Skip to main content

ಪುರದ ಪುಣ್ಯ ಪುರುಷ

ಪುರದ ಪುಣ್ಯ ಪುರುಷ

ಅಂದು ದಕ್ಷಿಣ ಕನ್ನಡ ಜಿಲ್ಲೆಯ ತುಂಬ ಏನೋ ಒಂದು ಇಂಗಿತ ಆವರಿಸಿತ್ತು.  ಉಜಿರೆಯ ಅಂಗಡಿಗಳೆಲ್ಲ ಕದ ಹಾಕಿ ಕುಳಿತಿತ್ತು. ಎಲ್ಲರ ಮನಸಿನಲ್ಲೂ ಏನೋ ಒಂದು ಆತಂಕ. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಯುತ ಡಾ. ಯಶೋವರ್ಮ ಅವರು ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕಾಗಿ ಕಾದು ಕುಳಿತ ಜನರು ಅದರಲ್ಲಿ ನಾನು ಒಬ್ಬಳು. ಅವರ ಪುಣ್ಯ ದೇಹ ಕಂಡೊಡನೆ ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದ್ದದ್ದು ಒಂದೇ ವಾಕ್ಯ.



ಪುರದ ಪುಣ್ಯ ಪುರುಷ ರೂಪಿಂದೆ ಪೋಗುತಿಹುದು.

ನಾನು ಎಂದೂ ಯಶೋವರ್ಮ ಅವರನ್ನು ಭೇಟಿಯಾಗಿ ಮಾತನಾಡಿದವಳಲ್ಲ. ಆದರೂ ಕೆಲವು ಕಾರ್ಯಕ್ರಮಗಳಲ್ಲಿ ಅವರಾಡಿದ ಮಾತುಗಳನ್ನು ಕೇಳಿದ್ದೇನಷ್ಟೇ. ಕೊನೆಗೆ ಅವರ ಅಂತಿಮ ಯಾತ್ರೆಗೆ ಸೇರಿದ ಜನ ಸಾಗರವನ್ನು ನೋಡಿ ನಾನು ಅವರ ಹಿರಿಮೆಯ ಕುರಿತು ಅರಿತುಕೊಂಡೆ. ಯಾರಿಗೂ ಒತ್ತಾಯ ಪೂರ್ವಕವಾಗಿ ಅವರ ಅಂತಿಮ‌ ದರ್ಶನಕ್ಕೆ ಕಳುಹಿಸಿಕೊಡಲಿಲ್ಲ. ಆದರೂ ಸ್ವ ಪ್ರೇರಣೆಯಿಂದ ಅವರನ್ನು ಹತ್ತಿರದಿಂದ ಬೀಳ್ಕೊಡಬೇಕೆಂದು ಸೇರಿದ ಎಷ್ಟೋ ಜನರು ಅವರ ಬಗ್ಗೆ ಹತ್ತಾರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು‌. ನನಗೆ ಅವರ ಹಲವು ಆಯಾಮಗಳು ಅವರು ಸಹಕರಿಸಿದ ರೀತಿ, ಸಹಾಯಹಸ್ತ, ಸಾಂತ್ವನಗಳ ಮಾತು ಮತ್ತವರ ತಾಳ್ಮೆಯ ಕುರಿತು ಅರಿವು ಮೂಡಿಸಿತ್ತು.

ಹಾಗಾದರೆ ಎಂದು ಅವರನ್ನೂ ಭೇಟಿಯಾಗದ ನಾನ್ಯಾಕೆ ಅಷ್ಟು ಅವರಮೇಲೇ ಅಭಿಮಾನ ಇಟ್ಟು ಅಲ್ಲಿ ತೆರಳಿದ್ದೆ ಎಂದು ನನಗೆ ನಾನೆ ಪ್ರಶ್ನಿಸಿಕೊಂಡರೆ, ನಾನು ಅವರ ಜೀವನದ ಕೆಲವು ಅಂಶಗಳಿಂದ ಪ್ರಭಾವಿತಳಾಗಿದ್ದೆ. ಅವರ ಶಿಸ್ತು, ವೃತ್ತಿಪರ ಆಸಕ್ತಿ, ನಿಷ್ಠೆ, ಅವರು ಇನ್ನೊಬ್ಬರಿಗೆ ಕೊಡುವ ಪ್ರೋತ್ಸಾಹ, ಅರ್ಥೈಸುವ ರೀತಿ, ತಿದ್ದಿ ಬುದ್ದಿ ಹೇಳುವ ಪರಿ ಮತ್ತು ಅವರ ಅಧ್ಬುತ ಆಯ್ಕೆಯ ಕುರಿತು ಕೇಳಿ ತಿಳಿದು ನಾನು ಅವರಿ ಗೌರವಾರ್ಥವಾಗಿ ಪುಷ್ಪ ನಮನ ಮಾಡಲು ಹೊರಟು ನಿಂತಿದ್ದೆ.

( ನಮ್ಮ ತರಗತಿ )

ಮಧ್ಯಾಹ್ನದ ಉರಿ ಬಿಸಿಲ ಹೊತ್ತಲ್ಲೂ ಒಂದಿಷ್ಟು ಬೇಸರಪಡದೆ ನಿಂತ ಸಾವಿರೋಪಾದಿಯ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಕಾರ್ಯ ಸಿಬ್ಬಂದಿಗಳ ಬೆವರ ಹನಿಗಳೇ ಅವರ ಮೇಲಿಟ್ಟ ಪ್ರೀತಿಯನ್ನು ಸಾರುತ್ತಿತ್ತು. ಅದರೊಟ್ಟಿಗೆ ಉಜಿರೆಯ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು. ಕೇವಲ‌ ಪಠ್ಯ ಚಟುವಟಿಗಷ್ಟೇ ಅಲ್ಲದೇ ಪ್ರಾಯೋಗಿಕ ಚಟುವಟಿಕೆಗಳಿಗೂ ಸಹ ಆದ್ಯತೆ ನಿಡುತ್ತಿದ್ದ ಇವರು. ಸ್ಪೋರ್ಟ್ಸ್, ಕಲಾಕೇಂದ್ರ, ಜರ್ನಲಿಸಮ್ ಸ್ಟುಡಿಯೋ, ಎನ್ ಸಿ ಸಿ, ಎನ್ ಎಸ್ ಎಸ್, ಆರ್ಬೋರೇಟಮ್, ಸ್ಕೌಟ್ ಗಾಯ್ಡಸ್ ಹೀಗೆ ಎಲ್ಲೆಡೆಯೂ ಅಭಿವೃದ್ಧಿ ಬಯಸಿ ಸಹಕರಿಸಿದವರು.

ಇನ್ನು ಮಕ್ಕಳ ವಸತಿ ಗೃಹ ಮತ್ತು ಸ್ವಚ್ಚತೆಯ ಬಗ್ಗೆಯೂ ಇವರು ತುಂಬಾ ನಿಗಾ ವಹಿಸುತ್ತಿದ್ದರು. ಅವರ ನಿಧನ ವಾರ್ತೆ ಬಂದ ದಿನ ಶೃದ್ಧಾಂಜಲಿಯಲ್ಲಿ ಅವರು ಒಮ್ಮೆ ಮೈಸೂರಿಗೆ ತೆರಳಿದ್ದಾಗ ಅಲ್ಲಿನ ಸಾಂಬಾರ್ ಇಷ್ಟಪಟ್ಟು ಅದನ್ನೇ ವಸತಿ ಗೃಹದ ವಿದ್ಯಾರ್ಥಿಗಳಿಗೂ ಪರಿಚಯಿಸ ಬೇಕು ಎಂದು. ಮೈಸೂರಿನಿಂದ ಸಾಂಬಾರು ಪುಡಿ ತರಿಸಿ ಪರೀಕ್ಷೆ ಮಾಡಿಸಿ ಪ್ರತಿ‌ ಮಂಗಳವಾರ ಇಡ್ಲಿಯ ಜೊತೆ ಅದೇ ಸಾಂಬಾರ್ ಮಾಡುವಂತೆ ಸಲಹೆ ನೀಡಿ ಅದು ಇಂದಿಗೂ ಅನ್ವಯವಾಗಿದೆ ಎಂಬುದು ಆಗ ತಿಳಿದು ಬಂತು.

ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದಕ್ಕಿಂತ ಪರೋಕ್ಷವಾಗಿ ಆಲಿಸಿದ್ದೇ ಹೆಚ್ಚು. ಅವರು ಹಚ್ಚಿಟ್ಟ ಹಣತೆಯ ಬೆಳಕು ಎಂದು ಆರದಂತೆ ತೈಲ ತುಂಬಿ, ಬತ್ತಿ ಉರಿಸಿ ಆ ಬೆಳಕಲ್ಲೇ ನಮ್ಮ‌ ಶೈಕ್ಷಣಿಕ ಜೀವನ ಮುಂದಿನ ದಾರಿ ಕಾಣೋಣ.

ಪ್ರಣಾಮ. 

- ಸುಮಾ.ಕಂಚೀಪಾಲ್

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...