ಪೂಜಿಸುವ ದೇವಿಯ ಬಾಹ್ಯ ರೂಪ.
"ಅರ್ಚಕಸ್ಯ ಪ್ರಭಾವೇನ ಶೀಲಾ ಭವತಿ ಶಂಕರ" ಎಂಬ ಮಾತಿದೆ. ಮನುಷ್ಯನು ತನ್ನ ಭಕ್ತಿಯಿಂದ ಕಲ್ಲನ್ನು ದೇವರನ್ನಾಗಿ ಕಾಣಬಹುದು, ಏಕಲವ್ಯ ಕಲಿತ ವಿದ್ಯೆಯ ಹಾಗೆ.
ವರ್ತಮಾನದಲ್ಲಿ ಹಲವಾರು ಅಡೆತಡೆಗಳಿಂದ ದೇವಾಲಯದ ಬಾಗಿಲು ಮುಚ್ಚಿದೆ.
ಮನದ ಭಕ್ತಿಯು ಗುಡಿಯ ಬಾಗಿಲು ತಟ್ಟುವ ಅವಕಾಶ ಕಡಿಮೆಯಾಗಿದೆ. ಸಾಲುಗಟ್ಟಿ ನಿಂತು ದೇವರ ದರ್ಶನ ಮಾಡುವ ಭಾಗ್ಯ ಇಲ್ಲವಾಗಿದೆ. ಹತ್ತು ಹಲವು ಆಯಾಮಗಳಲ್ಲಿ ದೇವರನ್ನು ತಲುಪುವ ಪ್ರಯತ್ನ ಮನುಷ್ಯ ಮಾಡುತ್ತಿದ್ದಾನೆ. ಅದು ಎಲ್ಲಿಯವರೆಗೆ ಎಂದರೆ ಬೆಳಗಿನ ಅವಧಿಯ ನೇರ ಪ್ರಸಾರದಲ್ಲಿ ದೇವರ ದರ್ಶನ ಮಾಡುವ ಹಂತಕ್ಕೆ ಬಂದು ತಲುಪಿದ್ದಾನೆ.
ರಾಜ ಶಂತನು ಗಂಗಾ ಮಾತೆಯನ್ನು ತಡೆಯುತ್ತಿರುವ ದೃಶ್ಯ. ( ರವಿವರ್ಮ ಪೇಂಟಿಂಗ್)
ರವಿವರ್ಮ ಕುಂಚದಲ್ಲಿ ಮೂಡಿದ ದೇವರ ಚಿತ್ರವನ್ನು ಇಂದು ಹಲವೆಡೆ ಪೂಜಿಸಲಾಗುತ್ತಿದೆ. ನಿಜವಾಗಿಯೂ ಆ ರೂಪ ಓರ್ವ ವೇಶ್ಯೆಯ ಅಲಂಕಾರದಿಂದ ಬಂದದ್ದು. ರವಿವರ್ಮ ಎಂಬ ಚಿತ್ರಕಾರನು ಆ ಹೆಣ್ಣಿಗೆ ಅಡಿಯಿಂದ ಮುಡಿಯವರೆಗೂ ಅಲಂಕರಿಸಿ ಅವಳನ್ನು ಪೂಜೆಮಾಡಿ
ರಚಿಸಿದ ಚಿತ್ರ ಚರ್ಚೆಗೆ ಗ್ರಾಸವಾಗಿತ್ತು. ರಂಗ ರಸಿಯಾ ಎನ್ನುವ ಚಲನಚಿತ್ರವನ್ನು ನೋಡಿದ್ದಲ್ಲಿ ಇದರ ಬಗ್ಗೆ ತಿಳಿದಿರಬಹುದು. ಯೂಟ್ಯೂಬ್ ನಲ್ಲಿಯೂ ಈ ಚಿತ್ರ ನೋಡಲು ಅವಕಾಶ ಇದೆ. ಪುರಾಣದ ಕಥೆಗಳನ್ನು ಆಧರಿಸಿ ಅ ರೂಪಗಳನ್ನು ಕಲ್ಪಿಸಿಕೊಂಡು ತಾನೆ ಸೃಷ್ಟಿಸಿದ ರವಿವರ್ಮನ ಕಲ್ಪನೆಗಳನ್ನು ನಾವು ಪೂಜಿಸುತ್ತಿದ್ದೇವೆ.
ಮಾತೆ ಸರಸ್ವತಿ - ರವಿವರ್ಮ
ದೇವರನ್ನು ಮಾರಬಾರದು ಎನ್ನುವ ಚಿಂತನೆಗಳು ಹುಟ್ಟಿಕೊಂಡಿದ್ದವು.
ಆದರೆ ಇಂದು ಈ ಪೋಟೋ ನೋಡಿದ ತಕ್ಷಣ ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ತಕ್ಷಣ ಶೇರ್ ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಮನುಷ್ಯನೊಬ್ಬ ರವಾನಿಸುವ ಹಂತಕ್ಕೆ ದೇವರು ಹಂಚಿಕೆಯ ವಸ್ತುವಾಗಿದ್ದಾನೆ.
ಸುಮಾ.ಕಂಚೀಪಾಲ್
( ರಂಗರಸಿಯಾ ಚಿತ್ರ ನೋಡಿ)
This comment has been removed by the author.
ReplyDelete