Skip to main content

ಏನೆಂದು ನಾ ಹೇಳಲಿ

ರಾತ್ರಿ ನಾನು ಇದನ್ನು ಬರೆಯಲು ಆರಂಭಿಸಿದಾಗ ಸಮಯ ಸರಿಯಾಗಿ 12: 24 ಊರಲ್ಲಿ ದೊಡ್ಡ ಕಾರ್ಯಕ್ರಮ, ಊರಿನ ಯಾವ ಮನೆಯಲ್ಲೂ ಜನ ಇಲ್ಲ ಅಥವಾ ತೀರಾ ವಿರಳ ಎಂದೇ ಹೇಳಬಹುದು. ಹೀಗಿರುವಾಗ ದಿನಾಂಕ 28 ಜನವರಿ 2024 ಬಿಗ್​ ಬಾಸ್​ ಫೈನಲ್ ಇತ್ತು, ಮೈತ್ರಿ ಕಲಾ ಬಳಗದಲ್ಲಿ ರಜತ ಮಹೋತ್ಸವ ಇತ್ತು. ನನಗೆ ಎರಡೂ ಮುಖ್ಯ ಒಂದು ಸ್ವಾಮಿ ಕಾರ್ಯ (ಆಫಿಸ್​ ವರ್ಕ್​ ಇದೆ) ಇನ್ನೊಂದು ಸ್ವಕಾರ್ಯ (ತಮ್ಮನ ಸಿಂಹ ನೃತ್ಯ ಇದೆ) ನನಗೂ 25 ವರ್ಷ ಕಲಾ ಬಳಗಕ್ಕೂ ಇಪ್ಪತ್ತೈದು ವರ್ಷ ಆ ಕಾರಣ ನಮ್ಮ ಮನೆಯಲ್ಲಿ ಅಲ್ಲಿ ನಡೆಯೋ ಕಾರ್ಯಕ್ರಮ ನೋಡಲು ಎಲ್ಲರೂ ಹೋಗಿದ್ದಾರೆ. ನನಗೆ ಸುದ್ದಿ ಮಾಡುತ್ತಾ ಇರುವಷ್ಟು ಹೊತ್ತು ಅತ್ತಿತ್ತ ಗಮನ ಇರಲಿಲ್ಲ. ಆದ್ರೆ ಈಗ ಮುಗಿದಿದೆ. ಜಗುಲಿಯಲ್ಲಿ ಏನೋ ಸದ್ದಾಗ್ತಾನೆ ಇದೆ.
ಇದು ಅಜ್ಜ

ಸ್ವಾಮಿ‌ ಕಾರ್ಯ (ಇದರಲ್ಲೂ ಖುಷಿ ಇದೆ)

ಅದರಿಂದ ಗಮನವನ್ನು ಬೇರೆಕಡೆ ಕೊಂಡೊಯ್ಯಲೇ ಬೇಕು ಇಲ್ಲ ಮನೆಯವರು ಬರುವ ಮೊದಲೇ ನಾನು ಹೆದರಿ ಕಂಗಾಲಾಗಿ ಮೈ ನಡುಗುತ್ತದೆ. ಎಷ್ಟು ಸಾರಿ ಬೆಚ್ಚಿ ಬೀಳುತ್ತೇನೆ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ. ಮೊದಲೇ ಮುಗಿದರೆ ನಾನೂ ಕಾರ್ಯಕ್ರಮ ನೋಡೋಣ ಅಂತಿದ್ದೆ. ಆದರೆ ಅದು ಸಾಧ್ಯ ಆಗಲಿಲ್ಲ. ಲೈವ್ ಇತ್ತು ಅದನ್ನು ನೋಡ್ತಾ ಕುಳಿತಿದ್ದೆ. ಅಜ್ಜ ಉಳಿಸುಕೊಂಡು ಬಂದಿದ್ದ ಕಲೆ ಮುಂದುವರೆಸುವ ಆಶಯದಿಂದ ತಮ್ಮ ಈ ವರ್ಷ ಅಂದರೆ ಅಜ್ಜ ತೀರಿಕೊಂಡ ವರ್ಷವೇ ವೇಷ ಹಾಕುತ್ತಿದ್ದಾನೆ. 

ಇದು ತಮ್ಮ

ಜಗುಲಿಯಲ್ಲಿ ನೇತುಹಾಕಿದ್ದ ಅಜ್ಜನ ಫೋಟೋದ ಕೆಳಗೆ ಒಂದು ಪ್ಲಾಸ್ಟಿಕ್ ಚೇರ್ ಕೂಡ ಇರುತ್ತದೆ. ಅಜ್ಜನೇ ಮೃದಂಗ, ಚಂಡೆಯ ತಾಳಕ್ಕೆ ಕುಣಿದನೇ ಅನ್ನೋ ರೀತಿ ಶಬ್ಧ ಆಯ್ತು. ನನಗೆ ಭಯವಾಯ್ತು ಮನೆಯಲ್ಲಿ ನಾನೊಬ್ಬಳು. ಮತ್ತೊಂದು ವಿಚಾರ ಎಂದರೆ ಕಾರ್ಯಕ್ರಮದ ಮೈಕ್ ಶಬ್ಧ ಇಲ್ಲಿವರೆಗೆ ಕೇಳ್ತಾ ಇದೆ. ಅಲ್ಲಿ ಕೂರ್ಚಿಯ ಮೇಲೆ ಹಾರಿದ್ದು ಪಲ್ಲಿ ಹಿಡಿಯಲು ಹೋದ ಬೆಕ್ಕು ಎಂಬುದು ನನಗೆ ನಿಕ್ಕಿ ಇದೆ. ಆದರೂ ಈ ಹುಚ್ಚು ಕಲ್ಪನೆಗಳು ಯಾವಾಗಲೂ ಭಯ ಹುಟ್ಟಿಸುತ್ತದೆ. 

ಕಲಾ ಬಳಗದ ನೆನಪಿನಂಗಳ

ನನ್ನ ನಾಕಾರು ಗೆಳತಿಯರು ಬಂದಿದ್ದಾರೆ. ಅವರೆಲ್ಲ ಸೇರಿ ಯಕ್ಷಗಾನ ನೋಡುತ್ತಾ ಇದ್ದಾರೆ. ಶಾಲೆಯ ಗ್ಯಾದರಿಂಗ್​ನಲ್ಲಿ ಮಕ್ಕಳು ಕುಣಿಯುವುದನ್ನು ನೋಡಲು ನನಗೆ ತುಂಬಾ ಇಷ್ಟ ಯಾಕೆಂದರೆ ನನಗೆ ನನ್ನ ಬಾಲ್ಯ ಕಣ್ಮುಂದೆ ಬರುತ್ತದೆ. ನಾನು ಕುಣಿಯುವ ಅವಕಾಶವನ್ನು ಭಾಗಶಃ ಕಳೆದುಕೊಂಡಿದ್ದೇನೆ. ಇಂದು ಮತ್ತೆ ಶಾಲೆ ಮಕ್ಕಳ ನೃತ್ಯ ಇತ್ತೂ ಅದೂ ತಪ್ಪಿ ಹೋಯಿತು. 

ಕೈಯ್ಯಿಗ್​ ಬಂದ್ರೂ ಬಾಯಿಗ್​ ಬೈಂದ್ಲೆ ಅನ್ನೋತರ ನನ್ನ ಪರಿಸ್ಥಿತಿ ಈಗಾಗಿದೆ. ಇಷ್ಟೊತ್ತು ಇದನ್ನಾದ್ರೂ ಬರೆದೆ ಈಗ ಚಂಡೆ ಅಬ್ಬರ ಇನ್ನೂ ಹೆಚ್ಚಾಗಿದೆ ಇಲ್ಲಿ ಕುಳಿತುಕೊಳ್ಳುವ ಬದಲು ಬ್ಯಾಟರಿ ಹಿಡಿದು ಓಡಿಕೊಂಡು ಹೋಗಿ ಬಿಡೋಣ ಅಂತ ಅನಿಸುತ್ತಿದೆ. ಬರೆಯುವುದನ್ನು ನಿಲ್ಲಿಸಿದೆನಾದರೆ ಮತ್ತೆ ಯೋಚನೆಗಳು ಆರಂಭವಾಗುತ್ತದೆ. ಆ ಕಾರಣಕ್ಕಾಗಿ ಬರೆದ ಬ್ಲಾಗ್​ ಇದು. ಇನ್ನೊಂದು ರೆಡಿ ಇದೆ ನಿಮಗೆ ಆಶ್ವಾಸನೆ ಕೊಟ್ಟ ಬ್ಲಾಗ್​ ಅದು. ಅದನ್ನು ಇನ್ನೊಮ್ಮೆ ಪೋಸ್ಟ್​ ಮಾಡುತ್ತೇನೆ. 


ಇಲ್ಲೊಂದು ವಿಶೇಷ ಇದೆ ಅದೇನ್ ಗೊತ್ತಾ ಬಿಗ್​ ಬಾಸ್​ ನೋಡಲು ಇಷ್ಟ ಇಲ್ಲದ ಎಷ್ಟೋಜನ ಇದ್ದಾರೆ, ಅದರಲ್ಲಿ ನಾನೂ ಒಬ್ಬಳು ಆದರೆ ಕೆಲಸಕ್ಕಾಗಿ ನೋಡಿದ್ದೇನೆ ಅದು ಅನಿವಾರ್ಯ ಕೂಡ. ಆಮೇಲೆ ನಾನು ಅದನ್ನು ಇಷ್ಟಪಡಲು ಆರಂಭಿಸಿಕೊಂಡಿದ್ದೆ. ಅದರಲ್ಲಿ ಮಹಿಳೆ ವಿನ್​ ಆಗಬೇಕಿತ್ತು ಎಂದಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಂದು ನಮ್ಮ ಊರಿನಲ್ಲಿ ಮಹಿಳೆಯರು ವಿನ್​ ಆಗಿದ್ದಾರೆ. 

ಇಂದು ನಡೆದ ತಾಳಮದ್ದಳೆಯಿಂದ ಹಿಡಿದು ನಿರೂಪಣೆ, ನೃತ್ಯ, ಯಕ್ಷಗಾನದವರೆಗೆ ಎಲ್ಲದರಲ್ಲೂ ಮಹಿಳೆಯರೇ ಇದ್ದಿದ್ದು ತುಂಬಾ ಖುಷಿಕೊಟ್ಟಿದೆ. ಒಂದೆಡೆ ಬಿಗ್​ ಬಾಸ್​ ಲೈವ್​ ಇನ್ನೊಂದೆಡೆ ನಮ್ಮೂರಿನ ಕಾರ್ಯಕ್ರಮದ ಲೈವ್​ ಎರಡನ್ನೂ ನೋಡುತ್ತಾ ಈ ವಿಚಿತ್ರ ರಾತ್ರಿಯನ್ನು ಕಳೆಯುತ್ತಿದ್ಧೇನೆ. ನೀವು ಬಹುಶಃ ನಾಳೆ ಬೆಳಿಗ್ಗೆ ಎದ್ದು ಇದನ್ನು ಓದಬಹುದು. 
ಗುಡ್​ ನೈಟ್​ ಹೇಳುತ್ತಾ, ಲೈಟ್​ ಆಫ್​ ಮಾಡದೇ ಮುಂದೇನು ಮಾಡಬೇಕೆಂದು ತಲೆಕೆರೆದುಕೊಳ್ಳುತ್ತಿರುವ ಇಂತಿ ನಿಮ್ಮ

ಸುಮಾ. ಕಂಚೀಪಾಲ್​

ಓದಿದ ಮೇಲೆ ಹಲವರು ನಿಮ್ಮ ಪ್ರತಿಕ್ರಿಯೆ ತಿಳಿಸುತ್ತೀರಿ ಅದರಂತ ಖುಷಿ ಇನ್ನೊಂದಿಲ್ಲ. ಇನ್ಮುಂದೆ ಸುಕಂ ಬ್ಲಾಗ್​ ಇನ್ನಷ್ಟು ಚಿಗುರಲಿದೆ ಕಾಯ್ತಾ ಇರಿ.

ಬರೆದು ಮುಗಿದಾಗ ಸಮಯ _12:49

Comments


  1. ಇಷ್ಟ ಆಯ್ತು ತುಂಬಾ. ಬರೆಯುತ್ತಾ ಇರು. ನಿನ್ನ ಬ್ಲಾಗ್ ಓದಲು ತುಂಬಾ ಖುಷಿ.

    ReplyDelete
  2. ಧನ್ಯವಾದ ತಮ್ಮ‌ ಹಾರೈಕೆ ಸದಾ ಇರಲಿ

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...