Skip to main content

Posts

ಬೂದೆ ಕಳು ಹಬ್ಬ

Recent posts

ಹಳೆ ಲೇಖನಕ್ಕೆ ಪ್ರಕಟಣೆಯ ಭಾಗ್ಯ!

ಅಷ್ಟಕ್ಕೂ ನಾವು ಮದುವೆ ಆಗಿದ್ದೇ ಬರೋಬ್ಬರಿ ಚುನಾವಣೆಯ ಕಾಲಗತಿಯಲ್ಲಿ.  ನಾವು ಅಂದರೆ ಮತ್ಯಾರೂ ಅಲ್ಲ, ನಾನು ಮತ್ತು ಸುಮಾ.  ಇಬ್ಬರೂ ಮಾಧ್ಯಮದಲ್ಲಿ, ಹೇಳಿಕೇಳಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಮತದಾನ ಮುಗಿದರೂ ನಾಕು ದಿನ ರಜೆ ಹಾಕಲು ಅನುವು ಮಾಡಿರಲಿಲ್ಲ. ಚುನಾವಣೆ ಮುಗಿದು, ಸರ್ಕಾರ- ಮಂತ್ರಿ ಮಂಡಲ ರಚನೆಯೂ ಆಗಿಹೋದ ಮೇಲಾದರೂ ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ನಮಗೆ ಬೇಕಿದ್ದು, ಅದಾಗೇ ಕೂಡಿಬಂದದ್ದು ಎಲ್ಲವೂ ಸೇರಿ ಒಂದು ರಾತ್ರಿ ಕಳೆದು ಬೆಳಗು ಕೂಗುವದರಲ್ಲಿ ಒಂದು ಮುತ್ತಿನ ನಗರಿ!  ನಮ್ಮ ಸಮಯಕ್ಕೆ ರೈಲು, ರೈಲಿನ ಸಮಯಕ್ಕೆ ನಾವು ಸೆಟ್ ಆಗುವುದಿಲ್ಲ ಎಂದು ಅಳೆದು ತೂಗಿ ಕೊನೆಕ್ಷಣದಲ್ಲಿ ಬಸ್ ಮೆಟ್ಟಿಲು ಹತ್ತುವ ನಿರ್ಧಾರ ಮಾಡಿದ್ದಾಯಿತು. ಮೊದಲು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಟಿಎಸ್ಆರ್‌ಟಿಸಿ ಬಸ್‌ ಪರಿಶೀಲಿಸಲಾಗಿ ಬಸ್‌ಗಳ ಚಿತ್ರಗಳೇ ನಮ್ಮನ್ನು ಭ್ರಮನಿರಸನ ಮಾಡಿದ್ದು ಸುಳ್ಳಲ್ಲ. ತೆಲಂಗಾಣದ ಲಹರಿ ಹೆಸರಿನ ಬಸ್‌ಗಳು ನಮ್ಮ ರಾಜಹಂಸ ಇದ್ದಹಾಗೆ, ಆದರೆ ನಮ್ಮ ಯಲ್ಲಾಪುರದಿಂದ ಕಾರವಾರಕ್ಕೋ, ಹುಬ್ಬಳ್ಳಿಗೋ ಬುರುಬುರುನೇ ತಿರುಗುವ, ಕೊನೆಗೆ ಕೊರೋನಾಕ್ಕಿಂತ ಮೊದಲು ಕಮ್ಮಾಣಿಯೋ ಕೆಳಾಸೆಗಳೆಂಬೋ ಮೂಲೆ ಮೂಲೆಯ ಊರುಗಳಿಗೆ ಓಡುವ ಬಸ್‌ಗಳೇ ಇವಕ್ಕಿಂತ ಚೆನ್ನ. ಆ ಲೆಕ್ಕದಲ್ಲಿ ನಮ್ಮ ಕೆಎಸ್ಆರ್‌ಟಿಸಿ ಎಷ್ಟೋ ಬೆಸ್ಟ್.   ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆ ಕೆಎಸ್ಆರ್‌ಟಿಸಿ...

ಅಕ್ಕೋರಾಗೋದು ಸುಲಭ ಅಲ್ಲ

ಅಕ್ಕೋರಾಗುವುದು ತುಂಬಾ ಕಷ್ಟ ಇದೆ. ನಾನು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ನನ್ನ ಚಿಕ್ಕಮ್ಮನ ಮಗಳನ್ನು ಕರೆದುಕೊಂಡು ಹೋಗಿದ್ದೆ. ಎಲ್ಲಾ ಮಕ್ಕಳಿಗೂ ರಜ. ಅರವತ್ತಕ್ಕೂ ಹೆಚ್ಚು ಮಕ್ಕಳು ಅಲ್ಲಿ ಹಾಜರಿದ್ದರು. ಒಂದೊಂದು ತರಗತಿಯವರನ್ನು ಒಂದೊಂದು ಕಡೆ ಕೂರಿಸಿದ್ದರು. ಅವರ ಗಲಾಟೆಯನ್ನು ಕೇಳಲಾಗದೆ ಸಭಾ ಭವನವೇ ಅಳುತ್ತಿತ್ತು. ಕೆಳಗಡೆ ದೇವಸ್ಥಾನ. ಆ ದೇವರಿಗೂ ಅನಿಸಿರಬಹುದು ಅಬ್ಬಾ! ಈ ಮಕ್ಕಳು ಎಷ್ಟು ಗಲಾಟೆ ಮಾಡ್ತಾರೆ ಅಂತ. ಮದುವೆ ಮನೆಯಲ್ಲಾದರೂ ಇನ್ನಷ್ಟು ಶಾಂತ ವಾತಾವರಣ ಇರುತ್ತದೆ.  ಆದರೆ, ಇಲ್ಲಿ ಮಾತ್ರ ಕೋಲಾಹಲ. ಕಾರ್ಯಕ್ರಮ ಆಯೋಜನೆ ಮಾಡುವವರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಹೇಗೆ ಕೂರಿಸಬೇಕು? ಎಲ್ಲಿ ಕೂರಿಸಬೇಕು? ಅವರ ವಯೋಮಾನದ ಮಿತಿಯನ್ನು ಎಷ್ಟರವರೆಗೆ ನಿಗದಿಪಡಿಸಬೇಕು ಇದ್ಯಾವುದನ್ನೂ ಸರಿಯಾಗಿ ನಿಗದಿ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕಾಗಿ  ಇನ್ನಷ್ಟು ಗಲಿಬಿಲಿಯಾಯಿತು. ಜಡ್ಜ್ ಬಂದು ಇನ್ನು ನಾನು ತೀರ್ಪು ನೀಡಬಹುದಾ ಎಂದರು. ಮೂರು ಗಂಟೆಗೆ ಮಕ್ಕಳು ಚಿತ್ರ ಬಿಡಿಸಲಾರಂಭಿಸಿದ್ದಾರೆ ಎಂಬ ಕಲ್ಪನೆ ಅವರದು. ನಾಕು ಗಂಟೆಯಾದರೂ ಇನ್ನೂ ಮಕ್ಕಳ ಕೈಗೆ ಬಣ್ಣ ಅಂಟಿರಲಿಲ್ಲ.  ಇನ್ನು ಅವರ ಜೊತೆಗೂಡಿ ಬಂದ ಪಾಲಕರದ್ದು ಇನ್ನೊಂದು ತರ. ರಜಾ ದಿನಗಳಲ್ಲೇ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡ ಅದೆಷ್ಟೋ ಜನರಿಗೆ ನಿಗದಿತ ಸಮಯ ಜಾರುತ್ತಿರುವುದು ಇನ್ನಷ್ಟು ತಲ...

TOTO Award

ನನ್ನ ಹೆಸರು ಇಷ್ಟೊಂದು ಪ್ರತಿಷ್ಠಿತ ಪ್ರಶಸ್ತಿಯ ಅಡಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಂತೂ ನನಗಿತ್ತು, ಆದರೆ ಅದು ಸಾಧ್ಯವಾಗಬಹುದೇ ಎಂಬ ಅನುಮಾನವೂ ಇತ್ತು. ಈ ವರ್ಷ ನನಗೆ ಸಿಕ್ಕ ಅತಿ ದೊಡ್ಡ ಖುಷಿಯಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನನ್ನ ಬರವಣಿಗೆ ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನಿದನ್ನು ಅರ್ಪಿಸುವೆ. ನಾನು ಬರೆದದ್ದಕ್ಕಲ್ಲ ಈ ಪ್ರಶಸ್ತಿ ಬರಬಹುದಾ? ಎಂದು ಅನುಮಾನಿಸಿದಾಗ ಒತ್ತಾಯ ಮಾಡಿ "ಇದು ತಮಾಷೆ ಅಲ್ಲ, ಮೊದಲು ಇದನ್ನು ಸೀರಿಯಸ್ಆಗಿ ಆಲೋಚಿಸಿ ಈ ಬಗ್ಗೆ ಮುಂದೇನು ಮಾಡಬೇಕು ಯೋಚಿಸು, ಧ್ಯಾನದಂತೆ ಬರಿ" ಎಂದು ನನಗೆ ಗುರಿ ತೋರಿಸಿ. ಬರೆಯಲು ಕುಳಿತಾಗ ಯಾವ ಕೆಲಸವಿದ್ದರೂ ತಾನೇ ಮಾಡಿಕೊಂಡು, ಬಾಯಲ್ಲಷ್ಟೇ ಅಲ್ಲ ಕೃತಿಯಲ್ಲೂ ನನಗೆ ಪ್ರೋತ್ಸಾಹಿಸುವ ನೀನಿರುವಾಗ ನಾನು ಇನ್ನಷ್ಟು ಸಾಧಿಸಬಲ್ಲೆನು.ಇವಳೇಕೆ ವಿನ್ನಿಂಗ್ ಸ್ಪೀಚ್ ಕೊಡುತ್ತಿದ್ದಾಳೆ ಎಂದುಕೊಂಡವರಿಗೆ ಇದಕ್ಕಿಂತ ದೊಡ್ಡ ಗೆಲುವು ಇನ್ನೊಂದಿಲ್ಲ ಎಂದು ಹೇಳಲು ಬಯಸುವೆ.