ರುದ್ರಪ್ರಯಾಗ ಭಯಾನಕ ನರಭಕ್ಷಕ.
ದೃಶ್ಯಗಳು ಕಣ್ಣೆದುರು ಬಂದಾಗ ನಾವು ಅದಕ್ಕೆ ಪ್ರತಿಯಾದ ಪ್ರತಿಕ್ರಿಯೆ ನೀಡುತ್ತೇವೆ. ಆದರೆ ಕೇವಲ ಬರವಣಿಗೆಗೆ ನಾವು ಅಷ್ಟು ಪ್ರಖರವಾದ ಪ್ರತಿಕ್ರಿಯೆಗೆ ಒಳಪಡುವಂತೆ ಮಾಡುವ ಬರವಣಿಗೆ ಅದು ತೇಜಸ್ವಿ ಅವರದ್ದು.
ರುದ್ರಪ್ರಯಾಗದ ಭಯಾನಕ ನರಭಕ್ಷಕ ಎಂಬ ಒಂದು ಹುಲಿಯ ಕುರಿತಾದ ಕಾದಂಬರಿ ಅದು ಜಿಮ್ ಕಾರ್ಬೆಟ್ ಎಂಬ ಬೇಟೆಗಾರನ "Man eating lepord of rudraprayaga" ಎಂಬ ಪುಸ್ತಕದ ಅನುವಾದಿತ ಕೃತಿ.
ಆ ಹುಲಿ ಪ್ರತಿನಿತ್ಯವೂ ಒಂದಲ್ಲಾ ಒಂದು ಜೀವವನ್ನು ಬಲಿ ತೆಗೆದುಕೊಳ್ಳದೇ ಬಿಡುತ್ತಿರಲಿಲ್ಲ.
ನಾವು ಪುಸ್ತಕ ಓದುತ್ತಿದ್ದೇವೆ ಎಂದಾದರೆ ಹುಲಿ ನಮ್ಮ ಸುತ್ತಲೇ ಓಡಾಡುತ್ತಿದೆ ಎಂದು ಅನಿಸುವಷ್ಟರ ಮಟ್ಟಿಗೆ ಇದು ನಮ್ಮ ಮೇಲೆ ಪ್ರಭಾವ ಬೀರುತ್ತದೆ.
ಈ ಕಾದಂಬರಿಯಲ್ಲಿ ಮುಖ್ಯವಾಗಿ ಹುಲಿಯನ್ನು ಬೇಟೆ ಆಡುವುದಕ್ಕಾಗಿ ಹೊಂಚುಹಾಕಿದ ಬೇಟೆಗಾರ ಹುಲಿಯ ಜಾಡನ್ನು ಹಿಂಬಾಲಿಸುವ ಪ್ರತೀ ಸನ್ನಿವೇಶಗಳೂ ಕಥಾವಸ್ತುವಾಗಿದೆ. ಸಂಜೆ ಆರರ ನಂತರ ಕತ್ತಲು ಆವರಿಸುವ ಹೊತ್ತಿಗಾಗಲೇ ಎಲ್ಲರು ಮನೆ ಸೇರಿಕೊಂಡು ಬಿಡಬೇಕು ಇಲ್ಲವೆಂದರೆ ಆ ಹುಲಿಯ ಅಂದಿನ ಹೊಟ್ಟೆ ತುಂಬಿಸುವ ಜೀವಿ ಇವರೇ ಆಗಿರತ್ತಾರೆ ಎಂಬುದು ಖಚಿತ.
ಮನೆಯಹತ್ತಿರದಲ್ಲಿ ರಾತ್ರಿ ಹೊತ್ತು ಮೂತ್ರವಿಸರ್ಜಿಸಲೆಂದು ಹೋದವರು ತಿರುಗಿ ಬರಲಿಲ್ಲ. ಕಟ್ಟಿಗೆ ತರಲು ಹೋದವರ ಪತ್ತೆ ಇಲ್ಲ. ಮನೆಯಂಗಳದಲ್ಲೆ ಆಡುತ್ತಿದ್ದ ಪುಟ್ಟ ಮಗುವೂ ಸಹ ನಾಪತ್ತೆ. ಮೊದಲೆಲ್ಲ ಇದು ಒಂದು ಭೂತದ ಕೈವಾಡ ಎಂದು ನಂಬಿದ್ದ ಹಳ್ಳಿಯ ಜನರಿಗೆ. ಹುಲಿಯ ಹೆಜ್ಜೆ ಗುರುತು ಸಾಕ್ಷಿಯಾಗುತ್ತದೆ.
ಪುಸ್ತಕ ಓದುತ್ತಿದ್ದ ನಮಗೂ ಬೇಟೆಗಾರನೊಟ್ಟಿಗೇ ಅಲೆಯುತ್ತಿದ್ದ ಅನುಭವ ಆಗುವುದಂತೂ ನಿಜ. ರಾತ್ರಿ ಪೂರ್ತಿ ಮರದ ಕೆಳಗೆ ಮೇಕೆ ಕಟ್ಟಿ ಹುಲಿಯ ಬರುವಿಕೆಗಾಗಿ ಕಾದು ಕುಳಿತ ಪ್ರಸಂಗ ವಿವರಿಸುತ್ತಿದ್ದರೆ, ನಾವು ಅದೇ ಮರದ ಮೇಲೆ ಕೂತು ಪುಸ್ತಕ ಓದುತ್ತಿರುವಂತ ಮಾಯಾ ಲೋಕ ಸೃಷ್ಟಿಯಾಗುತ್ತದೆ.
ಎರಡು ವರ್ಷಗಳಿಂದ ಹುಡುಕಾಡಿ
ಹುಲಿಯನ್ನು ಕೊಂದಲ್ಲಿಗೆ ಈ ಕೃತಿ ಕೊನೆಯಾಗುತ್ತದೆ.
ಸುಮಾ.ಕಂಚೀಪಾಲ್
Oho
ReplyDelete