ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.
ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ.
ಸ್ತ್ರೀ ವಾದ ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್ಕೃತಿಯ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ಪ್ರೀತಿ ನೀಡದಿದ್ದರೂ ಆವನು ನಿನ್ನ ಗಂಡ. ನಿನ್ನ ಅತ್ತೆಮಾವ ಎಂದು ಅಡಿಯಾಳಾಗಿಸಿಬಿಟ್ಟರು. ಇದ್ಯಾವುದರ ಅರಿವೂ ಹೆಣ್ಣಿಗಿರದಷ್ಟು ಕೆಳಮಟ್ಟದಲ್ಲಿ ಅವರ ಪ್ರಜ್ಞಾಸ್ಥಿತಿಯನ್ನೇ ಕೆಡಿಸಿ ಬಿಟ್ಟಿದ್ದರು. ಇದೆಲ್ಲದರಿಂದ ಹೊರಬರುವುದಕ್ಕಾಗಿಯೇ ಸ್ತ್ರೀ ವಾದವೆಂಬುವುದು ಹುಟ್ಟಿದ್ದು. ಇಂದು ಮಹಿಳೆಗೆ ಸ್ಥಾನಮಾನ ದೊರಕಿದೆ. ನಮ್ಮ ಸಂವಿಧಾನಕ್ಕೂ ಧನ್ಯವಾದ ಹೇಳಬೇಕು. ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ತಾವು ಬದುಕು ಸಾಗಿಸಬೇಕು ಎಂಬ ಮನೋಭಾವನೆ ಎಲ್ಲರಲ್ಲಿದೆ. ಶಿಕ್ಷಣದ ಕಿಡಿ ಹೊತ್ತಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ.
ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ.
ಸ್ತ್ರೀ ವಾದ ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್ಕೃತಿಯ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ಪ್ರೀತಿ ನೀಡದಿದ್ದರೂ ಆವನು ನಿನ್ನ ಗಂಡ. ನಿನ್ನ ಅತ್ತೆಮಾವ ಎಂದು ಅಡಿಯಾಳಾಗಿಸಿಬಿಟ್ಟರು. ಇದ್ಯಾವುದರ ಅರಿವೂ ಹೆಣ್ಣಿಗಿರದಷ್ಟು ಕೆಳಮಟ್ಟದಲ್ಲಿ ಅವರ ಪ್ರಜ್ಞಾಸ್ಥಿತಿಯನ್ನೇ ಕೆಡಿಸಿ ಬಿಟ್ಟಿದ್ದರು. ಇದೆಲ್ಲದರಿಂದ ಹೊರಬರುವುದಕ್ಕಾಗಿಯೇ ಸ್ತ್ರೀ ವಾದವೆಂಬುವುದು ಹುಟ್ಟಿದ್ದು. ಇಂದು ಮಹಿಳೆಗೆ ಸ್ಥಾನಮಾನ ದೊರಕಿದೆ. ನಮ್ಮ ಸಂವಿಧಾನಕ್ಕೂ ಧನ್ಯವಾದ ಹೇಳಬೇಕು. ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ತಾವು ಬದುಕು ಸಾಗಿಸಬೇಕು ಎಂಬ ಮನೋಭಾವನೆ ಎಲ್ಲರಲ್ಲಿದೆ. ಶಿಕ್ಷಣದ ಕಿಡಿ ಹೊತ್ತಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ.
ಕಡಲವಾಣಿ ಪತ್ರಿಕೆ. 2019
ಅಂಕ ಗಳಿಕೆಯಲ್ಲಿ ಮುಂಚೂಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಈ ಮುಂಚೂಣಿ. ಮೈ ನೆರೆದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವ ಪ್ರವೃತ್ತಿ, ಪುರುಷನಿಗಿಂತ ಮೇಲಿನ ಹುದ್ದೆಯಲ್ಲಿ ಮಹಿಳೆ ಇರಕೂಡದೆಂಬ ಮನೋಭಾವ, ಬಾಲ್ಯವಿವಾಹ ಅಸಮಾನತೆ ಇಂತಹ ಪದ್ದತಿಗಳು ಇಂದು ಕಡಿಮೆಯಾಗಿವೆ. ಇದನ್ನು ಹೊರತು ಪಡಿಸಿ ಮಹಿಳೆಯರಿಗೆ ಮೀಸಲಾತಿ. ಪುರುಷ ಪ್ರಾಧಾನ್ಯ ಸಮಾಜದಿಂದ ಮುಕ್ತಿ ಹೊಂದುವುದು , ಸ್ವ ಉದ್ಯೋಗ ಇಂತಹ ಹೋರಾಟ ಹಂಬಲಗಳ ನಡುವೆಯೂ ಹಳ್ಳಿ ಹಳ್ಳಿಗಳಲ್ಲಿ ಇದಾವುದರ ಗೋಜಿಗೆ ಹೋಗದ ತಮ್ಮ ಬದುಕೇ ತಮಗೆ ಸುಖ ಎಂದು ಸಂತೋಷದಿಂದ ದಿನಮುಂದೂಡುವ ಮಹಿಳೆಯರು ಇದ್ದಾರೆ. ಸಂಬಳಕ್ಕೆಂದು ದುಡಿಯುವವರಲ್ಲ ಯಾವ ಫಲಾಪೇಕ್ಷೆ ಹೊಂದಿದವರಲ್ಲ . ತಮ್ಮ ಕುಟುಂಬ , ಮನೆ ಇವಿಷ್ಟೇ ಇವರ ಪುಟ್ಟ ಪ್ರಪಂಚ. ಅಲ್ಲ ಇದೇ ಅವರ ಸಂಪೂರ್ಣ ಪ್ರಪಂಚ ಪ್ರತಿದಿನದ ದಿನಚರಿಯೂ
ಒಂದೇ ತೆರನಾದದ್ದು , ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕೆಲಸಗಳೇ ಆದರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಮತ್ತೆ ಬೆಳಗಾದರೆ ನಿನ್ನೆಯದೇ ಕೆಲಸಗಳ ಪುನರಾವರ್ತನೆ ಹೀಗೆ ದಿನ ಕಳೆಯುವುದರಲ್ಲಿಯೇ ಅವರು ತಮ್ಮ ಜೀವನದ ಬಹುಪಾಲನ್ನು ಕಳೆದು ಬಿಡುತ್ತಾರೆ . ತಿಂಗಳಿಗೊಮ್ಮೆ ದೇವಸ್ಥಾನದ ಭಜನೆಯೂ ಹೋಮ . ಹವನಗಳು ನೆಂಟರ ಮನೆಗೆಂದು ಹೋಗಿ ಬಂದರೆ ಮುಗಿದೇ ಹೋಯಿತು . ಪೇಟೆಯಲ್ಲಿ ವಾಸವಿರುವವರಂತೆ ಹಾಲು ತರುವುದು, ತರಕಾರಿ ತರುವುದು, ದಿನಸಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಈ ಯಾವ ಕೆಲಸಗಳೂ ಅವರಿಗಿರುವುದಿಲ್ಲ.
ಅಂಕ ಗಳಿಕೆಯಲ್ಲಿ ಮುಂಚೂಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಈ ಮುಂಚೂಣಿ. ಮೈ ನೆರೆದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವ ಪ್ರವೃತ್ತಿ, ಪುರುಷನಿಗಿಂತ ಮೇಲಿನ ಹುದ್ದೆಯಲ್ಲಿ ಮಹಿಳೆ ಇರಕೂಡದೆಂಬ ಮನೋಭಾವ, ಬಾಲ್ಯವಿವಾಹ ಅಸಮಾನತೆ ಇಂತಹ ಪದ್ದತಿಗಳು ಇಂದು ಕಡಿಮೆಯಾಗಿವೆ. ಇದನ್ನು ಹೊರತು ಪಡಿಸಿ ಮಹಿಳೆಯರಿಗೆ ಮೀಸಲಾತಿ. ಪುರುಷ ಪ್ರಾಧಾನ್ಯ ಸಮಾಜದಿಂದ ಮುಕ್ತಿ ಹೊಂದುವುದು , ಸ್ವ ಉದ್ಯೋಗ ಇಂತಹ ಹೋರಾಟ ಹಂಬಲಗಳ ನಡುವೆಯೂ ಹಳ್ಳಿ ಹಳ್ಳಿಗಳಲ್ಲಿ ಇದಾವುದರ ಗೋಜಿಗೆ ಹೋಗದ ತಮ್ಮ ಬದುಕೇ ತಮಗೆ ಸುಖ ಎಂದು ಸಂತೋಷದಿಂದ ದಿನಮುಂದೂಡುವ ಮಹಿಳೆಯರು ಇದ್ದಾರೆ. ಸಂಬಳಕ್ಕೆಂದು ದುಡಿಯುವವರಲ್ಲ ಯಾವ ಫಲಾಪೇಕ್ಷೆ ಹೊಂದಿದವರಲ್ಲ . ತಮ್ಮ ಕುಟುಂಬ , ಮನೆ ಇವಿಷ್ಟೇ ಇವರ ಪುಟ್ಟ ಪ್ರಪಂಚ. ಅಲ್ಲ ಇದೇ ಅವರ ಸಂಪೂರ್ಣ ಪ್ರಪಂಚ ಪ್ರತಿದಿನದ ದಿನಚರಿಯೂ
ಒಂದೇ ತೆರನಾದದ್ದು , ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕೆಲಸಗಳೇ ಆದರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಮತ್ತೆ ಬೆಳಗಾದರೆ ನಿನ್ನೆಯದೇ ಕೆಲಸಗಳ ಪುನರಾವರ್ತನೆ ಹೀಗೆ ದಿನ ಕಳೆಯುವುದರಲ್ಲಿಯೇ ಅವರು ತಮ್ಮ ಜೀವನದ ಬಹುಪಾಲನ್ನು ಕಳೆದು ಬಿಡುತ್ತಾರೆ . ತಿಂಗಳಿಗೊಮ್ಮೆ ದೇವಸ್ಥಾನದ ಭಜನೆಯೂ ಹೋಮ . ಹವನಗಳು ನೆಂಟರ ಮನೆಗೆಂದು ಹೋಗಿ ಬಂದರೆ ಮುಗಿದೇ ಹೋಯಿತು . ಪೇಟೆಯಲ್ಲಿ ವಾಸವಿರುವವರಂತೆ ಹಾಲು ತರುವುದು, ತರಕಾರಿ ತರುವುದು, ದಿನಸಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಈ ಯಾವ ಕೆಲಸಗಳೂ ಅವರಿಗಿರುವುದಿಲ್ಲ.
ಇನ್ನು ಮನರಂಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಮೊಬೈಲ್ನ್ನು ಹೆಚ್ಚಾಗಿ ಬಳಸುವುದಿಲ್ಲ. ಯಾವುದೇ ಸಿನಿಮಾ ನೋಡುವವರಲ್ಲ . ಮತ್ತು ದಿನಪತ್ರಿಕೆ ಓದುವದರಲ್ಲಿ ಆಸಕ್ತಿಯೂ ಇಲ್ಲ. ಸಂಜೆಯ ಹೊತ್ತಿಗೆ ಕೆಲಸ ತುಸು ಕಡಿಮೆಯಾದಾಗ ಕುಳಿತು ಒಂದೆರಡು ಧಾರವಾಹಿ ನೋಡುವುದೇ ಇವರಿಗೆ ದೊರಕುವ ದೊಡ್ಡ ಮನರಂಜನೆ. ಆರ್ಥಿಕವಾಗಿ ಇಂತಹ ಮಹಿಳೆಯರಿಗೆ ಯಾವುದೇ ವಸ್ತುವನ್ನು ಕೊಳ್ಳುವ ಅವಶ್ಯಕತೆಯಿದ್ದಾಗ ಮನೆಯವರೇ ತಂದುಕೊಡುತ್ತಾರೆ. ವಸ್ತು ಕೊಂಡುಕೊಳ್ಳುವುದರ ಕುರಿತು ಹಣ ಕೇಳಿ ಪಡೆಯುವ ಯಾವುದೇ ತೊಂದರೆ ಇಲ್ಲದೆಯೂ ಇವರು ಇರಬಹುದು. ಹಳ್ಳಿಯಲ್ಲಿನ ಮಹಿಳೆಯರ ಆರೋಗ್ಯದಲ್ಲಿ ಅಷ್ಟೇನು ಸಮಸ್ಯೆ ಕಂಡು ಬರುವುದಿಲ್ಲ . ಏಕೆಂದರೆ ಆವರು ತಮ್ಮನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಆದ್ದರಿಂದ ಸಮಸ್ಯೆ ಕಂಡುಬರುವುದಿಲ್ಲ . ಮನುಷ್ಯ ಎಂದಮೇಲೆ ಖಾಯಿಲೆಗಳು ಸರ್ವೇ ಸಾಮಾನ್ಯ ಆದ್ದರಿಂದ ಆರೋಗ್ಯ ಸಮಸ್ಯೆ ಉಂಟಾದಾಗ ಮನೆಮದ್ದು . ಮೂಢನಂಬಿಕೆಗಳಿಗೆ ಒಳಗಾಗಿ ಆಪಾಯವುಂಟು ಮಾಡಿಕೊಳ್ಳುವುದು ಇದೆ . ತಮ್ಮ ಮಕ್ಕಳಿಂದ ಆಧುನಿಕತೆಗೆ ಸ್ರ್ತೀ ವಾದದ ಅಲೆಯಲ್ಲಿ ಆದೇ ಸಮೃದ್ಧ ಜೀವನದ ಹೊಸ ತಿರುವಿನಲ್ಲಿ ಸಮಾನತೆಯ ಸಂತೋಷದ ಜೀವನ ನಡೆಸುವಂತಾಗಲಿ. ಇದೇ ಸ್ತ್ರೀವಾದ ಸಮಾನತೆಯ ಅಡಿಪಾಯ.ಹೊರತಾಗಿ ಪುರುಷವಿರೋಧಿಯಲ್ಲ.
ಸುಮಾ.ಕಂಚೀಪಾಲ್
ಸುಮಾ.ಕಂಚೀಪಾಲ್
Comments
Post a Comment