ಬೆಂಗಳೂರಿಗೆ ಬಂದು ಏಳು ತಿಂಗಳಾಯ್ತು ಆದರೆ ಬ್ಲಾಗ್ ಬರೆಯದೆಯೂ 7 ತಿಂಗಳಾಯ್ತು. ಆಗಾಗ ಬರಿಯಲು ಮನಸಾದರು ಸಮಯ ಸಿಗುತ್ತಿರಲಿಲ್ಲ. ಯಾರ್ಯಾರೋ ಬರೆಯಲು ಹೇಳಿದ ಕಥೆ, ಚುಟುಕು ಹಾಗೂ ಒಂದು ಪ್ರಬಂಧ ಇದ್ಯಾವುದಕ್ಕೂ ಕೈ ಹಾಕಲು ನನ್ನಿಂದ ಸಾಧ್ಯವಾಗಲಿಲ್ಲ.
ಸಮಾಧಾನ ಕೊಡುವ ಕೆಲವು ವಿಷಯಗಳಿವೆ ಅವನ್ನು ಆಗಾಗ ಮಾಡದಿದ್ದರೆ ತಲೆ ಕೆಟ್ಟು ಬಿಡುತ್ತೆ. ಚಿತ್ರಬಿಡಿಸೋದು,ಅನಿಸಿದ್ದನ್ನು ಬರೆಯೋದು, ಒಳ್ಳೆ ಭಾವಗೀತೆ ಕೇಳೋದು ಇವುಗಳಲ್ಲಿ ಯಾವುದಾದರೊಂದನ್ನು ಮಾಡಲೇ ಬೇಕು. ಕೆಲಸಕ್ಕೆ ಸೇರಿದಾಗಿನಿಂದ ಸುದ್ದಿಗಳನ್ನು ನಿತ್ಯವು ಬರೆದು ಬರೆದು ಬೇಸತ್ತು ಹೋದ ಮೇಲೆ ಮತ್ತೆ ಮನೆಗೆ ಬಂದು ಏನನ್ನಾದರು ಬರೆಯಬೇಕು ಅಂತ ಅನಿಸಿದರೂ ಒತ್ತಾಯವಾಗಿ ಬರೆಯಲು ಆಗುತ್ತಿರಲಿಲ್ಲ.
ಇಂದು ಅದ್ಯಾಕೋ ಬರೆಯುವ ಮನಸಾಯ್ತು. ಎಷ್ಟು ಜನ 7 ತಿಂಗಳಾದಮೇಲೂ ನನ್ನ ಬರಹವನ್ನು ಓದಬಹುದು ಎಂಬ ಕುತೂಹಲವೂ ಇತ್ತು ಅದಕ್ಕಾಗಿಯೇ ಬರೆಯುತ್ತಿದ್ದೇನೆ. ಹೀಗೆ ಸಾಯಂಕಾಲ BMTC ಬಸ್ ಹತ್ತಿ ಸೀಟು ಸಿಕ್ಕಿತು ಎನ್ನುವಷ್ಟರಲ್ಲಿ ಯಾರೋ ಒಬ್ಬರು ಬಂದು ಎಬ್ಬಿಸಿ ಭಾರದ ಲ್ಯಾಪ್ ಟಾಪ್, ಊಟದ ಡಬ್ಬಿಯನ್ನೆಲ್ಲಾ ಕಂಕುಳಲ್ಲಿ ಸಿಕ್ಕಿಸಿ ಭುಜ ನೋವಿಂದ ಬಳಲಿ ನಿಂತು ಮನೆ ಸೇರಲು ಮುಕ್ಕಾಲು ಗಂಟೆ ಬೇಕು. ಅದಾದ ನಂತರ ಸ್ನಾನ, ಅಡಿಗೆ, ನಾಳಿನ ಪಾಲಿಗೆ ಬುತ್ತಿ ಇಷ್ಟು ಮಾಡುವುದೇ ಪ್ರತಿನಿತ್ಯದ ಕಾಯಕ. ಹಗಲು ರಾತ್ರಿ, ಒಬ್ಬಂಟಿಯಾಗಿ ದಿನ ರಾತ್ರಿಯೂ ಕಿಟಕಿಯಿಂದ ಗೋಡೆ ಮೇಲೆ ಬೀಳುವ ತೆಂಗಿನ ಗರಿ ನೆರಳನ್ನು ಎಣಿಸುತ್ತಾ ನಿದ್ರೆ ಹೋಗುತ್ತೇನೆ.
ಬೆಳಗಾದಾಗ ಎಷ್ಟು ಅಸಹನೆ ಎಂದರೆ ಮತ್ತದೇ ಬಸ್ ಹಿಡಿದು ಓಡಬೇಕಲ್ಲಾ, ಪ್ರತಿನಿತ್ಯವೂ ಈ ಬ್ಯಾಚುಲರ್ ಪಲಾವ್ ತಿಂದು ಬಾಯಿಗೂ ಬೇಜಾರು ಬಂದು ಒಂದಿನ ಹೊರಗೆ ತಿಂದರೂ ಸಾಕು ಈ ಬೆಂಗಳೂರಿನ ಗುಣಕ್ಕೆ ಆರೋಗ್ಯ ಹದಗೆಡುವುದು ಪಕ್ಕಾ, ಆಮೇಲೆ ನನ್ನನ್ನು ನಾನೇ ನೋಡಿಕೊಳ್ಳಬೇಕು. ಇಲ್ಲ ಮನೆಗೆ ಪೋನು ಮಾಡಿ ಅಪಾ,,,, ಅಮಾ,,, ಎಂದು ಅವರೆದುರು ಅಳಬೇಕು.
ಇನ್ನು ನನ್ನ ಸ್ನೇಹಿತರನ್ನು ಮಾತಾಡಿಸಿದರೂ ಅಷ್ಟೆ ಕೆಲಸ ಪರ್ವಾಗಿಲ್ಲ ಬೆಂಗಳೂರು ಸಾಕಾಯ್ತು ಅನ್ತಾರೆ. ನಾವೆ ಇಷ್ಟ ಪಟ್ಟು ಇಲ್ಲಿಗೆ ಬಂದದ್ದು ಅಂದ ಮೇಲೆ ಬೆಂಗಳೂರನ್ನು ದೂರಿ ಪ್ರಯೋಜನವಿಲ್ಲ. ಆಗಾಗ ಒಂದಿಷ್ಟು ಅಪ್ಪೆಹುಳಿ ಮಾಡಿಕೊಂಡು ಉಂಡರೆ ಅದೇ ಸ್ವರ್ಗ ಸುಖ.
ಹವ್ಯಾಸಕ್ಕೆ ನಾವೇ ಸಮಯ ಮಾಡಿಕೊಂಡರೆ ಮಾತ್ರ ಇಲ್ಲಿ ಜಾಗ. ಮೊದಲಿನಂತೆ ಮನಸು ಬಂದಾಗ ಏನನ್ನೂ ಬರೆಯೋಕೆ ಇಲ್ಲಿ ಸಾಧ್ಯವಿಲ್ಲ ಎಂಬುದಂತು ನಿಕ್ಕಿಯಾಗಿದೆ. ಇವಿಷ್ಟು ಗೋಳಾದರೆ ಇನ್ನೂ ಕೆಲವು ಖುಷಿ ಸಂಗತಿಯೂ ಇದೆ. ಮೊದಲು ಕಹಿ ಆಮೇಲೆ ಸಿಹಿ ಎಂಬಂತೆ
ನನ್ನಿಷ್ಟಕ್ಕೆ ಬೇಕೆನಿಸಿದ್ದು ಖರೀದಿಸುವಷ್ಟು ಸ್ವಂತ ಎಂಬ ಭಾವನೆ. ನನ್ನದೇ ತಿಂಗಳ ತುದಿಯ ಸಂಬಳ. ಒಂದು ಪುಟ್ಟ ಗೂಡು ಮನೆಯಿಂದ ತಂದು ನೆಟ್ಟ ಗಿಡ, ಗೆಳತಿ ಉಡುಗೊರೆ ನೀಡಿದ ನೀರಲ್ಲಿ ಬೆಳೆಯುವ ಗಿಡ, ಇಷ್ಟದ ಟೆರೆಸ್, ಆಫೀಸ್ನಲ್ಲಿ ಖಾಸಾ ಎನಿಸುವ ಜನ, ಶಾಂತವಾದ ರಸ್ತೆ,ರಾತ್ರಿ ವಾಕಿಂಗ್, ಇಷ್ಟದ ಅಂಗಿ, ಪ್ಯಾಂಟೂ, ಮೆಟ್ರೊ, ಮಾಲು, ಜೊಮೆಟೊ, ಆಗಾಗ ಸಿನಿಮಾ, ಗೆಳತಿಯರೊಟ್ಟಿಗೆ ಶಾಪಿಂಗ್, ಇದು ಇಲ್ಲಿನ ಮಜಾ,
ಸಮಾಧಾನ ಕೊಡುವ ಕೆಲವು ವಿಷಯಗಳಿವೆ ಅವನ್ನು ಆಗಾಗ ಮಾಡದಿದ್ದರೆ ತಲೆ ಕೆಟ್ಟು ಬಿಡುತ್ತೆ. ಚಿತ್ರಬಿಡಿಸೋದು,ಅನಿಸಿದ್ದನ್ನು ಬರೆಯೋದು, ಒಳ್ಳೆ ಭಾವಗೀತೆ ಕೇಳೋದು ಇವುಗಳಲ್ಲಿ ಯಾವುದಾದರೊಂದನ್ನು ಮಾಡಲೇ ಬೇಕು. ಕೆಲಸಕ್ಕೆ ಸೇರಿದಾಗಿನಿಂದ ಸುದ್ದಿಗಳನ್ನು ನಿತ್ಯವು ಬರೆದು ಬರೆದು ಬೇಸತ್ತು ಹೋದ ಮೇಲೆ ಮತ್ತೆ ಮನೆಗೆ ಬಂದು ಏನನ್ನಾದರು ಬರೆಯಬೇಕು ಅಂತ ಅನಿಸಿದರೂ ಒತ್ತಾಯವಾಗಿ ಬರೆಯಲು ಆಗುತ್ತಿರಲಿಲ್ಲ.
ಇಂದು ಅದ್ಯಾಕೋ ಬರೆಯುವ ಮನಸಾಯ್ತು. ಎಷ್ಟು ಜನ 7 ತಿಂಗಳಾದಮೇಲೂ ನನ್ನ ಬರಹವನ್ನು ಓದಬಹುದು ಎಂಬ ಕುತೂಹಲವೂ ಇತ್ತು ಅದಕ್ಕಾಗಿಯೇ ಬರೆಯುತ್ತಿದ್ದೇನೆ. ಹೀಗೆ ಸಾಯಂಕಾಲ BMTC ಬಸ್ ಹತ್ತಿ ಸೀಟು ಸಿಕ್ಕಿತು ಎನ್ನುವಷ್ಟರಲ್ಲಿ ಯಾರೋ ಒಬ್ಬರು ಬಂದು ಎಬ್ಬಿಸಿ ಭಾರದ ಲ್ಯಾಪ್ ಟಾಪ್, ಊಟದ ಡಬ್ಬಿಯನ್ನೆಲ್ಲಾ ಕಂಕುಳಲ್ಲಿ ಸಿಕ್ಕಿಸಿ ಭುಜ ನೋವಿಂದ ಬಳಲಿ ನಿಂತು ಮನೆ ಸೇರಲು ಮುಕ್ಕಾಲು ಗಂಟೆ ಬೇಕು. ಅದಾದ ನಂತರ ಸ್ನಾನ, ಅಡಿಗೆ, ನಾಳಿನ ಪಾಲಿಗೆ ಬುತ್ತಿ ಇಷ್ಟು ಮಾಡುವುದೇ ಪ್ರತಿನಿತ್ಯದ ಕಾಯಕ. ಹಗಲು ರಾತ್ರಿ, ಒಬ್ಬಂಟಿಯಾಗಿ ದಿನ ರಾತ್ರಿಯೂ ಕಿಟಕಿಯಿಂದ ಗೋಡೆ ಮೇಲೆ ಬೀಳುವ ತೆಂಗಿನ ಗರಿ ನೆರಳನ್ನು ಎಣಿಸುತ್ತಾ ನಿದ್ರೆ ಹೋಗುತ್ತೇನೆ.
ಬೆಳಗಾದಾಗ ಎಷ್ಟು ಅಸಹನೆ ಎಂದರೆ ಮತ್ತದೇ ಬಸ್ ಹಿಡಿದು ಓಡಬೇಕಲ್ಲಾ, ಪ್ರತಿನಿತ್ಯವೂ ಈ ಬ್ಯಾಚುಲರ್ ಪಲಾವ್ ತಿಂದು ಬಾಯಿಗೂ ಬೇಜಾರು ಬಂದು ಒಂದಿನ ಹೊರಗೆ ತಿಂದರೂ ಸಾಕು ಈ ಬೆಂಗಳೂರಿನ ಗುಣಕ್ಕೆ ಆರೋಗ್ಯ ಹದಗೆಡುವುದು ಪಕ್ಕಾ, ಆಮೇಲೆ ನನ್ನನ್ನು ನಾನೇ ನೋಡಿಕೊಳ್ಳಬೇಕು. ಇಲ್ಲ ಮನೆಗೆ ಪೋನು ಮಾಡಿ ಅಪಾ,,,, ಅಮಾ,,, ಎಂದು ಅವರೆದುರು ಅಳಬೇಕು.
ಇನ್ನು ನನ್ನ ಸ್ನೇಹಿತರನ್ನು ಮಾತಾಡಿಸಿದರೂ ಅಷ್ಟೆ ಕೆಲಸ ಪರ್ವಾಗಿಲ್ಲ ಬೆಂಗಳೂರು ಸಾಕಾಯ್ತು ಅನ್ತಾರೆ. ನಾವೆ ಇಷ್ಟ ಪಟ್ಟು ಇಲ್ಲಿಗೆ ಬಂದದ್ದು ಅಂದ ಮೇಲೆ ಬೆಂಗಳೂರನ್ನು ದೂರಿ ಪ್ರಯೋಜನವಿಲ್ಲ. ಆಗಾಗ ಒಂದಿಷ್ಟು ಅಪ್ಪೆಹುಳಿ ಮಾಡಿಕೊಂಡು ಉಂಡರೆ ಅದೇ ಸ್ವರ್ಗ ಸುಖ.
ಹವ್ಯಾಸಕ್ಕೆ ನಾವೇ ಸಮಯ ಮಾಡಿಕೊಂಡರೆ ಮಾತ್ರ ಇಲ್ಲಿ ಜಾಗ. ಮೊದಲಿನಂತೆ ಮನಸು ಬಂದಾಗ ಏನನ್ನೂ ಬರೆಯೋಕೆ ಇಲ್ಲಿ ಸಾಧ್ಯವಿಲ್ಲ ಎಂಬುದಂತು ನಿಕ್ಕಿಯಾಗಿದೆ. ಇವಿಷ್ಟು ಗೋಳಾದರೆ ಇನ್ನೂ ಕೆಲವು ಖುಷಿ ಸಂಗತಿಯೂ ಇದೆ. ಮೊದಲು ಕಹಿ ಆಮೇಲೆ ಸಿಹಿ ಎಂಬಂತೆ
ನನ್ನಿಷ್ಟಕ್ಕೆ ಬೇಕೆನಿಸಿದ್ದು ಖರೀದಿಸುವಷ್ಟು ಸ್ವಂತ ಎಂಬ ಭಾವನೆ. ನನ್ನದೇ ತಿಂಗಳ ತುದಿಯ ಸಂಬಳ. ಒಂದು ಪುಟ್ಟ ಗೂಡು ಮನೆಯಿಂದ ತಂದು ನೆಟ್ಟ ಗಿಡ, ಗೆಳತಿ ಉಡುಗೊರೆ ನೀಡಿದ ನೀರಲ್ಲಿ ಬೆಳೆಯುವ ಗಿಡ, ಇಷ್ಟದ ಟೆರೆಸ್, ಆಫೀಸ್ನಲ್ಲಿ ಖಾಸಾ ಎನಿಸುವ ಜನ, ಶಾಂತವಾದ ರಸ್ತೆ,ರಾತ್ರಿ ವಾಕಿಂಗ್, ಇಷ್ಟದ ಅಂಗಿ, ಪ್ಯಾಂಟೂ, ಮೆಟ್ರೊ, ಮಾಲು, ಜೊಮೆಟೊ, ಆಗಾಗ ಸಿನಿಮಾ, ಗೆಳತಿಯರೊಟ್ಟಿಗೆ ಶಾಪಿಂಗ್, ಇದು ಇಲ್ಲಿನ ಮಜಾ,
ಬಹಳ ದಿನಗಳ ನಂತರ ಬರಹ ಓದಿ ಖುಷಿ ಆಯ್ತು. ಆವಾಗ್ ಆವಾಗ ಈ ಖುಷಿನಾ ಕೊಡ್ತಾ ಇರಿ.
ReplyDeleteಖಂಡಿತವಾಗಿ,, ಧನ್ಯವಾದ
ReplyDeleteಓದಿ ತುಂಬಾ ಖುಷಿಯಾಯ್ತು
ReplyDeleteMast alda Bengaluru
ReplyDelete