Skip to main content

ಮೀನು ನಗುತ್ತದಾ!

ಮಳೆಗಾಲದಲ್ಲಿ ಮಾತ್ರವೇ ನೀರು ಹರಿಯುವ ಒಂದು ಸಣ್ಣ ಕಾಲುವೆ ಇದೆ. ಅದರಲ್ಲಿ ವರ್ಷದ ಮೂರು ತಿಂಗಳು ಮಾತ್ರ ನೀರು ಹರಿಯುತ್ತದೆ. ನೀರು ಹರಿಯುವ ಸಂಧರ್ಭದಲ್ಲಿ ಪುಟ್ಟ ಪುಟ್ಟ ಮೀನುಗಳು ಹುಟ್ಟಿಕೊಳ್ಳುತ್ತವೆ‌. ಇವುಗಳನ್ನು ನೋಡುವುದು, ತಿಂಡಿ ಹಾಕುವುದು, ದುಪ್ಪಟ್ಟ ಮತ್ತು ತೆಂಗಿನ ಚಿಪ್ಪಿನಲ್ಲಿ ಅವುಗಳನ್ನು ಹಿಡಿಯುವುದು ಮತ್ತು ನೀರಿನೊಳಗೆ ಕಾಲಿಟ್ಟು ಅವುಗಳ ಕಳಗುಳಿ ಸಹಿಸುವುದು ಇವೆಲ್ಲವೂ ಸಹ ಆ ಮೂರು ತಿಂಗಳ ಖುಷಿಯ ಸಂಗತಿ. 

ಅಲ್ಲಲ್ಲಿ ಕಚಗುಳಿ

ಇವುಗಳನ್ನು ನೋಡುತ್ತಿದ್ದಾಗಲೆಲ್ಲ ನನಗೆ ಹತ್ತಾರು ಪ್ರಶ್ನೆಗಳು ಕಾಡುತ್ತವೆ. 'ಪ್ರೀತಿಸುವವರನ್ನು ಕೊಂದುಬಿಡಿ' ಎನ್ನುವ ಜೋಗಿ ಅವರ ಪುಸ್ತಕದಲ್ಲಿ ಓದಿದ್ದೆ, ಮೀನಿನ ಏಕಾಗ್ರತೆ ಕೇವಲ ಐದು ಸೆಕೆಂಡ್ ಮಾತ್ರ ಎಂಬುದರ ಕುರಿತು ಅವರು ತಿಳಿಸಿದ್ದರು. ಅದರ ನಂತರ ಕುತೂಹಲ ಹೆಚ್ಚಿ ಗೂಗಲ್ ಮಾಡಿ ನೋಡಿದ್ದೆ. ಅತಿ ಕಡಿಮೆ ಹೊತ್ತು ಏಕಾಗ್ರತೆ ಹೊಂದಿರುವ ಜೀವಿ ಮೀನು. ಮನಸು ಮರ್ಕಟದಂತೆ ಎನ್ನುತ್ತಾರೆ. ಆದರೆ ಮಂಗನ ಮನಸಿಗಿಂತಲೂ ಚಂಚಲ ಮನಸು ಮೀನಿನದ್ದು. 
ಮೀನಿನ ಹೆಜ್ಜೆ ಗುರುತಾದರೂ ಕಂಡು ಹಿಡಿಯಬಹುದು, ಹೆಣ್ಣಿನ ಮನಸಿನ ಭಾವ ತಿಳಿಯದು ಎಂಬ ಮಾತನ್ನೂ ಕೇಳಿದ್ದೇನೆ. ಅದು ಹಾಗಿರಲಿ ಬಿಡಿ ಇನ್ನೊಂದು ಪ್ರಶ್ನೆ ಇದೆ. 

ಮೀನು ಗುಡಿ

ಯಾವಾಗಲೂ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ಸದಾ ಈಜುತ್ತಿರುವುದನ್ನು ನಾನು ಗಮನಿಸಿದ್ದೇನೆ. ಏಕೆ ಅವುಗಳ ರೆಕ್ಕೆ ಸೋಲುವುದಿಲ್ಲವೇ?! ಅದನ್ನು ನೋಡುವಾಗ ನನಗೆ ಕಾಣಿಸುವುದು ಒಂದೆ, ದೇಹದ ತೂಕ ಇಳಿಸುವ ಸಲುವಾಗಿ ಕೆಲವರು treadmill ನಲ್ಲಿ ನಿಂತಲ್ಲೇ ಓಡುತ್ತಾರಲ್ಲಾ ಇವುಗಳು ಹಾಗೆ. ಆದರೆ ಇವು ದಿನದ ಇಪ್ಪತ್ನಾಲ್ಕು ಗಂಟೆಯೂ ಓಡುತ್ತವೆ. ಲೆಕ್ಕ ಹಾಕಿದರೆ ಎಷ್ಟು ಕಿ.ಮಿ ಆಗುತ್ತಿತ್ತೊ ಗೊತ್ತಿಲ್ಲ. 

ನೀರಿನ ವೇಗ ಒಮ್ಮೊಮ್ಮೆ ಬದಲಾಗುತ್ತದೆ. ಹೆಚ್ಚು ಮಳೆ ಬಂದಾಗ ರಭಸವಾಗಿ ನೀರು ಹರಿಯುತ್ತದೆ. ಆಗಲೂ ಇವು ಸ್ಥಿರವಾಗಿ ಅಲ್ಲೆ ಉಳಿಯುತ್ತವೆ. ಇವುಗಳಿಗಿಂತ ದೊಡ್ಡದಾದ ಎಷ್ಟೊ ಕಲ್ಲು, ಮರದ ದಿಮ್ಮಿಗಳು ನೀರಿಗೆ ಕೊಚ್ಚಿ ಹೋಗುತ್ತವೆ. ಇನ್ನು ಕೆಲವರು ಅಕ್ವೇರಿಯಂ ನಲ್ಲಿ ಮೀನು ಸಾಕುತ್ತಾರೆ. ಇದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ‌, ರಕ್ತದೊತ್ತಡ ನಿವಾರಣೆಯಾಗುತ್ತದೆ ಎನ್ನುತ್ತಾರೆ‌. ನಾನೂ ಮನಸಿಗೆ ಕೆಲಸ ಹೆಚ್ಚಾದಾಗ ಕೂತು ವಿಶ್ರಮಿಸಿ ಬರುತ್ತೇನೆ.
ಮತ್ಸ್ಯ ಮಕ್ಕಳಿಗೆ ಅನ್ನಪ್ರಾಶನ.

ಇನ್ನೊಂದಿಷ್ಟು ಮುಗಿಯದ ಪ್ರಶ್ನೆ ಇದೆ‌ ನಿಮಗೆ!! 
ಮೀನು ನಗುತ್ತದಾ?
ಮೀನು ನಿದ್ರಿಸಬಹುದಾ?
ಮೀನು ತನ್ನ ಜೀವಿತಾವದಿಯಲ್ಲಿ ಬಾಯಿಂದ ಶಬ್ಧ ಹೊರಡಿಸುತ್ತದೆಯಾ?
ಯಾವುದಾದರೂ ಮೀನು ಅಂಗವಿಕಲವಾಗಿ ಹುಟ್ಟಿರಬಹುದಾ?
ನೀರು ಇಂಗಿದಮೇಲೆ ಇವು ಎಲ್ಲಿ ಮರೆಯಾಗುತ್ತದೆ? ವಲಸೆ ಹೋಗುತ್ತದಾ? ಎಂದೂ ನೀರಿರದ ಕಾಲುವೆಯಲ್ಲಿ ಹತ್ತೆ ಹತ್ತು ದಿನದಲ್ಲಿ ಇವು ಹೇಗೆ ಮರಿಗಳಾಗಿತ್ತವೆ.? 

ತಮಾಷೆ ಎನಿಸಿದರೂ ಇದರಲ್ಲೊಂದು ಕುತೂಹಲ ಇದೆ ಅಂದುಕೊಳ್ಳುತ್ತಾ, ನಿಮಗೆ ಉತ್ತರ ಗೊತ್ತಿದ್ದರೆ ತಿಳಿಸಿ, ನಿಮಗೂ ಇಂತಹದೇ ಪ್ರಶ್ನೆ ಇದ್ದರೆ ಅದನ್ನೂ ತಿಳಿಸಿ. 

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...