Skip to main content

ಅಕ್ಕೋರಾಗೋದು ಸುಲಭ ಅಲ್ಲ

ಅಕ್ಕೋರಾಗುವುದು ತುಂಬಾ ಕಷ್ಟ ಇದೆ. ನಾನು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ನನ್ನ ಚಿಕ್ಕಮ್ಮನ ಮಗಳನ್ನು ಕರೆದುಕೊಂಡು ಹೋಗಿದ್ದೆ. ಎಲ್ಲಾ ಮಕ್ಕಳಿಗೂ ರಜ. ಅರವತ್ತಕ್ಕೂ ಹೆಚ್ಚು ಮಕ್ಕಳು ಅಲ್ಲಿ ಹಾಜರಿದ್ದರು. ಒಂದೊಂದು ತರಗತಿಯವರನ್ನು ಒಂದೊಂದು ಕಡೆ ಕೂರಿಸಿದ್ದರು. ಅವರ ಗಲಾಟೆಯನ್ನು ಕೇಳಲಾಗದೆ ಸಭಾ ಭವನವೇ ಅಳುತ್ತಿತ್ತು. ಕೆಳಗಡೆ ದೇವಸ್ಥಾನ. ಆ ದೇವರಿಗೂ ಅನಿಸಿರಬಹುದು ಅಬ್ಬಾ! ಈ ಮಕ್ಕಳು ಎಷ್ಟು ಗಲಾಟೆ ಮಾಡ್ತಾರೆ ಅಂತ. ಮದುವೆ ಮನೆಯಲ್ಲಾದರೂ ಇನ್ನಷ್ಟು ಶಾಂತ ವಾತಾವರಣ ಇರುತ್ತದೆ. 
ಆದರೆ, ಇಲ್ಲಿ ಮಾತ್ರ ಕೋಲಾಹಲ. ಕಾರ್ಯಕ್ರಮ ಆಯೋಜನೆ ಮಾಡುವವರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಹೇಗೆ ಕೂರಿಸಬೇಕು? ಎಲ್ಲಿ ಕೂರಿಸಬೇಕು? ಅವರ ವಯೋಮಾನದ ಮಿತಿಯನ್ನು ಎಷ್ಟರವರೆಗೆ ನಿಗದಿಪಡಿಸಬೇಕು ಇದ್ಯಾವುದನ್ನೂ ಸರಿಯಾಗಿ ನಿಗದಿ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕಾಗಿ  ಇನ್ನಷ್ಟು ಗಲಿಬಿಲಿಯಾಯಿತು. ಜಡ್ಜ್ ಬಂದು ಇನ್ನು ನಾನು ತೀರ್ಪು ನೀಡಬಹುದಾ ಎಂದರು. ಮೂರು ಗಂಟೆಗೆ ಮಕ್ಕಳು ಚಿತ್ರ ಬಿಡಿಸಲಾರಂಭಿಸಿದ್ದಾರೆ ಎಂಬ ಕಲ್ಪನೆ ಅವರದು. ನಾಕು ಗಂಟೆಯಾದರೂ ಇನ್ನೂ ಮಕ್ಕಳ ಕೈಗೆ ಬಣ್ಣ ಅಂಟಿರಲಿಲ್ಲ.  ಇನ್ನು ಅವರ ಜೊತೆಗೂಡಿ ಬಂದ ಪಾಲಕರದ್ದು ಇನ್ನೊಂದು ತರ. ರಜಾ ದಿನಗಳಲ್ಲೇ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡ ಅದೆಷ್ಟೋ ಜನರಿಗೆ ನಿಗದಿತ ಸಮಯ ಜಾರುತ್ತಿರುವುದು ಇನ್ನಷ್ಟು ತಲೆಕೆಡಿಸಿತು. 
ಮನೆಯಿಂದ ಹೆಂಡತಿಯ ಪೋನು ಬರಲಾರಂಬಿಸಿದರೆ, ಇನ್ನು ಕೆಲವರಿಗೆ ಸಂಜೆಯ ಅಡುಗೆ ನೆನಪಾಗುತ್ತಿರಬಹುದು. ಇನ್ನು ಹೊರಗಡೆ ಜೋರು ಮಳೆ. ಕೆಳಗಡೆ ದೇವಸ್ಥಾನದ ಬಟ್ಟರ ಹೆಂಡತಿ ಮಿಕ್ಸಿ ಕೂಗಿಸುತ್ತಿದ್ದರು. ಅಯ್ಯೊ ಒಂದು ಮನುಷ್ಯ ಎಷ್ಟು ಅಂತ ತಡೆದುಕೊಳ್ಳುವುದು ಎನಿಸತೊಡಗಿತು. ಆ ಮಕ್ಕಳನ್ನು ನೋಡಿ‌ ನನ್ನ ಬಾಲ್ಯವೂ ನೆನಪಾಯಿತು. ಇನ್ನು ಪಾಲಕರಲ್ಲೇ ಕೆಲವರು ಟೀಚರ್ಸ್ ಇದ್ದರು. ಅವರೆಲ್ಲ ಕಪ್ಪೆಯನ್ನು ಕೊಳಗದಲ್ಲಿ ತುಂಬಿದಂತೆ ಒಬ್ಬೊಬ್ಬರನ್ನೇ ಕೂಗಿ, ಕಿರುಚಿ, ಗದರಿ ಕೂರಿಸುವ ಪ್ರಯತ್ನ ಮಾಡಿದರು. 

ಅದು ಬರಿ ಪ್ರಯತ್ನವೇ ಆಗಿತ್ತು. "ಅವರೆಲ್ಲರ ಚೀರಾಟದ ನಡುವೆ ಇವರದ್ದೂ ಒಂದು ಇಲ್ಲಿಂದ ಹೊರಟೇ ಬಿಡ್ಬೇಕು" ಅಂತ ಅನಿಸಿತು. ಎಲ್ಲವನ್ನೂ ನೋಡುತ್ತಾ ಕುಳಿತ ನನಗೆ ಮನಸಿನಲ್ಲೇ ಪ್ರಾಥಮಿಕ ಶಾಲೆಯ ಟೀಚರ್ಸ್‌ಗಳ ನೆನಪಾಯಿತು. ಅದಕ್ಕೆ ಆಗಲೇ ಹೇಳಿದ್ದು ಅಕ್ಕೋರಾಗುವುದು ಕಷ್ಟ ಎಂದು. ಅಂತೂ ಯಾರೋ ಒಬ್ಬ ದೇವಸ್ಥಾನದ ಕಮೀಟಿಯವ ಬಂದು ಮೈಕು ಸರಿಮಾಡಿಕೊಟ್ಟ. ಈಗ ಸ್ಪರ್ಧೆ ಆರಂಭವಾಗಿದೆ. 

ಅದಾದ ಮೇಲೆ ಬೇಗ ಬೇಗ ಮಕ್ಕಳಿಗೆ ಸರಿಯಾಗಿ ಚಿತ್ರ ಬಿಡಿಸಲೂ ಅವಕಾಶ ಕೊಡದಂತೆ ಅರ್ಧಗಂಟೆಯಲ್ಲಿ ಮುಗಿಸೇಬಿಟ್ಟರು. ಕೆಲ ಮಕ್ಕಳು ಗಾಬರಿಯಾದರು, ಇನ್ನು ಕೆಲವರು ಸಮಯ ಸಾಲುತ್ತಿಲ್ಲ ಎಂದು ಅತ್ತರು, ಪಾಲಕರು ಹೀಗೆ ಮಾಡಬಾರದಿತ್ತು ಎಂದು ಹೀಗೆಲ್ಲ ಮಾಡುತ್ತಾ ಸ್ಪರ್ಧೆ ಮುಗೀತು. ನಂತರ ಪಾಲಕರಿಗೆ ಸಂಗೀತ ಕುರ್ಚಿ ಇತ್ತು. ಅದಾದ ನಂತರ ಬಹುಮಾನ ಕೊಟ್ರು ನಮ್ ಹುಡ್ಗಿ ವರ್ಷಾ ಮೊದಲ ಬಹುಮಾನ ಪಡೆದುಕೊಂಡಿದ್ದು ಈ ದಿನದ ಖುಷಿಯಾಗಿತ್ತು.


ಸುಮಾ ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...