Skip to main content

ಕಾಲ್ಪನಿಕ ಸಂದರ್ಶನ



ಕಳೆದ ಎರಡು ಮೂರು ವರ್ಷಗಳಿಂದ ಮಳೆಯ ಅಬ್ಬರಕ್ಕೆ ಎಲ್ಲೆಡೆ ಭೂ ಕುಸಿತ ಆಗ್ತಾ ಇದೆ. ಈ ಕುರಿತು ಪರಿಸರ ತಜ್ಞರನ್ನು, ಭೂ ಶಾಸ್ತ್ರಜ್ಞರನ್ನು ಸಂದರ್ಶನ ಮಾಡಿಯಾಗಿದೆ. ಈಗ ಭೂಮಿತಾಯಿ ಈ ಕುರಿತು ಏನು ಹೇಳ್ತಾಳೆ ನೋಡೋಣ. ಅವಳನ್ನೇ ಕರೆದು ವಿಶೇಷ ಸಂದರ್ಶನ ಮಾಡುತ್ತಿದ್ದೇವೆ. ಮೊದ ಮೊದಲು ನಮ್ಮೊಟ್ಟಿಗೆ ಮಾತನಾಡಲು ನಿರಾಕರಿಸಿದರು ಒತ್ತಾಯಕ್ಕೆ ಮಣಿದು ಭೂ ತಾಯಿ ಒಪ್ಪಿಕೊಂಡಿದ್ದಾರೆ. ಈ ಒಂದು ಕಾಲ್ಪನಿಕ ಸಂದರ್ಶನ ನಿಮಗಾಗಿ.

ಮನುಷ್ಯ: ಸಮಸ್ತ ಜೀವ ಸಂಕುಲವನ್ನು  ತನ್ನ ಒಡಲೊಳಗಿಟ್ಟು ಸಲಹುವ ಭೂ ತಾಯಿಯ ಚರಣಗಳಿಗೆ ನಮಿಸಿ ಸ್ವಾಗತಿಸುತ್ತಿದ್ದೇನೆ. ಮಾತೆ ನೀವು ಕಳೆದ ಎರಡು ವರ್ಷಗಳಿಂದ ಯಾಕೆ ಕೋಪಗೊಳ್ಳುತ್ತಿದ್ದೀರಿ?

ಭೂಮಿ ತಾಯಿ: ಪ್ರತಿ ವರ್ಷ ನಾನು ಶಾಂತಳಾಗಿಯೇ ಇರುತ್ತಿದ್ದೆ. ಉತ್ತಿ ಬಿತ್ತಿ ಬೆಳೆತೆಗೆಯಲು ನನ್ನ ಮೈ ಮನೆಗಳನ್ನು ನೀಡುತ್ತಿದೆ. ಪುಟ್ಟ ಮಕ್ಕಳಂತೆ ಮನುಜ ಸಂಕುಲವನ್ನು ಸಲಹುತ್ತಿದ್ದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ನನಗೂ ನನ್ನ ಮಕ್ಕಳ ಮೇಲೆ ಕೋಪ ಬಂದಿದೆ. ಮನುಷ್ಯರೇ ಮಾಡುತ್ತಿರುವ ಕೃತ್ಯಗಳ ಫಲವಾಗಿ ನಾನು ಕುಪಿತಳಾಗಿದ್ದೇನೆ. ಮನುಜ ಮತ್ತೆ ತನ್ನ ತಪ್ಪನ್ನು ಅರಿತರೆ ನಾನು ಸಮಾಧಾನ ಪಡುತ್ತೇನೆ.

ಮನುಷ್ಯ: ಭೂಮಿ ತಾಯಿಯಾದ ನೀವೆ ಕೋಪಿಸಿಕೊಂಡರೆ ಹೇಗೆ? ಸಣ್ಣ ಪುಟ್ಟ ಶಿಕ್ಷೆ ನೀಡಿ ಕ್ಷಮಿಸಿ ಬಿಡುವುದು ಒಳ್ಳೆಯದಲ್ಲವೇ?

ಭೂ ತಾಯಿ: ನಾನು ಹಲವು ವರ್ಷಗಳಿಂದ ನನ್ನದೇ ಮಕ್ಕಳು ಎಂಬ ಪ್ರೀತಿಗೆ ನಿಮ್ಮನ್ನು ಕ್ಷಮಿಸುತ್ತಲೇ ಬಂದೆ. ಆದರೆ ನೀವು ನನ್ನ ಒಡಲನ್ನು ಬರಡು ಮಾಡುತ್ತಾ ಹೋಗಿದ್ದೀರಿ. ಈಗಲೂ ನನ್ನ ನೋವಿಗಲ್ಲ ನಿಮ್ಮ ವಳಿತಿಗಾಗಿ ಹೇಳುತ್ತಿದ್ದೇನೆ.‌ ನಿಮ್ಮ ರಕ್ಷಣೆಗಾಗೆ ಕಷ್ಟ ಪಡುತ್ತಿದ್ದೇನೆ. " ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಾರಳು. ನಿಮ್ಮನ್ನು ನಾನು ಎಂದಿಗೂ ರಕ್ಷಿಸದೆ ಕೈ ಬಿಡಲಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುತ್ತಿರುವ ನಿಮ್ಮ ಕೆಡುಕಿನ ಆಟವನ್ನು ಸಹಿಸಹಿಸದೆ ಈ ನಿರ್ಧಾರಕ್ಕೆ ಬರುವಂತಾಯಿತು.

ಮನುಷ್ಯ: ನಮ್ಮ ಹೊಸ ಚಿಂತನೆಗಳಿಂದ ನಿನಗೊಂದು ಹೊಸ ರೂಪ ಕೊಡುತ್ತಿದ್ದೇವೆ ಇ ಕುರಿತು ನಿನ್ನ ಅನಿಸಿಕೆ ಏನು?

ಭೂಮಿತಾಯಿ: ನಿಮ್ಮ ಹೊಸ ಚಿಂತನೆಗಳು ಮಿತಿಯನ್ನು ಕಳೆದು ಕೊಂಡಿದೆ. ಭೂಮಿತೂಕದ ಸಹನೆ ಎಂಬ ಮಾತೇ ಇರುವಾಗ ನನ್ನ ತಾಳ್ಮೆಯನ್ನೇ ನೀವು ಮೀರಿದ್ದೀರಿ. ಅನಗತ್ಯ ಅವಶ್ಯಕತೆಗಳನ್ನು ಸೃಷ್ಟಿಸಿಕೊಂಡಿದ್ದೀರಿ. ಚತುಷ್ಪತ ರಸ್ತೆ, ಇಲ್ಲ ಅಲ್ಲದ ರಲ್ವೇ ಮಾರ್ಗಗಳು, ಅಣು ವಿದ್ಯುತ್ ಕೇಂದ್ರಗಳು ಗಣಿಗಾರಿಕೆ, ಅವೈಜ್ಞಾನಿಕ ಅಣೆಕಟ್ಟುಗಳು, ಅರಣ್ಯನಾಶ, ಈ ಎಲ್ಲಾ ನಿಮ್ಮ ಹೊಸ‌ಚಿಂತನೆಗಳಿಂದ ನಾನು ದಣಿದು ಹೋಗಿದ್ದೇನೆ. ಇದೇ ನನ್ನ ಅನಿಸಿಕೆ.

ಮನುಷ್ಯ: ನಿನಗೆ ಸಾವಿಲ್ಲ ಎಂದು ಕೇಳಲ್ಪಟ್ಟಿದ್ದೇವೆ ನಿಜವೇ?

ಭೂಮಿತಾಯಿ: ಎಲ್ಲರೂ ಹಾಗೆ ಅಂದು ಕೊಂಡಿದ್ದೀರಿ ಮತ್ತು ಅದು ನಿಜವೂ ಇರಬಹುದು. ಆದರೆ ಇತ್ತೀಚೆಗೆ ನನ್ನ ಆರೋಗ್ಯ ಹದಗೆಟ್ಟ ಪರಿಣಾಮವಾಗಿ ನಾನು ಸಾಗಬಹುದು ಎಂಬ ಸಂಶಯ ನನ್ನಲ್ಲಿ ಮನೆ ಮಾಡುತ್ತಿದೆ. ನನ್ನ ಒಡಲೊಳಗಿನ ಸತ್ವವೆಲ್ಲ ಬರಿದಾಗಿ ನಾನು ಖಾಲಿಯಾಗುತ್ತಿದ್ದೇನೆ. ಸತ್ವವಿಲ್ಲದೆ ಬಸವಳಿದು ಹೋಗಿದ್ದೇನೆ. ನನ್ನ ಕಣ್ಣೀರಿನ ಪ್ರವಾಹಕ್ಕೆ ನನ್ನ ಆಭರಣಗಳಾದ ಪರ್ವತ ಶಿಖರಗಳು ಕೊಚ್ಚಿಹೋಗುತ್ತಿವೆ. ಎಷ್ಟು ಅಶಕ್ತಳಾಗಿದ್ದೇನೆ ಎಂದರೆ ನನ್ನ ಮೈಯನ್ನೇ ಭಲವಾಗಿ ಹಿಡಿದುಕೊಳ್ಳಲಾಗದೆ ಒಂದೊಂದೇ ಪಾರ್ಶ್ವಗಳನ್ನು ಕಳೆದುಕೊಂಡಿದ್ದೇನೆ. ಹೀಗೆ ಆದರೆ ನನ್ನ ಅಳಿವು ಖಚಿತ.

ಸುಮಾ.ಕಂಚೀಪಾಲ್

ವಿಶ್ವವಾಣಿ ಪ್ರಕಟಿತ ಬರಹ


Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...