ಪುರದ ಪುಣ್ಯ ಪುರುಷ
ಅಂದು ದಕ್ಷಿಣ ಕನ್ನಡ ಜಿಲ್ಲೆಯ ತುಂಬ ಏನೋ ಒಂದು ಇಂಗಿತ ಆವರಿಸಿತ್ತು. ಉಜಿರೆಯ ಅಂಗಡಿಗಳೆಲ್ಲ ಕದ ಹಾಕಿ ಕುಳಿತಿತ್ತು. ಎಲ್ಲರ ಮನಸಿನಲ್ಲೂ ಏನೋ ಒಂದು ಆತಂಕ. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಯುತ ಡಾ. ಯಶೋವರ್ಮ ಅವರು ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕಾಗಿ ಕಾದು ಕುಳಿತ ಜನರು ಅದರಲ್ಲಿ ನಾನು ಒಬ್ಬಳು. ಅವರ ಪುಣ್ಯ ದೇಹ ಕಂಡೊಡನೆ ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದ್ದದ್ದು ಒಂದೇ ವಾಕ್ಯ.
ಪುರದ ಪುಣ್ಯ ಪುರುಷ ರೂಪಿಂದೆ ಪೋಗುತಿಹುದು.
ನಾನು ಎಂದೂ ಯಶೋವರ್ಮ ಅವರನ್ನು ಭೇಟಿಯಾಗಿ ಮಾತನಾಡಿದವಳಲ್ಲ. ಆದರೂ ಕೆಲವು ಕಾರ್ಯಕ್ರಮಗಳಲ್ಲಿ ಅವರಾಡಿದ ಮಾತುಗಳನ್ನು ಕೇಳಿದ್ದೇನಷ್ಟೇ. ಕೊನೆಗೆ ಅವರ ಅಂತಿಮ ಯಾತ್ರೆಗೆ ಸೇರಿದ ಜನ ಸಾಗರವನ್ನು ನೋಡಿ ನಾನು ಅವರ ಹಿರಿಮೆಯ ಕುರಿತು ಅರಿತುಕೊಂಡೆ. ಯಾರಿಗೂ ಒತ್ತಾಯ ಪೂರ್ವಕವಾಗಿ ಅವರ ಅಂತಿಮ ದರ್ಶನಕ್ಕೆ ಕಳುಹಿಸಿಕೊಡಲಿಲ್ಲ. ಆದರೂ ಸ್ವ ಪ್ರೇರಣೆಯಿಂದ ಅವರನ್ನು ಹತ್ತಿರದಿಂದ ಬೀಳ್ಕೊಡಬೇಕೆಂದು ಸೇರಿದ ಎಷ್ಟೋ ಜನರು ಅವರ ಬಗ್ಗೆ ಹತ್ತಾರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ನನಗೆ ಅವರ ಹಲವು ಆಯಾಮಗಳು ಅವರು ಸಹಕರಿಸಿದ ರೀತಿ, ಸಹಾಯಹಸ್ತ, ಸಾಂತ್ವನಗಳ ಮಾತು ಮತ್ತವರ ತಾಳ್ಮೆಯ ಕುರಿತು ಅರಿವು ಮೂಡಿಸಿತ್ತು.
ಹಾಗಾದರೆ ಎಂದು ಅವರನ್ನೂ ಭೇಟಿಯಾಗದ ನಾನ್ಯಾಕೆ ಅಷ್ಟು ಅವರಮೇಲೇ ಅಭಿಮಾನ ಇಟ್ಟು ಅಲ್ಲಿ ತೆರಳಿದ್ದೆ ಎಂದು ನನಗೆ ನಾನೆ ಪ್ರಶ್ನಿಸಿಕೊಂಡರೆ, ನಾನು ಅವರ ಜೀವನದ ಕೆಲವು ಅಂಶಗಳಿಂದ ಪ್ರಭಾವಿತಳಾಗಿದ್ದೆ. ಅವರ ಶಿಸ್ತು, ವೃತ್ತಿಪರ ಆಸಕ್ತಿ, ನಿಷ್ಠೆ, ಅವರು ಇನ್ನೊಬ್ಬರಿಗೆ ಕೊಡುವ ಪ್ರೋತ್ಸಾಹ, ಅರ್ಥೈಸುವ ರೀತಿ, ತಿದ್ದಿ ಬುದ್ದಿ ಹೇಳುವ ಪರಿ ಮತ್ತು ಅವರ ಅಧ್ಬುತ ಆಯ್ಕೆಯ ಕುರಿತು ಕೇಳಿ ತಿಳಿದು ನಾನು ಅವರಿ ಗೌರವಾರ್ಥವಾಗಿ ಪುಷ್ಪ ನಮನ ಮಾಡಲು ಹೊರಟು ನಿಂತಿದ್ದೆ.
ಅಂದು ದಕ್ಷಿಣ ಕನ್ನಡ ಜಿಲ್ಲೆಯ ತುಂಬ ಏನೋ ಒಂದು ಇಂಗಿತ ಆವರಿಸಿತ್ತು. ಉಜಿರೆಯ ಅಂಗಡಿಗಳೆಲ್ಲ ಕದ ಹಾಕಿ ಕುಳಿತಿತ್ತು. ಎಲ್ಲರ ಮನಸಿನಲ್ಲೂ ಏನೋ ಒಂದು ಆತಂಕ. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಯುತ ಡಾ. ಯಶೋವರ್ಮ ಅವರು ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕಾಗಿ ಕಾದು ಕುಳಿತ ಜನರು ಅದರಲ್ಲಿ ನಾನು ಒಬ್ಬಳು. ಅವರ ಪುಣ್ಯ ದೇಹ ಕಂಡೊಡನೆ ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದ್ದದ್ದು ಒಂದೇ ವಾಕ್ಯ.
ಪುರದ ಪುಣ್ಯ ಪುರುಷ ರೂಪಿಂದೆ ಪೋಗುತಿಹುದು.
ನಾನು ಎಂದೂ ಯಶೋವರ್ಮ ಅವರನ್ನು ಭೇಟಿಯಾಗಿ ಮಾತನಾಡಿದವಳಲ್ಲ. ಆದರೂ ಕೆಲವು ಕಾರ್ಯಕ್ರಮಗಳಲ್ಲಿ ಅವರಾಡಿದ ಮಾತುಗಳನ್ನು ಕೇಳಿದ್ದೇನಷ್ಟೇ. ಕೊನೆಗೆ ಅವರ ಅಂತಿಮ ಯಾತ್ರೆಗೆ ಸೇರಿದ ಜನ ಸಾಗರವನ್ನು ನೋಡಿ ನಾನು ಅವರ ಹಿರಿಮೆಯ ಕುರಿತು ಅರಿತುಕೊಂಡೆ. ಯಾರಿಗೂ ಒತ್ತಾಯ ಪೂರ್ವಕವಾಗಿ ಅವರ ಅಂತಿಮ ದರ್ಶನಕ್ಕೆ ಕಳುಹಿಸಿಕೊಡಲಿಲ್ಲ. ಆದರೂ ಸ್ವ ಪ್ರೇರಣೆಯಿಂದ ಅವರನ್ನು ಹತ್ತಿರದಿಂದ ಬೀಳ್ಕೊಡಬೇಕೆಂದು ಸೇರಿದ ಎಷ್ಟೋ ಜನರು ಅವರ ಬಗ್ಗೆ ಹತ್ತಾರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ನನಗೆ ಅವರ ಹಲವು ಆಯಾಮಗಳು ಅವರು ಸಹಕರಿಸಿದ ರೀತಿ, ಸಹಾಯಹಸ್ತ, ಸಾಂತ್ವನಗಳ ಮಾತು ಮತ್ತವರ ತಾಳ್ಮೆಯ ಕುರಿತು ಅರಿವು ಮೂಡಿಸಿತ್ತು.
ಹಾಗಾದರೆ ಎಂದು ಅವರನ್ನೂ ಭೇಟಿಯಾಗದ ನಾನ್ಯಾಕೆ ಅಷ್ಟು ಅವರಮೇಲೇ ಅಭಿಮಾನ ಇಟ್ಟು ಅಲ್ಲಿ ತೆರಳಿದ್ದೆ ಎಂದು ನನಗೆ ನಾನೆ ಪ್ರಶ್ನಿಸಿಕೊಂಡರೆ, ನಾನು ಅವರ ಜೀವನದ ಕೆಲವು ಅಂಶಗಳಿಂದ ಪ್ರಭಾವಿತಳಾಗಿದ್ದೆ. ಅವರ ಶಿಸ್ತು, ವೃತ್ತಿಪರ ಆಸಕ್ತಿ, ನಿಷ್ಠೆ, ಅವರು ಇನ್ನೊಬ್ಬರಿಗೆ ಕೊಡುವ ಪ್ರೋತ್ಸಾಹ, ಅರ್ಥೈಸುವ ರೀತಿ, ತಿದ್ದಿ ಬುದ್ದಿ ಹೇಳುವ ಪರಿ ಮತ್ತು ಅವರ ಅಧ್ಬುತ ಆಯ್ಕೆಯ ಕುರಿತು ಕೇಳಿ ತಿಳಿದು ನಾನು ಅವರಿ ಗೌರವಾರ್ಥವಾಗಿ ಪುಷ್ಪ ನಮನ ಮಾಡಲು ಹೊರಟು ನಿಂತಿದ್ದೆ.
( ನಮ್ಮ ತರಗತಿ )
ಮಧ್ಯಾಹ್ನದ ಉರಿ ಬಿಸಿಲ ಹೊತ್ತಲ್ಲೂ ಒಂದಿಷ್ಟು ಬೇಸರಪಡದೆ ನಿಂತ ಸಾವಿರೋಪಾದಿಯ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಕಾರ್ಯ ಸಿಬ್ಬಂದಿಗಳ ಬೆವರ ಹನಿಗಳೇ ಅವರ ಮೇಲಿಟ್ಟ ಪ್ರೀತಿಯನ್ನು ಸಾರುತ್ತಿತ್ತು. ಅದರೊಟ್ಟಿಗೆ ಉಜಿರೆಯ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು. ಕೇವಲ ಪಠ್ಯ ಚಟುವಟಿಗಷ್ಟೇ ಅಲ್ಲದೇ ಪ್ರಾಯೋಗಿಕ ಚಟುವಟಿಕೆಗಳಿಗೂ ಸಹ ಆದ್ಯತೆ ನಿಡುತ್ತಿದ್ದ ಇವರು. ಸ್ಪೋರ್ಟ್ಸ್, ಕಲಾಕೇಂದ್ರ, ಜರ್ನಲಿಸಮ್ ಸ್ಟುಡಿಯೋ, ಎನ್ ಸಿ ಸಿ, ಎನ್ ಎಸ್ ಎಸ್, ಆರ್ಬೋರೇಟಮ್, ಸ್ಕೌಟ್ ಗಾಯ್ಡಸ್ ಹೀಗೆ ಎಲ್ಲೆಡೆಯೂ ಅಭಿವೃದ್ಧಿ ಬಯಸಿ ಸಹಕರಿಸಿದವರು.
ಇನ್ನು ಮಕ್ಕಳ ವಸತಿ ಗೃಹ ಮತ್ತು ಸ್ವಚ್ಚತೆಯ ಬಗ್ಗೆಯೂ ಇವರು ತುಂಬಾ ನಿಗಾ ವಹಿಸುತ್ತಿದ್ದರು. ಅವರ ನಿಧನ ವಾರ್ತೆ ಬಂದ ದಿನ ಶೃದ್ಧಾಂಜಲಿಯಲ್ಲಿ ಅವರು ಒಮ್ಮೆ ಮೈಸೂರಿಗೆ ತೆರಳಿದ್ದಾಗ ಅಲ್ಲಿನ ಸಾಂಬಾರ್ ಇಷ್ಟಪಟ್ಟು ಅದನ್ನೇ ವಸತಿ ಗೃಹದ ವಿದ್ಯಾರ್ಥಿಗಳಿಗೂ ಪರಿಚಯಿಸ ಬೇಕು ಎಂದು. ಮೈಸೂರಿನಿಂದ ಸಾಂಬಾರು ಪುಡಿ ತರಿಸಿ ಪರೀಕ್ಷೆ ಮಾಡಿಸಿ ಪ್ರತಿ ಮಂಗಳವಾರ ಇಡ್ಲಿಯ ಜೊತೆ ಅದೇ ಸಾಂಬಾರ್ ಮಾಡುವಂತೆ ಸಲಹೆ ನೀಡಿ ಅದು ಇಂದಿಗೂ ಅನ್ವಯವಾಗಿದೆ ಎಂಬುದು ಆಗ ತಿಳಿದು ಬಂತು.
ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದಕ್ಕಿಂತ ಪರೋಕ್ಷವಾಗಿ ಆಲಿಸಿದ್ದೇ ಹೆಚ್ಚು. ಅವರು ಹಚ್ಚಿಟ್ಟ ಹಣತೆಯ ಬೆಳಕು ಎಂದು ಆರದಂತೆ ತೈಲ ತುಂಬಿ, ಬತ್ತಿ ಉರಿಸಿ ಆ ಬೆಳಕಲ್ಲೇ ನಮ್ಮ ಶೈಕ್ಷಣಿಕ ಜೀವನ ಮುಂದಿನ ದಾರಿ ಕಾಣೋಣ.
ಪ್ರಣಾಮ.
ಮಧ್ಯಾಹ್ನದ ಉರಿ ಬಿಸಿಲ ಹೊತ್ತಲ್ಲೂ ಒಂದಿಷ್ಟು ಬೇಸರಪಡದೆ ನಿಂತ ಸಾವಿರೋಪಾದಿಯ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಕಾರ್ಯ ಸಿಬ್ಬಂದಿಗಳ ಬೆವರ ಹನಿಗಳೇ ಅವರ ಮೇಲಿಟ್ಟ ಪ್ರೀತಿಯನ್ನು ಸಾರುತ್ತಿತ್ತು. ಅದರೊಟ್ಟಿಗೆ ಉಜಿರೆಯ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು. ಕೇವಲ ಪಠ್ಯ ಚಟುವಟಿಗಷ್ಟೇ ಅಲ್ಲದೇ ಪ್ರಾಯೋಗಿಕ ಚಟುವಟಿಕೆಗಳಿಗೂ ಸಹ ಆದ್ಯತೆ ನಿಡುತ್ತಿದ್ದ ಇವರು. ಸ್ಪೋರ್ಟ್ಸ್, ಕಲಾಕೇಂದ್ರ, ಜರ್ನಲಿಸಮ್ ಸ್ಟುಡಿಯೋ, ಎನ್ ಸಿ ಸಿ, ಎನ್ ಎಸ್ ಎಸ್, ಆರ್ಬೋರೇಟಮ್, ಸ್ಕೌಟ್ ಗಾಯ್ಡಸ್ ಹೀಗೆ ಎಲ್ಲೆಡೆಯೂ ಅಭಿವೃದ್ಧಿ ಬಯಸಿ ಸಹಕರಿಸಿದವರು.
ಇನ್ನು ಮಕ್ಕಳ ವಸತಿ ಗೃಹ ಮತ್ತು ಸ್ವಚ್ಚತೆಯ ಬಗ್ಗೆಯೂ ಇವರು ತುಂಬಾ ನಿಗಾ ವಹಿಸುತ್ತಿದ್ದರು. ಅವರ ನಿಧನ ವಾರ್ತೆ ಬಂದ ದಿನ ಶೃದ್ಧಾಂಜಲಿಯಲ್ಲಿ ಅವರು ಒಮ್ಮೆ ಮೈಸೂರಿಗೆ ತೆರಳಿದ್ದಾಗ ಅಲ್ಲಿನ ಸಾಂಬಾರ್ ಇಷ್ಟಪಟ್ಟು ಅದನ್ನೇ ವಸತಿ ಗೃಹದ ವಿದ್ಯಾರ್ಥಿಗಳಿಗೂ ಪರಿಚಯಿಸ ಬೇಕು ಎಂದು. ಮೈಸೂರಿನಿಂದ ಸಾಂಬಾರು ಪುಡಿ ತರಿಸಿ ಪರೀಕ್ಷೆ ಮಾಡಿಸಿ ಪ್ರತಿ ಮಂಗಳವಾರ ಇಡ್ಲಿಯ ಜೊತೆ ಅದೇ ಸಾಂಬಾರ್ ಮಾಡುವಂತೆ ಸಲಹೆ ನೀಡಿ ಅದು ಇಂದಿಗೂ ಅನ್ವಯವಾಗಿದೆ ಎಂಬುದು ಆಗ ತಿಳಿದು ಬಂತು.
ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದಕ್ಕಿಂತ ಪರೋಕ್ಷವಾಗಿ ಆಲಿಸಿದ್ದೇ ಹೆಚ್ಚು. ಅವರು ಹಚ್ಚಿಟ್ಟ ಹಣತೆಯ ಬೆಳಕು ಎಂದು ಆರದಂತೆ ತೈಲ ತುಂಬಿ, ಬತ್ತಿ ಉರಿಸಿ ಆ ಬೆಳಕಲ್ಲೇ ನಮ್ಮ ಶೈಕ್ಷಣಿಕ ಜೀವನ ಮುಂದಿನ ದಾರಿ ಕಾಣೋಣ.
ಪ್ರಣಾಮ.
- ಸುಮಾ.ಕಂಚೀಪಾಲ್
ಒಳೆಯ ಬರಹ
ReplyDelete