Skip to main content

ಬಾಲ್ಯದ ಘಮಲು ಭಾಗ ೨

ಚಿಕ್ಕವರಿರುವಾಗ ಮೂಗಲ್ಲಿ ಸುಂಬಳ ಸುರಿಸಿ ಸೊರ ಸೊರ ಸ್ವರ ಹೊರಡಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಹೀಗೆ,... ಬರೆಯೋದಿಕ್ಕೆ ಅದು ಇದು ವಿಷಯ ಹೊಳೆಯುತ್ತಿರುವಾಗ ಬಾಲ್ಯದ ಕುರಿತೇ ಬರೆಯಬೇಕು ಎಂಬ ಮಾತು ಬಂತು ಅದಲ್ಲದೇ ವಿಷಯವನ್ನೂ ಅವರೇ ಸೂಚಿಸಿದ್ದರಿಂದ ಬಾಲ್ಯದ ಬುತ್ತಿಗಂಟಿಗೆ ಇನ್ನೊಂದಿಷ್ಟು ನೆನಪುಗಳನ್ನು ತುಂಬೋಣ ಎನಿಸಿತು, ನಿಮ್ಮ ಬಾಲ್ಯದ ನೆನಪುಗಳೇನಾದರು ಇದ್ದರೆ ನನಗೂ ತಿಳಿಸಿ.

ಒಂದೊಮ್ಮೆ ಜ್ವರ ಬಂದರೂ ಶಾಲೆಗೆ ರಜಾ ಹಾಕದ ದಿನಗಳು ಅವು, ಅದೆಷ್ಟು ಮುಖ್ಯವಾದ ತರಗತಿಗಳು ಇರುತ್ತಿದ್ದವೋ? ಏನೋ!? ಎಂಬಂತೆ ಹಠಮಾಡಿ ಶಾಲೆಗೆ ಹೋಗೋದು, ಅರ್ಧ ತರಗತಿಯಲ್ಲಿ ಸುಸ್ತಾಗಿ ಬಿದ್ದು ಶಾಲೆಯವರೆಗೆ ಮನೆಗೆ ಕಳುಹಿಸಿ ಕೊಡುತ್ತಿದ್ದ ದಿನಗಳು ನಮ್ಮ ಕನ್ನಡ ಶಾಲೆ ದಿನಗಳು.

ಆಟ ಆಡುವಾಗ ಬಿದ್ದು ಮೊಣಕಾಲಿಗೆ ಆದ ಗಾಯ ಇನ್ನೇನು ಮಾಸುತ್ತದೆ ಎನ್ನುವಷ್ಟರಲ್ಲಿ ಮತ್ತೆ ಬೀಳದೆ ಇದ್ದರೆ ನಮ್ಮ ಜಾಯಮಾನಕ್ಕೆ‌ ಅವಮಾನ ಎನ್ನುವ ಗಂಡು ಹುಡುಗರು. ಕೈ ಕಾಲಿಗೆ ಆದ ಗಾಯಕ್ಕೆಲ್ಲಾ ಬೇರೆ ಮದ್ದೇನು ಇಲ್ಲ. ತಕ್ಷಣ ಹಾದಿ ಬದಿಯ ಕಾಂಗ್ರೇಸ್ ಗಿಡ ಸಿಕ್ಕರೆ ಸಾಕು ಅದನ್ನೇ ಅರೆದು ಹಚ್ಚುವುದು. ಅದರ ಹಸಿರು ರಸ ರಕ್ತಕ್ಕೆ ಬಿದ್ದಾಗ ಗಾಯದಿಂದ ರಕ್ತ ಸೋರುವುದು ನಿಲ್ಲುತ್ತಿತ್ತು. 

ಸರಿಯಾಗಿ ಟೈ ಕಟ್ಟಿಕೊಳ್ಳಲೂ ಬರದ ಕಾಲ.

ಇನ್ನು ವರ್ಷಕ್ಕೊಂದು 
ಪ್ರತಿಭಾ ಕಾರಂಜಿ, ಕ್ರೀಡಾಕೂಟ,
ಪರೀಕ್ಷೆ, ಶಾರದಾ ಪೂಜೆ, 
ವಾರ್ಷಿಕೋತ್ಸವ ಬೇಸಿಗೆ ರಜ,
 ಜನವರಿ ಇಪ್ಪತ್ತಾರರ ಭಾಷಣ, 
ಇಷ್ಟಾದರೆ ಆಯಿತಲ್ಲ ಪೂರ್ತಿ
ಒಂದು ನತ್ತೆ ಕಳೆದು ಇನ್ನೊಂದು ನೆತ್ತೆ.

ದೀಪ ಬೆಳಗುವ ಖುಷಿ.

ಮನೆಗೆ ಬಂದರೆ ರಜೆಯಲ್ಲಿ ನೆಂಟರ ಮನೆ ತಿರುಗಾಟ ಆಟತ್ತಿ ಮನೆ ಆಟ ಮಣ್ಣಿನ‌ ಗೊಂಬೆ , ಕರಟದ ಪಾತ್ರೆ, ಎಲೆಗಳೆ ದುಡ್ಡು ಕಾಸು ಎಂದೆಲ್ಲಾ ಇದ್ದ ಬದ್ದ ಒಂದೇ ಜಾತಿಯ ಎಲೆಗಳೆಲ್ಲ ಕೊಯ್ದು ಬ್ಯಾಂಕಿನಲ್ಲಿಡುವುದು, ಸಲ್ಪ ದೊಡ್ಡದಾಗಿರುವ ಎಲೆಗೆ ಮೌಲ್ಯ ಹೆಚ್ಚು ಅದನ್ನು ಕೊಟ್ಟು ಸುಳ್ಳು ಸುಳ್ಳು ಸಾಮಾನು ಖರೀದಿ ಮಾಡುವುದು, ಈ ಆಟಗಳೇ ಮುಂದೆ ನಿಜವಾಗುತ್ತಾ ಜೀವನ ರೂಪಿಸುತ್ತವೆ ಎನ್ನುವ ಅಂಶ ಆಗ ಗೊತ್ತಿರುವುದಿಲ್ಲ.

  ಯಾವ ಕಟ್ಟಡದ ಉದ್ಘಾಟನೆಗೂ ಈ ನಳಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ ಇಲ್ಲ !

ಹುಡುಗರಿಗೆ ಒಂದು ಟೈಯರ್ ಸಿಕ್ಕರೆ ಸಾಕು ಅದೇ ಅವರ ಗಾಡಿ, ಹುಡುಗಿಯರದು ಗಿರಿಗಿಟ್ಟಲೆ ಮತ್ತು ಕಲ್ಲಾಟ ಬಲು ಜೋರು, ಐದು ಕಲ್ಲಿನ ಆಟ, ನಾಯಿ ಮೂಳೆ, ಜೋಡಿಬಲೆ ಆಹಾ! ನೆನಯುತ್ತಿದ್ದರೆ ಮತ್ತೆ ಈ ಜಂಜಾಟಗಳನ್ನು ಬಿಟ್ಟು ಮತ್ತೆ ಆಡೋಣ ಎನಿಸುವುದಿಲ್ಲವೇ? 

ದಿನ ಬೆಳಗಾದರೆ ಕಸ ಹೆಕ್ಕಬೇಕು

ಬಾಲಮಂಗಳ, ಚಂಪಕ, ಮಂಡೂರಾಯನ‌ ಕತೆ, 
ಪ್ರಜಾವಾಣಿ ಪೇಪರ್ ಕೊನೆಯ ಭಾನುಪುರವಣಿ ,
ಚುಕ್ಕಿ ಸೇರಿಸಿ ಚಿತ್ರಬರೆದು ಅದಕ್ಕೆ ಬಣ್ಣ ಹಾಕುವುದು, ಎಲೆಗಳನ್ನು ಪಟ್ಟಿಗಂಟಿಸುವುದು, 
ಬೇರೆಲೆ ಎಂಬ ಒಂದು ಜಾತಿ ಎಲೆ ಇರುತ್ತದೆ ಅದನ್ನು ಪಟ್ಟಿಯೊಳಗಿಟ್ಟು ಎಲೆಯ ತುದಿಗಳಿಗೆಲ್ಲಾ ಬೇರು ಬರಿಸುವುದು, ಬಣ್ಣ ಬಣ್ಣದ ಚಾಕ್ ಪೀಸ್ ಸಂಗ್ರಹಿಸುವುದು,
ದಾರಿ ಉದ್ದಕ್ಕು ಕಲ್ಲುಗಳಿಗೆ ಹೊಸ ವರ್ಷದ ಶುಭಾಶಯ ಬರೆಯೋದು
ಸಂಕ್ರಾಂತಿ ಬಂತೆಂದರೆ ಕಾಳಿನಲ್ಲಿ ಹೊಡೆದಾಡುವುದು.

ಬಾಲ್ಯದ ಹಕ್ಕಿಗೆ ಅದೆಷ್ಟು ಗರಿಗಳಿವೆ ಅಲ್ಲವಾ? 





Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...