Skip to main content

ಸೂರ್ಯನ ನೆರಳು.

ಸೂರ್ಯನ ನೆರಳು ಅನುವಾದಿತ ಕೃತಿಯ ಓದು

ಆಪ್ರಿಕಾ ಖಂಡದ ಕುರಿತು ಅಷ್ಟೇನೂ ತಿಳಿದಿರದ ನಮಗೆ ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎಂಬ ವಾಕ್ಯ ಒಂದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಫಿಕಾದಲ್ಲಿ ಸದಾಕಾಲ ಕಡುಗತ್ತಲೇ ಇರುತ್ತದೆಯೇ? ಬರೀ ದಟ್ಟ ಕಾಡು ಹರಿವ ನದಿ, ಸೂರ್ಯನ ಬೆಳಕೇ ಇಲ್ಲದ ಜಾಗವೇ? ಇಂತಹ ಕುತೂಹಲ ಕೆರಳಿಸುವ ವಿಷಯಗಳಿಗಷ್ಟೇ ಸೀಮಿತವಾಗಿದ್ದೇವೆ ಹೊರತಾಗಿ ಅಲ್ಲಿನ ಭೌಗೋಳಿಕ ರಚನೆ, ಸಾಮಾಜಿಕ ಜನಜೀವನ, ಸಂಪ್ರದಾಯ ಆಹಾರಪದ್ದತಿ ಇದಾವುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಂಡವರಲ್ಲ. 

ರೈ಼ಷಾರ್ಢ ಕಪುಶಿನಸ್ಕೀ ಒಬ್ಬ ಅತ್ಯುತ್ತಮ ಪತ್ರಕರ್ತ ಆಪ್ರೀಕಾದ ಕುರಿತು ಇಂಚಿಚನ್ನೂ ವಿಸ್ತಾರವಾಗಿ ವಿವರಿಸಿದ ಪುಸ್ತಕ ಸೂರ್ಯನ ನೆರಳು ಈ ಪುಸ್ತಕವನ್ನು ಓದಿದ ನಂತರವೇ ನಮಗೆ ಆಫ್ರಿಕಾದ ಶೋಚನೀಯ ಸ್ಥಿತಿ ಅಲ್ಲಿನ‌ ಜನರ ಪರಿಸ್ಥಿತಿ ವರ್ಣಭೇದ ನೀತಿ ಮತ್ತಿತರ  ಎಷ್ಟೋ ವಿಷಯಗಳ ಕುರಿತು ನಮಗೂ ಅರಿವು ಮೂಡುವುದು. ಒಬ್ಬ ಪತ್ರಕರ್ತನಾದವನು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಈ ಪುಸ್ತಕ ಒಂದು ಉತ್ತಮ ಉದಾಹರಣೆಆಗಿದೆ.
ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪ್ಯುಶಿನಸ್ಕಿ  'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ " ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

' ಆಫ್ರಿಕಾದ ನೋವು, ಸಂಕಷ್ಟಗಳನ್ನು ಕುರಿತಾದ ಪ್ರಾಮಾಣಿಕ,ಸವಿವರ ಆದರೆ ಅಷ್ಟೇ ನಿರ್ಭಾವುಕ  ಪ್ರವೇಶಿಕೆ ಹಾಗೂ ಅದರ ಗಾಢ ಆಕರ್ಷಣೆಯಿಂದ ಹುಟ್ಟಿದ ಒಂದು ನಿಶ್ಯಬ್ಧ ಪ್ರೇಮಗೀತೆ ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.
ಅವನಲ್ಲಿ ಹಣದ ಅಭಾವ ಇರುವುದರಿಂದ ಕಾಲ್ನಡಿಗೆಯಲ್ಲಿ, ಗಾಡಿಗಳಲ್ಲಿ, ಬೇರೆ ಬೇರೆ ಪತ್ರಕರ್ತರೊಡನೆ ತಿರುಗಾಡಿದ್ದರಿಂದ ಈ ಕೃತಿಯು ಇಷ್ಟರಮಟ್ಟಿಗೆ ಯಶಸ್ಸು ಹೊಂದಿದೆ. ಎಲ್ಲವನ್ನು ತಾವು ಸ್ವತಃ ಅನುಭವಿಸಿ ನೋಡಬೇಕೆಂಬ ಬಯಕೆಯು ಅವರಲ್ಲಿತ್ತು.
ಇನ್ನು ಅನುವಾದದ ಕುರಿತಾಗಿ ಹೇಳುವುದಾದರೆ ಇದು ಇನ್ನೊಬ್ಬರ ಅನುಭವದ ಕಥನ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡು ಮೂಲ ಪಠ್ಯಕ್ಕೆ ನ್ಯಾಯ ಒದಗಿಸಿದ್ದಾರೆ ಸಹನಾ ಹೆಗಡೆಯವರು.

ಸಹನಾ ಹೆಗಡೆಯವರನ್ನು ಅಭಿನಂದಿಸಿದ ಕ್ಷಣ. ( MM.arts and science college )

ಮುಖಪುಟದ ವಿನ್ಯಾಸವೂ ಒಂದುರೀತಿ ಅರ್ಥಪೂರ್ಣವಾಗಿ ಮೂಡಿದೆ. ಆಫ್ರಿಕಾದ ಆತ್ಮ ಆನೆಯ ರೂಪದಲ್ಲಿರುತ್ತದೆ ಆನೆಯನ್ನು ಮತ್ತಾವ ಪ್ರಾಣಿಯು ಸೋಲಿಸಲಾರದು. ಇದೇ ಉದ್ದೇಶದಿಂದ ಮುಖಪುಟದಲ್ಲಿ ಆನೆಯನ್ನು ಬಿಂಬಿಸಿದ್ದಾರೆ.
ಈತ ಕೇವಲ ಪತ್ರಕರ್ತನೊಂದೇ ಆಗಿದ್ದರೆ ಈ ಕೃತಿ ವಿಷಯಾದಾರಿತ ಮಾತ್ರವೇ ಆಗಿರುತ್ತಿತ್ತು. ಆದರೆ ಇದು ಅವನ ಸಾಹಿತ್ತಿಕ ಬರವಣಿಗೆಯ ಶೈಲಿಯನ್ನು ಒಳಗೊಂಡಿದೆ. ಹಲವೆಡೆ ವ್ಯಕ್ತಿ ಚಿತ್ರಣವನ್ನು ಕಾಣಬಹುದು ಹಲವು ಧರ್ಮದ ಸಂಸ್ಕೃತಿ ಆಚರಣೆಯ ಕುರಿತಾಗಿ ಕಾಣಬಹುದು. ಒಂದುಕಡೆಯಿಂದ ಇನ್ನೊಂದು ಕಡೆ ಗುಳೆ ತಿರುಗುತ್ತಲೇ ಬದುಕುತ್ತಿರುವ ಜನಾಂಗದ ಕುರಿತಾಗಿ ಅವರನಿತ್ಯದ ಬದುಕಿನ ಕುರಿತಾದ ವಿವರವಿದೆ.

ಜನರ ಮೂಢನಂಬಿಕೆ ಕುರಿತು ಹಲ್ಲಿಯ ತೊಗಲು ಹಕ್ಕಿಯ ತಲೆ, ಹುಲ್ಲಿನ ಕಟ್ಟು, ಮೊಸಳೆಯ ಹಲ್ಲು ಇಂತವುಗಳನ್ನು ಕಟ್ಟಿಕೊಂಡಿದ್ದರೆ ಅಲ್ಲಿಂದ ಮುಂದಕ್ಕೆ ಸಾಗುವುದು ನಿಶಿದ್ಧ ಎಂಬ ಸೂಚನೆ ಇದೆ.
ಒಂದು ರೀತಿಯ ಮೇಲು ಕೀಳು ವರ್ಗೀಕರಣ ಅದು ವರ್ಣಬೇಧ ನೀತಿಯ ಆದಾರಿತವಾದ ಆಳುವವರು ಮತ್ತು ಕನಿಷ್ಠರು ಎಂಬ ತಾರತಮ್ಯದ ಭಾವವಿದೆ. ಜನರ ಮಾರಾಟಮಾಡುವಂತ ಶೋಚನೀಯ ಸ್ಥಿತಿಗಳು ನಡೆಯುತ್ತಿದ್ದವು.
ಸರ್ಪಹೃದಯ ಎಂಬ ಅಧ್ಯಾಯವಂತೂ ನನಗೆ ತುಂಬಾ ಅಚ್ಚರಿಯನ್ನು ಮೂಡಿಸಿತು ಹಾವಿನೊಡನೆ ಸೆಣಸಾಟದ ದೃಶ್ಯ ಕಣ್ಣಿಗೆಕಟ್ಟುವಂತಿತ್ತು.ಕಾರಿನಲ್ಲಿ ಕಾಡೆಮ್ಮೆಗಳ ಗುಂಪೊಂದನ್ನು ಹಾದು ಹೋಗುವ ಸನ್ನಿವೇಶದಲ್ಲಿ ನಮಗೂ ಭಯಹುಟ್ಟುತ್ತದೆ.
ಮಲೇರಿಯಾ ಬಂದಾಗ ಅವರ ಕಷ್ಟ ಆಸ್ಪತ್ರೆಯ ಸನ್ನಿವೇಶ ಎಲ್ಲವು ತುಂಬಾ ಮನಮುಟ್ಟುವಂತಿದೆ.


ಆಫ್ರಿಕಾದ ಜನತೆಗೆ ರಸ್ತೆ , ರೈಲು, ಸೇತುವೆ ಮಾರ್ಗ ನಿರ್ಮಾಣವಾಗಬೇಕಿತ್ತು ಆದರೆ ಬಿಳಿ ಗುಲಾಮರನ್ನು ಕೆಲಸಕ್ಕೆ ತರುವಂತಿರಲಿಲ್ಲಾ. ಇದೇ ಸನ್ನಿವೇಶ ಪ್ರಸ್ತುತ ದಿನಗಳಲ್ಲಾದರೆ ನಡೆಯುತ್ತಿರಲಿಲ್ಲಾ. ಇಂದಿಗೆ ಈ ಗುಲಾಮಪದ್ದತಿಗಳಿಲ್ಲ.
ಝೊಂಗು ಎಂದರೆ ನರಭಕ್ಷಕ ಎಂದರ್ಥವಂತೆ ಚಿಕ್ಕ ಮಕ್ಕಳು ಹಠ ಮಾಡಿದಾಗ ಬಿಳಿಯರು( ಝುಂಗು) ನಿನ್ನನ್ನು ಹಿಡಿದುಬಿಡುತ್ತದೆ ಎಂದು ಹೆದರಿಸಿ ಊಟಮಾಡಿಸುತ್ತಿದ್ದರಂತೆ.
ಹೀಗೆ ಹೇಳುತ್ತಾ ಹೋದರೆ ಇನ್ನು ಎಷ್ಟೆಷ್ಟೋ ಅಚ್ಚರಿಯ ವಿಷಯಗಳಿವೆ. ಕೃತಿಯನ್ನು ಓದುವುದನ್ನು ನಿಲ್ಲಿಸಿ ಬೇರೆ ಕೆಲಸದಲ್ಲಿ ತೊಡಗಿಕೊಂಡರು ಪದೇ ಪದೇ ತಲೆಯಲ್ಲಿ ಸುಳಿಯುವುದು ಒಂದೇ ಪ್ರಶ್ನೆ.

ಹಾಗಾದರೆ  ಈಗ ಆಫ್ರಿಕಾ ಶಾಂತವಾಗಿದೆಯೇ? ಅಲ್ಲೆಲ್ಲಾ ಜನ ತುಸುವಾದರು ನೆಮ್ಮದಿಯನ್ನು ಕಾಣುತ್ತಿರಬಹುದೇ? ಎಂದು ಅದಕ್ಕೂ ಉತ್ತರ ಕೊನೆಯಲ್ಲಿ ಲೇಖಕರೇ ಹೇಳಿದ್ದಾರೆ " ಆಫ್ರಿಕಾ ಎಂದರೆ ವಿವಿಧವಾದ, ವಿಭಿನ್ನವಾದ,ವಿಶೇಷವಾದ, ಕೆಲವೊಮ್ಮೆ ವಿರೋಧಾತ್ಮಕವಾದ  ಸಾವಿರಾರು ಸನ್ನಿವೇಶಗಳು. ಯಾರೋ ಒಬ್ಬ ಹೇಳಬಹುದು  ಅಲ್ಲಿ ಯುದ್ದ ನಡೆಯುತ್ತಿದೆ, ಹಾಗು ಅದು ಸತ್ಯವೂ ಆಗಿರಬಹುದು. ಮತ್ತೊಬ್ಬ ಹೇಳುತ್ತಾನೆ ಅಲ್ಲಿ ಶಾಂತಿನೆಲೆಸಿದೆ.”ಅವನು ಹೇಳುವುದು ಸರಿ ಇರಬಹುದು. ಎಲ್ಲವೂ ಅವಲಂಬಿಸಿರುವುದು ಎಲ್ಲಿ ಮತ್ತು ಯಾವಾಗ ಎನ್ನುವುದನ್ನು ಎಂದು ಹೇಳುವುದರ ಮೂಲಕ ಅಸ್ಪಷ್ಟತೆಯೊಳಗೆ ಸ್ಪಷ್ಟತೆಯನ್ನು ನೀಡುತ್ತಾರೆ. ೩೩೯ ಪುಟಗಳುಳ್ಳ ಈ ಅಪೂರ್ವ ಕೃತಿಯೊಂದನ್ನು ಮನಸ್ಥಿತಿ ತಾಳ್ಮೆಯನ್ನು ಪರಿಶೀಲಿಸುವಂತದ್ದು. ಪ್ರಾಮಾಣಿಕವಾಗಿ ಇದನ್ನು ಅನುವಾದಿಸಿದ ಸಹನಾ ಹೆಗಡೆಯವರು ಅಭಿನಂದನಾರ್ಹರು.
ಈ ಅನುವಾದಿತ ಕೃತಿಯು, ವಿಭಿನ್ನ ಅನುಭವದ ನೋಟಕ್ಕಾಗಿ  ಹೆಚ್ಚು ಜನರನ್ನು ತಲುಪಿಯೇ ತಲುಪುತ್ತದೆ.
ಪುಸ್ತಕ ಓದಿನ ಖುಷಿಯದಿನದ ಚಿತ್ರ ರಂಗೋಲಿಯಲ್ಲಿ ಮೂಡಿತ್ತು.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...