Skip to main content

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ.

ಸ್ತ್ರೀ ವಾದ   ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ,  ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್ಕೃತಿಯ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ಪ್ರೀತಿ ನೀಡದಿದ್ದರೂ ಆವನು ನಿನ್ನ ಗಂಡ. ನಿನ್ನ ಅತ್ತೆಮಾವ ಎಂದು ಅಡಿಯಾಳಾಗಿಸಿಬಿಟ್ಟರು. ಇದ್ಯಾವುದರ ಅರಿವೂ ಹೆಣ್ಣಿಗಿರದಷ್ಟು ಕೆಳಮಟ್ಟದಲ್ಲಿ ಅವರ ಪ್ರಜ್ಞಾಸ್ಥಿತಿಯನ್ನೇ ಕೆಡಿಸಿ ಬಿಟ್ಟಿದ್ದರು. ಇದೆಲ್ಲದರಿಂದ ಹೊರಬರುವುದಕ್ಕಾಗಿಯೇ ಸ್ತ್ರೀ ವಾದವೆಂಬುವುದು ಹುಟ್ಟಿದ್ದು. ಇಂದು ಮಹಿಳೆಗೆ ಸ್ಥಾನಮಾನ ದೊರಕಿದೆ. ನಮ್ಮ ಸಂವಿಧಾನಕ್ಕೂ ಧನ್ಯವಾದ ಹೇಳಬೇಕು. ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ತಾವು ಬದುಕು ಸಾಗಿಸಬೇಕು ಎಂಬ ಮನೋಭಾವನೆ ಎಲ್ಲರಲ್ಲಿದೆ. ಶಿಕ್ಷಣದ ಕಿಡಿ ಹೊತ್ತಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ.
ಕಡಲವಾಣಿ ಪತ್ರಿಕೆ. 2019

ಅಂಕ ಗಳಿಕೆಯಲ್ಲಿ ಮುಂಚೂಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಈ ಮುಂಚೂಣಿ. ಮೈ ನೆರೆದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವ ಪ್ರವೃತ್ತಿ, ಪುರುಷನಿಗಿಂತ ಮೇಲಿನ ಹುದ್ದೆಯಲ್ಲಿ ಮಹಿಳೆ ಇರಕೂಡದೆಂಬ ಮನೋಭಾವ, ಬಾಲ್ಯವಿವಾಹ ಅಸಮಾನತೆ  ಇಂತಹ ಪದ್ದತಿಗಳು ಇಂದು ಕಡಿಮೆಯಾಗಿವೆ. ಇದನ್ನು ಹೊರತು ಪಡಿಸಿ ಮಹಿಳೆಯರಿಗೆ ಮೀಸಲಾತಿ. ಪುರುಷ  ಪ್ರಾಧಾನ್ಯ ಸಮಾಜದಿಂದ ಮುಕ್ತಿ  ಹೊಂದುವುದು , ಸ್ವ ಉದ್ಯೋಗ ಇಂತಹ ಹೋರಾಟ ಹಂಬಲಗಳ ನಡುವೆಯೂ  ಹಳ್ಳಿ ಹಳ್ಳಿಗಳಲ್ಲಿ ಇದಾವುದರ ಗೋಜಿಗೆ  ಹೋಗದ ತಮ್ಮ ಬದುಕೇ ತಮಗೆ ಸುಖ ಎಂದು ಸಂತೋಷದಿಂದ ದಿನಮುಂದೂಡುವ ಮಹಿಳೆಯರು ಇದ್ದಾರೆ. ಸಂಬಳಕ್ಕೆಂದು ದುಡಿಯುವವರಲ್ಲ ಯಾವ ಫಲಾಪೇಕ್ಷೆ ಹೊಂದಿದವರಲ್ಲ . ತಮ್ಮ ಕುಟುಂಬ , ಮನೆ ಇವಿಷ್ಟೇ ಇವರ ಪುಟ್ಟ ಪ್ರಪಂಚ. ಅಲ್ಲ ಇದೇ ಅವರ ಸಂಪೂರ್ಣ ಪ್ರಪಂಚ ಪ್ರತಿದಿನದ ದಿನಚರಿಯೂ

ಒಂದೇ ತೆರನಾದದ್ದು , ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕೆಲಸಗಳೇ ಆದರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಮತ್ತೆ ಬೆಳಗಾದರೆ ನಿನ್ನೆಯದೇ ಕೆಲಸಗಳ ಪುನರಾವರ್ತನೆ ಹೀಗೆ ದಿನ ಕಳೆಯುವುದರಲ್ಲಿಯೇ ಅವರು ತಮ್ಮ ಜೀವನದ ಬಹುಪಾಲನ್ನು ಕಳೆದು ಬಿಡುತ್ತಾರೆ . ತಿಂಗಳಿಗೊಮ್ಮೆ ದೇವಸ್ಥಾನದ ಭಜನೆಯೂ ಹೋಮ . ಹವನಗಳು ನೆಂಟರ ಮನೆಗೆಂದು ಹೋಗಿ ಬಂದರೆ ಮುಗಿದೇ ಹೋಯಿತು . ಪೇಟೆಯಲ್ಲಿ ವಾಸವಿರುವವರಂತೆ ಹಾಲು ತರುವುದು, ತರಕಾರಿ ತರುವುದು, ದಿನಸಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಈ ಯಾವ ಕೆಲಸಗಳೂ ಅವರಿಗಿರುವುದಿಲ್ಲ. 

ಇನ್ನು ಮನರಂಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಮೊಬೈಲ್‌ನ್ನು ಹೆಚ್ಚಾಗಿ ಬಳಸುವುದಿಲ್ಲ. ಯಾವುದೇ ಸಿನಿಮಾ ನೋಡುವವರಲ್ಲ . ಮತ್ತು ದಿನಪತ್ರಿಕೆ ಓದುವದರಲ್ಲಿ ಆಸಕ್ತಿಯೂ ಇಲ್ಲ. ಸಂಜೆಯ ಹೊತ್ತಿಗೆ ಕೆಲಸ ತುಸು ಕಡಿಮೆಯಾದಾಗ ಕುಳಿತು ಒಂದೆರಡು ಧಾರವಾಹಿ ನೋಡುವುದೇ ಇವರಿಗೆ ದೊರಕುವ ದೊಡ್ಡ ಮನರಂಜನೆ. ಆರ್ಥಿಕವಾಗಿ ಇಂತಹ ಮಹಿಳೆಯರಿಗೆ ಯಾವುದೇ ವಸ್ತುವನ್ನು ಕೊಳ್ಳುವ ಅವಶ್ಯಕತೆಯಿದ್ದಾಗ ಮನೆಯವರೇ ತಂದುಕೊಡುತ್ತಾರೆ. ವಸ್ತು ಕೊಂಡುಕೊಳ್ಳುವುದರ ಕುರಿತು ಹಣ ಕೇಳಿ ಪಡೆಯುವ ಯಾವುದೇ ತೊಂದರೆ ಇಲ್ಲದೆಯೂ ಇವರು ಇರಬಹುದು. ಹಳ್ಳಿಯಲ್ಲಿನ ಮಹಿಳೆಯರ ಆರೋಗ್ಯದಲ್ಲಿ ಅಷ್ಟೇನು ಸಮಸ್ಯೆ ಕಂಡು ಬರುವುದಿಲ್ಲ . ಏಕೆಂದರೆ ಆವರು ತಮ್ಮನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 

ಆದ್ದರಿಂದ ಸಮಸ್ಯೆ ಕಂಡುಬರುವುದಿಲ್ಲ . ಮನುಷ್ಯ ಎಂದಮೇಲೆ ಖಾಯಿಲೆಗಳು ಸರ್ವೇ ಸಾಮಾನ್ಯ ಆದ್ದರಿಂದ ಆರೋಗ್ಯ  ಸಮಸ್ಯೆ ಉಂಟಾದಾಗ ಮನೆಮದ್ದು . ಮೂಢನಂಬಿಕೆಗಳಿಗೆ ಒಳಗಾಗಿ ಆಪಾಯವುಂಟು ಮಾಡಿಕೊಳ್ಳುವುದು ಇದೆ . ತಮ್ಮ ಮಕ್ಕಳಿಂದ ಆಧುನಿಕತೆಗೆ ಸ್ರ್ತೀ ವಾದದ ಅಲೆಯಲ್ಲಿ ಆದೇ ಸಮೃದ್ಧ ಜೀವನದ ಹೊಸ ತಿರುವಿನಲ್ಲಿ ಸಮಾನತೆಯ ಸಂತೋಷದ ಜೀವನ ನಡೆಸುವಂತಾಗಲಿ. ಇದೇ ಸ್ತ್ರೀವಾದ ಸಮಾನತೆಯ ಅಡಿಪಾಯ.ಹೊರತಾಗಿ ಪುರುಷವಿರೋಧಿಯಲ್ಲ.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...