಯಿಯನ್ನು ಕರೆದುಕೊಂಡೇ ಹೋಗಬೇಕೆಂದು ನಿರ್ಧರಿಸಿ ಬಂದವನು ಅವನಾಗಿದ್ದ.



ಆದರೆ ಇತ್ತೀಚಿಗೆ ಅವನು ಬಹಳಸಲ ಮನೆಕಡೆ ಬಂದುದರಿಂದ ಅಣ್ಣ ಸ್ವಲ್ಪ ಗರಂ ಆಗಿದ್ದ. ಇವನು ಆಸ್ತಿಯಲ್ಲಿ ಪಾಲು ಕೇಳಲೆಂದೇ ಬರುತ್ತಿದ್ದಾನೆ ಎಂಬ ಸಣ್ಣ ಸಂಶಯವೂ ಅವನಲ್ಲಿತ್ತು. ಮನೆಬಿಟ್ಟು ಹೋದವನು ಪದೆ ಪದೆ ಮನೆಕಡೆ ಬರೊದ್ಯಾಕೆ ಅಂತ ದಬಾಯಿಸಿ ಕಳಿಸಿದ್ದ ಆದರೂ ಧೈರ್ಯ ಮಾಡಿ ಅಣ್ಣನೊಡನೆ ಗಟ್ಟಿಯಾದ ಒಂದೆರಡು ಮಾತನಾಡಿ ತಾಯಿಯನ್ನು ಕರೆದುಕೊಂಡು ಪಟ್ಟಣಕ್ಕೆ ಬಂದ. ಹೊಲಿಗೆಯನ್ನು ಸ್ವಲ್ಪದಿನದ ಮಟ್ಟಿಗೆ ನಿಲ್ಲಿಸಿ ಕಲಿತು ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ. ಅದೇ ಸಂತೋಷದಲ್ಲಿ ಅವನ ತಾಯಿ ಇವನೀಗ ತನ್ನ ದುಡಿಮೆಯಿಂದ ಮನೆತೂಗಿಸಿಕೊಂಡು ಹೋಗಬಲ್ಲ ಇವನಿಗೆ ಮದುವೆ ಮಾಡಬೇಕು ಎಂಬ ಬಯಕೆ ಹೊಂದಿದಳು. ಆದರೆ ಅಣ್ಣ ಇವನ ಮದುವೆ ಮಾಡಿಸುವುದಿಲ್ಲ ಎಂಬುದು ತಿಳಿದಿತ್ತು. ನೀನೆ ಯಾರನ್ನಾದರೂ ಪ್ರೀತಿಸಿ ಮದುವೆಯಾಗು ಎಂದು ಹೇಳಿ ಮನೆಗೆ ವಾಪಸ್ ಬಂದಿದ್ದಳು .ಇದಾದ ಆರೆ ತಿಂಗಳಲ್ಲಿ ಒಂದು ಕೆಟ್ಟಘಟನೆ ನಡೆದೇ ಹೋಯಿತು.

ಒಮ್ಮೆ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದ ನೀರು ಬೇಕಾ? ಏನಾಯಿತು ಎಂದು ವಿಚಾರಿಸುವುದಕ್ಕೂ ಹತ್ತಿರ ಯಾರೂ ಇರಲಿಲ್ಲ. ತಾನು ಪ್ರಜ್ನೆ ತಪ್ಪಿ ಬಿದ್ದಿದ್ದೇನೆ ಎಂಬ ಅರಿವು ಅವನಿಗಿಲ್ಲ. ಒಲೆಯಮೇಲೆ ಕಾಯಿಸಲಿಟ್ಟ ಸಾಂಬಾರು ಅಲ್ಲೆ ಕತ್ತಿಹೋಗಿತ್ತು. ಪ್ರಜ್ನೆಬಂತು ಆದರೆ ತನಗೇನಾಗಿತ್ತು? ಪ್ರಜ್ನೆತಪ್ಪಿ ಎಷ್ಟು ಸಮಯವಾಗಿತ್ತು? ಎಂದು ಅವನಿಗೆ ಹೊಳೆಯಲಿಲ್ಲ. ಆ ಬಾರಿ ಅವನು ಅದನ್ನು ನಿರ್ಲಕ್ಷ್ಯ ಮಾಡಿದ. ಇನ್ನೊಮ್ಮೆ ಹೀಗೆ ಆಯಿತು ಆ ಸಾರಿ ಬಿದ್ದಾಗ ನೆತ್ತರಹೆಪ್ಪುಗಟ್ಟಿ ಮುಖದಮೇಲೆ ಕರಿಕಲೆಯಾಗಿತ್ತು ಎಲ್ಲರೂ ಏನಾಯಿತು ಎಂದುಕೇಳುವವರೆ.

ಹಾಗೆ ಸ್ವಲ್ಪ‌ ಕಾಲು ಜಾರಿ ಬಿದ್ದೆ ಎಂಬ ಉತ್ತರವನ್ನೆ ಎಲ್ಲರಿಗೂ ನೀಡುತ್ತಿದ್ದ. ಒಮ್ಮೆ ಸ್ಟೇಷನ್ ಅಲ್ಲೆ ಹೀಗೆ ಬಿದ್ದಾಗ ಆಸ್ಪತ್ರೆಗೆ ಸೇರಿಸಿದ್ದರು ಆಗ ತಿಳಿದುಬಂದು ಮೆದುಳಿನಲ್ಲಿ ನರಗಳಲ್ಲಿ ರಕ್ತಹೆಪ್ಪುಗಟ್ಟುತ್ತಿದೆ ಎಂದು. ಹೆಚ್ಚೆಂದರೆ ಒಂದು ತಿಂಗಳು ಬದುಕಬಹುದು ಎಂಬ ಕಠು ಸತ್ಯವನ್ನು ತಿಳಿಸಲಿಕ್ಕೂ ಕುಟುಂಬದ ಮತ್ಯಾರು ಜೊತೆಗಿಲ್ಲ. ಈತ ಆ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟ ಆದರೆ ತುಂಬಾ ಕಾಯಿಲೆ ಹೆಚ್ಚಾಗಿ ಊಟಮಾಡಲು ಆಗದೇ ಇರುವಾಗ ಆಚೀಚೆ ಮನೆಯವರೇ ಒತ್ತಾಯ ಮಾಡಿ ಮನೆಗೆ ತಾವಾಗಿ ಪೋನಿಸಿ ವಿಷಯ ತಿಳಿಸಿದರು.

ಅಣ್ಣ ಕೊನೆಗಳಿಗೆಯಲ್ಲಿ ಅಲ್ಲಿಗೆ ಬಂದು ನಿನ್ನ ಜೊತೆ ನಾವಿದ್ದೇವೆ ಏನೂಹೆದರಬೇಡ ಎನ್ನುವಾಗ. ಇವನ ಕಣ್ಣಾಲಿಗಳು ತೇವ ಗೊಂಡವು ಅಣ್ಣನನ್ನು ತಬ್ಬಿಕೊಂಡು ಅತ್ತು ಬಿಟ್ಟ. ಹೇಗಾದರು ನನ್ನನು ಉಳಿಸಿಕೊಳ್ಳಿ ನನಗೆ ಬದುಕುವ ಹಂಬಲವಿದೆ ಎನ್ನುತಿರುವಾಗಲೇ ಮತ್ತೆ ಪ್ರಜ್ನೆ ತಪ್ಪಿತ್ತು ಮತ್ತೆ ಅವನು ಕಣ್ಣು ತೇವಗಕಂಡಿತು. ಅಲ್ಲಿಂದ ಊರಿಗೆ ಕರೆದತಂದರು. ಅವನ ಸ್ವಂತ ಊರಿನಲ್ಲಿ ತನ್ನ ಹಳೆಯ ಕೋಣೆಯಲ್ಲಿ ಮಲಗಿದ್ದ ಪಕ್ಕದಲ್ಲಿ ಅಣ್ಣ ಅತ್ತಿಗೆ ತಾಯಿ ಇದ್ದರು ಇದನ್ನು ಅವನಿಂದ ನಂಬಲಾಗಲಿಲ್ಲ. ಅಷ್ಟೊಂದು ಸಂತೋಷವಾಗಿ ಮಾತೆ ಹೊರಡಲಿಲ್ಲ. ಸಾಯುವುದಕ್ಕು ಮೊದಲು. ನಾನು ಬದುಕಿದ್ದು ಇದೇ ಘಳಿಗೆಗಾಗಿ ಈಗ ನಾನು ಸತ್ತರೂ ಚಿಂತೆಯಿಲ್ಲ ಎಂಬ ಮಾತನ್ನು ಆಡಿದ್ದ. ಈಗ ಆ ಗೋಡೆಗೆ ಪೋಟೋ ತೂಗಿಹಾಕಿ ಎರಡು ವರ್ಷ ಆಯಿತು. !

ಸುಮಾ.‌ಕಂಚೀಪಾಲ್
Sumagaonkar22@gmail.com.

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...