Skip to main content

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ.

ಸ್ತ್ರೀ ವಾದ   ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ,  ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್ಕೃತಿಯ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ಪ್ರೀತಿ ನೀಡದಿದ್ದರೂ ಆವನು ನಿನ್ನ ಗಂಡ. ನಿನ್ನ ಅತ್ತೆಮಾವ ಎಂದು ಅಡಿಯಾಳಾಗಿಸಿಬಿಟ್ಟರು. ಇದ್ಯಾವುದರ ಅರಿವೂ ಹೆಣ್ಣಿಗಿರದಷ್ಟು ಕೆಳಮಟ್ಟದಲ್ಲಿ ಅವರ ಪ್ರಜ್ಞಾಸ್ಥಿತಿಯನ್ನೇ ಕೆಡಿಸಿ ಬಿಟ್ಟಿದ್ದರು. ಇದೆಲ್ಲದರಿಂದ ಹೊರಬರುವುದಕ್ಕಾಗಿಯೇ ಸ್ತ್ರೀ ವಾದವೆಂಬುವುದು ಹುಟ್ಟಿದ್ದು. ಇಂದು ಮಹಿಳೆಗೆ ಸ್ಥಾನಮಾನ ದೊರಕಿದೆ. ನಮ್ಮ ಸಂವಿಧಾನಕ್ಕೂ ಧನ್ಯವಾದ ಹೇಳಬೇಕು. ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ತಾವು ಬದುಕು ಸಾಗಿಸಬೇಕು ಎಂಬ ಮನೋಭಾವನೆ ಎಲ್ಲರಲ್ಲಿದೆ. ಶಿಕ್ಷಣದ ಕಿಡಿ ಹೊತ್ತಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ.
ಕಡಲವಾಣಿ ಪತ್ರಿಕೆ. 2019

ಅಂಕ ಗಳಿಕೆಯಲ್ಲಿ ಮುಂಚೂಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಈ ಮುಂಚೂಣಿ. ಮೈ ನೆರೆದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವ ಪ್ರವೃತ್ತಿ, ಪುರುಷನಿಗಿಂತ ಮೇಲಿನ ಹುದ್ದೆಯಲ್ಲಿ ಮಹಿಳೆ ಇರಕೂಡದೆಂಬ ಮನೋಭಾವ, ಬಾಲ್ಯವಿವಾಹ ಅಸಮಾನತೆ  ಇಂತಹ ಪದ್ದತಿಗಳು ಇಂದು ಕಡಿಮೆಯಾಗಿವೆ. ಇದನ್ನು ಹೊರತು ಪಡಿಸಿ ಮಹಿಳೆಯರಿಗೆ ಮೀಸಲಾತಿ. ಪುರುಷ  ಪ್ರಾಧಾನ್ಯ ಸಮಾಜದಿಂದ ಮುಕ್ತಿ  ಹೊಂದುವುದು , ಸ್ವ ಉದ್ಯೋಗ ಇಂತಹ ಹೋರಾಟ ಹಂಬಲಗಳ ನಡುವೆಯೂ  ಹಳ್ಳಿ ಹಳ್ಳಿಗಳಲ್ಲಿ ಇದಾವುದರ ಗೋಜಿಗೆ  ಹೋಗದ ತಮ್ಮ ಬದುಕೇ ತಮಗೆ ಸುಖ ಎಂದು ಸಂತೋಷದಿಂದ ದಿನಮುಂದೂಡುವ ಮಹಿಳೆಯರು ಇದ್ದಾರೆ. ಸಂಬಳಕ್ಕೆಂದು ದುಡಿಯುವವರಲ್ಲ ಯಾವ ಫಲಾಪೇಕ್ಷೆ ಹೊಂದಿದವರಲ್ಲ . ತಮ್ಮ ಕುಟುಂಬ , ಮನೆ ಇವಿಷ್ಟೇ ಇವರ ಪುಟ್ಟ ಪ್ರಪಂಚ. ಅಲ್ಲ ಇದೇ ಅವರ ಸಂಪೂರ್ಣ ಪ್ರಪಂಚ ಪ್ರತಿದಿನದ ದಿನಚರಿಯೂ

ಒಂದೇ ತೆರನಾದದ್ದು , ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕೆಲಸಗಳೇ ಆದರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಮತ್ತೆ ಬೆಳಗಾದರೆ ನಿನ್ನೆಯದೇ ಕೆಲಸಗಳ ಪುನರಾವರ್ತನೆ ಹೀಗೆ ದಿನ ಕಳೆಯುವುದರಲ್ಲಿಯೇ ಅವರು ತಮ್ಮ ಜೀವನದ ಬಹುಪಾಲನ್ನು ಕಳೆದು ಬಿಡುತ್ತಾರೆ . ತಿಂಗಳಿಗೊಮ್ಮೆ ದೇವಸ್ಥಾನದ ಭಜನೆಯೂ ಹೋಮ . ಹವನಗಳು ನೆಂಟರ ಮನೆಗೆಂದು ಹೋಗಿ ಬಂದರೆ ಮುಗಿದೇ ಹೋಯಿತು . ಪೇಟೆಯಲ್ಲಿ ವಾಸವಿರುವವರಂತೆ ಹಾಲು ತರುವುದು, ತರಕಾರಿ ತರುವುದು, ದಿನಸಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಈ ಯಾವ ಕೆಲಸಗಳೂ ಅವರಿಗಿರುವುದಿಲ್ಲ. 

ಇನ್ನು ಮನರಂಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಮೊಬೈಲ್‌ನ್ನು ಹೆಚ್ಚಾಗಿ ಬಳಸುವುದಿಲ್ಲ. ಯಾವುದೇ ಸಿನಿಮಾ ನೋಡುವವರಲ್ಲ . ಮತ್ತು ದಿನಪತ್ರಿಕೆ ಓದುವದರಲ್ಲಿ ಆಸಕ್ತಿಯೂ ಇಲ್ಲ. ಸಂಜೆಯ ಹೊತ್ತಿಗೆ ಕೆಲಸ ತುಸು ಕಡಿಮೆಯಾದಾಗ ಕುಳಿತು ಒಂದೆರಡು ಧಾರವಾಹಿ ನೋಡುವುದೇ ಇವರಿಗೆ ದೊರಕುವ ದೊಡ್ಡ ಮನರಂಜನೆ. ಆರ್ಥಿಕವಾಗಿ ಇಂತಹ ಮಹಿಳೆಯರಿಗೆ ಯಾವುದೇ ವಸ್ತುವನ್ನು ಕೊಳ್ಳುವ ಅವಶ್ಯಕತೆಯಿದ್ದಾಗ ಮನೆಯವರೇ ತಂದುಕೊಡುತ್ತಾರೆ. ವಸ್ತು ಕೊಂಡುಕೊಳ್ಳುವುದರ ಕುರಿತು ಹಣ ಕೇಳಿ ಪಡೆಯುವ ಯಾವುದೇ ತೊಂದರೆ ಇಲ್ಲದೆಯೂ ಇವರು ಇರಬಹುದು. ಹಳ್ಳಿಯಲ್ಲಿನ ಮಹಿಳೆಯರ ಆರೋಗ್ಯದಲ್ಲಿ ಅಷ್ಟೇನು ಸಮಸ್ಯೆ ಕಂಡು ಬರುವುದಿಲ್ಲ . ಏಕೆಂದರೆ ಆವರು ತಮ್ಮನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 

ಆದ್ದರಿಂದ ಸಮಸ್ಯೆ ಕಂಡುಬರುವುದಿಲ್ಲ . ಮನುಷ್ಯ ಎಂದಮೇಲೆ ಖಾಯಿಲೆಗಳು ಸರ್ವೇ ಸಾಮಾನ್ಯ ಆದ್ದರಿಂದ ಆರೋಗ್ಯ  ಸಮಸ್ಯೆ ಉಂಟಾದಾಗ ಮನೆಮದ್ದು . ಮೂಢನಂಬಿಕೆಗಳಿಗೆ ಒಳಗಾಗಿ ಆಪಾಯವುಂಟು ಮಾಡಿಕೊಳ್ಳುವುದು ಇದೆ . ತಮ್ಮ ಮಕ್ಕಳಿಂದ ಆಧುನಿಕತೆಗೆ ಸ್ರ್ತೀ ವಾದದ ಅಲೆಯಲ್ಲಿ ಆದೇ ಸಮೃದ್ಧ ಜೀವನದ ಹೊಸ ತಿರುವಿನಲ್ಲಿ ಸಮಾನತೆಯ ಸಂತೋಷದ ಜೀವನ ನಡೆಸುವಂತಾಗಲಿ. ಇದೇ ಸ್ತ್ರೀವಾದ ಸಮಾನತೆಯ ಅಡಿಪಾಯ.ಹೊರತಾಗಿ ಪುರುಷವಿರೋಧಿಯಲ್ಲ.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...