Skip to main content

Posts

Showing posts from December, 2021

sukamclicks

ಅಕ್ಷಿ ಪಟದೊಳಗಣ ವೀಕ್ಷಕ    ಬೆರಗು ಗೊಳಿಸುವ ಎಳೆ ಬಿಸಿಲು    ನಡುಕ‌ ಹಿಡಿಸುವ ಕಠಿಣ ಚಳಿ    ಇಂಗಿ ಹೋದ ನಿನ್ನ ನೆನಪು. ದೇವ ಕರುಣಿಸು ಸಕಲ ಭಾಗ್ಯವ ನೀನೆ ಕಾಯೋ ಸರ್ವ ಜಗವ ಪಡೆದು ಧನ್ಯ ಚರಣ ಧೂಳಿಯ‌. ಎನ್ನಾತ್ಮ ಬಲಕೀಗ ನಿನ್ನದೇ ಬತ್ತಿ ಹೊತ್ತಿ ಉರವುದು ಭಕ್ತಿ  ನಿನ್ನ ನಾಮದಲೇ ಇದೆ ಒಂದು ಶಕ್ತಿ. ದುಂಬಿಯಾದರೂ ಆಗು ಕುಸುಮವಾದರೂ ಆಗು ಒಟ್ಟಿನಲ್ಲಿ ಸಂಧಿಸು. ಚಿತ್ರ - ಸಾಲು  ಸುಮಾ.ಕಂಚೀಪಾಲ್

ನಾಟ್ಯ

ನೆರಿಗೆ ಗೆರೆಗಳ ಸರಿಪಡಿಸಿ ಒಂದೊಂದೆ ಪದರ ಬಿಡಿಸಿ ಉಟ್ಟಿದ್ದಾಳೆ ಭೂಮಿ ತನ್ನ ಸೀರೆ. ಸಿಕ್ಕು ಕೂದಲು ಬಿಡಿಸಿ ತನ್ನದಲ್ಲದ ವೇಷ ಧರಿಸಿ ಸಿದ್ದವಾಗಿದ್ದಾಳೆ ಭೂಮಿ ನಾಟ್ಯಕ್ಕೆ ಚಿತ್ರ: ಕಾರ್ತಿಕ್ ಅರೆಮನೆ ( ಪಟ - ಸೌಭಾಗ್ಯ ಹಂದ್ರಾಳ್)  ಹೆಜ್ಜೆ ಹೆಜ್ಜೆಗು ಗೆಜ್ಜೆ ಧ್ವನಿಸಿ ಮೈಯೊಳಗೆ ಪುಳಕ ಹರಿಸಿ ಕಿವಿತುಂಬಿ ಕೊಂಡಿದ್ದಾಳೆ ವಾದ್ಯ ಸಿರಿ ಮೈಮರೆಸಿ‌ ತಾಮರೆತು ನಾಟ್ಯವಾಡುತ್ತಾಳೆ ಮಯೂರಿ ತನ್ನ ಒಡಲು ತಣಿವರೆಗೆ ಸುಮಾ.ಕಂಚೀಪಾಲ್

ಹಿರಿಯ ಪ್ರೇಮ

  ಹಿರಿಯ ಪ್ರೇಮ. ಅವನು ಕೊಡಿಸಿದ ಪಟ್ಟಿ ಪುಸ್ತಕ ನಾನು ಇಷ್ಟಪಟ್ಟದ ಬಣ್ಣದ ನೀರಿನ ಬಾಟಲಿ, ಅಂಗಿ, ಬೆಳ್ಳಿಯ ಕಾಲುಗೆಜ್ಜೆ, ಜಗುಲಿಗೆ ಕೂತರೆ ತೂಗು ಹಾಕಿದ ಅವನ ನಗು ಮೊಗದ ಪೋಟೋ. ಕೈಯಾಡಿಸಿದಲ್ಲೆಲ್ಲಾ ಅವನ ಇರುವಿಕೆಯ ಸಣ್ಣ ಸಣ್ಣ ವಸ್ತುಗಳು. "ಹಲೋ ಮರಿ ಎಂತ ಮಾಡ್ತಿದ್ದೆ "ಎಂದು ಅಜ್ಜ ಪೋನಿಸುವಾಗೆಲ್ಲ ಅಲವರಿಕೆಯ ಮಾತನ್ನಾಡಿ” ಮತ್ತೇನು ಇಲ್ಲೆ ಎಲ್ಲಾ ಅರಾಮು”ಎಂಬಷ್ಟೇ ವಿಷಯದಲ್ಲಿ ಮಾತನಾಡಿ ತಾತ್ಸಾರ ಮಾಡುತ್ತಿದ್ದ ಹಿಮಾಳಿಗೆ ಈಗ ಅಜ್ಜನಿಲ್ಲ. ಅವಳು ಅಜ್ಜನ ಪೋನು ಬರುವ ಹೊತ್ತಿಗಾಗಿ ಈಗ ಕಾಯುತ್ತಾಳೆ ಆದರೆ ಏನು ಪ್ರಯೋಜನ ಅಸ್ತಮಾ ಇರುವ ಅವಳ ಅಜ್ಜ ತೀರಿಕೊಂಡು ಈಗಷ್ಟೇ ಒಂದು ವಾರ ಕಳೆದಿದೆ. ತಿಂಗಳಿಗೊಮ್ಮೆಯಾದರೂ ಪೇಟೆಗೆ ಬಂದಾಗ ಮಗಳ ಮನೆಗೆ ಬಂದು ಮೊಮ್ಮಗಳಿಗೆಂದು ಲಿಂಬು ಚಾಕಲೇಟ್ ತರುವ ಪರಿಪಾಠ ಇಟ್ಟುಕೊಂಡಿದ್ದ. ಆದರೆ ಇವಳು ಇಂದಿನ ಡೇರಿಮಿಲ್ಕ ಚಾಕೊಲೇಟ್ ಬಿಟ್ಟು ಬೇರೇನು ಮುಟ್ಟುವುದಿಲ್ಲ.  ಅಜ್ಜನನ್ನು ಕಂಡರೆ ಇಷ್ಟವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದವಳಿಗೆ ಈಗ ಅಜ್ಜನಿಲ್ಲದೇ ಅಳು ನಿಲ್ಲಿಸಲಾಗುತ್ತಿಲ್ಲ.  ಅಜ್ಜನನ್ನು ಇಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೆ ಎಂಬುದು ಈಗ ಅರ್ಥವಾಗ್ತಿದೆ. ಅಮ್ಮ ನನಗೆ ಅಜ್ಜ ಬೇಕು ,ಅವನ ಪೋನು ಬರಬೇಕು, ಕೊನೆಗೆ ಅವನು ಹೋಗುವುದೇ ಆದರೆ ಒಂದೇ ಒಂದು ಬಾರಿ ಕೇವಲ ಹತ್ತು ನಿಮಿಷ ಅವನೊಟ್ಟಿಗೆ ನನಗೆ ಮಾತನಾಡುವುದಿದೆ. ಕ್ಷಮಿಸು ಎಂದು ಕೇಳಬೇಕಿದೆ ಎಂದು ಗೋಗರೆಯುತ್ತಿದ್ದಾಳ...

ಜಾರಿತು ತುತ್ತೂರಿ

ಜಾರಿತು ತುತ್ತೂರಿ. ಪುಟ್ಟ ಸಾಗಿದ್ದಾಳೆ ಜಾತ್ರೆಯಲ್ಲಿ ಅಮ್ಮನ ದೊಡ್ಡ ಕೈಗಳನ್ನು ತನ್ನ ಪುಟ್ಟಿ ಬೆರಳುಗಳಲ್ಲಿ ಬಿಗಿಹಿಡಿದು. ಭಯವಾಗುತ್ತಿದೆ ಜಾತ್ರೆಯ ಗೌಜು ಗದ್ದಲಕ್ಕೆ ಸುತ್ತಿ ಸುತ್ತಿ ಸೋತಿದ್ದಾಳೆ. ಅಪ್ಪನ ಬೆನ್ನು ಜೋತುಬೀಳುವ ಹೊತ್ತು ಇನ್ನೊಂದೆಡೆ ನಿದ್ದೆ ತೂಗುತಿತ್ತು. ಪಕ್ಕದ ಅಂಗಡಿಯ ಪೀ ಪೀ ಸದ್ದು. ಪುಟ್ಟಿ ನೋಡಿದಳು ನಿದ್ದೆಇಂದೆದ್ದು. ಮತ್ತೆ ಓಡಿದಳು ಅಪ್ಪನ ಬಿಟ್ಟು. ಅಮ್ಮ ನೋಡಿದರೊಮ್ಮೆ ದೊಡ್ಡ ಕಣ್ಬಿಟ್ಟು. ಮನೆಗೆ ಮರಳವಾಗ ಹಠ ಮಾಡಿ ತಂದ ತುತ್ತೂರಿ ದಾರಿಯಲ್ಲೇ ಬಿತ್ತು ಪುಟ್ಟಿ ಕೈಜಾರಿ. ಸುಮಾ.ಕಂಚೀಪಾಲ್

ಅವನೆಟ್ಟ ಗಿಡ ಹೂ ಬಿಟ್ಟ ದಿನ

ಐದು ತಿಂಗಳ ಹಿಂದೆ ನಮ್ಮೆಲ್ಲರನ್ನು ಭೌತಿಕವಾಗಿ ಅಗಲಿದ ಆ ಎಳೆ ಜೀವ ನೆಟ್ಟ ದಾಸವಾಳದ ಗಿಡ ಹೂ ಬಿಟ್ಟದೆ. ಈ ವಿಷಯ ಅವನ‌ ಚಿಕ್ಕಮ್ಮನಿಂದ ತಿಳಿದು ಖುಷಿ, ಒಟ್ಟಿಗೊಂದು ಸಹಿಸಲಾರದ ದುಃಖ ಎದೆಕಟ್ಟಿತ್ತು. ಅವನು ಆನ್ ಲೈನ್ ಕ್ಲಾಸಿಗೆಂದು ಅಜ್ಜಿಮನೆಗೆ ಹೋದಾಗ ನೆಟ್ಟ ಗಿಡಗಳ ಸಾಲಿನ ಪೋಟೊ ಒಂದು ನನ್ನ ಗ್ಯಾಲರಿಗೆ  ಬಂದು ಕೂತಿತ್ತು. ಬಹುಶಃ ಅವನು ಬದುಕಿದ್ದರೂ ಅದೇ ಪೋಟೊಗಳು ನನ್ನ ಗ್ಯಾಲರಿಯಲ್ಲಿ ಇರುತ್ತಿತ್ತು. ಸ್ವತಃ ಅವನೆ ಪೋಟೊ ಕಳಿಸುತ್ತಿದ್ದ ಈಗ ಇನ್ಯಾರೊ ಅಷ್ಟೇ ವ್ಯತ್ಯಾಸ ಆದರೂ ಈ ವ್ಯತ್ಯಾಸದ ನೋವು ಕೊಂಚ ಕಟುವಾಗಿಯೇ ಕಾಡುತ್ತಿದೆ. ಅವನದೇ ವಯಸಿನ ಯಾರೊಬ್ಬರನ್ನು ಕಂಡರೂ ತಕ್ಷಣ ನೆನಪಾಗುತ್ತಾನೆ‌. ನಾನು ಮತ್ತೆ ಪ್ರಸಾದನ ಕುರಿತು ಬರೆಯಲು ಕೂತದ್ದು ಯಾಕೆಂದರೆ ಒಂದಷ್ಟು ಮುಖ್ಯ ಘಟನೆಗಳು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿತು. ಅದೇನೆಂದರೆ ಇತ್ತೀಚೆಗೆ ಹದಿನೈದು ದಿನಗಳ ಒಳಗಾಗಿ ಜರುಗಿದ ಎರಡು ಬೈಕ್ ಅಪಘಾತಗಳು. ಇವನದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ವಜ್ರಳ್ಳಿ ಗ್ರಾಮದ ಸುರೇಂದ್ರ ಮತ್ತು ಉಜಿರೆಯ ತೇಜ ಎಂಬಿಬ್ಬರ ಮರಣದ ಸುದ್ದಿ ಮತ್ತೆ ನನ್ನನ್ನು ಅವನ ಸಾವಿನ ದಿನಗಳೆಡೆಗೆ ಸೆಳೆಯಿತು. ಇಂತದೆ ಘಟನೆಗಳಿಂದ ಆಗಾಗ ಮುಳ್ಳು ಚುಚ್ಚಿ ಅಡಿಯಲ್ಲೇ ಕೀವಾಗಿ ಹೊರಬರುವಷ್ಟು ಸಂಕಟವಾಗುತ್ತಿದೆ. ಅವನೆಟ್ಟ ದಾಸವಾಳದ ಗಿಡ ಅವರ ನಗುಮೊಗದ ಭಾವಚಿತ್ರಗಳು ಕೂತಲ್ಲಿ ನಿಂತಿಲ್ಲಿ ಬಿಡದೇ ಕಾಣುತ್ತವೆ, ಕಾಡುತ್ತವೆ. ಎಷ್ಟು ಬಾರಿ ...

emoji

We are all using WhatsApp everyday. it taking part of our life and key code for communication from some days. And the emojis of WhatsApp is very relevant and supportive for the communication so did you have interest to know about highest used emoji in WhatsApp?!  Bidirectional algorithm language institution report 2021 says that laughing emoji is most used one  and also you contributed the raising usage number of  this imoji.   and it is the best thing because this survey shows not only emoji it shows the feeling and happiness of the people. And now its became as a brand. We can see the emojis in school bags, shopping malls, coffee mugs, Doll, key bunch and T-shirts.  And the concept of this emoji is first introduced by  a Japanese artist named Shigetaka Kurita created the first emoji In the late 1990s, and Apple first introduced emojis in their desktop.  -Suma.Kanchipal Sukam #ಸುಕಂ

ಕಂಚಿ ಮಾರುಕಟ್ಟೆ ಉತ್ಸವ

ಕಂಚಿ ಮಾರುಕಟ್ಟೆ ಉತ್ಸವ  ಎತ್ತನೋಡಿದರು ಬೆಳಕಿನ ಸರಮಾಲೆ, ಸಹಸ್ರಾರು ಭಕ್ತರು, ನಾನಾ ರೀತಿಯ ಹೂವುಗಳಿಂದ ಅಲಂಕೃತಗೊಂಡ ದೇವಾಲಯದ ಮುಖ್ಯದ್ವಾರ ಮತ್ತು ಪುಷ್ಪಗಳಿಂದಲೇ ನಿರ್ಮಾಣವಾದ ಶಿವಲಿಂಗ ಇವೆಲ್ಲವೂ ಧರ್ಮಸ್ಥಳ ಲಕ್ಷದೀಪೋತ್ಸವದ ನಾಲ್ಕನೇ ದಿನದ ವಿಶೇಷ ನೋಟ ಕನ್ನಡನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ನಾಲ್ಕನೇ ದಿನ  ಧರ್ಮಸ್ಥಳೆಶನಿಗೆ ಕಂಚಿಮಾರುಕಟ್ಟೆ ಉತ್ಸವದ ವೈಭವ.   ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣಾ ಪಥದಲ್ಲಿ  ಸ್ವರ್ಣಪಲ್ಲಕ್ಕಿಯಲ್ಲಿ  ಹದಿನಾರು ಸುತ್ತು ಸುತ್ತಿದ ಸ್ವಾಮಿಯ ಉತ್ಸವ ಮೂರ್ತಿ,  ನಂತರ ಬೆಳ್ಳಿಯ ನಂದಿ ಮಂಟಪದಲ್ಲಿ ರಥ ಬೀದಿಯ ಮೂಲಕ ಕಂಚಿ ಮಾರುಕಟ್ಟೆಗೆ ಹೊರಟಿತು.  ದೇವಸ್ಥಾನದ ಆನೆ ಲತಾ, ಬಸವ ಗಿರೀಶ, ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತ ವೃಂದದೊಟ್ಟಿಗೆ ಸ್ವಾಮಿಯ ವಿರಾಜಮಾನನಮೂರ್ತಿ ಕಂಚಿ ಮಾರುಕಟ್ಟೆ ತಲುಪಿತು. ಕಂಚಿ‌ಮಾರುಕಟ್ಟೆ ತಲುಪಿದ ಮೇಲೆ ವಾಡಿಕೆಯ ವಿಧಿ ವಿಧಾನಗಳು ನೆರವೇರಿದವು.  ಆರತಿ, ಪೂಜೆ, ವಾದ್ಯ ಸೇವೆ ನೆರವೇರಿದ ನಂತರ ಆರಾಧ್ಯ ಮೂರ್ತಿಯನ್ನು ದೇವಾಲಯಕ್ಕೆ ಕರೆತರಲಾಯಿತು. ದೇವಸ್ಥಾನದ ಹೊರವಲಯದಲ್ಲಿ ಬೆಳ್ಳಿಯ ರಥದಲ್ಲಿ ರಥೋತ್ಸವ ಸೇವೆಯ ಮೂಲಕ ಉತ್ಸವ ಸಂಪನ್ನಗೊಂಡಿತು.  ಸುಮಾ.ಕಂಚೀಪಾಲ್

ನಾರಿ ಶಕ್ತಿ

ಆದರ್ಶವನಿತಾ ಸಮಾಜ ಎಂದರೆ‌ ಉತ್ತರ ಕನ್ನಡದ ಶಿರಸಿಯ ನಾರಿಯರಿಗೆ ಶಕ್ತಿ ತುಂಬುವ ಕೇಂದ್ರ‌. ಸಕ್ರಿಯವಾಗಿ ತಮ್ಮನ್ನು ಸದಾ ಚಲನಶೀಲವಾಗಿರಿಸಿಕೊಳ್ಳಲು ದಾರಿ ತೋರಿದ ಒಂದು ಮಾರ್ಗ. ಹಲವು ವರ್ಷಗಳ ಇತಿಹಾಸವುಳ್ಳ ಆದರ್ಶ ವನಿತಾ ಸಮಾಜದ ಕುರಿತು ಒಂದಿಷ್ಟು ಮಾಹಿತಿ ಕಲೆಹಾಕಿದಾಗ ಸಿಕ್ಕಿದ್ದು ಆಸಕ್ತಿದಾಯಕ‌ ಸಂಘಟನೆಯ ಕತೆ. ಸಿದ್ದಾಪುರ ತಾಲೂಕು ಕೊರ್ಲಕಾಯಿ ಗ್ರಾಮದ ಮಹಿಳೆ ವಾಸಂತಿ ಎನ್ನುವವರು 1975 ರಲ್ಲೆ ಈ ಮಹಿಳಾ ಸಂಘಟನೆಯನ್ನು ಹುಟ್ಟುಹಾಕಲು ಶ್ರಮಿಸಿದವರು. ಶಿರಸಿಯ ಚಿಪಗಿಯ ಸಹ್ಯಾದ್ರಿ ಕಾಲನಿಯಲ್ಲಿ ತಮ್ಮದೇ ಆದ ಒಂದಿಷ್ಟು ಜಾಗಕ್ಕಾಗಿ ಹೋರಾಟಮಾಡಿ ಕಟ್ಟಡ ನಿರ್ಮಾಣಮಾಡಿದರು. ಈ ಕಾರ್ಯಕ್ಕೆ ಇವರ ಕುಟುಂಬದ ಸಹಾಯ ಹೆಚ್ಚಿನದಾಗಿತ್ತು. ಅವರು ತಮ್ಮ ಹದಿನೇಳನೇ ವರ್ಷಕ್ಕೆ ತವರು ಮನೆಬಿಟ್ಟು ಗಂಡನ ಮನೆ ಸೇರಿದ್ದರು. ಆರ್ಥಿಕವಾಗಿ ಒಂದು ರೂಪಾಯಿ ಕೂಡ ಇಲ್ಲದ ಪೂರ್ವ ಹಂತದಲ್ಲಿ ಮನೆ ಮನೆಗೆ ತಮ್ಮ ಎರಡುವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು ಬಿಸಿಲಲ್ಲಿ ಕಾಲ್ನಡಿಗೆಯಲ್ಲಿ ತಿರುಗಿ ಬೇಕಾಗುವ ಮೊತ್ತ ಸಂಗ್ರಹಿಸಿದರು. ಆ ಕಾಲದಲ್ಲೇ ಇವರು ತಮ್ಮ ಮೆಟ್ರಿಕ್ ಶಿಕ್ಷಣವನ್ನು ಮುಗಿಸಿದವರು‌. "ಎಂದಿಗೂ ಸುಮ್ಮನೆ ಮನೆಯಲ್ಲಿ ಕೂರಬಾರದು ಸದಾ ಕಾರ್ಯೋನ್ಮುಖರಾಗಿರಬೇಕು ಎನ್ನುವ ಹಂಬಲ ನನ್ನನ್ನು  ಮನೆಯಲ್ಲಿ ಕೂರಲು ಬಿಡಲಿಲ್ಲ" ಎನ್ನುತ್ತಾರೆ ವಾಸಂತಿ ಅಮ್ಮ‌. ಊರೂರು ತಿರುಗುವುದು, ಕೈಗಾರಿಕೆ, ಕ್ರೋಷಾ, ಕ...