Skip to main content

ಸಂದರ್ಶನ

ಅವಧಿ
ಸಾಮಾನ್ಯವಾಗಿ ಕ್ಯಾಮರಾ ಮ್ಯಾನ್ ಎನ್ನುವ ಪದವನ್ನು ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ.  ಛಾಯಾಗ್ರಹಣ ಕ್ಷೇತ್ರದಲ್ಲಿ ಮಹಿಳೆಯರ ಹೆಸರು ಕೇಳುವುದು ವಿರಳ. ಆದರೆ ಶಕ್ತಿಮಾನ್, ಇಂಡಿಯನ್ ಐಡೆಲ್, ಆರ್ಯಮಾನ್, ಸ.ರಿ.ಗ.ಮ.ಪ, ಪಿಯರ್ ಪೈಲ್ಸ, ಲವ್ ಮಿ ಇಂಡಿಯಾ, ಅರವತ್ತಕ್ಕೂ ಹೆಚ್ಚು ಚಿತ್ರಕಥೆಗಳಿಗೆ ಇವರು ಕ್ಯಾಮರಾವುಮನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾನು ಈ ಸಂದರ್ಶನದಲ್ಲಿ ನಿಮಗೆ  ಪರಿಚಯಿಸಲು ಹೊರಟಿರುವುದು ಛಾಯಾಗ್ರಾಹಕಿ ವಿದ್ಯಾ ಗೌಡ ಅವರನ್ನು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಛಾಯಾಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡವರು ಇವರು.


ಪ್ರಶ್ನೆ: ಒಬ್ಬ ಮಹಿಳೆಯಾಗಿ ನೀವು ಛಾಯಾಗ್ರಹಣವನ್ನು ನಿಮ್ಮ ವೃತ್ತಿಯಾಗಿ ಆಯ್ದು ಕೊಳ್ಳಲು ಕಾರಣವೇನು ? 

ವಿದ್ಯಾ ಗೌಡ: ನಾನು ಚಿಕ್ಕಂದಿನಿಂದಲೂ ನಮ್ಮ ತಂದೆಯೊಂಟ್ಟಿಗೆ ಅವರನ್ನು ಅನುಕರಿಸಿಯೇ ಬೆಳೆದವಳು.ನನ್ನ‌ 16 ನೇ ವಯಸ್ಸಿನಲ್ಲಿ ನಾನು ಓ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.‌ ನನ್ನ ತಂದೆ ಸುರೇಶ ಚೆನ್ನಪ್ಪ ಗೌಡ ಅವರೂ ಸಹ ಸಿನಿಮಾಟೊಗ್ರಾಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೆಲಸಕ್ಕೆ ಹೋಗುವಾಗ ನಾನೂ ಕೆಲವೊಮ್ಮೆ ಅವರೊಟ್ಟಿಗೆ ಹೋಗುತ್ತಿದೆ. ಅವರು ಕೆಲಸ ಮಾಡುವ ವಿಧಾನವನ್ನು ನೋಡುತ್ತಿದ್ದೆ‌. ಅವರಿಂದಾಗಿಯೇ ನಾನು  ಇಪ್ಪತ್ತಾರು ವರ್ಷಗಳ ಹಿಂದೇ ಬೆಲೆಬಾಳುವ ಕ್ಯಾಮರಾಗಳನ್ನು ಮುಟ್ಟಿದ್ದೆ. ನಾನು ಈ ಕೆಲಸ ಆರಂಭಿಸುವಾಗ ಕ್ಯಾಮರಾ ಹಿಡಿಯುವ ಯಾವ ಮಹಿಳೆಯರೂ ಸಹ ನನಗೆ ಗೊತ್ತಿರಲಿಲ್ಲ. ಆದರೆ ತಂದೆಯಂತೆ ನಾನು ಇದೇ ಕೆಲಸವನ್ನೇ ಮಾಡಬೇಕೆಂಬ ಮನಸ್ಸಾಗಿದ್ದರಿಂದ ಈ ಕ್ಷೇತ್ರದಲ್ಲಿ ಮುಂದುವರೆದೆ. ಕೆಲವು ಸವಾಲುಗಳನ್ನು ಎದುರಿಸಬೇಕಾದ ಪ್ರಸಂಗಗಳು ಆಗಗಾ ಎದುರಾಗಿದ್ದವು. 
ಪ್ರಶ್ನೆ: ನೀವು ಕೆಲಸ ಮಾಡುವಾಗ ಸವಾಲುಗಳು  ಎದುರಾದವು ಎಂದಿರಿ ಆ ಸವಾಲುಗಳನ್ನು ನೀವು ಹೇಗೆ ನಿಭಾಯಿಸಿದ್ದೀರಿ? 

ವಿದ್ಯಾ ಗೌಡ: ಪುರುಷ ಪ್ರಾಧಾನ್ಯತೆಯ ಸಮಾಜದಲ್ಲಿ ಎಲ್ಲೆಡೆಯೂ ಮಹಿಳೆಗೆ ಒಂದಿಲ್ಲಾ ಒಂದು ರೀತಿಯಲ್ಲಿ ಸಣ್ಣದೊಂದು ತೊಡುಕು ಖಂಡಿತ ಎದುರಾಗುತ್ತದೆ. ಅದೇ ರೀತಿ ನನಗೂ ಎದುರಾಗಿತ್ತು. ಕೆಲಸಮಾಡುವ ಲೈಟ್ ಮ್ಯಾನ್ ಗಳು‌ ಕೂಡ ನನ್ನು ನೋಡಿ ಇವಳಿಂದೇನಾಗುತ್ತದೆ ಎಂದು ನನ್ನೆದುರೇ ನಗುತ್ತಿದ್ದರು. ಎಲ್ಲಿ‌ ಕೆಲಸ ಕೇಳಿದರು ಸಹ ಈ ಕ್ಷೇತ್ರಕ್ಕೆ ಮಹಿಳೆಯರು ಬೇಡ ಎಂಬ ಪ್ರತ್ಯುತ್ತರಗಳೇ ನನಗೆ ಸಿಕ್ಕಿದ್ದು. ಇಂದು ನಾನು ಹಲವು ಹಿರಿತೆರೆ ಮತ್ತು ಕಿರಿತೆರೆಗಳಿಗೆ ಛಾಯಾಗ್ರಹಣದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಮೊದಲಿಗೆ ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಬೆಳೆದಿದ್ದೇನೆ, ಬೆಳಕು ನಿರ್ವಹಣೆ, ಪೋಕಸ್ ಪುಲರ್, ಸಹಾಯಕ ಛಾಯಾಗ್ರಾಹಕಿ ಹೀಗೆ ಹಂತ ಹಂತವಾಗಿ ಹಾದಿಸವೆಸಿದ್ದೇನೆ. ಇಪ್ಪತ್ತು ವರ್ಷಗಳ ಕಾಲ ನಾನು ಈ ಕ್ಷೇತ್ರದಲ್ಲಿ ಜೀವಿಸಿದ್ದೇನೆ. ಇನ್ನು ಮುಂದೆಯೂ ಇದೇ ಕ್ಷೇತ್ರದಲ್ಲಿ ಇರಲು ಬಯಸುತ್ತೇನೆ. 

ಪ್ರಶ್ನೆ: ಒಬ್ಬ ಮಹಿಳೆಗೆ ಕೌಟುಂಬಿಕ ಸಹಕಾರ ಎಷ್ಟು ಮುಖ್ಯ ? 

ವಿದ್ಯಾ ಗೌಡ : ಖಂಡಿತವಾಗಿಯೂ ಮಹಿಳೆ ಮತ್ತು ಪುರುಷ ಇಬ್ಬರಿಗೂ ಕೌಟುಂಬಿಕ ಸಹಕಾರ ಅತಿಮುಖ್ಯವಾಗಿರುತ್ತದೆ. ಹೊಂದಾಣಿ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಯಾರು ಏನೇ ಅಂದರೂ ಸಹ ನಮ್ಮ ನಿಲುವಿನಲ್ಲಿ ಮುನ್ನಡೆಯಲು ಸಹಕಾರಿಯಾಗಿರುತ್ತದೆ. ನನಗೆ ನನ್ನ ತಂದೆಯ ಸಹಕಾರವೇ ನನ್ನನ್ನು ಈ ಕ್ಷೇತ್ರಕ್ಕೆ ಪರಿಚಯಿಸಿತು. 


ಪ್ರಶ್ನೆ : ನೀವು ಎಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದೀರಿ ಮತ್ತು ನಿಮಗೆ ಇಷ್ಟವೆನಿಸಿದ ಛಾಯಾಗ್ರಹಣ ಪ್ರಾಜೆಕ್ಟ್ ಯಾವುದು? 

ವಿದ್ಯಾ ಗೌಡ: ಚಿತ್ರೀಕರಣ ಮತ್ತು ನಿರ್ಮಾಣಕ್ಕೆ ಹೆಸರಾಗಿರುವ  ಮುಂಬೈನಲ್ಲೇ ಹುಟ್ಟಿ ಅಲ್ಲೇ ಬೆಳೆದವಳು ನಾನು. ಹಾಗಾಗಿ ಹಲವಾರು ಚಿತ್ರಕಥೆಗಳು ಮತ್ತು ಧಾರಾವಾಹಿಗಳಿಗೆ ಛಾಯಾಗ್ರಾಹಕಿಯಾಗಲು ಅವಕಾಶಗಳ ಕೊರತೆ ನನಗೆ ಎಂದೂ ಕಾಡಿಲ್ಲ. ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳ ಚಿತ್ರೀಕರಣಗಳನ್ನು ಮಾಡಿದ್ದೇನೆ. ಮೊದ ಮೊದಲು ಜಾಹಿರಾತು ಮತ್ತು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನನ್ನ ಕ್ಯಾಮರಾ ಕಣ್ಣುಗಳಿಂದ ಸೆರೆಹಿಡಿದಿದ್ದೇನೆ.  ನನಗೆ ನಾನು ಮಾಡಿದ ಪ್ರತಿಯೊಂದು ಕೆಲವು ತುಂಬಾ ಪ್ರಿಯವಾದದ್ದು ಮತ್ತು ಎಲ್ಲವೂ ಸಮಾನವಾದದ್ದು. ನನಗಿಷ್ಟವಾದ ಒಂದನ್ನುಮಾತ್ರ  ಆಯ್ಕೆ ಮಾಡಲು ಸಾಧ್ಯವಿಲ್ಲ‌. 

ಪ್ರಶ್ನೆ : ಭವಿಷ್ಯದ ಛಾಯಾಗ್ರಾಹಕರಿ ನೀವು ಯಾವ ಸಲಹೆಗಳನ್ನು ನೀಡಲು ಬಯಸುತ್ತೀರಾ? 

ವಿದ್ಯಾ ಗೌಡ:  ( ಮುಗುಳು ನಗು) ಕೇವಲ ಈ ಕ್ಷೇತ್ರವೊಂದೆ ಅಲ್ಲ ಎಲ್ಲಾ ಕ್ಷೆತ್ರದವರಿಗೂ ನಾನು ಹೇಳಲು ಬಯಸುವುದೆಂದರೆ, ಹಣವೊಂದೇ ಮುಖ್ಯವಲ್ಲ ಅದರೊಟ್ಟಿಗೆ ನಿಮ್ಮ ಗುರಿ ಮತ್ತು ಆಸಕ್ತಿ ಮುಖ್ಯ ಎಂಬುದನ್ನು ಎಂದಿಗೂ ಮರೆಯದಿರಿ. 

ಈ ಕ್ಷೇತ್ರಕ್ಕೆ ಬರುವವರನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ಏಕೆಂದರೆ ಪ್ರತಿಯೊಬ್ಬರಲ್ಲೂ ಒಂದೊಂದು ಭಿನ್ನತೆ ಇರುತ್ತದೆ. ನಾನೂ ಸಹ ಅದನ್ನು ಅವರಿಂದ ಕಲಿಯುತ್ತೇನೆ. ಪೂರ್ವತಯಾರಿ ಮಾಡಿಕೊಳ್ಳಿ ಪ್ರಾಯೋಗಿಕ ಕೆಲಸಗಳಷ್ಟೆ ಸಿದ್ದಾಂತವೂ ಮುಖ್ಯ. 

"I want to do work till end of my life. Learning never ends, do hardwork and achieve your goal" 


ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...