ಶಿಲ್ಪಕಲೆಯತ್ತ ಒಲವಿತ್ತ ಪ್ರಿಯದರ್ಶನ್. ಚಿತ್ರಬಿಡಿಸುವ, ಹಾಡುಹೇಳುವ ಇಲ್ಲ ನೃತ್ಯಮಾಡುವ ವಿಶೇಷ ಪ್ರತಿಭಾವಂತರ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಈ ಕಾಲದಲ್ಲಿ ಕಲ್ಲಿನ ಕೆತ್ತನೆ ಹಾಗೂ ವಿಗ್ರಹ ನಿರ್ಮಾಣ ಮಾಡುವ ಆಸಕ್ತಿ ಹೊತ್ತ ಯುವಕರನ್ನು ಕಾಣುವುದು ಅತೀ ವಿರಳ. ಆದರೆ ಕಲಾಪ್ರಿಯ ಪ್ರಿಯದರ್ಶನ್ ನಾಯ್ಕ ಅವರು ಕೆತ್ತನೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಚಾಮರಾಜ ನಾಯ್ಕ ಹಾಗೂ ಸರೋಜಾ ನಾಯ್ಕ ಇವರ ಪುತ್ರರಾದ ಪ್ರಿಯದರ್ಶನ್ ಅವರು ಹುಟ್ಟಿ ಬೆಳೆದದ್ದು ಉತ್ತರ ಕನ್ನಡದ ಬನವಾಸಿ ಸಮೀಪದ ಮಧುರವಳ್ಳಿಯಲ್ಲಿ. ತಮ್ಮದೇ ಸ್ವ ಆಸಕ್ತಿಯ ಮೂಲಕ ಈ ಕಲೆಯತ್ತ ತಮ್ಮ ಮನಸ್ಸು ಕೊಟ್ಟು ಕಲಿಕೆ ಆರಂಭಿಸಿದರು. ಇವರಿಗೆ ಈಗ ಕೇವಲ ಹತ್ತೊಂಬತ್ತು ವರ್ಷ. ತಮ್ಮ ಆಸಕ್ತಿ ಒಟ್ಟಿಗೆ ನಿರಂತರ ಅಭ್ಯಾಸಮಾಡಿ, ಆಕಾರವಿಲ್ಲದ ಶಿಲೆಗಳಿಗೆ ಚಂದದ ರೂಪ ನೀಡುತ್ತಿದ್ದಾರೆ. ಪದವಿ ಹಂತದಲ್ಲೇ ಇವರಿಗೆ ಕೆತ್ತನೆ ಕ್ಷೇತ್ರದಲ್ಲಿ ಆಸಕ್ತಿ ಬೆಳೆದಿದ್ದು ಯಾರ ಒತ್ತಾಯವೂ ಇಲ್ಲದೆ ತಮ್ಮನ್ನು ತಾವು ಈ ಕ್ಷೇತ್ರಕ್ಕೆ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿ. ಸಾಗರದ ಗುರುಕುಲದಲ್ಲಿ ವಿಪಿನ್ ಸಿಂಗ್ರವರ ಬಳಿ ಶಿಲ್ಪಕಲೆ ಅಭ್ಯಾಸ ಮಾಡಿದ್ದಾರೆ. ಇವರು ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದು ಶೈಕ್ಷಣಿಕ ಅಧ್ಯಯನ ಒಟ್ಟಿಗೆ ಕೌಶಲ್ಯಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದಾರೆ. ಇದರೊಟ್ಟಿಗೆ ಮಣ್ಣಿನಮೂರ್ತಿ ನಿರ್ಮಾಣ, ಮರದ ಕೆತ್ತನ...