ಪ್ರಾಣಿಗಳನ್ನು ಸಹ ಪೂಜಿಸಿ ದೇವರಂತೆ ಕಾಣುವ ಸಂಪ್ರದಾಯ ಮತ್ತು ಆಚರಣೆಗಳು ನಮ್ಮ ಭಾರತದಲ್ಲಿದೆ. ನಂದಿ, ಕಾಮಧೇನು, ನಾಗರ, ಇಲಿ, ವರಾಹ, ಕೂರ್ಮ, ಹುಲಿಯಪ್ಪ, ದತ್ತಾತ್ರೇಯನ ವಾಹನ ಶ್ವಾನ, ಹೀಗೆ ಹಲವಾರು ಪ್ರಾಣಿಗಳಿಗೂ ಪೂಜನೀಯ ಸ್ಥಾನ ಇದೆ. ಇಂದು ವಿಶೇಷವಾಗಿ ನಾಗದೇವರ ಹಬ್ಬ ನಾಗರಪಂಚಮಿ.
ನಾಗರಪಂಚಮಿ ಹಬ್ಬವನ್ನು ಒಂದೊಂದು ಕಡೆಯ ಒಂದೊಂದು ತರನಾಗಿ ವಿಭಿನ್ನ ಆಚರಣೆಗಳ ಮೂಲಕ ಆಚರಿಸಲಾಗುತ್ತದೆ. ಪ್ರಾದೇಶಿಕತೆಗೆ ತಕ್ಕಂತೆ ಆಚರಣೆಯ ವಿಧಾನಗಳು ಭಿನ್ನವಾಗುತ್ತದೆ.
ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಬಯಲುಸೀಮೆಯವರ ಬಾಯಿಂದ ಕೇಳಬಹುದು. ನಾಗರಪಂಚಮಿಯಂದು ಹಲವಾರು ಬಗೆಯ ಉಂಡೆಗಳನ್ನು ಮಾಡಿ ನೈವೇದ್ಯ ನೀಡುವುದು ಅವರ ಸಂಪ್ರದಾಯ. ನಾಗರ ಪ್ರತಿಮೆಗೆ ಹಾಲೆರೆದು ಅರಶಿನ ಹಚ್ಚಿ ಪೂಜಿಸಲಾಗುತ್ತದೆ.
ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯಲ್ಲಿ ಜೀವಂತ ಹಾವುಗಳನ್ನು ತಂದು ಅವುಗಳಿಗೆ ಪೂಜೆ ಮಾಡಿ ಮತ್ತೆ ಅವನ್ನು ಕಾಡಿಗೆ ಬಿಡುವ ಸಂಪ್ರದಾಯವಿದೆ ಕೇಳಿದ್ರೆ ದಂಗಾಗುತ್ತೆ ಅಲ್ವಾ.? ಮತ್ತೆ ನಾಗರ ಪಂಚಮಿ ಹಬ್ಬಕ್ಕೆ ಅಕ್ಕ ತಮ್ಮಂದಿರ ಹಬ್ಬ ಅಂತಲೂ ಹೆಸರಿದೆ ಯಾಕೆ ಗೊತ್ತಾ?!
ಒಬ್ಬಾಕೆ ಹಾವು ಕಚ್ಚಿದ ತನ್ನ ತಮ್ಮನನ್ನು ಬದುಕಿಸಿಕೊಳ್ಳುತ್ತಾಳೆ. ಆ ಕಾರಣದಿಂದ ಈ ಹೆಸರು ಬಂದಿದೆ ಎನ್ನುತ್ತಾರೆ.
ನಾಗರಪಂಚಮಿಗೆ ಉಯ್ಯಾಲೆ ಕಟ್ಟಿ ಅದರಲ್ಲಿ ಕೂತು ಆಡುವುದು ಇದೆ. ಇನ್ನು ಶ್ರೀ ಕೃಷ್ಣ ಕಾಳಿಂಗ ಮರ್ದನ ಮಾಡಿದ ನೆನಪಿಗೂ ಈ ಹಬ್ಬ ಎನ್ನುತ್ತಾರೆ. ಎಷ್ಟೋ ಕಡೆ ಲೆಕ್ಕಕ್ಕೆ ಸಿಗದಷ್ಟು ನಾಗರ ಹಾವಿನ ಚಿತ್ರವಿರುವ ಶಿಲೆಗಳಿವೆ. ಕುಕ್ಕೆ ಸುಭ್ರಮಣ್ಯ ನಾಗದೇವರಿಗೆ ಹೆಸರಾದ ದೇವಾಲಯ. ಇನ್ನು ಹಬ್ಬದ ಆಚರಣೆಯ ವಿಶೇಷ ತಿಂಡಿಗಳಾಗಿ ಪಾತೋಳಿ ಅಂದರೆ ಕಡುಬು ಮಾಡುತ್ತಾರೆ. ಅಕ್ಕಿ ಹಿಟ್ಟು, ಬೆಲ್ಲ ,ಕಾಯಿತುರಿ ಹೀಗೆ
ಆದರೆ ಯಲ್ಲಾಪುರದಲ್ಲಿ ಹಲಸಿನ ಬೇಳೆಯ ಒಬ್ಬಟ್ಟು ಮಾಡುವುದು ನಡೆದುಕೊಂಡು ಬಂದ ರೂಢಿ. ಇನ್ನು ಶಿರಸಿಯಲ್ಲಿ ನಾಗರಪಂಚಮಿಯಂದು ಮದರಂಗಿ ಅರೆದು ಮನೆಯವರೆಲ್ಲಾ ಕಾಲು ಕೈಗಳಿಗೆ ಮೆತ್ತಿಕೊಳ್ಳುವ ಪದ್ದತಿ ಇದೆ.ಹೀಗೆ ಹಲವಾರು ಬಗೆಯಲ್ಲಿ ನಾಗಪ್ಪನ ಪೂಜೆಗೆ ಅದರದೇ ಆದ ಬಗೆ ಬಗೆಯ ಆಚರಣೆಗಳಿವೆ. ನಾಗರ ನೆಡೆ ಎಂಬ ಪದವನ್ನು ನಾನು ಹಲವಾರು ಸಾರಿ ಕೇಳಿದ್ದೇನೆ ಹೀಗೆಂದರೆ. ನಾಗರ ಹಾವು ತಿರುಗಾಡುವ ಮಾರ್ಗ. ನಮ್ಮ ಕಡೆಯಲ್ಲಿ ನಾಗರ ಮೂರ್ತಿ ಇರುವ ಜಾಗ ಅಪವಿತ್ರವಾದರೆ ಮನೆಗೆ ಇರುವೆಗಳು ಬರುತ್ತವೆ. ಕೆಲವೊಮ್ಮೆ ಹಾವು ಬಂದಿರುವ ಘಟನೆಯೂ ಇದೆ.
ಹಿಂದಿನವರು ನಡೆದುಕೊಂಡ ಆಚಾರ ವಿಚಾರಗಳಲ್ಲಿ ಒಂದಲ್ಲಾ ಒಂದು ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಆ ಕಾರಣ ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸೋಣ ಓದುಗರೆಲ್ಲರಿಗೂ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಊರಲ್ಲಿ ಯಾವತರದ ಆಚರಣೆ ಇದೆ. ಇದಕ್ಕು ಭಿನ್ನವಾಗಿ ಏನಾದರೂ ಇದೆಯ?
ಸುಮಾ.ಕಂಚೀಪಾಲ್.
ನಾಗರಪಂಚಮಿ ಹಬ್ಬವನ್ನು ಒಂದೊಂದು ಕಡೆಯ ಒಂದೊಂದು ತರನಾಗಿ ವಿಭಿನ್ನ ಆಚರಣೆಗಳ ಮೂಲಕ ಆಚರಿಸಲಾಗುತ್ತದೆ. ಪ್ರಾದೇಶಿಕತೆಗೆ ತಕ್ಕಂತೆ ಆಚರಣೆಯ ವಿಧಾನಗಳು ಭಿನ್ನವಾಗುತ್ತದೆ.
ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಬಯಲುಸೀಮೆಯವರ ಬಾಯಿಂದ ಕೇಳಬಹುದು. ನಾಗರಪಂಚಮಿಯಂದು ಹಲವಾರು ಬಗೆಯ ಉಂಡೆಗಳನ್ನು ಮಾಡಿ ನೈವೇದ್ಯ ನೀಡುವುದು ಅವರ ಸಂಪ್ರದಾಯ. ನಾಗರ ಪ್ರತಿಮೆಗೆ ಹಾಲೆರೆದು ಅರಶಿನ ಹಚ್ಚಿ ಪೂಜಿಸಲಾಗುತ್ತದೆ.
ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯಲ್ಲಿ ಜೀವಂತ ಹಾವುಗಳನ್ನು ತಂದು ಅವುಗಳಿಗೆ ಪೂಜೆ ಮಾಡಿ ಮತ್ತೆ ಅವನ್ನು ಕಾಡಿಗೆ ಬಿಡುವ ಸಂಪ್ರದಾಯವಿದೆ ಕೇಳಿದ್ರೆ ದಂಗಾಗುತ್ತೆ ಅಲ್ವಾ.? ಮತ್ತೆ ನಾಗರ ಪಂಚಮಿ ಹಬ್ಬಕ್ಕೆ ಅಕ್ಕ ತಮ್ಮಂದಿರ ಹಬ್ಬ ಅಂತಲೂ ಹೆಸರಿದೆ ಯಾಕೆ ಗೊತ್ತಾ?!
ಒಬ್ಬಾಕೆ ಹಾವು ಕಚ್ಚಿದ ತನ್ನ ತಮ್ಮನನ್ನು ಬದುಕಿಸಿಕೊಳ್ಳುತ್ತಾಳೆ. ಆ ಕಾರಣದಿಂದ ಈ ಹೆಸರು ಬಂದಿದೆ ಎನ್ನುತ್ತಾರೆ.
ನಾಗರಪಂಚಮಿಗೆ ಉಯ್ಯಾಲೆ ಕಟ್ಟಿ ಅದರಲ್ಲಿ ಕೂತು ಆಡುವುದು ಇದೆ. ಇನ್ನು ಶ್ರೀ ಕೃಷ್ಣ ಕಾಳಿಂಗ ಮರ್ದನ ಮಾಡಿದ ನೆನಪಿಗೂ ಈ ಹಬ್ಬ ಎನ್ನುತ್ತಾರೆ. ಎಷ್ಟೋ ಕಡೆ ಲೆಕ್ಕಕ್ಕೆ ಸಿಗದಷ್ಟು ನಾಗರ ಹಾವಿನ ಚಿತ್ರವಿರುವ ಶಿಲೆಗಳಿವೆ. ಕುಕ್ಕೆ ಸುಭ್ರಮಣ್ಯ ನಾಗದೇವರಿಗೆ ಹೆಸರಾದ ದೇವಾಲಯ. ಇನ್ನು ಹಬ್ಬದ ಆಚರಣೆಯ ವಿಶೇಷ ತಿಂಡಿಗಳಾಗಿ ಪಾತೋಳಿ ಅಂದರೆ ಕಡುಬು ಮಾಡುತ್ತಾರೆ. ಅಕ್ಕಿ ಹಿಟ್ಟು, ಬೆಲ್ಲ ,ಕಾಯಿತುರಿ ಹೀಗೆ
ಆದರೆ ಯಲ್ಲಾಪುರದಲ್ಲಿ ಹಲಸಿನ ಬೇಳೆಯ ಒಬ್ಬಟ್ಟು ಮಾಡುವುದು ನಡೆದುಕೊಂಡು ಬಂದ ರೂಢಿ. ಇನ್ನು ಶಿರಸಿಯಲ್ಲಿ ನಾಗರಪಂಚಮಿಯಂದು ಮದರಂಗಿ ಅರೆದು ಮನೆಯವರೆಲ್ಲಾ ಕಾಲು ಕೈಗಳಿಗೆ ಮೆತ್ತಿಕೊಳ್ಳುವ ಪದ್ದತಿ ಇದೆ.ಹೀಗೆ ಹಲವಾರು ಬಗೆಯಲ್ಲಿ ನಾಗಪ್ಪನ ಪೂಜೆಗೆ ಅದರದೇ ಆದ ಬಗೆ ಬಗೆಯ ಆಚರಣೆಗಳಿವೆ. ನಾಗರ ನೆಡೆ ಎಂಬ ಪದವನ್ನು ನಾನು ಹಲವಾರು ಸಾರಿ ಕೇಳಿದ್ದೇನೆ ಹೀಗೆಂದರೆ. ನಾಗರ ಹಾವು ತಿರುಗಾಡುವ ಮಾರ್ಗ. ನಮ್ಮ ಕಡೆಯಲ್ಲಿ ನಾಗರ ಮೂರ್ತಿ ಇರುವ ಜಾಗ ಅಪವಿತ್ರವಾದರೆ ಮನೆಗೆ ಇರುವೆಗಳು ಬರುತ್ತವೆ. ಕೆಲವೊಮ್ಮೆ ಹಾವು ಬಂದಿರುವ ಘಟನೆಯೂ ಇದೆ.
ಹಿಂದಿನವರು ನಡೆದುಕೊಂಡ ಆಚಾರ ವಿಚಾರಗಳಲ್ಲಿ ಒಂದಲ್ಲಾ ಒಂದು ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಆ ಕಾರಣ ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸೋಣ ಓದುಗರೆಲ್ಲರಿಗೂ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಊರಲ್ಲಿ ಯಾವತರದ ಆಚರಣೆ ಇದೆ. ಇದಕ್ಕು ಭಿನ್ನವಾಗಿ ಏನಾದರೂ ಇದೆಯ?
ಸುಮಾ.ಕಂಚೀಪಾಲ್.
Comments
Post a Comment