ಪರಿಸರದ ಉಳಿವಿಗೆ ಬೇರಿನ ಅರಿವು.
ಮಾನವ ಪರಿಸರ ಸ್ನೇಹಿಯಾಗದ ಹೊರತು ಪರಿಸರ ಮಾನವನನ್ನು ಪ್ರೀತಿಸುವುದಿಲ್ಲ.
ಪ್ರತಿಯೊಬ್ಬ ಮನುಷ್ಯನಿಗೂ ಪರಿಸರ ರಕ್ಷಣೆ ಮಾಡಬೇಕೆಂಬ ವಾಕ್ಯ ತಿಳಿದಿದೆ. ಆದರೆ ಅದನ್ನು ಅನುಸರಿಸುವ ಜನ ವಿರಳ. ಮರದ ಬೇರುಗಳ ಬಗ್ಗೆ ಒಂದಷ್ಟು ಮಾಹಿತಿಗಳ ಅರಿವು ಇದ್ದರೆ ಪರಿಸರ ಸಂರಕ್ಷಣೆ ಸುಲಭ.
ಕೆಲವು ಮರಗಳ ಕುರಿತಾಗಿ ಅಧ್ಯಯನ ಮಾಡಿದಾಗ ತಿಳಿದು ಬಂದ ವಿಷಯಗಳು ಎನೆಂದರೆ ಮರದ ಬೇರುಗಳು ಬಲವಾಗಿಲ್ಲ ಎಂಬುದು. ಎಲೆಗೊಂದರಂತೆ ಬೇರುಗಳಿರಬೇಕು. ಮರ ಎಷ್ಟು ಎತ್ತರವಿದೆಯೋ ಅದರಷ್ಟು ಆಳದವರೆಗೆ ಬೇರು ಹರಡಿರ ಬೇಕು. ಆದರೆ ಮಾನವನ ಆಧುನಿಕತೆಯ ಪರಿಣಾಮವಾಗಿ ರಸ್ತೆ, ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಚರಂಡಿ ನಿರ್ಮಾಣಕ್ಕಾಗಿ ಮರವನ್ನು ಕತ್ತರಿಸುವುದರೊಟ್ಟಿಗೆ ಸಮೀಪವಿರುವ ಮರದ ಬೇರುಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಸಣ್ಣ ಗಾಳಿ, ಮಳೆ ಬಂದರೂ ಸಹ ಮರಗಳು ಧರೆಗೆ ಉರುಳುವ ಘಟನೆ ಹೆಚ್ಚಾಗಿದೆ.
ಅಕೇಶಿಯ ಮತ್ತು ನೀಲಗಿರಿ ಮರಗಳು ಇರುವ ಕಡೆಯಲ್ಲಿ ಬೇರೆ ಮರಗಳು ಬೆಳೆಯುವುದಿಲ್ಲ. ಮತ್ತು ಮಣ್ಣಿನ ಗುಣಮಟ್ಟದ ಕೊರತೆ ಉಂಟಾಗುತ್ತದೆ. ಈ ವಿಷಯ ಅಧ್ಯಯನದ ಮೂಲಕ ಸಾಬೀತಾಗಿದೆ. ಕೆಲವೆಡೆ ಇಂತಹ ಮರಗಳನ್ನು ಬೇರು ಸಮೇತವಾಗಿ ಕಿತ್ತು ಹಾಕಲಾಗಿದೆ. ಮರಗಳಿಗೂ ಮಾನನವನಿಗೆ ಬಂದಂತೆ ಹಲವಾರು ಕಾಯಿಲೆಗಳು ಬಾದೆಗಳು ಎದುರಾಗುತ್ತವೆ. ಭೂಮಿಯ ಸುರಕ್ಷೆಗಾಗಿ ಮತ್ತು ಮರದ ಉಳಿವಿಗಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಇಟ್ಟು ಕಾಪಾಡಿಕೊಳ್ಳುವ ಸ್ಥಿತಿ ಎದುರಾಗಿರುವುದು ಖೇದಕರ ಸಂಗತಿ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಬೇರುಗಳು ಯಾವತ್ತೂ ಜೀವಂತವಿರುವುದಿಲ್ಲ ಅವು ಆಗಾಗ ಸತ್ತು ಮಣ್ಣಿನಾಳದಲ್ಲಿ ಹುಟ್ಟುತ್ತಿರುತ್ತವೆ. ಇದರಿಂದ ಮಣ್ಣಿನ ಫಲವತ್ತತೆ ಇನ್ನು ಹೆಚ್ಚುತ್ತದೆ. ತಾಯಿ ಬೇರು ಮತ್ತು ತಂತು ಬೇರುಗಳ ಕುರಿತು ಸಾಮಾನ್ಯ ಜ್ಞಾನ ನೀಡುವ ಕೆಲಸವನ್ನು ಪ್ರಾಥಮಿಕ ಶಾಲೆಯಿಂದಲೇ ಮಾಡಲಾಗಿದೆ. ಕಲಿಕೆಯ ಭಾಗವಾಗಿ ಪರಿಸರ ಅಧ್ಯಯನ ಎಂಬ ವಿಷಯಾಧಾರಿತ ಪಠ್ಯವನ್ನು ನೀಡಿದ್ದಾರೆ.
ಮರಗಳು ಎಲೆಯಿಂದ ತಮ್ಮ ಆಹಾರವನ್ನು ದ್ಯುತಿಸಂಶ್ಲೇಷಣೆ ಮೂಲಕ ತಯಾರಿಸಿಕೊಳ್ಳುತ್ತವೆ. ಮತ್ತು ತಮಗೆ ಬೇಕಾದ ಪೋಷಕಾಂಶಗಳನ್ನು ಬೇರಿನಿಂದ ಪಡೆದು ಕೊಳ್ಳುತ್ತವೆ. ಎಲ್ಲಾ ಮರಗಳು ಒಂದೇ ತರದ ಅಂಶಗಳನ್ನು ಎಳೆದುಕೊಳ್ಳುವುದಿಲ್ಲ. ಆದರೆ 'ಟ್ರಾನ್ಸ್ ಮ್ಯುಟೇಶನ್' ಎಂದು ಕರೆಯಲ್ಪಡುವ ಒಂದು ಕ್ರಿಯೆಯ ಮೂಲಕ ತನಗೆ ಬೇಕಾದ ಪೋಷಕಾಂಶಗಳನ್ನು ಸೃಷ್ಟಿಸಿಕೊಳ್ಳುವ ತಾಕತ್ತು ಮರಗಳಗಿರುತ್ತದೆ.
ಪರಿಸರ ಸಂರಕ್ಷಣೆ ಮಾಡಲು ಇಚ್ಚಿಸುವವರು ಮತ್ತು ಗಿಡಗಳನ್ನು ಬೆಳೆಸುವವರು ಒಂದು ಗಿಡದಿಂದ ಇನ್ನೊಂದು ಗಿಡದ ನಡುವೆ ಇಡಬೇಕಾದ ಅಂತರಗಳ ಕುರಿತು ಗಮನಹರಿಸಬೇಕು. ಏಕೆಂದರೆ ಒತ್ತೊತ್ತಾಗಿ ಗಿಡ ನೆಟ್ಟರೆ ಮರವಾಗುವ ಸಂಧರ್ಭದಲ್ಲಿ ಬೇರುಗಳು ಹರಡಿಕೊಳ್ಳು ಸ್ಥಳದ ಅಭಾವ ಉಂಟಾಗುತ್ತದೆ. ಇದರಿಂದ ಮರದ ದೃಢತೆ ಕ್ಷೀಣಿಸುತ್ತದೆ. ಬೇರುಗಳ ಕುರಿತು ಇಷ್ಟಾದರೂ ಅರಿವಿದ್ದರೆ ಪರಿಸರದ ಉಳಿವು ಸಾಧ್ಯ.
ಸುಮಾ.ಕಂಚೀಪಾಲ್
ಮಾನವ ಪರಿಸರ ಸ್ನೇಹಿಯಾಗದ ಹೊರತು ಪರಿಸರ ಮಾನವನನ್ನು ಪ್ರೀತಿಸುವುದಿಲ್ಲ.
ಪ್ರತಿಯೊಬ್ಬ ಮನುಷ್ಯನಿಗೂ ಪರಿಸರ ರಕ್ಷಣೆ ಮಾಡಬೇಕೆಂಬ ವಾಕ್ಯ ತಿಳಿದಿದೆ. ಆದರೆ ಅದನ್ನು ಅನುಸರಿಸುವ ಜನ ವಿರಳ. ಮರದ ಬೇರುಗಳ ಬಗ್ಗೆ ಒಂದಷ್ಟು ಮಾಹಿತಿಗಳ ಅರಿವು ಇದ್ದರೆ ಪರಿಸರ ಸಂರಕ್ಷಣೆ ಸುಲಭ.
ಕೆಲವು ಮರಗಳ ಕುರಿತಾಗಿ ಅಧ್ಯಯನ ಮಾಡಿದಾಗ ತಿಳಿದು ಬಂದ ವಿಷಯಗಳು ಎನೆಂದರೆ ಮರದ ಬೇರುಗಳು ಬಲವಾಗಿಲ್ಲ ಎಂಬುದು. ಎಲೆಗೊಂದರಂತೆ ಬೇರುಗಳಿರಬೇಕು. ಮರ ಎಷ್ಟು ಎತ್ತರವಿದೆಯೋ ಅದರಷ್ಟು ಆಳದವರೆಗೆ ಬೇರು ಹರಡಿರ ಬೇಕು. ಆದರೆ ಮಾನವನ ಆಧುನಿಕತೆಯ ಪರಿಣಾಮವಾಗಿ ರಸ್ತೆ, ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಚರಂಡಿ ನಿರ್ಮಾಣಕ್ಕಾಗಿ ಮರವನ್ನು ಕತ್ತರಿಸುವುದರೊಟ್ಟಿಗೆ ಸಮೀಪವಿರುವ ಮರದ ಬೇರುಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಸಣ್ಣ ಗಾಳಿ, ಮಳೆ ಬಂದರೂ ಸಹ ಮರಗಳು ಧರೆಗೆ ಉರುಳುವ ಘಟನೆ ಹೆಚ್ಚಾಗಿದೆ.
ಅಕೇಶಿಯ ಮತ್ತು ನೀಲಗಿರಿ ಮರಗಳು ಇರುವ ಕಡೆಯಲ್ಲಿ ಬೇರೆ ಮರಗಳು ಬೆಳೆಯುವುದಿಲ್ಲ. ಮತ್ತು ಮಣ್ಣಿನ ಗುಣಮಟ್ಟದ ಕೊರತೆ ಉಂಟಾಗುತ್ತದೆ. ಈ ವಿಷಯ ಅಧ್ಯಯನದ ಮೂಲಕ ಸಾಬೀತಾಗಿದೆ. ಕೆಲವೆಡೆ ಇಂತಹ ಮರಗಳನ್ನು ಬೇರು ಸಮೇತವಾಗಿ ಕಿತ್ತು ಹಾಕಲಾಗಿದೆ. ಮರಗಳಿಗೂ ಮಾನನವನಿಗೆ ಬಂದಂತೆ ಹಲವಾರು ಕಾಯಿಲೆಗಳು ಬಾದೆಗಳು ಎದುರಾಗುತ್ತವೆ. ಭೂಮಿಯ ಸುರಕ್ಷೆಗಾಗಿ ಮತ್ತು ಮರದ ಉಳಿವಿಗಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಇಟ್ಟು ಕಾಪಾಡಿಕೊಳ್ಳುವ ಸ್ಥಿತಿ ಎದುರಾಗಿರುವುದು ಖೇದಕರ ಸಂಗತಿ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಬೇರುಗಳು ಯಾವತ್ತೂ ಜೀವಂತವಿರುವುದಿಲ್ಲ ಅವು ಆಗಾಗ ಸತ್ತು ಮಣ್ಣಿನಾಳದಲ್ಲಿ ಹುಟ್ಟುತ್ತಿರುತ್ತವೆ. ಇದರಿಂದ ಮಣ್ಣಿನ ಫಲವತ್ತತೆ ಇನ್ನು ಹೆಚ್ಚುತ್ತದೆ. ತಾಯಿ ಬೇರು ಮತ್ತು ತಂತು ಬೇರುಗಳ ಕುರಿತು ಸಾಮಾನ್ಯ ಜ್ಞಾನ ನೀಡುವ ಕೆಲಸವನ್ನು ಪ್ರಾಥಮಿಕ ಶಾಲೆಯಿಂದಲೇ ಮಾಡಲಾಗಿದೆ. ಕಲಿಕೆಯ ಭಾಗವಾಗಿ ಪರಿಸರ ಅಧ್ಯಯನ ಎಂಬ ವಿಷಯಾಧಾರಿತ ಪಠ್ಯವನ್ನು ನೀಡಿದ್ದಾರೆ.
ಮರಗಳು ಎಲೆಯಿಂದ ತಮ್ಮ ಆಹಾರವನ್ನು ದ್ಯುತಿಸಂಶ್ಲೇಷಣೆ ಮೂಲಕ ತಯಾರಿಸಿಕೊಳ್ಳುತ್ತವೆ. ಮತ್ತು ತಮಗೆ ಬೇಕಾದ ಪೋಷಕಾಂಶಗಳನ್ನು ಬೇರಿನಿಂದ ಪಡೆದು ಕೊಳ್ಳುತ್ತವೆ. ಎಲ್ಲಾ ಮರಗಳು ಒಂದೇ ತರದ ಅಂಶಗಳನ್ನು ಎಳೆದುಕೊಳ್ಳುವುದಿಲ್ಲ. ಆದರೆ 'ಟ್ರಾನ್ಸ್ ಮ್ಯುಟೇಶನ್' ಎಂದು ಕರೆಯಲ್ಪಡುವ ಒಂದು ಕ್ರಿಯೆಯ ಮೂಲಕ ತನಗೆ ಬೇಕಾದ ಪೋಷಕಾಂಶಗಳನ್ನು ಸೃಷ್ಟಿಸಿಕೊಳ್ಳುವ ತಾಕತ್ತು ಮರಗಳಗಿರುತ್ತದೆ.
ಪರಿಸರ ಸಂರಕ್ಷಣೆ ಮಾಡಲು ಇಚ್ಚಿಸುವವರು ಮತ್ತು ಗಿಡಗಳನ್ನು ಬೆಳೆಸುವವರು ಒಂದು ಗಿಡದಿಂದ ಇನ್ನೊಂದು ಗಿಡದ ನಡುವೆ ಇಡಬೇಕಾದ ಅಂತರಗಳ ಕುರಿತು ಗಮನಹರಿಸಬೇಕು. ಏಕೆಂದರೆ ಒತ್ತೊತ್ತಾಗಿ ಗಿಡ ನೆಟ್ಟರೆ ಮರವಾಗುವ ಸಂಧರ್ಭದಲ್ಲಿ ಬೇರುಗಳು ಹರಡಿಕೊಳ್ಳು ಸ್ಥಳದ ಅಭಾವ ಉಂಟಾಗುತ್ತದೆ. ಇದರಿಂದ ಮರದ ದೃಢತೆ ಕ್ಷೀಣಿಸುತ್ತದೆ. ಬೇರುಗಳ ಕುರಿತು ಇಷ್ಟಾದರೂ ಅರಿವಿದ್ದರೆ ಪರಿಸರದ ಉಳಿವು ಸಾಧ್ಯ.
ಸುಮಾ.ಕಂಚೀಪಾಲ್
👍
ReplyDelete