Skip to main content

Posts

Showing posts from June, 2024

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.  ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.  ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನ...

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ. ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ. ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದ...

ನಿಧಿ

ಅದು ಹುಣ್ಣಿಮೆ ರಾತ್ರಿ. ಗೋಪಾಲಯ್ಯ ತನ್ನ ಹೆಂಡತಿಯೊಟ್ಟಿಗೆ ಮಲಗಿದ್ದವರು ಹಾಗೆ ಒಮ್ಮೆ ಕಿಟಕಿತ್ತ ನೋಡಿದರು. ತೆಂಗಿನ ಮರದ ಎಲೆಗಳು ಅಲ್ಲಾಡುತ್ತಿದ್ದವು. ಒಂಥರಾ ಆತಂಕ ಇದುವರೆಗೆ ಎಂದೂ ಆ ರೀತಿ ಆಗಿರಲೇ ಇಲ್ಲ ಅನ್ನೋತರ! ಕಣ್ಮುಚ್ಚಿದ್ರು ಕಣ್ಣುತೆರೆದ್ರೂ ಈಶ್ವರನ ಲಿಂಗವೇ ಕಾಣುತ್ತಿದ್ದವು. ಯಾಕೋ ನಿದ್ದೆನೇ ಬರ್ತಾ ಇಲ್ವಲ್ಲ ಅಂತ ಮನಸ್ಸಿನಲ್ಲಿ ಅಂದ್ಕೊಂಡು ಮತ್ತೆ ಆ ಕಡೆ ಈ ಕಡೆ ಹೊರಳಾಡಿ ಕಣ್ಮುಚ್ಚಿದರು. ಕಣ್ಮುಚ್ಚಿದ್ರೂ ಕೂಡ ತಾನು ಪೂಜೆ ಮಾಡ್ತಾ ಇದ್ದ ದೇವಸ್ಥಾನದ ಈಶ್ವರ ಲಿಂಗವೇ ಕಾಣುತ್ತಿತ್ತು. ನಿದ್ರೆಯಲ್ಲಿ, ಕನಸಿನಲ್ಲೂ ಕೂಡ ಅದೇ ದೇವಸ್ಥಾನ! ಅವರಿಗೆ ಆಶ್ಚರ್ಯ ಆಗುತ್ತೆ. ಏನಿದು? ಎರಡು ಮೂರು ದಿನದಿಂದ ಒಂದೇ ಕನಸು ಪದೇ ಪದೇ ಬೀಳ್ತಾ ಇದೆಯಲ್ಲ, ಏನಿದರ ಅರ್ಥ ಅಂತ ಯಾವಾಗಲೂ ಯೋಚನೆ ಗೋಪಾಲಯ್ಯರದು. (ನಾನು ಎಷ್ಟುದ್ದದ ಕಥೆಯನ್ನು ಬರೆಯಬಲ್ಲೆ ಎಂದು ನೋಡುವ ಸಲುವಾಗಿ ಇದನ್ನು ಬರೆದೆ. ಹಾಗೆಯೇ ಈ ಕಥೆಗೆ ಸಂಬಂಧಿಸಿದ ಫೋಟೊ ನನ್ನಲ್ಲಿಲ್ಲದ ಕಾರಣ ಗ್ಯಾಲರಿಯಲ್ಲಿರುವುದನ್ನೇ ಬಳಸಿದ್ದೇವೆ) ಆ ಊರಲ್ಲಿ ಗೋಪಾಲಯ್ಯ ಪೂಜೆ ಮಾಡುತ್ತಿದ್ದ ದೇವಸ್ಥಾನಕ್ಕೆ ಸಂಬಂಧಪಟ್ಟ ನಿಧಿಯಿದೆ ಎಂಬುದನ್ನು ಅರಿತಿದ್ದ ಕೆಲವರು ಆ ಊರಿಗೆ ಆಗಮಿಸಿದ್ದರು. ಅವರು ಬಂದ ವಿಚಾರ ಮಾತ್ರ ಗೌಪ್ಯವಾಗಿತ್ತು. ಕೇವಲ ಪ್ರವಾಸಕ್ಕೆ ಬಂದವರಂತಹ ನಟನೆ ಅವರದ್ದಾಗಿತ್ತು. ಗೋಪಾಲಯ್ಯನವರ ಬಳಿ ಬಂದು ದೇವಸ್ಥಾನದ ವಾಸ್ತುಶಿಲ್ಪ ತುಂಬಾ ಚೆನ್ನಾಗಿದೆ. ನೀವು ನಮಗೆ...